ಇಕ್ಬಾಲ್ ಎಂದರೆ ನೆನಪಾಗುವುದು ನಾಟಕ. ರಂಗದ ಮೇಲೆ ಒಂದು ಭಿನ್ನ ಅನುಭವವನ್ನೇ ಕಟ್ಟಿಕೊಡುವ ಇಕ್ಬಾಲ್ ರಂಗದ ಆಚೆಗೂ ಜಾದೂ ನಡೆಸುತ್ತಾರೆ. ಇವರ ರೇಖೆಗಳು ಹತ್ತು ಹಲವು ಅನುಭವಗಳನ್ನು ನಮ್ಮ ಒಡಲಲ್ಲಿ ತಂದು ಕೂರಿಸುತ್ತದೆ. ದೇಸಿ ಸಂಸ್ಕೃತಿ ಹರಡಲೆಂದೇ ‘ಗುಡಿ’ ಹೆಸರಿನಲ್ಲಿ ವಿಶಿಷ್ಟ ಮಳಿಗೆ ತೆರೆದಿದ್ದಾರೆ. ಇಕ್ಬಾಲ್ ಆ ಮಳಿಗೆಗೂ ನೀಡಿರುವ ರೇಖಾ ಸ್ಪರ್ಶ ನೋಡುವಂತಿದೆ. ಇವರ ರೇಖೆಗಳು ಜಯಂತ್ ಅವರ ‘ಶಬ್ದ ತೀರ’ ದ ಮುಖಪುಟವನ್ನೂ ಅಲಂಕರಿಸಿದೆ. ಇಕ್ಬಾಲ್ ರೇಖೆಗಳ ಒಂದು ನೋಟ ಇಲ್ಲಿದೆ.
ರಂಗದಿಂದಾಚೆ, ಒಂದಿಷ್ಟು ದೂರ…
ನಿಮಗೆ ಇವೂ ಇಷ್ಟವಾಗಬಹುದು…







0 Comments