ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಟ್ಟಾದ ಹೆಂಗಸರನ್ನು ಮಾತ್ರ..

ಕನ್ನಿಮೊಳಿ ತಮಿಳು ಕವನ
ಮುಟ್ಟಾದವರು

ಕನ್ನಡಕ್ಕೆ : ಪ್ರತಿಭಾ ನಂದಕುಮಾರ್

sheಉತ್ತರದಲ್ಲಿ ಚಳಿಗಾಲದಲ್ಲಿ
ಪೂಜಾರಿಗಳು ಉಣ್ಣೆಯ ಪ್ಯಾಂಟು ತೊಡುತ್ತಾರೆ

ಪೆರುಮಾಳ್ ದೇವಸ್ಥಾನದ ರಥಕ್ಕೆ
ಮೋಟಾರು ಅಳವಡಿಸಲಾಗಿದೆ

ತಿರುಪತಿಗೆ ಹೋಗಲಾಗದವರು
ಸ್ಥಳೀಯ ಬ್ರ್ಯಾಂಚಿನಲ್ಲಿ ಕಾಣಿಕೆ ಸಲ್ಲಿಸಬಹುದು

ಅಯ್ಯಪ್ಪನ ವ್ರತದಲ್ಲಿ
ಉಪವಾಸವನ್ನು ಮೂರೇ ದಿನಕ್ಕೆ ಇಳಿಸಲಾಗಿದೆ

ಇಸ್ಕಾನ್ ನಲ್ಲಿ ಬಿಳಿಯರು ಪೂಜಾರಿಗಳಾಗಿದ್ದಾರೆ
ಇಂಡೋನೇಷಿಯಾದ ದೇವಸ್ಥಾನಗಳ ಒಳಗೆ
ಚಪ್ಪಲಿ ಹಾಕಿಕೊಂಡೇ ಹೋಗಬಹುದು
ಅಲ್ಲಿ ಗಣೇಶನಿಗೆ ಕೋಳಿ ಸಾರಿನ ನೈವೇದ್ಯ ಶ್ರೇಷ್ಟ

ಎಲ್ಲಾ ಜಾತಿಗಳವರು ದೇವಸ್ಥಾನ ಪ್ರವೇಶಿಸಲು
ಕಾನೂನನ್ನು ಬದಲಾಗಿಸಲಾಗಿದೆ
ಆದರೆ ಎಲ್ಲಿಗೆ ಹೋದರೂ
ನಮ್ಮ ಮಹಾಮಹಿಮ ದೇವರು
ಸಹಿಸಲು ಸಾಧ್ಯವೇ ಆಗದಿರುವುದು
ಮುಟ್ಟಾದ ಹೆಂಗಸರನ್ನು ಮಾತ್ರ.

‍ಲೇಖಕರು Admin

12 December, 2016

2 Comments

  1. Sangeeta Kalmane

    ಹೆಣ್ಣಿಗೊಂದು ಶಾಪ

  2. ಸುಧಾ ಚಿದಾನಂದಗೌಡ

    ನಿಜ, ರಗಳೆಯ ದಿನಗಳಲ್ಲಿ ಹಾಗೇ ಅನಿಸುವುದುಂಟು.
    ಆದಾಗ್ಯೂ, ಇದು ಶಾಪ ಎಂದು ನಾವ್ಯಾಕೆ ಯೋಚಿಸಬೇಕು?
    ಹುಟ್ಟಿಗೆ ಕಾರಣವಾದ ಪವಿತ್ರ ಎಂದು ಭಾವಿಸುವುದು ಸಮಂಜಸ.
    ಅದು ವರ್ಜ್ಯ ಎಂದು ಯಾರೋ ಅಂದುಕೊಂಡಿದ್ದರೆ ಅದು ಅವರ ಬೌದ್ಧಿಕ ದಾರಿದ್ರ್ಯ.
    ಮೊದಲು ನಾವು ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದನ್ನು ರೂಢಿಸಿಕೊಳ್ಳಬೇಕು.
    ಎಂದು ನನ್ನ ಅನಿಸಿಕೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading