ಪ್ರಶಸ್ತಿ ಸಂಭ್ರಮ
ದಾವಣಗೆರೆಯ ‘ನಗರವಾಣಿ’ ಕಚೇರಿಯಲ್ಲಿ ಸಿಹಿ ಹಂಚುವ ಮೂಲಕ ಪ್ರಶಸ್ತಿ ಸಂಭ್ರಮ ಆಚರಣೆ ಜರುಗಿತು.
ಪತ್ರಿಕೆಯ ಮಾಲೀಕರಾದ ಕೇಶವಮೂರ್ತಿ ಹಾಗೂ ಸಂಪಾದಕರಾದ ಬಿ ಎನ್ ಮಲ್ಲೇಶ್ ಅವರು ಸಹೋದ್ಯೋಗಿಗಳೊಂದಿಗೆ ಮಾತನಾಡಿ ‘ಆಂದೋಲನ’ ಹೆಸರಿನಲ್ಲಿ ಪ್ರಶಸ್ತಿ ಸಿಕ್ಕಿರುವುದು ‘ನಗರವಾಣಿ’ಯ ಸಮಾಜಮುಖಿ ಪತ್ರಿಕೋದ್ಯಮಕ್ಕೆ ಸಂದ ಗೌರವ.
ಈ ಪ್ರಶಸ್ತಿಯ ಘನತೆಯನ್ನು ನಾವು ಇನ್ನಷ್ಟು ಸಮಾಜಮುಖಿ ವರದಿಗಳನ್ನು ಪ್ರಕಟಿಸುವುದರ ಮೂಲಕ ತೋರಿಸೋಣ ಎಂದು ಅಭಿಪ್ರಾಯಪಟ್ಟರು
0 ಪ್ರತಿಕ್ರಿಯೆಗಳು