ಮಹಾಂತೇಶ ಪಾಟೀಲ ಹೊಸ ಕವಿತೆ-‘ವಿಲೋಮ ಒಲವು’

ಮಹಾಂತೇಶ ಪಾಟೀಲ

**

ನಮ್ಮ ಹಾಲುಗೆನ್ನೆಗೆ

ಯಾರೋ ಹುಳಿ ಹಿಂಡಿದರು!

ಕಣ್ಣೀರ ಬಸಿದುಕೊಂಡು

ಭಾವಬೆಲ್ಲ ಬೆರೆಸಿ ನಾವು

ಪಾನಕ ಮಾಡಿಕೊಂಡೆವು.

ಮಾತು-ಮೌನಗಳ ನಡುವೆ

ಮೂಗು ತೂರಿಸಿದ ಮುಖವಿಲ್ಲದವರು

ನಾವು ಮುತ್ತಿಗೆ ಮುತ್ತು ಸೇರಿಸಿ

ಮೂಗುನತ್ತು ಮಾಡಿ

ಧರಿಸಿಕೊಂಡೆವು.

ಕಡ್ಡಿಗೀರದೆ ಬೆಂಕಿಯಿಟ್ಟರು

ನಮ್ಮ ನಲಿವು ನಿಲುವುಗಳ ನಡುವೆ

ತಣ್ಣಗಾದ ತುಟಿಗಳಿಂದ

ಮೈ ಬೆಚ್ಚಗಾಗಿಸಿಕೊಂಡೆವು 

ನಾವು ನೋವನೈದಿಲೆಗಳು.

ಕಥೆ ಕಟ್ಟಿ, ರಗಳೆ ಮಾಡಿ

ಲಾಲಿ ಹಾಡಿದ ಲೊಳಲೊಟ್ಟೆಗಳು.

ಆಯ್ದು ಕತೆಯ ಕೂಡಿಸಿ

ನಾವು ಸಖೀಗೀತೆಯ

ಸಂಕಲನ ಲೋಕಾರ್ಪಣೆಗೊಳಿಸಿದೆವು.

ಏನು ಮಾಡಲಿ ಹೇಳು?

ಮಾತಿನ ಮೂಗು ಕೊಯ್ದು

ಉಸಿರಿಗೆ ಉರುಳು ಹಾಕಿ 

ಮೊಸರಿಗೆ ಹುಳಿಹಿಂಡಿ ಹೋದ 

ಜೀವದ ಜೀವವೇ !?

‍ಲೇಖಕರು Admin MM

February 15, 2024

ನಿಮಗೆ ಇವೂ ಇಷ್ಟವಾಗಬಹುದು…

ಆಪ್ತ ನಗುವೊಂದು ಅಪರಿಚಿತವಾದಾಗ

ಆಪ್ತ ನಗುವೊಂದು ಅಪರಿಚಿತವಾದಾಗ

ಅನಿತಾ ಪಿ. ತಾಕೊಡೆ ** ಅದುರುವ ರೆಪ್ಪೆಯೊಳಗಿನ ಕಣ್ಣ ಬಿಂಬದಲಿಕಂಡೂ ಕಾಣದಂತಿರುವ ನಿನ್ನೆಗಳು ಕೂಡಿಕೊಂಡುಇರುಳ ಮರೆಯಲಿರುವ ಛಾಯೆಗೆ ಬಣ್ಣ...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This