ಹಿಡಿಯಲ್ಲಿ ಅಗಾಧ ವಿಷಯ ಹಿಡಿದು ಕೊಡುವ ಮೊನಚು ನೋಟದ ಪಿ ಮಹಮ್ಮದ್ ಇನ್ನು ಮುಂದೆ ಅವಧಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಜಾವಾಣಿಯ ವ್ಯಂಗ್ಯಚಿತ್ರಕಾರರಾದ ಮಹಮ್ಮದ್ ಟಿ ಪಿ ಕೈಲಾಸಂ ಬಣ್ಣಿಸಿದಂತೆ
‘ಕಿರು ಆಳದ ನಗೆ ನೀರಿನ ಮೇಲೆ
ತಿರುಗುತ ಬಹುವೇಳೆ
ಕಣ್ಣೀರಿನ ಕಡಲಿನ ಪಾಲು
ಹಾಸ್ಯದ ಹರಿಗೋಲು’
ಹಿಡಿಯಬಲ್ಲವರು. ಮಹಮ್ಮದ್ ರೇಖೆಗಳು ಕಚಗುಳಿ ಇಡುತ್ತಲೆ ವಿಷಾದದ ಆಳಕ್ಕೆ ತಳ್ಳುತ್ತದೆ.
ಮಹಮ್ಮದ್ ರ ವ್ಯಂಗ್ಯಬಾಣಗಳು ಸಮಾಜವನ್ನು ಒಂದಿಷ್ಟಾದರೂ ಆರೋಗ್ಯಕರವಾಗಿಸಲಿ ಎನ್ನುವುದು ಎಲ್ಲರ ಆಶಯ. ಅದಕ್ಕೇ ಇರಬೇಕು ಮಾಧ್ಯಮ ಅಕಾದೆಮಿಯೂ ಸಹಾ ಪ್ರಶಸ್ತಿ ನೀಡಿ ಉತ್ಸಾಹ ಹೆಚ್ಚಿಸಿದೆ. ಮಹಮ್ಮದ್ ಮ್ಯಾಜಿಕ್ ಇನ್ನು ಮುಂದೆ ನಿಮ್ಮ ಮುಂದೆ.






Dear Mohammed sir,
Exepecting More & More
ವಾವ್! ಸೂಪರ್..