ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಕಾಗದ ಬಂತು…


ಖ್ಯಾತ ವಿದ್ವಾಂಸ ಕೆ ವಿ ನಾರಾಯಣ್ ಅವರ ‘ಕನ್ನಡ ಬರವಣಿಗೆಯಲ್ಲಿ ಆಗಬೇಕಾಗಿರುವ ಬದಲಾವಣೆಗಳು’ ಲೇಖನಕ್ಕೆ ಪ್ರತಿಕ್ರಿಯೆ-

ರವಿ ಅಜ್ಜೀಪುರ
http://nadipreeti.blogspot.com | raviajjipura@gmail.com |
ನೀವು ಹೇಳಿದ್ದು ನಿಜ. ನಾನೂ ಗಮನಿಸಿದಂತೆ ನಾವು ಆಡುವ ಮತ್ತು ಬರೆಯುವುದರ
ನಡುವೆ ಕೆಲವು ವ್ಯತ್ಯಾಸಗಳನ್ನು ಗುರುತಿಸಬಹುದು. ಮಾತಿನಂತೆ
ಬರೆಯುವುದು ಕಷ್ಟ, ಬರೆದಂತೆ ಮಾತನಾಡುವದೂ ಕಷ್ಟ. ಆದರೆ ಆಡು ಭಾಷೆ
ಅಂತ ಏನಿದೆ ಅದು ಹೆಚ್ಚು ಮನಸ್ಸಿಗೆ ಹತ್ತಿರವಾಗುತ್ತೆ. ಪ್ರಾದೇಶಿಕವಾಗಿ ನಾವು ಈ ಥರಹದ
ಭಾಷೆಯ ಪ್ರಯೋಗ ಮಾಡಬಹುದು. ಉದಾ:ಧಾರವಾಡ ಭಾಗದಲ್ಲಿನ ಪತ್ರಿಕೆಗಳು
ಅಲ್ಲಿನ ಪ್ರಾದೇಶಿಕ ಭಾಷೆಯನ್ನ ಬಳಸಿದರೆ ಅವು ಹೆಚ್ಚೆಚ್ಚು ಆಪ್ತವಾಗುತ್ತವೆ.ಬೆಂಗಳೂರಿನಲ್ಲಿ
ಅದರದೇ ಭಾಷೆ. ಆದ್ರೆ ವಿಸ್ತಾರ ಗಮನಿಸಿದಾಗ ಪುಸ್ತಕಗಳಿಗೆ ಆ ಥರಹದ ಲಿಮಿಟೇಷನ್
ಒಗ್ಗುವುದಿಲ್ಲ.ಅವು ಎಲ್ಲಾ ಕಡೆ ನಿಲ್ಲುತ್ತವೆ.
ನನಗೆ ಅನಿಸುವುದು ಏನೆಂದರೆ, ಭಾಷೆ ಯಾರ ಮುಲಾಜಿಗೂ ಸಿಗುವುದಿಲ್ಲ.ಅದು
ಕಾಲಕ್ಕೆ ತಕ್ಕಂತೆ ಬದಲಾಗುತ್ತಾ, ಹೊಸ ರೂಪ ಪಡಯುತ್ತಾ ಹೋಗುತ್ತದೆ. ಕೆಲವೊಮ್ಮೆ
ನಾವು ಅಂದುಕೊಳ್ಲುವ ಭಾಷೆ ಹೀಗಿರಬೇಕು ಅನ್ನುವುದೂ ಕೂಡ ಕ್ಲೀಷೆ ಆದೀತೇನೋ!
ಒಂದು ಶತಮಾನದಲ್ಲಿದ್ದ ಭಾಷೆ ಇನ್ನೊಂದು ಶತಮಾನದ ಹೊತ್ತಿಗೆ ತನ್ನ ರೂಪದಲ್ಲಿ ಬದಲಾವಣೆ
ಕಂಡುಕೊಂಡಿರುತ್ತದೆ. ಅದಕ್ಕೆ ಇಂಗ್ಲಿಷ್ ನಮ್ಮ ಕಣ್ಣೆದುರಿಗೇ ಇದೆ. ತೀರಾ ಗ್ರಾಮಾಟಿಕಲ್ ಆಗಿ ಇಂಗ್ಲಿಷ್
ಬಳಸುವುದು ಈಗ ಕಡಿಮೆಯಾಗಿದೆ. ಅಲ್ಲೊಂದು ಮಾರ್ಪಾಡಾಗಿದೆ. ಇಂಟೆರ್ನೆಟ್ ಇಂಗ್ಲಿಷ್
ನೋಡಿದರೆ ಅದು ಬಹಳ ಸುಲಭ ಮತ್ತು ಸಹ್ಯವೇನೋ! ಒಂದು ಭಾಷೆಯ ಬೆಳವಣಿಗೆ
ಕೂಡ ಆ ರೀತಿಯಲ್ಲೇ ಆಗಬೇಕು ಅನಿಸುತ್ತದೆ. ಒಂದು ಕಾಲಕ್ಕಷ್ಟೇ ಯಾವುದೇ ಭಾಷೆ
ಸೀಮಿತವಾಗಿರುವುದಿಲ್ಲ ಮತ್ತು ಇರಲೂ ಕೂಡದು.
ನನ್ನ ಕೇಳಿದ್ರೆ ಭಾಷೆ ಯಾವಾಗಲೂ ಸಿಂಪಲ್ ಅನಿಸಬೇಕು. ಅದು ಓದುಗನಿಗೆ ಯಾವುದೇ
ತ್ರಾಸ ಇಲ್ಲದೆ ಅರ್ಥಕ್ಕೆ ನಿಲುಕಬೇಕು.ಪದಗಳ ಗುಂಡು ಹೊಡೆಯುವ, ವಾಕ್ಯಗಳಲ್ಲೇ
ಸದೆ ಬಡಿಯುವಷ್ಟು ತೀಕ್ಷಣತೆ ಭಾಷೆಗಿರಬಾರದು. ಅದು ನೇರ ಮತ್ತು
ನೇರವಾಗಿರಬೇಕು.ಓದುಗನನ್ನ ಗೊಂದಲಕ್ಕೆ ಕೆಡವಬಾರದು. ಯಾವ ಓದುಗನೂ
ಡಿಕ್ಷನರಿ ಇಟ್ಟುಕೊಂಡು ಓದುವುದಕ್ಕೆ ಕೂರುವುದಿಲ್ಲ. ನೀವು ಹೇಳಿದಂಗೆ ಓದುವ
ಮತ್ತು ಬರೆಯುವ ಪ್ರಕ್ರಿಯೆಗಳೆರಡೂ ಬೇರೆ ಬೇರೆ ಮನಸ್ಥಿತಿಯಲ್ಲಿ ರೂಪುಗೊಳ್ಲುವುವು.
ಎಷ್ಟೋ ಜನಕ್ಕೆ ಬರೆಯುವ ತುಡಿತವಿರುತ್ತದೆ. ಆದ್ರೆ ಬರೆಯುವುದಕ್ಕೆ ಆಗುವುದಿಲ್ಲ.
ಹಾಗೇ ಓದೂ ಸಹ.
ಇವತ್ತಿನ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿದೆ. ಅದು ತಪ್ಪಲ್ಲ.
ಕಾಲದ ಹೊಡೆತ ಹಾಗಿದೆ.ಬದುಕು ಅದನ್ನ ಬೇಡುತ್ತಿದೆ. ಇಲ್ಲ ನಾನು ಕನ್ನಡಕ್ಕೆ ನಿಷ್ಠ
ಅಂದ್ರೆ ಅದಕ್ಕೆ ಬಲವಂತವಿಲ್ಲ.ಆದರೆ ಇಂಗ್ಲಿಷ್ ಇವತ್ತು ಬೆಳೆದ ಪರಿ, ಆವರಿಸಿಕೊಮಡ
ಪರಿ ನೋಡಿದ್ರೆ ಅದು ಯಾರನ್ನೂ ಬಿಡುವುದಿಲ್ಲ.ಅದಕ್ಕೆ ಅಷ್ಟೊಂದು ವ್ಯಾಪಕತೆ ಇದೆ.
ಹಾಗೆ ನೋಡಿದರೆ ಇಂಗ್ಲಿಷ್ ಹೊಡೆತ ಎಲ್ಲಾ ಪ್ರಾದೇಶಿಕ ಭಾಷೆಗಳ ಮೇಲೆ ಆಗಿದೆ.
ಅದನ್ನು ಕಲಿಯುವ ಕಲಿಸುವ ವಿಧಾನಗಳು ಬದಲಾಗುತ್ತಿವೆ. ಹಾಗೇ ನಾವೂ ಆಗಬೇಕೇನೋ!
ಇಲ್ಲದಿದ್ದರೆ ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬಿದ್ದಂತಾದೀತು.
-ರವಿ ಅಜ್ಜೀಪುರ
+++
ಶೆಟ್ಟರು (Shettaru)
http://somekanasu.wordpress.com/ | shettar@oneindia.in
ಅಲ್ರಿ ಯಲ್ಲಾರು ಹಿಂಗ್ ಬರದ್ರ ಛಲೊ ಆತ ಬಿಡ್ರಿ, ಒಟ್ಟನ್ಯಾಗ ಕನ್ನಡಿಗರಿಗೆ ತ್ರಾಸ ಆಗಬಾರದ್ರಿ ಸರ,
ಮಹಾಪ್ರಾಣ ತಗಿಯುಣ್ರಿ, ಮುಂದಿನ್ನ “ಒತ್ತಕ್ಷರ, ಕೊಂಬು, ದಿರಗಾ”ನೂ ತಗಿಯೂಣು, ಒಟ್ಟಿನ್ಯಾಗ ಕನ್ನಡಿಗರಿಗೆ ಒದಾಕ ಮತ್ತ ಬರಿಯಾಕ ತ್ರಾಸಾಗಬಾರ್ದರಿ ಸರ, ಛಲೊ ಆತು ತೊಗೊರಿ.
“ಸಿರಿಗನನಡಮ ಗಎಲಗಎ” (ಒಟ್ಟ ಎಲ್ಲೆಲ್ಲಿ ಒತ್ತಕ್ಷರ ಬಳಸಿಲ್ರಿ)
ಸಾಹೇಬ್ರ ಬ್ಯಾಸರಾ ಮಾಡ್ಕೊಬ್ಯಾಡ್ರಿ ಹಿಂಗ ಬರ್ದಿನಂತ, ಹೀಂಗ ಒಂದೊಂದು ಅಕ್ಷರ ವ್ಯಾಕರಣ ಬಿಟ್ಕೊಂತ ಹೋದ್ರ, ಭಾಷೆ ಬದಕುದಿಲ್ಲರಿ, ನಶಿಸಿ ಹೊಕ್ಕೈತ್ರಿ.
ಮತ್ತ ಸುನಾಥ ಕಾಕಾರು ತಮ್ಮ ಬ್ಲಾಗನ್ಯಾಗ ಒಂದು ಪ್ರಶ್ನೆ ಎತ್ತ್ಯಾರು:
ಕರ್ನಾಟಕದಿಂದ ಪರದೇಶಗಳಿಗೆ ಹೋದ ಅನೇಕ ಕನ್ನಡಿಗರಿದ್ದಾರೆ. Call centreಗಳಲ್ಲಿ ಕೆಲಸ ಮಾಡುವ ಅನೇಕ ಕನ್ನಡಿಗರಿದ್ದಾರೆ. ಇವರ ಇಂಗ್ಲಿಶ್ ಉಚ್ಚಾರದಿಂದ ಮಹಾಪ್ರಾಣ ಮರೆಯಾಯಿತೆನ್ನಿ.
ಆಗ ಕನ್ನಡಿಗರಾದ ಒಬ್ಬ ಕ್ರಿಕೆಟ್ ಅಂಪೈರ್ ಇಂಗ್ಲಿಶ್‌ನಲ್ಲಿ ಹೇಗೆ ಕಮೆಂಟರಿ ಹೇಳಬಹುದು?
“ದೋನಿ ಪೇಸ್ಡ್ ದ ಬಾಲ್ ವುಯಿತ್ ಕರೇಜ್.
(==ಧೋನಿ ಫೇಸ್ಡ್ ದ ಬಾಲ್ ವುಯಿಥ್ ಕರೇಜ್).
ನಿಮಗೆ ಇದು ಸರಿ ಕಾಣಿಸುವದೆ?
ಪ್ರೀತಿಯಿರಲಿ
ಶೆಟ್ಟರು
+++
Satya | joshisatya@gmail.com
But the problem is everybody speaks differently.
Somebody’s Kannada might look different for
others. Somebody has to standardise these
words !!!
– Satya
+++
ಚಂದಿನ
http://www.koogu.blogspot.com | seeshekar@gmail.com
“ಕಾಲಕ್ಕೆ ತಕ್ಕಂತೆ ಕುಣಿಯಬೇಕು”
ಕಳೆದು ಹೋಗುವುದಕಿಂತ
ಕುಣಿಯುವುದು ಲೇಸಲ್ಲವೆ
ನಿಮ್ಮೊಂದಿಗೆ,
– ಚಂದಿನ
+++
 
ನವೋಮಿ ಅವರ ‘ ಐ ಯಾಮ್ ನವೋಮಿ, ಐ ಯಾಮ್ ಜಸ್ಟ್ ೩೦’ ಲೇಖನಕ್ಕೆ ಪ್ರತಿಕ್ರಿಯೆ-

leela sampige | leelasampige@gmail.com 
ನವೋಮಿ! ! ಹೆಸರು ಅದೆಷ್ಟು ಚೆನ್ನಾಗಿದೆ. ಸಖತ್ ರೈಲು ಅನ್ನಿಸ್ತ ಇದೆ. ಆದ್ರೂ ಬರೆಯೋ ಸ್ಟೈಲ್, ಆಯ್ಕೆ ಮಾಡ್ಕೊಳ್ಳೋ ವಿಚಾರಗಳು ಕೂಡ ನಮ್ಮನ್ನ ನೇವರಿಸಿ ನಿಮ್ಮವಳೇ, ನೀವೇ ಅಂತಾನು ಅನ್ನಿಸಿಬಿಡ್ತೀಯ.
ಆದ್ರೂ ನವೋಮಿ ನಿನ್ನ ಎಲ್ಲೋ ನೋಡಿದ ನೆನಪಾಗ್ತಾ ಇದ್ದೀಯಲ್ಲ. ಸ್ವಲ್ಪ ಹತ್ತಿರದ ಫ್ರೆಂಡ್ ಆಗ್ತೀಯ? ಹೇಗೂ ಜೆಂಡರ್ ಪ್ರಾಬ್ಲಂ ಇಲ್ಲ ! ಏನಂತೀಯ?
+++
saranjini | sarajani@gmail.com |
very good writing… keep it up.. you are bringing those issues which lies deep in all our minds. but some were we are our minds are so dead, that we cannot even sense the ense all these. Even if i sense that my mind has to say some thing, i am too scared to give ears to it, because it is always difficult to remain dump and dead, once you start listening to your mind.
+++
subramani | etv.subbu@gmail.com
ಕೂಲ್ ಆಗಿ ಮಾತನಾಡತ್ತೀಯ ನವೋಮಿ.ನಿಮ್ಮ ಬರಹ ಇಷ್ಟವಾಯಿತು.
ಸುಬ್ರಮಣಿ.
+++
naveen k m | km.naveen@gmail.com
ನವೋಮಿಯವರ ಮೂರೂ ಬರಹಗಳನ್ನು ಓದಿದೆ. ನಿಜಕ್ಕೂ ಇಷ್ಟೊಂದು ದಿಟ್ಟತನದಿಂದ ಲೇಖನಗಳು ಬರೆಯುವವರು ಅಪರೂಪ. ಕನ್ನಡ ಸಾಹಿತ್ಯಕ್ಕೆ ಮತ್ತೊಬ್ಬ ಬರಹಗಾರ್ತಿ ಸೇರ್ಪಡೆಯಾದಂತಾಯಿತು.
-ನವೀನ ಕೆ ಎಂ
+++
ವಿ ಎಂ ಮಂಜುನಾಥ್ ಅವರ ‘ವಿಲಾಸಿ ಸೈನಿಕರು’ ಲೇಖನಕ್ಕೆ ಪ್ರತಿಕ್ರಿಯೆ- 

bharath | bharath_raj003@yahoo.co.in
really shocking….!but I also heard about such
thing when I was a child.
sir, tamma baravanige thumba chennagide. pustakakkagi kaayuvenu….
+++
Ramesh Malakannavar | rameshbm_1972@yahoo.com  
Off course it is a shame on our indian culture, every body know all these happening in camps, but nobody is bothering about this, only solution to expose this is the ‘press’
 

‍ಲೇಖಕರು avadhi

22 June, 2008

3 Comments

  1. ಸಿದ್ದಮುಖಿ

    ಆಯಾ ಪ್ರದೇಶ ಭಾಷೆಯಲ್ಲೇ ಪತ್ರಿಕೆಗಳನ್ನು ಪ್ರಕಟಿಸುವುದು ಸುಲಭ; ಆದರೆ ಓದುವುದು ಕಷ್ಟ. ಅಷ್ಠೇ ಅಲ್ಲ
    ಪ್ರದೇಶ ಭಾಷೆ ಬಳಸಿದರೆ ಪತ್ರಿಕೆಗಳು ಹೆಚ್ಚು ಆಪ್ತವಾಗುತ್ತವೆ ಎನ್ನುವುದು ಅಪ್ಪಟ ಸುಳ್ಳು.ಇದಕ್ಕೆ ಕಾರಣವೂ ಇದೆ.
    ಮೊದಲನೆಯದಾಗಿ ಪ್ರತಿಯೊಂದು ಪತ್ರಿಕೆಯ ಆವೃತ್ತಿಯನ್ನು ಆಯಾ ಪ್ರದೇಶದ ಜನರು ಆಡುವ ಭಾಷೆಯಲ್ಲಿ ತರಬೇಕು,
    ಇದು ಅಸಾಧ್ಯದ ಮಾತು. ಎರಡನೆಯದಾಗಿ ಆಡುನುಡಿ ಮೂರ್ನಾಲ್ಕು ವ್ಯಂಜನಗಳನ್ನು ಒಳಗೊಂಡಿರುತ್ತದೆ
    ಆಗ ಅದನ್ನು ಯಥಾವತ್ತಾಗಿ ಟೈಪ್ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ ಈಗಿರುವ ಕೆಲವೊಂದು ಅಕ್ಷರಗಳನ್ನೇ ಕೈಬಿಡಬೇಕೆಂಬ ಬಗ್ಗೆ ಭಾಷಾ ವಿಜ್ಞಾನಿಗಳು ಚರ್ಚೆ ನಡೆಸುತ್ತಿದ್ದಾರೆ.ಇಂತಹ ಹೊತ್ತಿನಲ್ಲಿ ಹೀಗೆ ಆಯಾ ಪ್ರದೇಶ ಭಾಷೆಯಲ್ಲಿ
    ಪತ್ರಿಕೆಗಳು ಪ್ರಕಟವಾಗಬೇಕೆಂದು ಚರ್ಚೆ ನಡೆಸುತ್ತಿರುವುದೇ ಅಪ್ರಸ್ತುತ ಮತ್ತು ಅವೈಜ್ಞಾನಿಕ.
    ಇದನ್ನು ಬಿಟ್ಟು ಪತ್ರಿಕೆಗಳಲ್ಲಿ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಹೆಚ್ಚೆಚ್ಚು ಬಳಕೆಯಾಗುತ್ತಿರುವ ಅರ್ಥವಾಗದ
    ಸಂಸ್ಕೃತ ಪದಗಳನ್ನು ಕೈಬಿಡುವ ಬಗ್ಗೆ ಚಿಂತನೆ ನಡೆಸಿದರೆ ಒಳ್ಳೆಯದು. ದೇಶೀಯ ಮತ್ತು ನಶಿಸಿ ಹೋಗುತ್ತಿರುವ
    ಆಡುನುಡಿಗಳನ್ನು ಬಳಸುವ ಕುರಿತು ಚರ್ಚೆ ನಡೆಸಬೇಕು. – ಸಿದ್ದಮುಖಿ

  2. nayana

    ನವೋಮಿ ಬರಹ ಚನ್ನಾಗಿದೆ.

  3. kismat

    5n

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading