ಕಿರಣ್ ಎಂ ಗಾಜಗನೂರು ಅವರು ಬರೆದ ‘ಮಡೆಸ್ನಾನ: ಪ್ರಗತಿಪರರು ಆಚರಣೆ ವಿರೋಧಿಗಳಲ್ಲ..’ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಕಿರಣ್ ನೀಡಿದ ಉತ್ತರವೂ ಇಲ್ಲಿದೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.
k.s.parthasarathy
In Dasaprkash hotel in Kilapuk, Chennai there is an old big phto wherein the founder is dansing along with a host of guests and also performing a sort of madesnana..yes every commmunity was performing and one by one they have all given up ..and no it is for Daliths to give up..their own movemnet should do this ..temple and priests are not agents of change..the urge for change should come from within and it would become easy for others to join hands..now when I want to do this as brahmin, I am suspected about my motive by the Dalith friends..
dear parthasarathi
Temple and priests are not agents of change.. Yes I agree but they are the founders of this king of activities. The urge for change should come from within the upper castes of this land and it would become easier for others to join hands… thank you
ಸಿ ಪಿ ನಾಗರಾಜ
ಡಾ ಕಿರಣ್ ಎಂ ಗಾಜನೂರ್ ಅವರಿಗೆ
” ಯಾವುದಾದರೋ ಆಚರಣೆ ಮೌಢ್ಯದಿಂದ ಕೂಡಿದ್ದು ಮಾನವನ ಗೌರವಕ್ಕೆ, ಸಾಮುದಾಯಿಕ ಬದುಕಿಗೆ ವಿರೋಧಿಯಾಗಿದ್ದರೆ ಅಂತಹ ಆಚರಣೆಗಳಲ್ಲಿನ ಮೌಢ್ಯತೆಯ ವಿರುದ್ಧ ಪ್ರಗತಿಪರರು ದ್ವನಿ ಎತ್ತುತ್ತಾರೆಯೇ ವಿನಹ ಆಚರಣೆಗಳ ವಿರುದ್ಧವಾಗಿ ಅಲ್ಲ ” – ಎಂಬ ನಿಮ್ಮ ಮಾತುಗಳು ತುಂಬಾ ಚೆನ್ನಾಗಿವೆ . ಮಡೇಸ್ನಾನದ ಆಚರಣೆಯು ಕೇವಲ ಪ್ರಗತಿಪರರಲ್ಲಿ ಮಾತ್ರವಲ್ಲ , ಕೇವಲ ಮನುಷ್ಯರಾಗಿರುವ ಎಲ್ಲರಲ್ಲೂ ಆತಂಕ ಮತ್ತು ಆಕ್ರೋಶವನ್ನುಂಟು ಮಾಡಬೇಕಾಗಿದೆ . ಆದರೆ ಅರಿವಿನಿಂದ ಈ ಆಚರಣೆಯನ್ನು ನೋಡುವುದರ ಬದಲು ಅಕ್ಷರಜ್ಞಾನದ ತರ್ಕದಿಂದ ಇದನ್ನು ನಾನಾ ಬಗೆಗಳಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಜನರನ್ನು ಕಂಡಾಗ ಒಂದು ರೀತಿ ಭಯವಾಗುತ್ತಿದೆ . ನಿಮ್ಮ ಬರಹದಲ್ಲಿನ ವಿಚಾರಗಳು ಮೊದಲಿನಿಂದ ಕೊನೆಯ ತನಕ ಬಹಳ ಸಮಚಿತ್ತದಿಂದ ಕೂಡಿವೆ . ಇದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ .
ಗೆಳೆಯ ನಾಗರಾಜ್
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
Santhosh
ತಪ್ಪಾದ ಗ್ರಹಿಕೆ ಮತ್ತು ಅಸಂಬದ್ದ ವಿವರಣೆ
೧. ಮಡೆಸ್ನಾನದ ಕುರಿತು ಯಾರು ಯಾವ ನಿಲುವು ಬೇಕಾದರೂ ಇಟ್ಟುಕೊಳ್ಳಲಿ ಏನೂ ತೊಂದಲೆ ಇಲ್ಲ, ಏಕೆಂದರೆ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ. ಆದರೆ ನಿಮ್ಮ ಲೇಖನ ಪ್ರಾರಂಭದಲ್ಲಿ ಹೇಳಿರುವಂತೆ ಹಲವಾರು ಸಮುದಾಯಗಳು ಸೇರಿಕೊಂಡು ಆಚರಣೆಯನ್ನು ಮಾಡುತ್ತಿದ್ದು ಮತ್ತು ಅವುಗಳನ್ನು ಪ್ರಶ್ನಿಸಲು ನಾವ್ಯಾರು ಎಂಬುದು ಆ ಆಚರಣೆಯ ಸಮರ್ಥನೆ ಎಂಬುದು ಮಾತ್ರ ತಪ್ಪು ಗ್ರಹಿಕೆ. ಏಕೆಂಧರೆ ಅದು ನಿರ್ಲಿಪ್ತವು ಆಗಿರಬಾರದೇಕೆ? ಅದೇಕೆ ಸಮರ್ಥನೆ ಅಥವಾ ವಿರೋಧ ಎಂಬ ಎರಡೇ ಅತಿಗಳ ನಡುವೆ ಇರಬೇಕಾದುದು? ಆದ್ದರಿಂದ ಮಡೆಸ್ನಾನದ ಕುರಿತು ವಿರೋಧ ಮಾಡದೆ ಅಧ್ಯಯನ ಮಾಡಿದೊಡನೆ ಅದು ಸಮರ್ಥನೆಯಾಗುತ್ತದೆ ಎಂಬುದು ನಿಜವಾಗಿಯೂ ಅವಸರದ ತೀರ್ಮಾನ.
೨. ಮನುವಿನಿಂದ ಸಮಾಜದ ಮೌಲ್ಯ ನಿರ್ಧಾರವಾಗುತ್ತಿದೆ ಎಂಬುದು ಮತ್ತೊಂದು ತಪ್ಪಾದ ಗ್ರಹಿಕೆ. ನಿಮ್ಮ ಅನುಭವವನ್ನೆ ಅವಲೋಕಿಸಿ ನೋಡಿದರೆ ಮನುಧರ್ಮಶಾಸ್ತ್ರದಲ್ಲಿರುವ ಯಾವ ಅಂಶಗಳು ನಮ್ಮ ಬದುಕನ್ನು ನಿರ್ದೇಶಿಸುತ್ತಿವೆ ಎಂದು ಗುರುತಿಸುವುದೇ ಕಷ್ಟದ ಕೆಲಸ.
೩. ಸಮಾಜ ವಿಜ್ಞಾನಗಳ ಒಟ್ಟು ಬ್ರಾಹ್ಮಣ ವಿರೋಧಿ ಎಂಬುದೂ ಸಹ ತಪ್ಪುಗ್ರಹಿಕೆ. ವೀಣಾದಾಸ್, ಎಂ.ಎನ್ ಶ್ರೀನಿವಾಸ್, ಲೂಯಿ ದೂಮೋ, ಸೆಲಸ್ಟಿನ್ ಬೂಗ್ಲೆ ಇನ್ನೂ ಮುಂತಾದ ಸಮಾಜ ವಿಜ್ಞಾನಿಗಳ ಪಠ್ಯಗಳನ್ನು ಓದಿದ್ದೇ ಆದರೆ ಅವರ ವಾದವೇನು ಎಂಬುದು ತಿಳಿಯುತ್ತದೆ. ಸಮಾಜ ವಿಜ್ಞಾನದಲ್ಲಿ ಸೈದ್ಧಾಂತಿಕವಾಗಿ ಸಮಾಜವನ್ನು ವಿವರಿಸಿರುವ ಇನ್ನೂ ಹಲವಾರು ಚಿಂತಕರ ವಾದಗಳನ್ನು ಪರಿಶೀಲಿಸಿದರೆ ಸಮಾಜ ವಿಜ್ಞಾನಗಳ ಒಟ್ಟು ಸಾರಾಂಶದ ಕುರಿತು ತಮಗಿರುವ ತಪ್ಪು ಅಭಿಪ್ರಾಯ ಮನವರಿಕೆಯಾಗಬಹುದು.
೩. ಬ್ರಾಹ್ಮಣರ ಕುತಂತ್ರ ಅವರು ಇತರರನ್ನು ಶೋಷಣೆ ಮಾಡುತ್ತಿದ್ದಾರೆ ಎಂದೊಡನೆ, (ಅವರು ಶೋಷಣೆ ಮಾಡುತ್ತಿದ್ದಾರೋ ಇಲ್ಲವೋ ಎಂಬ ವಿಚಾರಕ್ಕಿಂತ) ಬ್ರಾಹ್ಮಣರು ಅದರಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತೋರಿಸದರೆ ಅದು ಬ್ರಾಹ್ಮಣರ ರಾಜಕಾರಣದ ಒಂದು ಭಾಗ ಎನ್ನುವುದು ಸಹ ತಪ್ಪಾದ ಗ್ರಹಿಕೆ. ಏಕೆಂದರೆ ಅದೇಕೆ ದಲಿತರ ರಾಜಕಾರಣದ ಭಾಗವಾಗಬಾರದು? ಅಷ್ಟೇ ಏಕೆ ಯಾವುದಾದರೊಂದು ವಿಚಾರದ ಕುರಿತು ವಸ್ತುನಿಷ್ಟವಾಗಿ ಮಾತನಾಡುತ್ತಿದ್ದರೆ ಒಂದಲ್ಲ ಒಂದು ರಾಜಕಾರಣದ ಭಾಗವಾಗಿರಲೇ ಬೇಖು ಎಂಬುದು ಮೂರ್ಖತನವೇ ಸರಿ
೪. ಆಚರಿಸುವವರು ಮತ್ತು ವಿರೋಧಿಸುವವರು ಒಬ್ಬರಿಗೊಬ್ಬರು ಅರ್ಥವಾಗುತ್ತಿಲ್ಲ ಎಂದೊಡನೆ ಪ್ರಗತಿಪರರಿಗೆ ಆಶ್ಚರ್ಯವಾಗುತ್ತದೆಯೋ ಇಲ್ಲವೋ ಆದರೆ ಸೋಗಲಾಡಿತನ ಮಾಡುವ ಇತ್ತ ಪ್ರಗತಿಪರರೂ ಅಲ್ಲದ ಇತ್ತ ಆಚರಣೆಗಳ ಕುರಿತು ಜ್ಞಾನವೂ ಇಲ್ಲದವರಿಗೆ ಮಾತ್ರ ಆಶ್ಚರ್ಯವಾಗುತ್ತದೆ, ಈ ಮಟ್ಟಿಗೆ ತಾವು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ. ಮಡೆಸ್ನಾನವನ್ನು ಪ್ರಗತಿಪರರು ವಿರೋಧಿಸಸುತ್ತಿದ್ದಾರೆ ಎಂಬುದರ ಅರ್ಥ ಅವರು ಭಾರತೀಯ ಸಮಾಜದಲ್ಲಿರುವ ಎಲ್ಲಾ ಆಚರಣೆಗಳನ್ನು ಅವರು ವಿರೋಧಿಸುತ್ತಿದ್ದಾರೆ ಎಂದು ನಿರ್ಣಯಕ್ಕೆ ಬರುವುದು ಸಹ ತಪ್ಪು ಗ್ರಹಿಕೆಯಿಂದ ಕೂಡಿರುವುದಾಗಿದೆ. ಅಷ್ಟಾಗಿ ಮಡೆಸ್ನಾನವನ್ನು ವಿರೋಧಿಸಿದೊಡನೆ ಎಲ್ಲಾ ಆಚರಣೆಗಳನ್ನು ವಿರೋಧಿಸುತ್ತಿದ್ದಾರೆ ಎಂಬ ಮುಠ್ಠಾಳತನವನ್ನು ನಾನು ಎಲ್ಲಿಯೂ ತೋರಿಸಿಲ್ಲ. ಆದ್ದರಿಂದ ಇದೂ ಸಹ ತಪ್ಪು ತಿಳುವಳಿಕೆಯಿಂದ ಹೊರಹೊಮ್ಮಿದ ವಿಚಾರವಾಗಿದೆ.
೫. ಕೊನೆಯ ಭಾಗದಲ್ಲಿ ನಮೂದಿಸಿರುವ ಬೇರೆ ಆಚರಣೆಗಳು ಬೇರೆ ಬೇರೆ ಸ್ವರೂಪದವುಗಳಾಗಿದ್ದು, ಅವುಗಳಲ್ಲಿ ಶೋಷಣೆಯಿಂದ ಕೂಡಿದ ನಡವಳಿಕೆಗಳು ಹಾಗೂ ಹಿರಿಯರಿಂದ ಬಂದ ಆಚರಣೆಗಳಿಗೂ ವ್ಯತ್ಯಾಸವೇ ಗೊತ್ತಿಲ್ಲದೆ ಕಲಸುಮೇಲೋಗರ ಮಾಡುವುದೂ ಸಹ ತಪ್ಪಾದ ಗ್ರಹಿಕೆಯನ್ನು ಎತ್ತಿ ತೋರಿಸುತ್ತದೆ.
ಇಷ್ಟೆಲ್ಲಾ ತಪ್ಪಾದ ಗ್ರಹಿಕೆಯಿಂದ ಕೂಡಿರುವ ಲೇಖನದಲ್ಲಿ ನೀಡುತ್ತಿರುವ ವಿರಣೆಗಳು ಹಾಗೂ ತೋರುತ್ತಿರುವ ಸಾಮಾಜಿಕ ಕಾಳಜಿಗಳು ತಪ್ಪಾಗಿಯೇ ಅಂತ್ಯ ಕಾಣುತ್ತವೆ.
ಸಂತೋಷ್ ರವರಿಗೆ
೧)ನಾನು ಲೇಖನದಲ್ಲಿ ಮಡೆ ಸ್ನಾನವನ್ನು ಬೇರೆ ಜಾತಿಯವರು ಮಾಡುತ್ತಿದ್ದಾರೆ ಎಂಬ ವಾದ ಇದುವರೆಗೂ ಈ ಆಚರಣೆ ಮಾಡಿಕೊಂಡು ಬಂದ ಬ್ರಾಹ್ಮಣಶಾಹಿಯ ಸಮರ್ಥನೆಯಾಗಲಾರದು ಎಂದು ತಿಳಿಸಿದ್ದೇನೆ ಇದರಲ್ಲಿ ನನಗೆ ಯಾವ ದ್ವಂದ್ವ ಇಲ್ಲ
೨) ಮನುವಿನಿಂದ ಮುಂದಿಡಲ್ಪಟ್ಟು ಸಮಾಜದ ಎಲ್ಲಾ ಮಾನವರನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿರುವ ಬ್ರಾಹ್ಮಣಿಯ ಮೌಲ್ಯ, ಜೀವ ಮತ್ತು ಸಮಾನತೆಯ ವಿರೋಧಿಯೆಂದು ಭಾವಿಸಿದರೆ ತಪ್ಪಾಗಲಾರದು. (ಈ ವಾದದದ ಸತ್ಯತೆ ಕುರಿತು ಹಲವಾರು ಗುಣಾತ್ಮಕ ಚಚರ್ೆಗಳು ಈಗಾಗಲೇ ನಡೆಯುತ್ತಿವೆ ಅದು ಬೆರೆಯದೇ ವಿಚಾರ) ನಿಮಗೆ ಅಗತ್ಯವಾದ ಪದಗಳನ್ನು ಪಡೆದು ಬ್ರಾಕೆಟ್ ನಲ್ಲಿ ಇರುವುದನ್ನು ಬಿಟ್ಟರೆ ಹೇಗೆ ಪೂರ್ತಿ ಓದಿದರೆ ತಿಳಿಯುತ್ತದೆ
೩) ಸಮಾಜ ವಿಜ್ಞಾನಗಳ ಒಟ್ಟು ಬ್ರಾಹ್ಮಣ ವಿರೋಧಿ ಎಂದು ಇಡಿ ಲೇಖನದಲ್ಲಿ ಎಲ್ಲಿಯೂ ಹೇಳಿಲ್ಲ ನಾನು ಹೇಳಿರುವುದು ಹೀಗೆ ಮಾನವ ಸಮಾನತೆಯನ್ನು ಬಯಸುವವರು, ಸಮಾಜವು ಆಚರಣೆಗಳ ಹೆಸರಿನಲ್ಲಿ ಬ್ರಾಹ್ಮಣಿಕರಣಕ್ಕೆ ಒಳಗಾಗುವುದನ್ನು ಆ ಮೂಲಕ ಮಾನವ ವಿರೋಧಿಯಾಗುವುದನ್ನು ತಡೆಯಬೇಕು ಎಂಬುದು ಇದುವರೆಗಿನ ಸಮಾಜ ಸಂಶೋಧನೆಗಳ ಒಟ್ಟು ಸಾರ ಎಂಬುದಾಗಿದೆ ನೀವು ಹೇಳಿರುವ ಬಹುಪಾಲು ಬರಹಗಳನ್ನು ನಾನು ಓದಿದ್ದೇನೆ ಮುಂದು ಓದುವೆ ಅದಕ್ಕೆ ಕೊನೆ ಎಂಬುದಿಲ್ಲ
4) ನಾನು ನನ್ನ ಲೇಖನದಲ್ಲಿ ಎಲ್ಲಿಯೂ ಬ್ರಾಹ್ಮಣರನ್ನು ಕುತಂತ್ರಿಗಳು ಎಂದು ಕರೆದಿಲ್ಲ ಬದಲಾಗಿ ಒಂದು ನಿರ್ದಿಷ್ಟ ಕಾಲಘಟ್ಟದ ಸಮಾಜದ ಮೇಲೆ ಹಲವಾರು ಮೌಲ್ಯಗಳು ಪ್ರಭಾವ ಬೀರುತ್ತವೆ ಬಹುಸಂಸ್ಕೃತಿಯುಳ್ಳ ಭಾರತದ ಸಮಾಜದ ಮೇಲೆ ಬ್ರಾಹ್ಮಣ ಕೆಂದ್ರಿತ ಮೌಲ್ಯಗಳ ಪ್ರಾಭಾವ ಹೆಚ್ಚಾಗಿವೆ ಮಡೆಸ್ನಾನದಂತಹ ಆಚರಣೆಗಳು ಇದೇ ವಿದ್ಯಮಾನವನ್ನು ಗಟ್ಟಿಗೊಳಿಸುತ್ತಿವೆ ಎಂದಿದ್ದೇನೆ ಇದರಲ್ಲಿ ತಪ್ಪಾದ ಗ್ರಹಿಕೆ ಏನಿದೆ ಗೆಳೆಯರೇ
೫) ನಿಮಗೆ ಇ ಹಿಂದೆ ಇದೆ ಚರ್ಚೆಯ ವೇಳೆ ನೀಡಿದ ಉತ್ತರವೇ ಸಾಕು ಎನಿಸುತ್ತದೆ ಏನು ಮಾಡುವುದು ನಿಮ್ಮ ಅನಿವಾರ್ಯತೆ ಮತ್ತೆ ಮತ್ತೆ ಉತ್ತರ ಬಯಸುತ್ತದೆ ಸೊ ಇನ್ನೊಮ್ಮೆ ಓದಿಕೊಳ್ಳಿ ನಾನು ಮೊದಲೇ ನಿಮಗೆ ಸ್ಪಷ್ಟ ಪಡಿಸಿದ್ದೇನೆ ಆಚರಣೆಗಳ ಕುರಿತ ತಮ್ಮ ಜ್ಞಾನ ಪಡೆಯುವ ಪ್ರಯತ್ನ ನಿರಂತರವಾಗಿರಲಿ ನಿಮ್ಮ ಸಂಶೋದನೆ ಮತ್ತು ನಿಲುವು ಎರಡು ಪ್ರಶಂಶನಿಯ ಆದರೆ ನಮ್ಮ ಸಂಶೋದನೆಗಳು ಯಾವುದೊ ಒಂದು ವರ್ಗದ ಶತಮಾನಗಳ ಶೋಷಣೆಗೆ ಧರ್ಮ ಸಮರ್ಥನೆ ಒದಗಿಸಭಾರದು ಎಂಬುದು ನನ್ನ ನಿಲುವು ಉದಾಹರಣೆಗೆ ಹೇಳುವುದಾದರೆ ಭಾರತದಲ್ಲಿ ಜಾತಿ ಪಧತಿ ಇಗ ನಾವು ಸಮಾಜ ವಿಜ್ಞಾಗಳಲ್ಲಿ ಕಲಿಯುತ್ತಿರುವಂತೆ ಇಲ್ಲ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರ ಎಂಬ ವಿಂಗಡಣೆ ಇ ಸಮಾಜವನ್ನು ಅಧರಿಸಿಲ್ಲ ಎಂಬ ನಮ್ಮ ವಾದ, ಇದೆ ವಾದವನ್ನು ಬಳಸಿಕೊಂಡು ಶೋಷಣೆ ನಡೆಸಿದ ಮೆಲ್ವರ್ಗಗಳಿಗೆ ನಿರಪರಾಧಿ ಪಟ್ಟ ನಿಡಿಬಿದಭಾರದು ಇದು ನನ್ನ ನಿಲುವು ನೀವು ನಿಮ್ಮ ಲೇಖನದಲ್ಲಿ ಮದೆಸ್ನನಕ್ಕ ಯಾವುದೇ ಒಂದು ವರ್ಗ ಕಾರಣವಲ್ಲ , ಅದ್ದರಿಂದ ಬ್ರಾಹ್ಮಣರನ್ನು ಕುತಂತ್ರಿಗಳು ಎಂದು ಕರೆಯಭಾರದು ಎಂದು ಹೇಳಿದ್ದಿರಿ ಅದು ಅಕ್ಷೆಪರ್ಹ ಏಕೆಂದರೆ ( ಸಮಾಜ ವಿಜ್ಞಾನದ ಯಾವುದೇ ವಾದಗಳು ಬ್ರಾಹ್ಮಣರನ್ನು ಕುತಂತ್ರಿಗಳು ಎಂದು ಕರೆದಿಲ್ಲ ಬದಲಾಗಿ ಬ್ರಾಹ್ಮಣಶಾಹಿ ಆಲೋಚನೆಗಳನ್ನು ಹಾಗೆ ಸಮಾಜ ವಿರೋಧಿಯಾಗಿ ಗುರುತಿಸಿವೆ) ಇಂದು ಆಚರಣೆಯ ಹೆಸರಿನಲ್ಲಿ ಮೌದ್ಯಥೆ ಭಿತ್ತುತ್ತಿರುವವರು ಯಾರು ಅದನ್ನೇ ಬಂಡವಾಳ ಮಾಡಿಕೊಂಡು ಸಮಾಜಿಕ ಶೋಷಣೆ ನಡೆಸಿದವರು ಯಾರು ಎಂದು ನನಗು ನಿಮಗೋ ತಿಳಿದಿದೆ. ಅದ್ದರಿಂದ ಜಾಣ ಮೌನ ತೋರಿಸದೆ ಆಚರಣೆಗೂ ಮತ್ತು ಅದರ ಹೆಸರಿನಲ್ಲಿ ನಡೆಯುತ್ತಿರುವ ಬ್ರಾಹ್ಮಣಶಾಹಿ ಮೌದ್ಯವನ್ನು ವಿರೋಧಿಸಿ. ಜಾತಿವ್ಯವಸ್ಥೆ ಇಲ್ಲ ಎಂಬ ನನ್ನ ವಾದ ಬ್ರಾಹ್ಮಣಶಾಹಿಯಾ ಸಮರ್ಥನೆ ಖಂಡಿತ ಅಲ್ಲ ಉನ್ನತ ಜ್ಞಾನದ ಹೆಸರಿನಲ್ಲಿ ಶತಮಾನಗಳ ಅವರ ಶೋಷಣೆ ಖಂಡನೀಯ ಇದು ನನ್ನ ನಂಬಿಕೆ ಮತ್ತು ನನ್ನ ನಿಮ್ಮ ಸಂಶೋದನೆಯ ನಡುವೆ ಇರುವ ವ್ಯತ್ಯಾಸ ಇದನ್ನು ಅರ್ಥ ಮಾಡಿಕೊಂಡರೆ ನಮ್ಮ ದಾರಿ ಸುಲಭವಾಗುತ್ತದೆ. ಆದರೆ ನಿಮ್ಮ ಅನಿವಾರ್ಯತೆ ಅದಕ್ಕೆ ಅವಕಾಶ ಕೊಡಬೇಕಷ್ಟೇ







I am writing in English because I dont know how to write here in Kannada: nanange nagaraj avara maatu oppige..badalaavaneya horaata unnatavargadavarindale praarambhavaagabeku..haageye aaguttiruvudu..attyanta munduvarida vargadinda andare shoshaka varagadidindale pratibhatane yaake baruttade ennuvudu spashta..hiranya kashipuvina maneyalle prahlaada huttuvudu anta obba gaandhi vaadi heluttiddaru..JP anthavaru sadyada rajakkeyada huyilinalli Communist Pakshagalannu braahmanara pakshavendu halidu annyaaya maadiddaru..naanu huttinalli braahmannaadaroo dalitara bagge naanu kalakali samvedaneyinda vyktapadisidaaga adannu praamaanikavaagiddagaloo, madhyantara jaathiyavaru idaralleno kitaapatiyide yendu heliddu jnaapakakke bantu..adu hegaadaroo irali..navella koodi ee moudhya haagoo innoo aneka pidugugala viruddha horaadona ..
best of luck
ಭಾರತೀಯ ಈ ಜನ ಮತ್ತೇ ಶಿಲಾಯುಗಕ್ಕೆ ( ೨ ಲಕ್ಷದ ೫೦ ವರ್ಷ ಹಿಂದಕ್ಕೆ ಹೋಗಿದ್ದಾರೆ )ಮುಂದುವರಿಯಲಾರದೆಂದು ಇದರಿಂದ ಗಂಟಾಘೋಷವಾಗಿ ಮುಂದೆ ಹೇಳಬಹುದು.
ಯಾರು ನಿಜವಾದ ಮಡೆಸ್ನಾನದ ಸಮರ್ಥಕರು?
ಮೊದಲಿಗೆ ಆಚರಣೆಯನ್ನು ಯಾರು ಸಮರ್ಥಿಸುತ್ತಿದ್ದಾರೆ ಎಂಬುದನ್ನು ನೋಡೋಣ, ನಾವು ಆಚರಣೆಯ ಕುರಿತು ಸಂಶೋಧನೆ ನಡೆಸುತ್ತಾ ವಸ್ತುನಿಷ್ಠವಾಗಿ ಅದನ್ನು ಸಮರ್ಥಿಸದೆ ಅಥವಾ ವಿರೋಧಿಸಿದೆ ಅದರ ಕುರಿತು ಮಾತನಾಡುತ್ತಿದ್ದೇವೆ. ಆದರೆ ಕಿರಣ್ ರವರು ತಮ್ಮ ಲೇಖನದಲ್ಲಿ ಮಡೆಸ್ನಾದ ಕುರಿತಾಗಿ ಹೇಳುವಾಗ, ಪ್ರಗತಿಪರರು ಆಚರಣೆಗಳ ವಿರೋಧಿಗಳಲ್ಲ ಬದಲಾಗಿ ಕೇವಲ ಅವುಗಳಲ್ಲಿರುವ ಮೌಢ್ಯಗಳ ವಿರೋಧಿಗಳು ಎಂದು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. ಒಂದೊಮ್ಮೆ ಇದುವೇ ಅವರ ಸ್ಪಷ್ಟ ನಿಲುವಾದರೆ ಈ ಮುಂದಿನ ನಿರ್ಣಯ ಅನಿವಾರ್ಯ, ಅದೆಂದರೆ, ಆಚರಣೆಗಳಲ್ಲಿರುವ ಮೌಢ್ಯವನ್ನು ಮಾತ್ರ ವಿರೋಧಿಸುವುದು ಎಂದರೆ ಏನು? ಹಾಗೆಂದರೆ ಅದರಲ್ಲಿರುವ ಯಾವುದೋ ಒಂದು ನಂಬಿಕೆಯನ್ನು ಮಾತ್ರ ತಿರಸ್ಕರಿಸಬೇಕು ಎಂದರ್ಥ. ಹಾಗಾದರೆ ಆ ನಂಬಿಕೆಯನ್ನು ತಿರಸ್ಕರಿಸಿಯೂ ಆಚರಣೆ ಮುಂದುವರೆದರೆ ಸೋ ಕಾಲ್ಡ್ ಪ್ರಗತಿಪರರಿಗೆ ತೊಂದರೆ ಇಲ್ಲ (ಇದು ಕಿರಣ್ ರವರದ್ದೇ ವಾದ) ಅಂತಾದರೆ ಅವರು ಮಡೆಸ್ನಾನದ ವಿಚಾರದಲ್ಲಿ ಅದು ಬೇಕಾದರೆ ಮುಂದುವರೆಯಲಿ ಅದರಲ್ಲಿರುವ ಮೌಢ್ಯ ಬೇಡ ಎಂದು ಹೇಳುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಬಹುದು. ಇದೂ ಒಂದೊಮ್ಮೆ ನಿಜವೇ ಆದರೆ, ಮಡೆಸ್ನಾನದಲ್ಲಿರುವ ಮೌಢ್ಯವೇನು ಎಂದು ಮೊದಲು ಹುಡುಕಬೇಕಾಗುತ್ತದೆ? ಅದರಲ್ಲಿ ಯಾವುದೋ ಒಂದು ಮೌಢ್ಯ ಇದೆ ಎಂದು ಸಧ್ಯಕ್ಕೆ ಇಟ್ಟುಕೊಂಡರೆ, ಅದನ್ನು ತೆಗೆದು ಹಾಕಿ ಆಚರಣೆಯನ್ನು ಮಾತ್ರ ಇಟ್ಟುಕೊಳ್ಳಬೇಕಾಗುತ್ತದೆ-ಕಿರಣ್ ರವರ ಪ್ರಕಾರ. ಇಲ್ಲಿ ಆಚರಣೆಯನ್ನು ಇಟ್ಟುಕೊಳ್ಳುವುದು ಅಥವಾ ಮುಂದುವರೆಸುವುದು ಅಂದರೆ ಏನು? ಮತ್ತದೆ ಎಂಜಲೆಲೆಯ ಮೇಲೆ ಯಾವುದೋ ಒಂದು ಸಮುದಾಯ ಹೊರಳಾಡುವುದು ಅಲ್ಲವೇ? ಹಾಗಾಗಿ ವಾದದ ನೆಲೆಯಲ್ಲಿಯೂ ತಮ್ಮ ನಿಲುವು ಹಾಗೂ ವಿಚಾರಗಳೇ ಮಡೆಸ್ನಾನವನ್ನು ಸಮರ್ಥಿಸುತ್ತವೆ. ಅಂದರೆ ನೀವು ವಿರೋಧಿಸುತ್ತಿರುವ ಬ್ರಾಹ್ಮಣಶಾಹಿಯನ್ನು ಪರೋಕ್ಷವಾಗಿ ತಮಗೆ ಅರಿವಿಲ್ಲದೆ ಸಮರ್ಥನೆ ಮಾಡುತ್ತಿದ್ದೀರಿ. ಒಟ್ಟಿನಲ್ಲಿ ಕಿರಣ್ ರವರ ಪ್ರಕಾರ ಅವರು ಆಚರಣೆಯ ವಿರೋಧಿಗಳಲ್ಲ ಬದಲಿಗೆ ಮೌಢ್ಯದ ವಿರೋಧಿಗಳು ಎಂಬುದರ ಇಂಗಿತಾರ್ಥ ಅವರು ಮಡೆಸ್ನಾನ ಆಚರಣೆಯ ಸಮರ್ಥಕರೇ ಆಗಿರುವುದು.
ಹಾಗೆಯೇ ಮುಂದುವರೆದು…
“ಮನುವಿನಿಂದ ಮುಂದಿಡಲ್ಪಟ್ಟ, ಹಾಗು ಬ್ರಾಹಣೀಯ ಮೌಲ್ಯ, ನಮ್ಮ ಸಮಾಜವನ್ನು 4 ಭಾಗಗಳನ್ನಾಗಿ ಮಾಡಿ ಜೀವ ಮತ್ತು ಸಮಾನತೆಯ ವಿರೋಧಿಯೆಂದು ಭಾವಿಸಿದರೆ ತಪ್ಪಾಗಲಾರದು. ಇಂತಹ ಗುಣಾತ್ಮಕ ಚರ್ಚೆಗಳು ಈಗಾಗಲೇ ನಡೆಯುತ್ತಿವೆ” ಎಂಬ ನಿಮ್ಮ ವಾದ ಹೊಸದೇನಲ್ಲ. ಇಂತಹ ಹಳಸಲು ವಾದ ವಸಾಹತುಶಾಹಿಯ ಆಗಮನ ಕಾಲದಿಂದಲೂ ಭಾರತದಲ್ಲಿ ಇದೆ. ಇಂದಿಗೂ ಕೂಡ ಅದು ನಮ್ಮ ಸ್ವೀಕೃತ ಸತ್ಯವಾಗಿದೆ. ಅದು ನಿಮಗೂ ಗೊತ್ತಿರಬೇಕಲ್ಲ! ಅದನ್ನೆ ನಮ್ಮ ಸಮಾಜವಿಜ್ಞಾನ ಇಂದಿಗೂ ಹೇಳುತ್ತಿದೆ. ಇಂತಹ ವಾದಗಳಿಲ್ಲದಿದ್ದರೆ ನಮ್ಮ ಪ್ರಗತಿಪರರಿಗೆ ನೆಲೆಯೇ ಇಲ್ಲದಂತಾಗುತ್ತದೆ. ಆ ಭಯ ನಿಮ್ಮಲ್ಲೂ ಇದ್ದಹಾಗೆ ಕಾಣುತ್ತದೆ. (ಪ್ರಗತಿಪರರಿಗೆ ಆಚರಣೆಗಳು ಅರ್ಥವಾಗುತ್ತಿಲ್ಲ ಎಂದರೆ, ಇದುವರೆಗಿನ ಹಲವು ಚಳುವಳಿಗಳು ಮೌಲ್ಯಕಳೆದುಕೊಂಡುಬಿಡುತ್ತವೆ) ಎಂದು ಸಮರ್ಥಿಸಿಕೊಳ್ಳುವಾಗ ಅದು ಎದ್ದು ಕಾಣುತ್ತದೆ. ಒಬ್ಬ ಸಂಶೋಧಕನಾಗಿ ವಸ್ತು ಪಾತಳಿಯಲ್ಲಿ ವಿದ್ಯಮಾನವನ್ನು ನೋಡಿದರೆ ಮಾತ್ರ ಅರ್ಥೈಸಿಕೊಳ್ಳಲು ಸಾಧ್ಯ.
ಮಡೆಸ್ನಾನದ ಕುರಿತು ನಡೆಯುತ್ತಿರುವ ಚರ್ಚೆ ನಿಮಗೇಕೆ ಅರ್ಥವಾಗುತ್ತಿಲ್ಲ ಮತ್ತು ಅರ್ಥಹೀನ ವಾದಗಳನ್ನು ತಂದು ಹಗಲೆಲ್ಲಾ ಏಕೆ ಹಪಹಪಿಸುತ್ತೀದ್ದೀರಿ ಎಂದರೆ, ನಾವು ಮಾಡುತ್ತಿರುವ ಚರ್ಚೆಯು ಮಡೆಸ್ನಾನವನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂಬುದರ ಕುರಿತಾಗಿದೆ, ಆದರೆ ನೀವು ಅದನ್ನು ಸರಿ ಅಥವಾ ತಪ್ಪು ಎಂಬ ಹಿನ್ನೆಲೆಯಿಂದ ನೋಡುತ್ತಿದ್ದೀರಿ, ಅವೆರಡು ಬೇರೆ ಬೇರೆ ವಲಯಗಳು, ಅಂದರೆ ಒಂದು ಮರದ ಕುರಿತು ವಿವರಣೆ ನೀಡುವುದು ಬೇರೆ, ಮರವು ಅಲ್ಲಿರಬೇಕೆ ಬೇಡವೇ ಎಂದು ನಿರ್ಣಯಿಸುವುದು ಬೇರೆ, ಆದ್ದರಿಂದ ನಾವು ಅರ್ಥ ಮಾಡಿಕೊಳ್ಳುವ ಪ್ರಸಂಗಕ್ಕೆ ಬಂದಾಗ ಬಹುತೇಕರು ಬೇರೆಯದೇ ಈಗಾಗಲೇ ಅಧ್ಯಯಯನ ಮಾಡದೆ ಹೊಂದಿರುವ ನಿಲುವಿನ ಆಧಾರದ ಮೇಲೆ ಅದರ ಕುರಿತು ಒಂದು ನೈತಿಕ ನಿರ್ಣಯ ಹೇರಲು ಬರುತ್ತಿದ್ದಾರೆ. ಆದರೆ ಅವೆರಡು ಬೇರೆ ಬೇರೆ
.
೧.ಮನುವುನಿಂದ ಮುಂದಿಡಲ್ಪಟ್ಟ, ಅಗೋಚರವಾದಂತಹ 4 ವರ್ಣಗಳು ನಿಮಗೆ ಹೇಗೆ ಕಂಡವೋ? ಇಂದಿಗೂ ಕೂಡ ಯಾವ ಬ್ರಾಹ್ಮಣರು ಮನುಸ್ಮೃತಿಯನ್ನು, ಅಥವಾ ಇತರೇ ಹಲವು ಜಾತಿಯವರು ಬ್ರಾಹ್ಮಣರನ್ನು ಕೇಳಿ ತಮ್ಮ ದಿನ ನಿತ್ಯದ ಮಸಾಲೆಯನ್ನು ಅರೆಯುತ್ತಾರೆ?
೨.ಆಚರಣೆಗಳು ಬ್ರಾಹ್ಮಣೀಕರಣಕ್ಕೆ ಒಳಗಾಗುವುದನ್ನು ಸಮಾಜ ವಿಜ್ಞಾನಗಳು ವಿರೋಧಿಸಿವೆ ಎಂಬ ವಾದವನ್ನು ನಿಮ್ಮ ಬೆಂಬಲಕ್ಕಿಟ್ಟುಕೊಂಡಿದ್ದೀರಿ, ಆದರೆ ಮಲೆಕುಡಿಯ ಜನಾಂಗ ಮಡೆಸ್ನಾನವನ್ನು ತನ್ನ ಆಚರಣೆಯನ್ನಾಗಿ ಆಚರಿಸುತ್ತಿದೆ. (ಇವರ ಸಂದರ್ಶನ ಮಾಡಿ ಕೇಳಿ) ಆದರೆ, ನೀವು (ಸೋ ಕಾಲ್ಡ್ ಪ್ರಗತಿಪರರು) ಮಲೆಕುಡಿಯರ ಆಚರಣೆಯನ್ನೇ ವಿರೋಧಿಸಿದಂತಾಗುತ್ತದೆಯಲ್ಲವೇ? ಇನ್ನು ಒಂದು ಸಾಧ್ಯತೆ ನೀವು ಹೇಳುವಂತೆ ಇದು ಬ್ರಾಹಣಶಾಹಿ ಹುಟ್ಟು ಹಾಕಿದ ಆಚರಣೆ ಎನ್ನುವುದು ಅಸ್ಪಷ್ಟವಾಗಿದೆ. ಬ್ರಾಹ್ಮಣೀಕರಣದ/ಸಂಸ್ಕೃತಾನುಕರಣದ ಕುರಿತು ಹೀಗೆ ಮೇಲ್ನೋಟದ ಸಂಗತಿಗಳ ಆಧಾರದ ಮೇಲೆ ಮಾತನಾಡುವುದಕ್ಕಿಂದ ಮೆಕ್ಕಿಮ್ ಮೆರಿಯಟ್ ರ ಪುಸ್ತಕವನ್ನು ಓದಿ ನೋಡಿ, ಅವರು ಸುಸ್ಪಷ್ಟವಾಗಿ ನೀವು ನಂಬಿಕೊಂಡಿರುವ ನಿಲುವನ್ನು ಹೇಗೆ ಪ್ರಶ್ನಿಸುತ್ತಾರೆ ಎಂದು.
೩. ಇನ್ನು ಭಾರತದ ಆಚರಣೆಗಳು ಬ್ರಾಹ್ಮಣ ಕೇಂದ್ರಿತ ಮೌಲ್ಯಗಳಿಂದ ಪ್ರಭಾವಿತವಾಗಿವೆ ಎಂದರೇ! ಇನ್ನೊಂದು ಕಡೆ ಜಾತಿ ವ್ಯವಸ್ಥೆ ಇಲ್ಲ ಎನ್ನುತ್ತೀರಿ. ಮತ್ತೊಂದು ಕಡೆ ವರ್ಣವ್ಯವಸ್ಥೆ ಸಮಾಜವಿಜ್ಞಾನ ಹೇಳುವಂತೆ ಇಲ್ಲ ಎನ್ನುತ್ತೀರಿ. ಇದು ನಿಮ್ಮಲ್ಲೇ ಇರುವ ಗೊಂದಲ ಮತ್ತು ಅಸಂಬದ್ಧತೆ.
೪. ಆಚರಣೆ ನಂಬಿಕೆಗಳೆ ಜನರ ಜೀವಾಳ ಎನ್ನುವಲ್ಲಿಯೂ ಕೂಡ ಆಚರಣೆಗಳನ್ನು ಅರ್ಥಮಾಡಿಕೊಳ್ಳದಿರುವುದು ಕಂಡುಬರುತ್ತದೆ. ದೇವರು ನಾವು ಇಡುವ ಎಡೆಯನ್ನು ನೈವೇದ್ಯವನ್ನು ಸ್ವೀಕರಿಸುವುದಿಲ್ಲ ಎಂದು ತಿಳಿದಿದ್ದರೂ ನಾವು ಅದನ್ನು ಮಾಡುತ್ತೇವೆ. ಅಂದರೆ ಇದರ ಹಿಂದೆ ನಂಬಿಕೆ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸಬಹುದು. ಹಿಂದೆ ಹಿರಿಯರು ನಮಗೆ ಅದನ್ನು ವರ್ಗಾಯಿಸಿದ್ದಾರೆ ನಾವು ಅನುಸರಿಸುತ್ತಿದೇವೆ ಅಷ್ಟೆ. ಆಚರಣೆ ನಂಬಿಕೆಗಳಿಗೂ ಯಾವುದೇ ಸಂಬಂಧವಿಲ್ಲ. ಜನರ ಜೀವಾಳವಾಗಿರುವ ನೀವು ಹೇಳಿದಂತೆ, ಇಲ್ಲದ ನಂಬಿಕೆಗಳನ್ನು ವಿರೋಧಿಸಿ ಆಚರಣೆಗಳನ್ನು ಮಾತ್ರ ವಿರೋಧಿಸುವುದಿಲ್ಲ ಎಂದರೆ ಅದಕ್ಕಿಂತ ಗೊಂದಲ ಮತ್ತೊಂದಿಲ್ಲ. ಇಲ್ಲದೆ ಇರುವುದನ್ನು ವಿರೋಧಿಸುತ್ತೀರಿ, ಹಾಗೂ ಇರುವುದನ್ನು ಮುಂದುವರೆಯಲಿ ಎನ್ನುತ್ತೀರಿ ಹಾಗಾದರೆ ನಿಮಗೂ ಹಿಂದುತ್ವದವರಿಗೂ ವ್ಯತ್ಯಾಸವಿರುವಂತೆ ತೋರುವುದಿಲ್ಲ. ಏಕೆಂದರೆ ಅವರು ಪಾಪ ನಿಮ್ಮ ಹಾಗೆಯೇ ಸಂಸ್ಕೃತಿಯಲ್ಲಿರುವ ಆಚರಣೆಗಳನ್ನು ವಿರೋಧಿಸುವುದಿಲ್ಲ, ಆದರೆ ಕ್ರಾಂತಿಕಾರಕವಾಗಿ ರಕ್ಷಿಸುತ್ತಾರೆ, ಆದರೆ ನೀವು ಸೌಮ್ಯವಾಗಿ ರಕ್ಷಿಸುತ್ತಿದ್ದೀರಿ ಅಷ್ಟೆ.