ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ, ಲೇಖಕಿ ಬಿ ಕೆ ಸುಮತಿ ಅವರು
‘ರಂಗಶಂಕರ’ದ ಇತ್ತೀಚಿನ ನಾಟಕ ‘ಬೆಂದಕಾಳು ಆನ್ ಟೋಸ್ಟ್’ ನಾಟಕವನ್ನು ನೋಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅದು ಇಲ್ಲಿದೆ
ಇದಕ್ಕೆ ಕೆಂಭೂತ ಪ್ರತಿಕ್ರಿಯಿಸಿದ್ದಾರೆ. ಅದು ಇಲ್ಲಿದೆ
ಇದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನೂ ತಿಳಿಸಿ
avadhimag@gmail.com ಗೆ ನಿಮ್ಮ ಪ್ರತಿಕ್ರಿಯೆ ಕಳಿಸಿ
ಬಿ ಯು ಗೀತಾ
ನಾವಿಬ್ಬರು ನಾಟಕ ನೋಡುತ್ತಾ , ನೋಡುತ್ತಿರುವವರು ನಕ್ಕಾಗ ಸಂಕಟಪಡುತ್ತಾ, ಇರುವ ಊರನ್ನು ಹೀಯಾಳಿಸಿದಾಗ ಇವರಿಗೆ ನಗು ಯಾಕೆ ಬರುತ್ತದೆ ಎಂದು ಆಶ್ಚರ್ಯ ಪಡುತ್ತಾ ಮಾತಾಡಿಕೊಂಡಿದ್ದನ್ನು ಯಥಾವತ್ತಾಗಿ ಅಕ್ಷರ ರೂಪಕ್ಕೆ ಇಳಿಸಿದ್ದೀಯ ಸುಮತಿ.
ಧನ್ಯವಾದಗಳು.
ಬೇಕೆನ್ನಿಸಿದರೆ ಬಡತನ, ರಸ್ತೆಯ ಜೀವನವನ್ನೂ romanticise ಮಾಡಬಲ್ಲ ಲೇಖಕ. ಬೇರೆ ದೊಡ್ಡ ಅಥವಾ ಚಿಕ್ಕ ನಗರಕ್ಕಿಂಥ ಹೆಚ್ಚು ಭಿನ್ನವಾಗಿಲ್ಲ ನಮ್ಮ ಬೆಂಗಳೂರು. ಮಮ್ಮದು ಎಂಬ ಅಭಿಮಾನ ಬೇಕಷ್ಟೇ.
ರಸ್ತೆ ಬೇಕು, ಆದರೆ ಅಗೆಯಬಾರದು. ನೀರು ಬೇಕು, ಆದರೆ ಬೋರ್ವೆಲ್ ಶಬ್ದ ಬೇಡ. ನಾವು ದೊಡ್ಡ ಕಾರಿನಲ್ಲಿ ಓಡಾಡಬೇಕು, ಆದರೆ ರಸ್ತೆಯಲ್ಲಿ ಬೇರೆ ಯಾರೂ ಇರಬಾರದು. ಬೆಂಗಳೂರಿನಲ್ಲಿ ಇರುವ ವಯಸ್ಸಾದ , ಮದ್ಯವಯಸ್ಕ, ಹಾಗೂ ಯುವಕರು…ಎಲ್ಲರೂ ಉಡಾಫೆ ಜನರೇ.
ಯಾರು ಏನೇ ಹೇಳಲಿ, she is my heroine. Bangalore is my heroine.
Finally ವಾಸಿಸುವ ಜನರಿದ್ದಂತೆ ನಗರ.






0 Comments