ಮೌಲ್ಯ
“ಸಾರ್, ನನಗೆ ರಕ್ಷಣೆ ನೀಡಿ”
“ಏನಾಯಿತು, ಯಾರು ನೀನು ?”
“ನಾನು ಬೀದಿಯಲ್ಲಿ ಬರುತ್ತಿದ್ದಾಗ ಹಲವಾರು ಮಂದಿ ತಲವಾರು ಝಳಪಿಸುತ್ತ ನನ್ನ ಬೆನ್ನು ಹತ್ತ್ತಿದರು. ಅವರಿಂದ ಪಾರಾಗಲು ಗಲ್ಲಿ ಬಿದ್ದು ಇಲ್ಲಿಗೆ ಬಂದೆ”
“ನಿನ್ನ ಹೆಸರೇನು ?”
“……”
“ಹೆದರಬೇಡ. ಶರಣಾಗತರಿಗೆ ರಕ್ಷಣೆ ನೀಡಬೇಕೆಂದು ನಮ್ಮ ಧರ್ಮದಲ್ಲಿದೆ. ಬಾ ಇಲ್ಲಿ ಅವಿತುಕೋ”
ಸ್ವಲ್ಪವೇ ಹೊತ್ತಿನಲ್ಲಿ ಕ್ರೋಧದಿಂದ ಉನ್ಮತ್ತವಾಗಿದ್ದ ಒಂದು ಗುಂಪು ಅಲ್ಲಿಗೆ ಬಂತು.
“ಇತ್ತ ಕಡೆ ಓಡಿ ಬಂದ ಆ ನೀಚ ಎಲ್ಲಿ ಹೋದ ?”
“ಸುಳ್ಳು ಹೇಳಬಾರದೆಂದು ನಮ್ಮ ಧರ್ಮದಲ್ಲಿ ಹೇಳಿದೆ. ಇದೋ ಇಲ್ಲಿ ಅವಿತಿದ್ದಾನೆ ನೋಡಿರಿ”
–ಹರೀಶ್ ಖೇರ






0 Comments