ಕೆ ರಾಮಯ್ಯ ರಾಜ್ಯದ ಅನೇಕ ಚಳವಳಿಗಳನ್ನು ಕಟ್ಟಿ ಬೆಳಸಿದವರು. ಬರುತಿಹೆವು ನಾವು ಬರುತಿಹೆವು, ಯುಗ ಯುಗಗಳಿಂದ ನೀವ್ ತುಳಿದ ಜನಗಳ ಕೊರಳ ದನಿಗಳು ನಾವು…ಎಂಬ ಹಾಡು ದಶಕಗಳ ಕಾಲ ರಾಜ್ಯದ ಧಮನಿತರ ಮಧ್ಯೆ ಸಂಚಲನವನ್ನು ಉಂಟು ಮಾಡಿತ್ತು. ಹೊಸ ರಾಜಕೀಯಕ್ಕೂ ನಾಂದಿ ಹಾಡಿತ್ತು. ರಾಮಯ್ಯ ಬ್ಯಾಂಕ್ ನಲ್ಲಿದ್ದು ನಂತರ ಲಂಕೇಶ್ ಪತ್ರಿಕೆ, ಮುಂಗಾರು, ಸುದ್ದಿ ಸಂಗಾತಿ ಮೂಲಕ ದೃಶ್ಯ ಮಾಧ್ಯಮದತ್ತ ನಡೆದು ಬಂದವರು. ಚಲನಚಿತ್ರ ರಂಗದಲ್ಲಿ ಪ್ರಶಸ್ತಿ ಪಡೆದವರು. ಮಕ್ಕಳ ರಂಗಭೂಮಿಯನ್ನು ತಾಯಿ ಕರುಳಿನಿಂದ ಪ್ರೀತಿಸಿದವರು ಇಂತಹ ರಾಮಯ್ಯ ಕೋಲಾರ ಜಿಲ್ಲೆಯಲ್ಲಿ ‘ಆದಿಮ’ ಎಂಬ ತಮ್ಮದೇ ಆದ ಭಿನ್ನ ಜಗತ್ತನ್ನು ಸೃಷ್ಟಿಸಿಕೊಂಡಿದ್ದಾರೆ. ಸಾಂಸ್ಕೃತಿಕ ಲೋಕಕ್ಕೆ ಹೊಸ ಸ್ಪರ್ಶ ನೀಡುವ ಬಯಕೆಯಿಂದ ಹುಟ್ಟಿದ ಈ ಪರಿಸರ ಹೇಗಿದೆ ಎಂಬುದನ್ನು ಪರಮೇಶ್ವರ ಗುರುಸ್ವಾಮಿ ‘ಅವಧಿ’ಗಾಗಿ ಇಲ್ಲಿ ಬಿಂಬಿಸಿದ್ದಾರೆ.



ಬರುತಿಹೆವು ನಾವು ಬರುತಿಹೆವು
ನಿಮಗೆ ಇವೂ ಇಷ್ಟವಾಗಬಹುದು…





ಅಂತರಗಂಗೆಯ ತಪ್ಪಲಲ್ಲಿ ಇರುವ ಆದಿಮ.ನೆಲ ಸಂಸ್ಕೃತಿಯ ಸಾಂಸ್ಕೃತಿಕ ವಕ್ತಾರ.
ಸಖತ್ ಆಗಿ ಇದೆ.ಬಿಡುವಾದಾಗ ಹೋಗಿ ಬನ್ನಿ.
ನನಗೆ ಈ ಲೇಕನ ಓದಿ ಬಹಳ ಸಂತೋಷವಾಯಿತು.
ಕೆ.ರಾಮಯ್ಯರವರ ಬರುತಿಹೆವು ನಾವು ಬರುತಿಹೆವು ಹಾಡನ್ನು ನಮ್ಮ
ಹೋರಾಟದ ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಹಾಡುತ್ತಿರುತ್ತೇವೆ.
“ಆದಿಮ” ಎಂಬ ತಮ್ಮ ಭಿನ್ನ ಜಗತ್ತಿನ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿರಲಿ……………….