ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪತ್ರಕರ್ತರಿಗೊಂದು ಸೂರು

journalist-full
 
ಇಲ್ಲೊಂದು ಸಂವಾದ ತಾಣವಿದೆ. ಹೆಸರು-kannada journalists.
ಕನ್ನಡ ಪತ್ರಕರ್ತರ ಮಾತು ಬಿಡಿ. ಸರಿಯಾಗಿ ಸಂವಾದ ಮಾಡಬೇಕು ಎನ್ನುವ ಪತ್ರಕರ್ತರಿಗೆ ಸರಿಯಾದ ವೇದಿಕೆಯಾದರೂ ಎಲ್ಲಿತ್ತು? ಕನ್ನಡಪ್ರಭದ ಕಾರ್ಯ ನಿರ್ವಾಹಕ ಸಂಪಾದಕ ರವಿ ಹೆಗಡೆ ಆ ನಿಟ್ಟಿನಲ್ಲಿ ಒಂದು ವೇದಿಕೆಗೆ ಕಾರಣರಾಗಿದ್ದಾರೆ.
ಇದು ಪತ್ರಕರ್ತರು ತಮ್ಮನ್ನು ಪರಿಚಯಿಸಿಕೊಳ್ಳುವ, ಪರಸ್ಪರ ಗೆಳೆಯರಾಗುವ, ಸಂವಾದ ನಡೆಸುವ, ಬಿಸಿ ಚರ್ಚೆ ಗೆ ಕಾವು ನೀಡುವ, ತಮಗೆ ಗೊತ್ತಿದ್ದನ್ನು ಹಂಚಿಕೊಳ್ಳುವ, ತಾವು ನಡೆಸುತ್ತಿರುವ ಕಾರ್ಯಕ್ರಮಗಳನ್ನು ತಿಳಿಸುವ…ಹೀಗೆ ಎಲ್ಲವನ್ನೂ ಒಂದು ಮಾಡಿದ ವೇದಿಕೆ ಇದು. ಮೊದಲ ಬಾರಿಗೆ ಅನೇಕ ಪತ್ರಕರ್ತರು, ಅದರಲ್ಲೂ ಕನ್ನಡ ಪತ್ರಕರ್ತರು ಒಂದೆಡೆ ಸೇರಿದ್ದಾರೆ. ಸಂವಾದ ನಡೆಸುತ್ತಿದ್ದಾರೆ.
ಪತ್ರಕೆ ವಿನ್ಯಾಸ ಬದಲಾಗುತ್ತಿದೆ ಎಂಬುದು ಗೊತ್ತಾಗಿದ್ದು ಇಲ್ಲಿ, ಎನ್ ಡಿ ಟಿ ವಿ ಈಗ ನಡೆಸುತ್ತಿರುವ ಏಳು ಅದ್ಭುತಗಳು ಜಾಹೀರಾತು ಗಳಿಸುವ ತಂತ್ರವೇ ಎಂದು ಚರ್ಚೆಯಾಗಿದ್ದು ಇಲ್ಲಿ. ಬ್ರೆಕಿಂಗ್ ನ್ಯೂಸ್ ಎನ್ನುವುದು ಹೇಗಿರಬೇಕು ಎಂಬುದರ ಸ್ಪಷ್ಟತೆಗೆ ಒದ್ದಾಡಿದ್ದು ಇಲ್ಲಿ. ಇಲ್ಲಿನ ಚರ್ಚೆಗಳು ಹೇಗಿರುತ್ತದೆ ಎನ್ನುವುದಕ್ಕೆ ಒಂದು ಸ್ಯಾಂಪಲ್ ಆಗಿ ಕಸ್ತೂರಿ ಚಾನಲ್ ನ ಪತ್ರಕರ್ತೆ ಶ್ರೀ ಅವರ ಒಂದು ಲೇಖನ ನೀಡುತ್ತಿದ್ದೇವೆ –
ಹಾಗಾಗಿ ಇನ್ನೇಕೆ ತಡ ನೀವೂ ಬನ್ನಿ
ಒಂದು ಕ್ಲಿಕ್ ಮೂಲಕ ಈ ಎಲ್ಲಕ್ಕೂ ಕೀಲಿಕೈ ಪಡೆದುಕೊಳ್ಳಿ
ಸದಸ್ಯರಾಗಲು ಇಲ್ಲಿ ಕ್ಲಿಕ್ಕಿಸಿ

‍ಲೇಖಕರು avadhi

8 March, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading