ವಿದ್ಯಾಶಂಕರ ಹರಪನಹಳ್ಳಿ
-೧-
ಅರೇಗತ್ತಲು
ಅವನ ಹುರಿಗೊಂಡ ತೋಳು
ಚುರುಕು ಕೈಗಳು, ಚುಟುಕು ಮಾತು
ಹಣೆ ಮೇಲೆ ಹರಳುಗಟ್ಟಿದ
ಬೆವರ ಸಾಲು….
ಇದೆಲ್ಲಾ ಸೇರಿಯೇ
ಚುರುಮುರಿ ರುಚಿಯಾಯಿತು
ಎಂಬುದು ನನ್ನ ಮುಗ್ಧ ನಂಬಿಕೆ
ನಗಬೇಡಿ! ಪ್ಲೀಸ್…
-೨-
ಧ್ಯಾನಸ್ಥ ಸ್ಥಿತಿಗೆ
ತಳ್ಳುವ ಪ್ರೇಮ
ಧೇನೈಸಿ ಸ್ಥಿತಿಗೂ
ಕಾರಣ ಕೂಡ ಎಂಬುದು
ಎಂತಹ ವೈಚಿತ್ರವಲ್ಲವೇ?
-೩-
ಸಹ ಮನುಷ್ಯನನು
ಪ್ರೀತಿಸಲಾಗದ ಮನುಷ್ಯ
ನಾಯಿ, ಬೆಕ್ಕು ಇತ್ಯಾದಿಗಳ
ಮುದ್ದಿಂದ ಸಾಕುವುದು…
ಆಹಾ! ಎಂತಹ ಸೊಜಿಗ!
-೪-
ಮಳ್ಳ ಮನುಷ್ಯನಿಗಿಂತ
ಕಳ್ಳು ಕುಡಿದ ಮನುಷ್ಯನ
ಸಹಜತೆ, ಮುಗ್ಧತೆ
ನನ್ನನು ಹೆಚ್ಚು ತಟ್ಟುವುದು..
-೫-
ಕ್ಷಣಕಾಲ
ಚಿಂದಿ ಆಯುವ ಹೆಂಗಸಿನ
ಕಣ್ಣಲ್ಲಿ ಕಣ್ಣಿಟ್ಟು ನೋಡಿ…
ನೀವು ಹೆಚ್ಚು ಮನುಷ್ಯರಾಗುವಿರಿ
-೬-
ಒಲಿಸಲು ಕವನ ಕಟ್ಟುವ
ಹುಡುಗರೇ ಇಲ್ಲಿ ಕೇಳಿ…
ನನ್ನ ಅಂತರಂಗದ
ಪಿಸುಮಾತ ದಾಖಲಿಸಿದ
ಲಂಕೇಶ್-ಗಿಂತ…
ಹೇಳದೆ ಉಳಿದ ಮಾತಗಳ
ರೇಖೆಯಲಿ ದಾಖಲಿಸಿದ
ಹಾದಿಮನಿ ನನಗೆ ಹೆಚ್ಚು ಅಪ್ತ!







ಕೊನೆಯದು ತುಂಬಾ ಇಷ್ಟವಾಯಿತು