ನಾ ದಿವಾಕರ
ಕನ್ನಡ ನಾಡು ಗಂಧದ ಬೀಡು ಎಂಬ ನಾಣ್ಣುಡಿಗೆ ಮೂಲ ಕಾರಣ ನಮ್ಮ ರಾಜ್ಯದ ಪಶ್ಚಿಮ ಘಟ್ಟಗಳಲಿರುವ ದಟ್ಟ ಕಾನನಗಳು, ವೈವಿಧ್ಯಮಯ ಜೀವಜಂತುಗಳು ಮತ್ತು ಅಪಾರ ಅರಣ್ಯ ಸಂಪತ್ತು. ಒತ್ತುವರಿ, ಗಣಿಗಾರಿಕೆ, ರೆಸಾಟರ್್ ಸಂಸ್ಕೃತಿ, ಪ್ರವಾಸೋದ್ಯಮ ಮುಂತಾದ ಆಧುನಿಕ ಮಾನವನ ಐಷಾರಾಮಿ ಪ್ರವೃತ್ತಿಗಳಿಗೆ ಬಲಿಯಾಗಿ ಕನರ್ಾಟಕದ ಅರಣ್ಯ ಸಂಪತ್ತು ಕ್ರಮೇಣ ಕ್ಷೀಣಿಸುತ್ತಿದ್ದರೂ, ಇಂದಿಗೂ ರಾಜ್ಯದ ಅರಣ್ಯಗಳು ತಮ್ಮ ವೈಭವವನ್ನು ಉಳಿಸಿಕೊಂಡಿವೆ. ಕಾರಣ ಪರಿಸರವಾದಿಗಳ ನಿರಂತರ ಹೋರಾಟ ಮತ್ತು ಕೆಲವು ಸಂಘಸಂಸ್ಥೆಗಳ ಪರಿಶ್ರಮ. ಆದರೂ ಔದ್ಯಮೀಕರಣ ಯುಗದಲ್ಲಿನ ಲಾಭಕೋರತನ ಮತ್ತು ಬಂಡವಾಳಶಾಹಿ ಅಭಿವೃದ್ಧಿ ಪಥದ ದುರ್ಗಮ ಮಾರ್ಗಗಳನ್ನು ತಡೆಗಟ್ಟುವುದು ಸುಲಭ ಸಾಧ್ಯವಲ್ಲ ಎಂಬ ಕಾರಣಕ್ಕೆ ಸಕರ್ಾರದಲ್ಲಿ ಅರಣ್ಯ ಖಾತೆಯ ನಿರ್ವಹಣೆಗೆ ಸಚಿವರೊಬ್ಬರನ್ನು ನೇಮಿಸಿರುತ್ತಾರೆ.
ಅರಣ್ಯ ಸಂರಕ್ಷಣೆ ಕೇವಲ ಸಕರ್ಾರದ ಹೊಣೆಗಾರಿಕೆಯಲ್ಲ ನಿಜ, ಆದರೆ ಅರಣ್ಯ ನಾಶವಾಗದಂತೆ ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ನಿರ್ಧರಿಸುವ ಜವಾಬ್ದಾರಿ ಸಚಿವರ ಮೇಲಿರುತ್ತದೆ. ದುರಾದೃಷ್ಟವಶಾತ್ ನಮ್ಮ ರಾಜಕೀಯ ನಾಯಕರುಗಳಿಗೆ ತಮ್ಮ ಹೊಣೆಗಾರಿಕೆಯ ಪರಿವೆಯೇ ಇರುವುದಿಲ್ಲ. ಇತ್ತೀಚೆಗೆ ನಾಗರಹೊಳೆ-ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬೆಂಕಿ ತಗುಲಿ ಸಾವಿರಾರು ಎಕರೆ ನಾಶವಾಗಿದೆ. ಸಾವಿರಾರು ಜೀವ ಜಂತುಗಳು ಬಲಿಯಾಗಿವೆ. ಈ ಸಂದರ್ಭದಲ್ಲಿ ಬೆಂಕಿಗೆ ಕಾರಣಗಳನ್ನು ಹುಡುಕುವುದರಲ್ಲಿಯೇ ಕಾಲಹರಣ ಮಾಡಿದ ಸಕರ್ಾರಿ ಆಡಳಿತ ಯಂತ್ರ ಬೆಂಕಿಯನ್ನು ಆರಿಸುವ ವೇಳೆಗೆ ಸಾಕಷ್ಟು ನಷ್ಟ ಉಂಟಾಗಿತ್ತು. ನಾಗರಹೊಳೆಯ ದುರಂತಕ್ಕೆ ಅರಣ್ಯ ಇಲಾಖೆಯ ಅತೃಪ್ತ ಸಿಬ್ಬಂದಿಯೇ ಕಾರಣವಿರಬಹುದು ಎಂದು ಮಾನ್ಯ ಅರಣ್ಯಖಾತೆ ಸಚಿವ ಸಿ.ಪಿ ಯೋಗೇಶ್ವರ್ ಹೇಳಿದ್ದೂ ಉಂಟು.
ಕಳೆದ ವಾರ ಮೈಸೂರಿನಲ್ಲಿ ನಡೆದ ರಾಮದಾಸ್ ಸ್ಮರಣಾರ್ಥ ಸಭೆಯಲ್ಲಿ ನೆರೆದಿದ್ದ ಸಭಿಕರಿಗೆ ಅಚ್ಚರಿಯೊಂದು ಕಾದಿತ್ತು. ಜನಸಾಮಾನ್ಯರು ನಂಬಲಾಗದಂತಹ ವಿಚಾರವೊಂದನ್ನು ಅಲ್ಲಿ ನೆರೆದಿದ್ದ ಕೆಲವರು ಬಹಿರಂಗಪಡಿಸಿದ್ದರು. ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಅವರ ಆದೇಶದ ಮೇರೆಗೆ ಮಹದೇಶ್ವರ ಬೆಟ್ಟದ ಅರಣ್ಯದಲ್ಲಿ ಶತಮಾನಗಳಿಂದ ವಾಸಿಸುತ್ತಿರುವ ಒಂದು ಸಮುದಾಯದ ಜೀವನೋಪಾಯಕ್ಕೇ ಧಕ್ಕೆ ಉಂಟಾಗಿರುವ ಸಂಗತಿ ಅಲ್ಲಿ ವ್ಯಕ್ತವಾಗಿತ್ತು. ಮಲೆ ಮಹದೇಶ್ವರ ಬೆಟ್ಟದ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ತಮ್ಮ ಅಟ್ಟಹಾಸ ಚಿತ್ರದ ಚಿತ್ರೀಕರಣಕ್ಕಾಗಿ ತೆರಳಿದ್ದ ಸಚಿವರು ತಮ್ಮ ಪರಿಸರ ಕಾಳಜಿಯ ವಿರಾಟ್ ಸ್ವರೂಪವನ್ನು ಪ್ರದಶರ್ಿಸಿದ್ದಾರೆ. ಈ ಚಿತ್ರದಲ್ಲಿ ಡಿಜಿಪಿ ಹರಿಕೃಷ್ಣ ಅವರ ಪಾತ್ರ ವಹಿಸಿರುವ ಯೋಗೇಶ್ವರ್ ಸಿನಿಮಾದಲ್ಲಿ ಉದಾತ್ತ ಚಿಂತನೆಗಳನ್ನು ಬಿಂಬಿಸುವ ಹೀರೋ ಪಾತ್ರ ವಹಿಸಿದ್ದರೂ, ನಿಜ ಜೀವನದಲ್ಲಿ ತಮ್ಮ ಮತ್ತೊಂದು ಸ್ವರೂಪವನ್ನು ತೋರಿದ್ದಾರೆ. ಮಹದೇಶ್ವರ ಬೆಟ್ಟದ ಅರಣ್ಯಗಳಲ್ಲಿ ಏಳು ಶತಮಾನಗಳಿಂದ ನೆಲೆ ಮಾಡಿರುವ ಬೇಡಗಂಪನ ಸಮುದಾಯದ ಮುಖ್ಯ ಕಸುಬು ಹೈನುಗಾರಿಕೆ. ದನಗಳನ್ನು ಸಾಕುವ ಮೂಲಕವೇ ತಮ್ಮ ಜೀವನ ನಡೆಸುವ ಈ ಜನತೆ ಕಾಡಿನಲ್ಲಿ ದನದ ಕೊಟ್ಟಿಗೆಗಳನ್ನು ನಿಮರ್ಿಸಿಕೊಂಡು ಹಾಲು ಉತ್ಪಾದನೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಮಹದೇಶ್ವರ ಬೆಟ್ಟದ 26 ಗ್ರಾಮಗಳಲ್ಲಿ ನೆಲೆಸಿರುವ ಈ ಸಮುದಾಯದ ಜನತೆಗೆ ಅನ್ಯ ಕಸುಬು ತಿಳಿದೂ ಇಲ್ಲ. ಚಿತ್ರೀಕರಣಕ್ಕೆಂದು ಹೋದ ಯೋಗೇಶ್ವರ್ ಅಲ್ಲಿದ್ದ ದನದ ಕೊಟ್ಟಿಗೆಗಳನ್ನು ನೋಡಿ, ಅನಧಿಕೃತವಾಗಿ ನಿಮರ್ಿಸಲಾಗಿರುವ ಈ ಕೊಟ್ಟಿಗೆಗಳನ್ನು ಸುಟ್ಟುಹಾಕುವಂತೆ ಅರಣ್ಯಾಧಿಕಾರಿಗಳಿಗೆ ಆದೇಶಿದ ಹಿನ್ನೆಲೆಯಲ್ಲಿ ದನದ ಕೊಟ್ಟಿಗೆಗಳನ್ನು ಧ್ವಂಸ ಮಾಡಲಾಗಿದೆ. ಸಚಿವರ ಈ ಕೃತ್ಯವನ್ನು ಖಂಡಿಸಿ ಬೇಡರಗಂಪನ ಸಮುದಾಯದ ಜನತೆ ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ.
ಇಲ್ಲಿ ಮಾನ್ಯ ಯೋಗೇಶ್ವರ್ ಆದೇಶ ನೀಡಿದ್ದರೋ ಇಲ್ಲವೋ ಅದು ಪ್ರಶ್ನೆಯಲ್ಲ. ಎಲ್ಲ ರಾಜಕಾರಣಿಗಳು ಹೇಳುವಂತೆ ನಾನು ಹಾಗೆ ಹೇಳಿರಲೇ ಇಲ್ಲ, ಯಾವುದೇ ಆದೇಶ ನೀಡಿರಲಿಲ್ಲ, ಇವೆಲ್ಲಾ ರಾಜಕೀಯ ಕುತಂತ್ರ, ನನ್ನ ಮಾತುಗಳನ್ನು ತಿರುಚಲಾಗಿದೆ, ಅಧಿಕಾರಿಗಳ ಕೃತ್ಯಗಳಿಗೆ ನಾವು ಜವಾಬ್ದಾರರಲ್ಲ ಇತ್ಯಾದಿ ಸಬೂಬುಗಳನ್ನು ಪರಿಗಣಿಸುತ್ತಲೇ ಇಲ್ಲಿ ಉದ್ಭವಿಸುವ ಪ್ರಶ್ನೆ ಒಂದು ಜನಸಮುದಾಯದ ಅಸ್ತಿತ್ವ ಮತ್ತು ಜೀವನಾಧಾರದ ಬಗ್ಗೆ ಮತ್ತು ನಮ್ಮನ್ನಾಳುವ ಜನಪ್ರತಿನಿಧಿಗಳ ಮಾನವೀಯ-ಪರಿಸರ ಸಂವೇದನೆಯನ್ನು ಕುರಿತಾದದ್ದು. ಅರಣ್ಯಗಳೆಂದರೆ ಕೇವಲ ಸಸ್ಯ ಸಂಪತ್ತು ಮಾತ್ರವಲ್ಲ, ಅಥವಾ ಸಾವಿರಾರು ಜೀವ ಜಂತುಗಳಿಗೆ ಆಶ್ರಯ ನೀಡುವ ನೈಸಗರ್ಿಕ ತಾಣವೂ ಅಲ್ಲ. ಶತಮಾನಗಳಿಂದ ಮಾನವ ಸಮಾಜ ನಿಸರ್ಗದೊಡನೆ ತನ್ನದೇ ಆದ ಸೂಕ್ಷ್ಮ ಸಂಬಂಧಗಳನ್ನು ಬೆಳೆಸಿಕೊಂಡೇ ಬಂದಿದೆ. ಅರಣ್ಯಗಳಲ್ಲಿ ವಾಸಿಸುವ ಜನಸಮುದಾಯಗಳು ಪರಿಸರ ರಕ್ಷಣೆಯನ್ನು ತಮ್ಮ ಜೀವನದ ಧ್ಯೇಯವೆಂದೇ ಭಾವಿಸಿ ಬಾಳುತ್ತಿದ್ದಾರೆ. ಆಧುನಿಕ ಸಮಾಜದಿಂದ ವಿಮುಖರಾಗಿರುವ ಈ ಸಮುದಾಯಗಳ ಅಭ್ಯುದಯಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವುದು ಯಾವುದೇ ಜವಾಬ್ದಾರಿಯುತ ಸಕರ್ಾರದ ಹೊಣೆಗಾರಿಕೆಯಾಬೇಕು.
ಶತಮಾನಗಳಿಂದ ಅರಣ್ಯಗಳಲ್ಲೇ ತಮ್ಮ ಜೀವನದ ಮೂಲ ಸೆಲೆಯನ್ನು ಗುರುತಿಸಿಕೊಂಡು ನೆಲೆಮಾಡಿರುವ ಒಂದು ಸಮುದಾಯದ ಅಸ್ತಿತ್ವವನ್ನೇ ನಾಶಪಡಿಸುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಇಲ್ಲಿ ಅಧಿಕೃತತೆ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಕಾರಣ ಆದಿವಾಸಿಗಳು ಮತ್ತು ನಿಸರ್ಗದ ಒಡಲಲ್ಲಿ ತಮ್ಮ ಬಾಳನ್ನು ಕಟ್ಟಿಕೊಳ್ಳುವ ಜನಸಮುದಾಯಗಳಿಗೆ ಯಾವುದೇ ಪರವಾನಗಿಯ ಅವಶ್ಯಕತೆ ಕಂಡುಬರುವುದಿಲ್ಲ. ಏಕೆಂದರೆ ಈ ಸಮುದಾಯಗಳು ನಿಸರ್ಗದೊಂದಿಗೆ ಹೊಂದಾಣಿಕೆಯಿಂದ ಬಾಳುತ್ತಾರೆ. ನಗರವಾಸಿಗಳಂತೆ ನಿಸರ್ಗದ ಒಡಲನ್ನು ಸೀಳಿ ತಮ್ಮ ಅರಮನೆಗಳನ್ನು ನಿಮರ್ಿಸುವುದಿಲ್ಲ. ಹಾಗೊಮ್ಮೆ ಸಕರ್ಾರಕ್ಕೆ ಅರಣ್ಯ ಪ್ರದೇಶಗಳ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸುವುದೇ ಉದ್ದೇಶವಿದ್ದಲ್ಲಿ, ನೂರಾರು ಎಕರೆ ಪ್ರದೇಶಗಳನ್ನು ತೆರವುಗೊಳಿಸಬಹುದು. ಆದರೆ ಬರುಬರುತ್ತಾ ಔದ್ಯಮಿಕ ಸ್ವರೂಪ ಪಡೆಯುತ್ತಿರುವ ಭಾರತದ ಪ್ರಭುತ್ವ ಮತ್ತು ಜನಪ್ರತಿನಿಧಿಗಳಿಗೆ ನಿಸರ್ಗದ ಒಡಲನ್ನೇ ಸೀಳುತ್ತಾ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಿರುವ ಕಾಪರ್ೋರೇಟ್ ಶಕ್ತಿಗಳ ಅನಧಿಕೃತ ಆಕ್ರಮಣ ಕಣ್ಣಿಗೆ ಬೀಳುವುದಿಲ್ಲ. ಅಮಾಯಕ ಅರಣ್ಯವಾಸಿಗಳು ಸುಲಭ ತುತ್ತಾಗುತ್ತಾರೆ.
ಭಾರತದ ಸಂದರ್ಭದಲ್ಲಿನ ಒಂದು ವೈಚಿತ್ರ್ಯವೆಂದರೆ ಅತಿಕ್ರಮಣ ಅಥವಾ ಒತ್ತುವರಿಯ ಪ್ರಶ್ನೆ ಎದುರಾದಾಗ, ಅದು ಗೃಹ ನಿವೇಶನವೇ ಆಗಲಿ, ಕೃಷಿ ಭೂಮಿಯೇ ಆಗಲಿ , ಆಳ್ವಿಕರ ಶಿಕ್ಷೆಗೆ ಬಲಿಯಾಗುವುದು ಬಡಜನತೆಯೇ. ಶ್ರೀಮಂತರು ತಮ್ಮ ಬಂಗಲೆಗಳ ನಿಮರ್ಾಣಕ್ಕೆ ರಸ್ತೆಗಳನ್ನೇ ಒತ್ತುವರಿ ಮಾಡಿಕೊಂಡಿದ್ದರೂ ಅಧಿಕಾರಿಗಳು ತೆಪ್ಪಗಿರುತ್ತಾರೆ. ಮಧ್ಯಮವರ್ಗದವರು ಒಂದು ಇಂಚು ಅತಿಕ್ರಮಣ ಮಾಡಿದರೂ ಕಟ್ಟಡವನ್ನೇ ಕೆಡವಲಾಗುತ್ತದೆ. ಕಾರಣ ಹೇಳಬೇಕಿಲ್ಲ, ರಾಜಕೀಯ ಪ್ರಭಾವ, ಹಣ, ಅಧಿಕಾರ ಇತ್ಯಾದಿ ಇತ್ಯಾದಿ. ಹಾಗೆಯೇ ಅರಣ್ಯ ಪ್ರದೇಶಗಳಲ್ಲೂ ನಡೆಯುತ್ತಿದೆ. ಅರಣ್ಯ ಒತ್ತುವರಿ ನಡೆಯುತ್ತಿರುವುದು ಶ್ರೀಮಂತ ವರ್ಗದ ಕಾಫಿ-ಟೀ ಎಸ್ಟೇಟ್ ಮಾಲೀಕರಿಂದ, ಗಣಿ ಧಣಿಗಳಿಂದ, ಔದ್ಯಮಿಕ ಶಕ್ತಿಗಳಿಂದ. ಆದರೆ ಈ ಅಕ್ರಮಗಳನ್ನು ಆಳುವ ವರ್ಗಗಳು ಸಕ್ರಮಗೊಳಿಸುತ್ತಲೇ ಇರುತ್ತವೆ. ಆದರೆ ಶತಮಾನಗಳಿಂದ ನಿಸರ್ಗದ ಒಡಲಲ್ಲೇ ಬಾಳುವ ಜನಸಮುದಾಯಗಳನ್ನು ಅತಿಕ್ರಮಣದ ಆರೋಪದ ಮೇಲೆ ಒಕ್ಕಲೆಬ್ಬಿಸುತ್ತಿರುತ್ತಾರೆ. ಪ್ರಸ್ತುತ ಘಟನೆಯಲ್ಲೂ ಇದೇ ನಡೆದಿದೆ.
ಆಳುವ ವರ್ಗಗಳಿಗೆ ಸಂವಿಧಾನ ನಿಷ್ಠೆ, ಪ್ರಾಮಾಣಿಕತೆ , ಜನಪರ ಕಾಳಜಿ ಮಾತ್ರ ಇದ್ದರೆ ಸಾಲದು, ಮಾನವೀಯ ಸಂವೇದನೆಯೂ ಇರಬೇಕು ಎಂದು ಈ ಪ್ರಕರಣ ಸಾರಿ ಹೇಳುತ್ತದೆ. ಇತ್ತೀಚೆಗೆ ನಾಗರಹೊಳೆ ಅಗ್ನಿ ದುರಂತದ ಸಂದರ್ಭದಲ್ಲೂ ಇದೇ ಪ್ರಶ್ನೆ ಉದ್ಭವಿಸಿತ್ತು. ಸಾವಿರಾರು ಜೀವ ವೈವಿಧ್ಯಗಳಿಗೆ ಆಶ್ರಯ ನೀಡುವ ನೈಸಗರ್ಿಕ ತಾಣಗಳನ್ನು ಬಂಡವಾಳಕೋರರಿಗೆ ಉದಾರವಾಗಿ ಪರಭಾರೆ ಮಾಡುತ್ತಿರುವ ಆಳ್ವಿಕರಿಗೆ ತಮ್ಮ ಜೀವನಾಧಾರಕ್ಕಾಗಿ ಅರಣ್ಯವನ್ನು ಆಶ್ರಯಿಸಿದ್ದ ಅಮಾಯಕ ಕುಟುಂಬಗಳು ಅತಿಕ್ರಮಣಕಾರರಾಗಿ ಕಂಡುಬಂದಿರುವುದು ಈ ಸಂವೇದನೆಯ ಕೊರತೆಯನ್ನು ತೋರುತ್ತದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಮಾಡದಿರುವುದೂ ಸಹ ಅಚ್ಚರಿ ಮೂಡಿಸುತ್ತದೆ. ಅರಣ್ಯಗಳು ಕೆಲವೊಮ್ಮೆ ನೈಸಗರ್ಿಕ ಕ್ರಿಯೆಯಿಂದಲೇ ಅಗ್ನಿಗೆ ಆಹುತಿಯಾಗುತ್ತವೆ. ಇದು ಸಹನೀಯ. ಆದರೆ ಮಾನವನ ದುರಾಸೆಗೆ ಮತ್ತು ಆಳ್ವಿಕರ ಅಟ್ಟಹಾಸಕ್ಕೆ ಬಲಿಯಾಗುವ ನೈಸಗರ್ಿಕ ಸಂಪತ್ತು ಮತ್ತು ಅದನ್ನೇ ನಂಬಿ ಬಾಳುವ ಜನಸಮುದಾಯಗಳ ಅಳಲನ್ನು ಕೇಳುವವರಾರು ? ಬೇಲಿಯೇ ಎದ್ದು ಹೊಲ ಮೇಯುವಾಗ !]]>






0 Comments