
ಶ್ರೀದೇವಿ ಕೆರೆಮನೆ

ಪ್ರಕಾಶ ನಾಯಕರ ಅಮೂರ್ತ ಚಿತ್ತ ಕಥಾ ಸಂಕಲನ ನನ್ನ ಕೈಲಿದೆ.
ಅನಿವಾಸಿ ಭಾರತೀಯನಾಗಿರುವ ಪ್ರಕಾಶ ನಾಯಕರ ಕಥೆ ಹೇಳುವ ರೀತಿ ಸೋಜಿಗ ಹುಟ್ಟಿಸುತ್ತದೆ. ನೇಟಿವಿಟಿಯ ಬಳಕೆ ನಿಜಕ್ಕೂ ಅದ್ಭುತ. ಅದು ಕೇವಲ ಭಾರತದ, ಕರ್ನಾಟಕದ ಅಥವಾ ಉತ್ತರಕನ್ನಡದ ನೇಟಿವಿಟಿ ಎಂದಲ್ಲ. ಅವರು ನೆಲೆಸಿರುವ ನ್ಯೂಜೆರ್ಸಿಯ ಅನುಭವಗಳೂ ಕೂಡ ನಮ್ಮದಾಗುವ ಪರಿ ಅನನ್ಯ.
ಅವರ ಮೂಕ ಮರ್ಮರದಲ್ಲಿ ಬರುವ ಸಾಂತಜ್ಜ ದೇಶದ ಗಡಿ ದಾಟಿ ನಮ್ಮವನಾಗುತ್ತಾನೆ. ಆತನ ಸಾವಿಗೆ ಕಣ್ಣೀರು ಹೆಪ್ಪುಗಟ್ಟುತ್ತದೆ.. ಎಲ್ಲಿದ್ದರು ಈ ಕಥೆಗಾರ ಇಷ್ಟು ದಿನ? ಎಂದು ಪ್ರಶ್ನಿಸಿಕೊಳ್ಳುತ್ತ ಓದುತ್ತಿದ್ದೇನೆ.




ಪೂರ್ಣ ಪ್ರಮಾಣದ ವಿಮರ್ಶೆಯನ್ನು ನಿರೀಕ್ಷಿಸುವೆ