ಈಗ್ಗೆ ಅರ್ಧಗಂಟೆಯ ಹಿಂದೆ ಮತ್ತೆರಡು ಹೆಣ ಬಿದ್ದಿವೆ,
ಹುಬ್ಬಳ್ಳಿಯ ಚಾಣಕ್ಯಪುರ ಬಡಾವಣೆಯೊಂದರಲ್ಲಿ ಮಲದಗುಂಡಿ ಸ್ವಚ್ಛತೆಗೆ ತೆರಳಿದ್ದ ಸಂತೋಷ್ ಮತ್ತು ರಮೇಶ್ ಎಂಬ ಯುವಕರಿಬ್ಬರಿರು ವಿಷಾನಿಲ ಸೇವನೆಯಿಂದ ಸ್ಥಳದಲ್ಲೇ ಜೀವಬಿಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು ಮಲದಗುಂಡಿಯ ಸಾವುಗಳ ಸಂಖ್ಯೆಗೆ ಮತ್ತೆರಡು ಜೀವಗಳು ಸೇರ್ಪಡೆಯಾಗಿವೆ.
ಹುಬ್ಬಳ್ಳಿಯ ಗೆಳೆಯರು ಯಾರಾದರೂ ಆನ್ ಲೈನ್ ಲಿ ಇದ್ದಲ್ಲಿ ಈ ನಂಬರಿಗೆ ಕೊಂಚ ತುರ್ತಾಗಿ ಫೋನ್ ಮಾಡಿದರೆ ಮತ್ತಷ್ಟು ಮಾಹಿತಿ ನೀಡಿದರೆ, ನಾವು ಹುಬ್ಬಳ್ಳಿಗೆ ಹೊರಡಲು ಅನುಕೂಲವಾಗುತ್ತದೆ.
ದಯವಿಟ್ಟು ಫೋನ್ ಮಾಡಿ ದಯಾನಂದ : 9535158102
File Photo Courtesy: The Hindu
ಈ ದೇಶದ 13ನೇ ರಾಷ್ಟ್ರಪತಿಯಾಗಿ ಪ್ರಣವ್ ಅಧಿಕಾರ ಗೆದ್ದು ಖುಷಿ ಪಡುತ್ತಿದ್ದರೆ ಹುಬ್ಬಳ್ಳಿಯಲ್ಲಿ ಮ್ಯಾನ್ ಹೋಲ್ ಕ್ಲೀನ್ ಮಾಡಲು ಇಳಿದ ಮೂವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಉಳಿದ ಒಬ್ಬರು ಬದುಕು-ಸಾವಿನ ಮಧ್ಯೆ ಹೋರಾಡುತ್ತಿದ್ದಾರೆ.
ರೋಣ ತಾಲ್ಲೂಕಿನ ನೆಲ್ಲೂರು ಗ್ರಾಮದಿಂದ ಕೂಲಿಗೆ ಬಂದಿದ್ದ ಕಾರ್ಮಿಕರು ಈಗಲ್ ಕಟ್ಟಡ ನಿರ್ಮಾಣ ಸಂಸ್ಥೆಯ ಯು.ಜಿ.ಡಿಯನ್ನು ಸರಿ ಮಾಡಲು ಹೋಗಿ ಸಾವನ್ನಪ್ಪಿದ್ದಾರೆ.
ಈ ದೇಶದ ಅತ್ಯೂನ್ನತ ಹುದ್ದೆಗೆ ಏರುವ ಖುಷಿಯಲ್ಲಿ ರಾಷ್ಟ್ರಪತಿಯಾಗುವರು ಇದ್ದಾರೆ, ಆದರೆ ಈ ದೇಶದ ಪ್ರಜೆಗಳು ಮಾತ್ರ ಮಲದ ಗುಂಡಿಯಲ್ಲಿ ಬಿದ್ದು ಸಾವನ್ನುಪ್ಪುದಿದ್ದಾರೆ. ಇದಕ್ಕಿಂತಲೂ ಈ ದೇಶಕ್ಕೆ ನಾಚಿಕೆ ವಿಷಯ ಇದೆಯೆ?
ಚಂದ್ರಶೇಖರ ಅತ್ತಿಬೆಲೆ
]]>





sir, nimma concern ge ondu namaskaara ,naanu irodu hosapeteyalli ii vishayadalli naanu ella sahayakku nimma jote iddene 9902596614
ಗೆಳೆಯರೇ, ಇದು ಮಲದ ಗುಂಡಿಗೆಯ ಸ್ವಚ್ಛತೆಗಾಗಿ ಇಳಿದಾಗ ಸಂಭವಿಸಿದ ಘಟನೆಯಲ್ಲ. ಹುಬ್ಬಳ್ಳಿಯ ಹಳೆಯ ಮ್ಯಾನ್ ಹೋಲ್ ಗಳನ್ನು ಮತ್ತಷ್ಟು ಆಳ ಮಾಡಿ, ಹೊಸತಂತ್ರಜ್ಙಾನದಿಂದ ದುರಸ್ತಿಗೊಳಿಸುವ ಗುತ್ತಿಗೆಯನ್ನು ಮುಂಬೈ ಕಂಪನಿಗೆ ಕೊಡಲಾಗಿತ್ತು. ಸಿದ್ಧವಾಗಿರುವ ಇವುಗಳನ್ನು ಮಹಾನಗರಪಾಲಿಕೆಗೆ ವಹಿಸುವ ಮುನ್ನ ಒಳಗೆ ತುಂಬಿದ್ದ ಕಸ ತೆಗೆಯಲು ಇಳಿದಾಗ ದುರಂತ ಸಂಭವಿಸಿತು. 20 ಅಡಿ ಗಿಂತ ಹೆಚ್ಚಿಗೆ ಆಳವಿರುವ ಗುಂಡಿಗಳಿಗೆ ಕಾರ್ಮಿಕರನ್ನ ಇಳಿಸುವಾಗ ಕಂಪನಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿರಲಿಲ್ಲ. ನಿನ್ನೆ ಸಾವು ಸಂಭವಿಸಿದಾಗ ಮಹಾನಗರ ಪಾಲಿಕೆ ಅಧಿಕಾರಿಗಳಾಗಲಿ. ಕಂಪನಿಯ ಅಧಿಕಾರಿಗಳಾಗಲಿ ಅಲ್ಲಿರಲಿಲ್ಲ. ಸತ್ತವರಿಬ್ಬರೂ ಗದಗ ಜಿಲ್ಲೆಯ ರೋಣ ತಾಲೋಕಿನ, ನೆಲ್ಲೂರು ಗ್ರಾಮದ ರಮೇಶ ಮತ್ತು ಸಂತೋಷ ಎಂಬ ಸಹೋದರರು. ಕೇವಲ 21 ಮತ್ತು 19 ವಯಸ್ಸಿನವರು.