
ಒಂದು ತಿಂಗಳ ಅಂತರದ ನಂತರ ‘ತಿಂಗಳು’ ಮತ್ತೆ ಬಂದಿದೆ. ಮುದ್ದಾದ ಸಂಚಿಕೆ. ಪ್ರೊ ಸಿ ಎನ್ ರಾಮಚಂದ್ರನ್ ‘ನನ್ನ ಮೊದಲ ಬರಹ’ ಅಂಕಣದಲ್ಲಿ ತಾವು ಕಥೆ ಬರೆದ ಸಂದರ್ಭ ಹಾಗೂ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇವರ ಮೊದಲ ಕಥೆ ‘ಹೆಗಲೇರಿದ ಮುದುಕ’ ಸಹಾ ಇಲ್ಲಿದೆ. ವಿಮರ್ಶಕರಾಗಿ ಮಾತ್ರ ಸಿ ಎನ್ ಆರ್ ಗೊತ್ತಿರುವವರಿಗೆ ಇದು ಒಳ್ಳೆಯ ಓದು. ಜಿ ಕೆ ರವೀಂದ್ರಕುಮಾರ್ ‘ಹಾಗೇ ಸುಮ್ಮನೆ’ ಎಂಬ ಪ್ರಬಂಧ ಬರೆದಿದ್ದಾರೆ. ವಿ ಆರ್ ಕಾರ್ಪೆಂಟರ್ ತನ್ನದೇ ವಿಶೇಷ ಶೈಲಿಯಲ್ಲಿ ‘ಅಪ್ಪನ ಲೇಡೀಸ್ ಸೈಕಲ್’ ಮುಂದುವರೆಸಿದ್ದಾರೆ. ಸೃಜನ್ ದೇಸಿ ಸತ್ವದ ಮೋಹನ್ ಎಂಬ ಕಾರ್ಟೂನ್ ಕಿಂಗ್ ಬಗ್ಗೆ ಬರೆದಿದ್ದಾರೆ. ಜ ನಾ ತೇಜಶ್ರೀ, ಡಿ ಎಂ ರಾಮಾಂಜನೇಯ, ಸಂತೋಷ್ ಗುಡ್ಡಿಯಂಗಡಿ, ಬಸವರಾಜ ಹಳ್ಳಿ, ಹಿ ಶಿ ರಾಮಚಂದ್ರೇ ಗೌಡ, ಸುಮತಿ ಶೆಣೈ, ಗಂಗಪ್ಪ ತಳವಾರ ಅವರ ಕವಿತೆಗಳಿವೆ. ಓದಿ.
'ತಿಂಗಳು' ಬಂದಿದೆ
ನಿಮಗೆ ಇವೂ ಇಷ್ಟವಾಗಬಹುದು…





ಮೋಹನ್… ಈ ಪತ್ರಿಕೆಗೆ ಚಂದಾದಾರನಾಗುವುದು ಹೇಗೆ? ದಯವಿಟ್ಟು ತಿಳಿಸಿ…