–ಹಿರಿಯ ವಿಮರ್ಶಕ ವಿ ಎನ್ ಲಕ್ಷ್ಮಿ ನಾರಾಯಣ ಅವರು ವಿವೇಕ ರೈ ಅವರು ಬರೆದ
ಮೇ ದಿನ ಲೇಖನಕ್ಕೆ ನೀಡಿದ ಪ್ರತಿಕ್ರಿಯೆ ಇದು

ಕಳೆದದ್ದನ್ನು ಎಲ್ಲಿ ಕಳೆದುಕೊಂಡೆವೋ ಅಲ್ಲೇ ಹುಡುಕಬೇಕೆಂಬ ಗಾದೆ ಮಾತಿದೆ. ಬೇಳಕಿನಲ್ಲಿ ಹುಡುಕಬೇಕೆಂಬ ತಿಳುವಳಿಕೆಯ ಮಾತೂ ಇದೆ. ಮಾನವೀಯ ರೀತಿಯ ಶ್ರಮದ ಏರ್ಪಾಡಿನಲ್ಲಿ 8ಗಂಟೆಯ ದುಡಿಮೆ ಕಾರ್ಮಿಕರಿಗೆ ಮಾತ್ರವಲ್ಲ ಎಲ್ಲರಿಗೂ ಕಣ್ತುಂಬ ನಿದ್ದೆ ಮಾಡುವ, ವಿಶ್ರಾಂತಿ, ಸೃಜನಶೀಲತೆ, ಮನೋರಂಜನೆಗಳಿಗೆ ಪಾಪಪ್ರಜ್ಞೆಗೆ ಎಡೆಕೊಡದಂತೆ ಕಾಲಾವಕಾಶ ಕೊಡುವ ಆರೋಗ್ಯಕರವಾದ ಸಾಮಾಜಿಕತೆಯಿದೆ.
ಬಂಡವಾಳಿಗರು ಸಮಾಜವಾದದಿಂದ ಪಡೆದು ಕಸಿಮಾಡಿಕೊಂಡ ಕಲ್ಯಾಣರಾಜ್ಯದ ತೇಪೆ ಸಮಾಜದಲ್ಲಿಯೂ ಶ್ರಮಶಕ್ತಿಯನ್ನು ಮಾರಿ ಬದುಕುವ ಜನರಿಗೆ ಉದ್ಯೋಗಭದ್ರತೆಯಿದೆ. ಬೇಡುವ, ಆಗ್ರಹಿಸುವ,ಚರ್ಚಿಸುವ, ಸಂಧಾನ ನಡೆಸುವ, ಇವೆಲ್ಲಾ ವಿಫಲವಾದಾಗ ಮುಷ್ಕರ ನಡೆಸುವ ಹಕ್ಕುಗಳಿವೆ. ಹಳೆಯ ತೇಪೆ ರಾಜ್ಯದಲ್ಲಿ ಸಂಘಶಕ್ತಿಯನ್ನು ಬೆಳೆಸಿಕೊಳ್ಳುವುದೂ ಸಹ ಶ್ರಮಿಕರ ಮತ್ತೊಂದು ಪ್ರಮುಖ ಹಕ್ಕು. ಆದರೆ, ಪ್ರಜಾತಂತ್ರ, ಸ್ವಾತಂತ್ರ್ಯ,ಮಾನವಹಕ್ಕುಗಳ ದೊಗಲಂಗಿತೊಟ್ಟ ಫ್ಯಾಸಿಸಂ ಅಮೆರಿಕಾದಲ್ಲಿ ಅಧಿಕಾರ ಹಿಡಿದಿದೆ. ಶ್ರಮಶಕ್ತಿಯನ್ನು ಹೇಗೇ ಮಾರಿದರೂ 12ಗಂಟೆಗೆ ಕಡಿಮೆಇಲ್ಲದಂತೆ ಮಾರಬೇಕೆಂಬ ಒಳಶರತ್ತಿನ ಮುಕ್ತ ಮಾರುಕಟ್ಟೆ ಕಾರ್ಮಿಕರ ಎಲ್ಲಾ ಹಕ್ಕುಗಳನ್ನೂ TQM,ಗುತ್ತಿಗೆ,ಹೊರಗುತ್ತಿಗೆ ವಿಧಾನಗಳ ಮೂಲಕ ಮಣ್ಣುಪಾಲಾಗಿಸಿದೆ. ಅಮೆರಿಕೆಗೆ ಹೋಲಿಸಿದರೆ ಅಖಂಡ ನವಜರ್ಮನಿಯ ನವಫ್ಯಾಸಿಸ್ಟರು ಬಹಳ ಹಿಂದಿದ್ದಾರೆ.
ಇದೆಲ್ಲಾ ಹಳೆಯ ಯೋಚನೆ, ನಿಜ. ಏನುಮಾಡುವುದು, ನಾವಿನ್ನೂ ಈ ಜ್ವರಬಂದ ಹಳೆಯ ಭೂಮಿಯ ಮೇಲೇ ಇದ್ದೇವೆ.ಹೊಗೆ ಮುಚ್ಚಿದ್ದರೂ ಅದೇ ಹಳೇ ಆಕಾಶವೇ ವಿಮಾನಗಳಿಗೆ ಹಾರಲು ಬೇಕು.ಹಳೇಬೇಸರವಾದಾಗ, ಹಳೇಹಸಿವಾದಾಗ ಹಳೆ ವೈನ್ ಕುಡಿದು, ಹಳೆಕಾಲದ ಪದ್ಧತಿಯಲ್ಲಿ ಬೇಳೆದ ಸಾವಯವ ಬ್ರೆಡ್ ತಿಂದು ಹಳೆಯ ಸಂಬಂಧಗಳನ್ನು ಕಾಯ್ದುಕೊಳ್ಳಲು, ಸಾಹಿತ್ಯದಲ್ಲಿ ಹಳೆಯಸಾವಯವಶಿಲ್ಪ ವನ್ನು ಸಾಧಿಸಲು ಅದೇ ಹಳೆಯ ರೈತ-ಕಾರ್ಮಿಕರೇ ಬೇಕು. ಎಲ್ಲರೂ ತಂತ್ರಾಂಶಗಳನ್ನು ತಿಂದು ಬದುಕುವಂತಿದ್ದರೆ ಎಷ್ಟು ಚೆನ್ನ!
ತಂತ್ರಾಂಶಗಳನ್ನು ತಿಂದು ಬದುಕುವಂತಿದ್ದರೆ ಎಷ್ಟು ಚೆನ್ನ!
ನಿಮಗೆ ಇವೂ ಇಷ್ಟವಾಗಬಹುದು…





0 Comments