“ನನ್ನ ಬದುಕಿಗೆ ನಾನಾ ದಿಕ್ಕುಗಳಿವೆ. ಇದರಲ್ಲಿ ಯಾವದೇ ದಿಕ್ಕು ಸುಗಮವಾದುದಲ್ಲ. ಯಾವ ದಿಕ್ಕಿನಿಂದ ಶುರು ಮಾಡಬೇಕೆಂದು ತಿಳಿಯುತ್ತಿಲ್ಲ. ಆತ್ಮಚರಿತ್ರೆ ಬರೆಯಬೇಕಾಗಿ ಬಂದಾಗ ಬಾಲ್ಯದಿಂದಲೇ ಏಕೆ ಶುರು ಮಾಡಬೇಕು? ಯಾವುದೋ ಒಂದು ಮಹತ್ವದ ಘಟನೆ ಅಥವಾ ದುರ್ಘಟನೆಯಿಂದಲೇ ಏಕಾಗಬಾರದು?

ಜೀವನ ನಿಂತ ನೀರಾದಾಗ ಅದು ಬದುಕೇ ಅಲ್ಲ. ಸದಾ ಹರಿಯುತ್ತಲೇ ಇರಬೇಕು. ಈ ಹರಿಯುವ ನದಿಯಲ್ಲಿ ಏರಿಳಿತಗಳು ಅನೇಕ. ಈ ಏರಿಳಿತಗಳಲ್ಲಿ ಮುಳುಗಿ ಎದ್ದು, ದಡ ಸೇರಬೇಕಾಗಿ ಬಂದಂಥ ಒಂದು ಅಗ್ನಿ ಪರೀಕ್ಷೆ ನಮ್ಮ ಜೀವನದಲ್ಲಿ ನಡೆದುಹೋಯಿತು. ದುರ್ಘಟನೆ ನಡೆದದ್ದು ಕಾರಂತರ ಜೀವನದಲ್ಲಿ. ಕಾರಂತರ ಜೀವನ ನನ್ನ ಜೀವನವೇ ಅಲ್ಲವೇ? ಆ ದುರ್ಘಟನೆಯ ಪ್ರಭಾವ ನನ್ನ ಬದುಕಿನ ಮೇಲೆ ಬೀರಿದ ಪರಿಣಾಮ ಭಯಂಕರವಾದದ್ದು. ನಮ್ಮಿಬ್ಬರ ಜೀವನವನ್ನೇ ಅಲುಗಾಡಿಸಿದಂಥ ಈ ದುರ್ಘಟನೆ ರಾಷ್ಟ್ರೀಯ ಮಟ್ಟದಲ್ಲಿ ಜನಜನಿತವಾಗಿ ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ಆಕಾರ ಪಡೆಯುತ್ತಾ ಹೋಯಿತು. ಆದರೆ ಬೇರೆ ಎಲ್ಲರ ದೃಷ್ಟಿಯಲ್ಲಿ ಸತ್ಯಾಸತ್ಯ ಗಳಿಗಿಂತ ಕಟ್ಟುಕಥೆಗಳೇ ಜಾಸ್ತಿಯಾಗಿದ್ದವು. ಆದರೆ ನಡೆದ ಘಟನೆಗಳನ್ನೆಲ್ಲಾ ನನ್ನ ಕಣ್ಣಿನಿಂದಲೇ ನೋಡಿರುವುದರಿಂದ, ನನ್ನ ದೃಷ್ಟಿಕೋನ ಕಟುಸತ್ಯಗಳಿಂದ ಕೂಡಿರುತ್ತೆ ಎಂದುಕೊಂಡಿರುತ್ತೇನೆ … ”
ಪ್ರೇಮಾ ಕಾರಂತ
ಮನೋಹರ ಗ್ರಂಥ ಮಾಲಾ
ಬೆಲೆ : ರೂ. ೧೫೦/-
ಡೈಲಿ ಬುಕ್ : ಪ್ರೇಮಾ ಕಾರಂತರ ’ಸೋಲಿಸಬೇಡ ಗೆಲಿಸಯ್ಯ’
ನಿಮಗೆ ಇವೂ ಇಷ್ಟವಾಗಬಹುದು…


0 Comments