ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಡೆ ನೋಡು, ನಡು ನೋಡು..

ದೇವ-ಶಿಲ್ಪಿ

sathyakama sharma kasaragod

ಸತ್ಯಕಾಮ ಶರ್ಮಾ ಕಾಸರಗೋಡು 

ಇರಬಹುದು ಸುಂದರ ಕಂಗಳಿಗೆ ನೋಡುಗರ
ಮರೆಮಾಚಿದೆ ಹಿಂದಿರುವ ಬೆವರ ಹಾರ
ಕಂಬನಿಗಳಿಬ್ಬನಿ ಪುರುಷ ಮಣಿಗಳಾದ ಹರುಷ ಕ್ಷಣಗಳು
ಉಳಿಪೆಟ್ಟುಗಳಿಗೆ ಚಿಮ್ಮಿ ಚಿಮ್ಮಿ ಕಂಗಳಲಿ ಕಣ್ಮರೆಯಾದ
ಕಲ್ಲು ಚೂರು ಪಾರು ಒಂದಿಷ್ಟು ಧೂಳು
ಬರಿಕಲ್ಲು ಹಲವರಿಗೆ ಕರುಣಿಸಿದ ಕೂಳು

ಶಿಲ್ಪಿಯನು ಹೊರಗಿಟ್ಟೆ ಶಿಲ್ಪವನು ಒಳಗೆ ಬಿಟ್ಟೆ
ಇದು ಸರಿಯೆ ದೇವನೆ ಹೇಳು
ಯಾಕಿಲ್ಲ ಎಲ್ಲಾ ಶಿಲೆಗಳಿಗೂ ಹೀಗೆ ಶಿಲ್ಪವಾಗಿ
ನಿನ್ನ ಪ್ರಭಾವಲಯದಲಿ ಸ್ಥಾಯಿಯಾಗಿ
ಜೀವತಳೆದು ನಿಲ್ಲುವ ಬಾಗ್ಯ?
ಈ ಜಗದ ಶಿಲ್ಪಿ ನೀನು ಸೋಜಿಗದ ಮೂರುತಿ ನಾನು
ಕಡೆವವನು ನೀನೆ
ಕೆಡಿಸುವವನು ನೀನೆ
ಕೆಡವುವವನು ನೀನೆ
ನನ್ನದೇನಿದೆ ಹೇಳು
ಕೊನೆಗೆ ಮಣ್ಣು, ಬಾಳು

ಜಡೆ ನೋಡು, ನಡು ನೋಡು
ಪೃಷ್ಠಗಳಲೂ ಸ್ಪಷ್ಟವಾದ ಕಲೆಗಾರಿಕೆ
ಕಮ್ಮಿಯೇನು?
ಅವನಿವಳ ಶಿಲ್ಪಿಯಾದರೂ ನೀನವನ ಶಿಲ್ಪಿ
ಅಲ್ಲವೇನು?
ಮತ್ತಿನ್ನೇನು ಶಿಲ್ಪವಾಗಿಯಾದರೂ ಸರಿ
ಹಾಗೆ ಪ್ರತ್ಯಕ್ಷನಾಗು
ನೀನಿಲ್ಲವೆನ್ನುವವರನು ಇಲ್ಲವಾಗಿಸಲಾದರೂ
ನಿಲ್ಲು ನಮ್ಮೆದುರು
ಹೇಗಿದ್ದರೂ ನೀನು
ಕಲ್ಪತರು

ಶಿಲ್ಪಗಳಾದ ಸಂಕಲ್ಪಗಳಲಿ
ಸಂಚಲನವನು ತರು

 

ಅಲೆಮಾರಿ

Shri-Talageri-262x300

ಶ್ರೀ ತಲಗೇರಿ

ಚಪ್ಪರದ ತೂತಿಂದ
ಸ್ಖಲಿತ ಭ್ರಮೆಯ ರಸಗವಳ
ತುಂಬಿಕೊಳಲೆಂದು ನಿಲ್ಲದಾ ಓಟ…
ಒಂದೇ ನೀಲಿ ಹಾಸಿನ ಅಡಿಗೆ
ವ್ಯಾಪ್ತಿಗಳ ಸಹಿಯಿಹುದೇ !
ದಿಕ್ಕು ಬದಲಿಸುವ ಹಣತೆಗಳಿಗೆ
ನಾ ಗೋಡೆ ಮೇಲಣ ನೆರಳೇ ?… !

ಅವಳ ದೇಹದ ಬೀದಿಯ
ಉಬ್ಬು ತಗ್ಗುಗಳಲ್ಲಿ ಇಣುಕಿದಾಗ
ಸ್ವೇದ ಟಿಸಿಲೊಡೆವ ಹಾದಿಯಲಿ
ಅದೆಂಥ ಕುಸುರಿಯೋ!
ಖಾಸಗಿ ಬಿಡಾರ ಹೂಡಲು
ತುಸು ತುಸುವೇ
ಋತುಗಳಿಗೆ ತುತ್ತ ನಿಡುತಿಹ
ಮೈಧೂಪ ಲಹರಿಯೋ…!
ನಿಯಮಿತವಲ್ಲ;
ಆಗಬಹುದು ನಾಳೆಯೇ ನಿರ್ವಾತ…

ಸುಟ್ಟಿರುವ ಹೂವ ಗಂಧ
ಸತ್ತಿದ್ದಾದರೂ ಹೇಗೆ ?
ಅಥವಾ ಇಲ್ಲೆಲ್ಲೋ ಗಾಳಿಯಲ್ಲಿ
ಅನಾಥವಾಗಿ ಅಲೆಯುತ್ತಿರಬಹುದೇ
ಮತ್ತೊಂದು ಹೂವರಳಲು ;
ಆತ್ಮದಂತೆ…!

ನಿಶೆಗೀಗ ಹಲವು ಬಣ್ಣ
ಬೆಳಕಿನಾ ಅಮಲು ನಡು ನೆತ್ತಿಗೇರಿ..
ನನ್ನೊಳಗೆ ನಾ ಇಳಿದಂತೆ
ಅರ್ಥವಾಗದ ಗದ್ದಲ ಪ್ರತಿ ಸಾರಿ..
ಈಗಲೂ
ಅಂತರ್ ಬಹಿರ್ ಮಧ್ಯಂತರದಿ
ನಾ ಅಲೆಮಾರಿ!…

‍ಲೇಖಕರು Admin

11 September, 2016

1 Comment

  1. 'ಶ್ರೀ' ತಲಗೇರಿ

    ತುಂಬು ಮನದ ಧನ್ಯವಾದಗಳು ಅವಧಿ… 🙂 🙂 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading