ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೆಳೆಯರಿಬ್ಬರಿಗೆ ಶುಭ ಹಾರೈಕೆಗಳು..

ಪ್ರಜಾವಾಣಿಯ ಉಪ ಸಂಪಾದಕ ರಮೇಶ್ ಸೋಗೆಮನೆ ಹಾಗೂ ಈ ಟಿ ವಿ ಯ ಸುದ್ದಿವಾಚಕಿ ಬಿ ಎಸ್ ದಾಕ್ಷಾಯಿಣಿ ಮದುವೆಯಾಗುತ್ತಿದ್ದಾರೆ.
ರಮೇಶ್ ಸೋಗೆಮನೆ ಕಾಡುವ ಕವಿತೆಗಳನ್ನೂ, ಚುಟುಕು ಕಥೆಯಲ್ಲೇ ಆತ್ಮವನ್ನು ಅಲುಗಾಡಿಸಿದವನು. ಈ ಟಿ ವಿ ಯಲ್ಲಿದ್ದು ಅದಕ್ಕೆ ಒಳ್ಳೆ ಕೊಡುಗೆ ಕೊಟ್ಟು ಈಗ ಪ್ರಜಾವಾಣಿಗೆ ಬಂದಿದ್ದಾನೆ. ಈಗಾಗಲೇ ಪ್ರಜಾವಾಣಿ, ಮಯೂರ ಅಷ್ಟೇ ಅಲ್ಲದೆ ಸಂಚಯದಲ್ಲಿ ಈತನ ಕಲೆಗಾರಿಕೆಯೂ ಕಾಡುವಂತಿದೆ.
ಇನ್ನು ದಾಕ್ಷಾಯಿಣಿ. ಸ ಉಷಾ ಅವರ ಗರಡಿಯಲ್ಲಿ ಪಳಗಿದಾಕೆ. ಕನ್ನಡ ಸಾಹಿತ್ಯ ಓದಿ, ಅದನ್ನು ಸ್ಪಷ್ಟವಾಗಿ ಅರಗಿಸಿಕೊಂಡು, ನೇರ ನೋಟ ಹೊಂದಿರುವ ಹುಡುಗಿ ಈ ಇಬ್ಬರೂ ಸಾಣೆಹಳ್ಳಿಯಲ್ಲಿ ಅಲ್ಲಿನ ಗುರುಗಳ ಮುಂದಾಳತ್ವದಲ್ಲಿ ಮದುವೆಯಾಗುತ್ತಿದ್ದಾರೆ. ಇಬ್ಬರಿಗೂ ಮನಪೂರ್ವಕ ಹಾರೈಕೆಗಳು.
ಶುಭ ಹಾರೈಕೆಗೆ ಸಂಪರ್ಕ : 94812 01401
-ಜಿ ಎನ್ ಮೋಹನ್

‍ಲೇಖಕರು avadhi

26 May, 2010

2 Comments

  1. Sreeja

    congrats to u both…………

  2. Dhananjaya

    ನವದಂಪತಿಗಳಿಗೆ ಒಳ್ಳೆಯದಾಗಲಿ….ನಿಮ್ಮ ಬದುಕು ಬಂಗಾರವಾಗಲಿ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading