-ಅರವಿಂದ ನಾವಡ
ಗುಲ್ವಾಡಿಯವರು ನಿಧನರಾಗಿದ್ದಾರೆ. ಕನ್ನಡ ಪತ್ರಿಕೋದ್ಯಮ ಗುಲ್ವಾಡಿಯವರನ್ನು ನೆನಪಿಸಿಕೊಳ್ಳಲು ಹಲವು ಕಾರಣಗಳಿವೆ. ಹತ್ತು ಹಲವು ಹೊಸ ನೆಲೆಗಳನ್ನು ಶೋಧಿಸಿದ ಅವರಿಗೆ ಹೊಸತನದ ಬಗೆಗಿದ್ದ ಆಪ್ತತೆಯೇ ಅವರನ್ನು ಪತ್ರಿಕೋದ್ಯಮದಲ್ಲಿದ್ದಷ್ಟೂ ಕಾಲ ಹಸಿರಾಗಿರಿಸಿತ್ತು. ನನಗೂ ತರಂಗ ಆಪ್ತವಾಗುವುದಕ್ಕೆ ಬಹಳಮುಖ್ಯವಾದ ಕಾರಣವೆಂದರೆ, ಅವರ ಅಂತರಂಗ-ಬಹಿರಂಗ. ಸಂಪಾದಕೀಯ ಬರಹಗಳು ಹೊಸ ಬಗೆಯಲ್ಲಿ ಆಲೋಚಿಸುವಂತೆಯೂ ಮಾಡಿದ್ದವು. ಅಷ್ಟೇ ಅಲ್ಲದೇ, ನಮ್ಮ ಕ್ರಿಯಾಶೀಲತೆಯ ಕೊರತೆಯನ್ನು ಎತ್ತಿ ಹೇಳುತ್ತಿದ್ದವು ನನ್ನ ಅರಿವಿಗೆ ಬಂದಂತೆ (ನನ್ನ ವಿದ್ಯಾರ್ಥಿಯ ದೆಸೆಯಲ್ಲಿದ್ದಾಗ) ಗುಲ್ವಾಡಿಯವರೊಬ್ಬರೇ ವಾರಪತ್ರಿಕೆಯಂಥ ಕಡೆಯೂ ತೀಕ್ಷ್ಣವಾಗಿ ಸಮಕಾಲೀನ ಬೆಳವಣಿಗೆಗಳಿಗೆ ಸ್ಪಂದಿಸುತ್ತಿದ್ದುದು ಅನಿಸುತ್ತದೆ. ದಿನಪತ್ರಿಕೆಗಳ ಉಸಾಬರಿಗೆ ನಾನು ಹೋಗುವುದಿಲ್ಲ ಪೂರ್ಣ ಓದಿಗೆ : ಮೀಡಿಯಾ ಮೈಂಡ್]]>ಗುಲ್ವಾಡಿಯವರ ನೆನಪಿನಲ್ಲಿ…
ನಿಮಗೆ ಇವೂ ಇಷ್ಟವಾಗಬಹುದು…





0 Comments