
ಎಲ್ಸಿ ನಾಗರಾಜ್

ನನ್ನ ಅಜ್ಜಿ ನನಗೊಂದು ಕತೆ ಹೇಳಿದ್ದಳು
ಆ ಕತೆಯ ಪ್ರಕಾರ
ಒಂದು ದಿನ, ತನ್ನ ಪಾಡಿಗೆ ತಾನು ಹಾಡು ಹೇಳುತ್ತಿದ್ದ ಕೋಗಿಲೆಯನ್ನ ನೋಡಿದ ಗುಲಗಂಜಿ ಬೀಜ “ಹೇಯ್ ಕೋಗಿಲೆ ನೀನು ಕಪ್ಪು” ಎಂದುಬಿಟ್ಟಿತು.
ಕೋಗಿಲೆ ಹೇಳಿತು : ‘ ಚಿನ್ನದ ಅಂಗಡಿಯಲ್ಲಿ ಚಿನ್ನದ ತೂಕ ಮೋಸ ಮಾಡುವ ಗುಲಗಂಜಿ ಬೀಜವೇ ಬಗ್ಗಿ ನೋಡಿಕೋ ‘






Hi
ಇದುವೇ ಜೀವನ ಅಲ್ಲವೇ ನಾಗರಾಜ್ ಅವರೇ? ಇನ್ನೊಬ್ಬರತ್ತ ಬೆರಳು ತೋರಿಸುವಾಗ ಉಳಿದ ನಾಲ್ಕು ಬೆರಳು ತಮ್ಮನ್ನು ನಿರ್ದೇಶಿಸುವುದನ್ನ ಮರೆವ ಜಾಯಮಾನ ಮಾನವನದು.ಚಿಕ್ಕ ಕತೆಯಲ್ಲಿ ಅಪರೂಪದ ನಿತ್ಯ ಸತ್ಯವನ್ನು ಹೇಳುವ ಸುಂದರ ಕತೆ