
ಗದಗ ಸಾಹಿತ್ಯ-ಕಲೆ-ಸಂಗೀತ-ರಂಗಭೂಮಿ-ಜನಪದ-ಧಾರ್ಮಿಕತೆ-ವಾಣಿಜ್ಯೋದ್ಯಮ-ಕ್ರೀಡೆ ಹೀಗೆ ಹಲವಾರು ಪರಂಪರೆಗಳಿಮ್ದ ಅಮರ ಕೀರ್ತಿ ಮೆರೆದ ಭವ್ಯ ಕರ್ಮಭೂಮಿ. ಇದು ಕವಿ ಕಾಶಿ ಎಂದು ಹೆಸರುವಾಸಿಯಾಗಿದೆ. ಇಲ್ಲಿನ ಸಾಮಾಜಿಕ-ಶೈಕ್ಷಣಿಕ ಕ್ಷೇತ್ರಗಳೂ ಬಹು ಸಕ್ರಿಯವಾಗಿವೆ. ಇಲ್ಲಿ ಈಗ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಎರಡನೆಯದು, ಗದಗ ಜಿಲ್ಲೆಯಾಗಿ ಮಾರ್ಪಾಟಾದಮೇಲೆ ಮೊದಲನೆಯದು. ನೆರೆ ಹಾವಳಿಯಿಂದಾಗಿ ನವೆಂಬರ್ನಲ್ಲಿ ನಡೆಯಬೇಕಿದ್ದ ಸಮ್ಮೇಳನ ಮುಂದೂಡಲಾಗಿ ಈಗ ಫೆಬ್ರವರಿಯಲ್ಲಿ ನಡೆಯುತ್ತಿದೆ. ಇದನ್ನು ಪರಿಷದಧ್ಯಕ್ಷರಾದ ಶ್ರೀ ನಲ್ಲೂರ್ ಪ್ರಸಾದ್ ಅವರು ‘ಸಾಹಿತ್ಯ-ಸಾಂಸ್ಕೃತಿಕ ಸಾಂತ್ವನ’ ಎಂದು ಕರೆದಿದ್ದಾರೆ.
ಪೂರ್ಣ ಓದಿಗೆ ಭೇಟಿ ಕೊಡಿ- ನುಡಿನಮನ
ಗದಗದ ಗರಿಮೆ
ನಿಮಗೆ ಇವೂ ಇಷ್ಟವಾಗಬಹುದು…




0 Comments