’ಕಲಾಧ್ಯಾನ್’ ಪ್ರಶಸ್ತಿ ಪ್ರದಾನ ಸಮಾರಂಭವೆಂದರೆ ಅದು ಪ್ರಶಸ್ತಿ ಪುರಸ್ಕೃತರ ಜೊತೆಜೊತೆಯಲ್ಲಿ ವೀಕ್ಷಕರಿಗೂ ಸಂಭ್ರಮ.
ಅದೊಂದು ಇಡೀದಿನದ ಹಬ್ಬ. ಶಿಲ್ಪವನದಲ್ಲಿ ಕಲಾಶಿಬಿರದೊಂದಿಗೆ ಕಾರ್ಯಕ್ರಮ ಶುರು ಆಯಿತು.
ಸಂಕ್ರಾಂತಿಯ ಕಣದಂತೆ ಕಾಣುತ್ತಿದ್ದ ಕಲಾಕ್ಷೇತ್ರದಲ್ಲಿ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ಅವರಿಂದ ತತ್ವಪದ, ಪ್ರಕಾಶ್ ಶೆಟ್ಟರ ಭೂತದ ವೇಷ, ಪ್ರಶಸ್ತಿ ಪ್ರದಾನ ಎಲ್ಲವೂ ಸೊಗಸಾಗಿ ನಡೆಯಿತು.
ಪ್ರಶಸ್ತಿ ಪುರಸ್ಕೃತರಾದ ಅಂಬಾಜಿ, ಕೆ ವಿ ಸುಬ್ರಹ್ಮಣ್ಯಂ ಮತ್ತು ಎಚ್ ಕೆ ದ್ವಾರಕಾನಾಥ್ ಅವರಿಗೆ ’ಅವಧಿ’ಯ ಅಭಿನಂದನೆಗಳು.
ಬೆಂಗಳೂರು ಆರ್ಟ್ ಫೌಂಡೇಶನ್ ಇದೀ ಕಾರ್ಯಕ್ರಮವನ್ನು ಸೊಗಸಾಗಿ ಆಯೋಜಿಸಿತ್ತು.
ಕಾರ್ಯಕ್ರಮದ ಚಿತ್ರಗಳನ್ನು ತೆಗೆದವರು ಎಂ ಎಸ್ ಲೋಕೇಶ್.
ಎಂ ಎಸ್ ಲೋಕೇಶ್
ಕಾರ್ಯಕ್ರಮದ ಚಿತ್ರಗಳು ’ಅವಧಿ’ ಓದುಗರಿಗಾಗಿ







ಕೃಷ್ಣಾ ರಾಯಚೂರ ಸರ್,ತಮ್ಮ ಕಲಾಧ್ಯಾನದ ಕಾರ್ಯಕ್ರಮವು, ಕಲೆ,ಸಾಹಿತ್ಯ,ಸಂಗೀತ,ಮತ್ತು ರಂಗ ಇವುಗಳ ಸಂಗಮದಿಂದ ಕೂಡಿದ್ದರಿಂದ ನನ್ನನ್ನೂ ಒಳಗೊಂಡಂತೆ ಪ್ರೇಕ್ಷಕರ ಮನಗೆಲ್ಲುವದರೊಂದಿಗೆ ತಮ್ಮಯ ಹೊಸ ಬಗೆಯ ವಿಭಿನ್ನ ಆಲೋಚನೆಗಳು ನಾಡಿನ ಸಾಂಸ್ಕೃತಿಕ ಲೋಕಕ್ಕೆ ಮಾರ್ಗಸೂಚಿಯಂತ್ತಿತ್ತು,ನಿಜವಾಗಿಯೂ ಈ ಕಾಲಘಟ್ಟದಲ್ಲಿ ಇಂಥಹ ಪ್ರಯೋಗ ಪ್ರಸ್ತುತವಗಿದ್ದು,ಕಲಾಧ್ಯಾನ ನವಪಂಥವನ್ನು ಹುಟ್ಟುಹಾಕಿದೆ ಎಂಬುವದು ನನ್ನ ಅಭಿಮತವಾಗಿದೆ ಹ್ಯಾಟ್ಸಾಪ್ ಕೃಷ್ಣಾಜಿ ಮತ್ತು ವೆಂಕಟೇಶಜಿ