ಕವಿ-ಮನದ ಕೆಲವು ದೃಶ್ಯಗಳು
ಈ ಬಾರಿಯ ಕವಿಮನದಲ್ಲಿ ಮೊದಲಿಗೆ ಜಿ.ಎನ್. ಮೋಹನ್ ಅವರ ‘ ಪ್ರಶ್ನೆಗಳಿರುವುದು ಷೇಕ್ಸ್ ಪಿಯರ್ ನಿಗೆ’ ‘ ಕವನವನ್ನು ತರಂಗದ ವಿದ್ಯಾರ್ಥಿಗಳು ಮನು ನಿರ್ದೇಶನದಲ್ಲಿ ಪ್ರದರ್ಶಿಸಿದರು. ಇದಕ್ಕಾಗಿ ಷೇಕ್ಸ್ ಪಿಯರ್ ನ ಮೂರು ನಾಟಕಗಳನ್ನು ವಾಚಿಸಿ ತಯಾರಿ ಮಾಡಿಕೊಂಡಿದ್ದರು. ನಂತರ ತಮ್ಮ ಸುಮಧುರ ಕಂಠದಿಂದ ಶ್ರೀದೇವಿ ತಮ್ಮ ಕವನ ವಾಚಿಸಿದರು.ಅವರು ಕವನ ಓದುವ ಶೈಲಿ ರಂಗಪ್ರಿಯರನ್ನು ಮೆಚ್ಚಿಸಿತು. ದಿನನಿತ್ಯದ ವಸ್ತುಗಳನ್ನು ಕವನದಲ್ಲಿ ಪ್ರತಿಮೆಯಾಗಿ ಬಳಸಿ ವಿಷಯ ನಿರೂಪಿಸಿದ್ದು ನನಗೆ ಮೆಚ್ಚುಗೆಯಾಯಿತು. ವಂದನೆಗಳು ಶ್ರೀದೇವಿ ಹಾಗೂ ಮೋಹನ್ ಗೆ ಹಾಗೂ ಕವನ ವಾಚಿಸಿದ ಎ.ಎಸ್.ಮೂರ್ತಿ ಅವರಿಗೆ.
ಕಲಾತರ೦ಗದಲ್ಲಿ ಕವಿ-ಮನ
ನಿಮಗೆ ಇವೂ ಇಷ್ಟವಾಗಬಹುದು…





0 Comments