ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡ ‘ಕವಿ ನುಡಿ’ಗಳು…

ಸಂಗ್ರಹ: ಗೋಪಾಲ ವಾಜಪೇಯಿ

 

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ !

ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ !

– ಸಾಲಿ ರಾಮಚಂದ್ರರಾಯ

-0-0-0-

ಒಂದೇ ಒಂದೇ ಒಂದೇ

ಕರ್ನಾಟಕವೊಂದೇ…

ಜಗದೇಳಿಗೆಯಾಗುವುದಿದೆ

ಕರ್ನಾಟಕದಿಂದೇ…

– ಅಂಬಿಕಾತನಯದತ್ತ

-0-0-0-

 

ಕನ್ನಡವನುಳಿದೆಮಗೆ ಅನ್ಯಜೀವನವಿಲ್ಲ !

ಕನ್ನಡವೆ ಎನ್ನುಸಿರು, ಪೆತ್ತೆನ್ನ ತಾಯಿ !

– ಬೆನಗಲ್ ರಾಮರಾವ್

-0-0-0-

 

ಎನಿತು ಇನಿದು ಈ ಕನ್ನಡ ನುಡಿಯು !

ಮನವನು ತಣಿಸುವ ಮೋಹನ ಸುಧೆಯು !

– ಬೆಟಗೇರಿ ಕೃಷ್ಣಶರ್ಮ

-0-0-0-

 

ಕನ್ನಡ ಗೋವಿನ ಓ ಮುದ್ದಿನ ಕರು,

ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು…

– ಕುವೆಂಪು

-0-0-0-

 

ಹಚ್ಚೇವು ಕನ್ನಡದ ದೀಪ

ಕರುನಾಡ ದೀಪ, ಸಿರಿನುಡಿಯ ದೀಪ

ಒಲವೆತ್ತಿ ತೋರುವ ದೀಪ…

– ಡಿ.ಎಸ್. ಕರ್ಕಿ

-0-0-0-

 

ನಮ್ಮ ಉಸುರು, ನಮ್ಮ ಕಸುವು ಕನ್ನಡ

ನಮ್ಮ ಹೆಸರು, ನಮ್ಮ ಕಸುಬು ಕನ್ನಡ

– ಎಂ. ಗೋಪಾಲಕೃಷ್ಣ ಅಡಿಗ

-0-0-0-

 

ಈ ನಾಡ ಮಣ್ಣು ಇಲ್ಲಲ್ಲಿ ಕಪ್ಪು ;

ಚಂದನದ ಕಂಪು, ತಂಪು ;

ಜೇನಿಳಿವ ಹಣ್ಣು, ಮಲ್ಲಿಗೆಯ ಮುಡಿದ

ಚೆಲುವೆಯರ ನುಡಿಗಳಿಂಪು…

– ಕೆ. ಎಸ್. ನರಸಿಂಹಸ್ವಾಮಿ

 

‍ಲೇಖಕರು G

1 November, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading