ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಿದ ಕೂಡಲೇ ಬರೆಯುತ್ತಿದ್ದೇನೆ..

ಪ್ರಶಾಂತ್ ಹಿರೇಮಠ

ಓದಿದ ಕೂಡಲೇ ಬರೆಯುತ್ತಿದ್ದೇನೆ.. “ಸಂಬಂಜಾ ಅನ್ನೋದು ದೊಡ್ಡದು ಕನಾ” ಅನ್ನೋದು ನೆನಪಾಗುತ್ತಿದೆ.. ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕಾದಂಬರಿಯ ಕೊನೆಯ ಮಾತು.. ಅದೇ ಕಾದಂಬರಿಯ ಮೊದಲ ಪುಟದಲ್ಲಿ ಅಲ್ಲಮನ “ಎತ್ತಣ ಮಾಮರ..? ಎತ್ತಣ ಕೋಗಿಲೆ..” ವಚನವೂ ಇದೆ.. ಯಾಕೆ ಒಂದು ಜೀವ ಇನ್ನೊಂದು ಜೀವಕ್ಕೆ ಇಷ್ಟವಾಗುತ್ತದೆ..? ಯಾಕೆ ಒಂದು ಜೀವ ಇನ್ನೊಂದು ಜೀವಕ್ಕೆ ಅಂಟಿಕೊಳ್ಳುತ್ತದೆ..? ಇದು ನಿಗೂಢ.. ಅದರಲ್ಲೂ ತಾನು ನಿರಾಯಾಸವಾಗಿ ತಿನ್ನಬಹುದಾದ ನಾಯಿಮರಿಗಾಗಿ ತನ್ನ ಪ್ರಾಣವನ್ನು ತ್ಯಜಿಸಿಬಿಡುವ ಸಿಂಹ.. ಅವಮಾನವೆಂದು ಕರೆಯಬಹುದಾದ ಮೀಸೆಯನ್ನು ಜಗ್ಗಿಸಿಕೊಂಡು ಮುದಗೊಳ್ಳುವುದು.. ತಾಯಿಯಂತೆ ತನ್ನ ತೋಳ ಮೇಲೆ ಮಲಗಿಸಿಕೊಳ್ಳುವುದು.. ಇದನ್ನೇನೆಂದು ಕರೆಯುವುದು..? ದುಃಖವೇ..? ವೈರಾಗ್ಯವೇ..? ಬದುಕಿನ ನಶ್ವರತೆಯ ಶಾಶ್ವತ ಸತ್ಯದ ಅರಿವೇ..?

ಕತೆ ಅದ್ಭುತವಾಗಿದೆ.. ಟಾಲ್ಸ್ಟಾಯ್ ಗೂ ನಟರಾಜ್ ಹೊನ್ನವಳ್ಳಿಯವರೇ, ನಿಮಗೂ ಧನ್ಯವಾದಗಳು.. ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ತಂದಿದ್ದೀರಿ.. ಧನ್ಯವಾದಗಳು.. ಶ್ರೇಷ್ಙ ಕಲೆ ಮತ್ತು ಶ್ರೇಷ್ಠ ಸಾಹಿತ್ಯ ಮಾಡುವ ಪರಿಣಾಮ ಒಂದೇ ರೀತಿಯದು.. ಅದು ಓದುಗನನ್ನು, ನೋಡುಗನನ್ನು ಅಥವಾ ಪ್ರೇಕ್ಷಕನನ್ನು ಮೂಕನನ್ನಾಗಿಸುತ್ತದೆ.. ಇನ್ನೂ ಕರಾರುವಕ್ಕಾಗಿ ಹೇಳಬಹುದಾದರೆ.. ಮಾತುಗಳು ಹೊಳೆಯದಂತಹ ಸ್ಥಿತಿಗೆ ತಳ್ಳುತ್ತದೆ.. ಮಾತಿಗೂ ಮೀರಿದಂಥ ನಿರ್ವಾಣ ಶ್ರೇಣಿಯಲ್ಲಿ ಅರ್ಥಗಳ ದರ್ಶನ ಮಾಡತೊಡಗುತ್ತದೆ.. ಇಲ್ಲಿನ ಸಿಂಹ ಮತ್ತು ನಾಯಿಗಳು ತಮ್ಮ ಪ್ರಾಣಿತನದ ಮಾಂಸದ ಮೂರ್ತತೆಯನ್ನು ಮೀರಿ ಅಮೂರ್ತಗಳಾಗುತ್ತವೆ.. ಪ್ರಾಯಶಃ ಸಂಕೇತಗಳು ಸಿದ್ಧಿಸುವ ಪರಿ ಇದೇ ಇರಬೇಕು..   ನಾನು ನಾಟಕದವನು.. ನಟ.. ಇದನ್ನು ಅದ್ಭುತ ನಾಟಕ ಮಾಡಬಹುದು ಅನ್ನಿಸುತ್ತಿದೆ. ನಾಟಕವೂ ಹಾಗೇಯೇ.. ಸಿಂಹ ನಾಯಿಯನ್ನು ತಿಂದುಬಿಟ್ಟಿದ್ದರೆ ಅದು ನಾಟಕವಾಗುತ್ತಿರಲಿಲ್ಲ.. ತಿನ್ನದೇ ಇರುವುದಷ್ಟೆ ಅಲ್ಲ.. ನಾಯಿ ಸತ್ತಾಗ ಆ ದುಃಖದಲ್ಲಿ ತಾನೂ ಉಪವಾಸ ಮಾಡಿ ಕೊನೆ ಕಾಣುವುದು ಅದ್ಭುತ ನಾಟಕ.. ಕೊನೆಗೂ ನಾಟಕವೆಂದರೆ ನಿಜದ ಹುಡುಕಾಟ ತಾನೇ..   ತುಂಬಾ ಚೆನ್ನಾಗಿದೆ.. ತುಂಬು ಹೃದಯದ ಧನ್ಯವಾದಗಳೊಂದಿಗೆ, ಪ್ರಶಾಂತ್ ಹಿರೇಮಠ, ರಂಗಾಯಣ,    ]]>

‍ಲೇಖಕರು G

31 May, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading