
ಎಸ್ .ಪಿ. ವಿಜಯ ಲಕ್ಷ್ಮಿ

ನನ್ನ ಕೈಯ್ಯಲ್ಲಿರುವ ಪುಸ್ತಕ “ಕದಡಿದ ಕಣಿವೆ “
ನನಗೆ ಮೊದಲಿಂದಲೂ ಕಾಶ್ಮೀರ , ಹಿಮಪರ್ವತ ಎಂದರೆ ತೀರದ ಮೋಹ .
ಕಾಶ್ಮೀರ ಎಂದೆಂದೂ ಮುಗಿಬಿದ್ದ ಸೌಂದರ್ಯದ ಯುವತಿ , ಆದರೆ ಸಂಘರ್ಷದ ಅಗ್ನಿಕುಂಡ .
ಇಲ್ಲಿಯ ಕಾಶ್ಮೀರಿ ಪಂಡಿತರ ಸಂಕಟದ ಕಥೆ ಅಷ್ಟಿಷ್ಟು ಕೇಳಿ ತಿಳಿದಿದ್ದೆ . ಈಗ ಈ ಪುಸ್ತಕ ಬಿಡುಗಡೆಯಾಗಿದೆ. ಇದು ಅಲ್ಲಿಯ ಸಮಗ್ರ ನೋವಿನ , ರಾಜಕಾರಣ, ಸಾಮಾಜಿಕ ಸ್ಥಿತಿಗತಿಗಳನ್ನು ಅನಾವರಣಗೊಳಿಸಲಿರುವ ಪುಸ್ತಕ ಎಂದು ಖರೀದಿಸಿರುವೆ . ಆರಂಭ ಸೊಗಸಾಗಿದೆ .

ಮಲಾಲ ಕೃತಿ ಸಮರ್ಥವಾಗಿ ಅನುವಾದಿಸಿರುವ ಜಯಪ್ರಕಾಶ್ ನಾರಾಯಣ್ ಅವರೇ ಈ ಕೃತಿಯ ಅನುವಾದಕರೂ ಆಗಿರುವುದರಿಂದ , ಇದೂ ಅಷ್ಟೇ ಸೊಗಸಾಗಿದೆ ಎಂಬುದು ಸತ್ಯ.





0 Comments