
ಗಂಗಪ್ಪ ತಳವಾರ
ದೇವನೂರು ಮಹದೇವರವರ “ಡಾಂಬರು ಬಂದುದು” ಕತೆಯಲ್ಲಿ ಜಾಗತೀಕರಣದ ಉಪಯೋಗ ಮತ್ತು ಅದು ಮಾಡಬಹುದಾದ ಅನಾಹುತದ ಬಗ್ಗೆ ‘ಮಗುವೊಂದು ಟಾರು ಡ್ರಮ್ಮಿನಲ್ಲಿ ಸಿಕ್ಕಿ, ಉಸಿರಾಡುತ್ತಿರುವ’ ಪ್ರಸಂಗದ ಮೂಲಕ ತುಂಬಾ ಮಾರ್ಮಿಕವಾಗಿ ಹೇಳಿದ್ದರು..
ಮಗುವು ಇಲ್ಲಿ ಕೇವಲ ರೂಪಕವಷ್ಟೆ ವಾಚ್ಯವಾಗಿ ಹೇಳುವುದಾದರೆ ಡ್ರಮ್ಮಿನಲ್ಲಿ ಸಿಕ್ಕಿಕೊಂಡ ಮಗುವು india ಆಗಿದೆ..
ಮೊನ್ನೆತಾನೆ ಕಲಬುರ್ಗಿಯ ಬಸವೇಶ್ವರ ಕಾಲೋನಿಯಲ್ಲಿ., “ವಾಷಿಂಗ್ ಮಷಿನ್ ನಲ್ಲಿ ಸಿಲುಕಿ ನಲುಗಿ ಹೋದ ಮಗು” ವಿನ ಘಟನೆ ಕೇಳಿದ ಕೂಡಲೆ ವರ್ತಮಾನದಲ್ಲೂ ದೇವನೂರರ ಆ ಕತೆ ಇಂದಿಗೂ ಪ್ರಸ್ತುತ ಅನಿಸಿತು.
ಎಳನೀರು ಮಾರುವವರ ಬಳಿ ಇದ್ದ ಮಚ್ಚಿನಿಂದ ಬಹುರಾಷ್ಟ್ರಿಯ ಕಂಪನಿ ಪ್ರಾಡೆಕ್ಟ್ ನಿಂದ ಆದ ವಾಷಿಂಗ್ ಮಷಿನ್ನಿನ ಕಬಂದ ಬಾಹುಗಳನ್ನು ಕತ್ತರಿಸಿ ಮಗುವಿನ ಪ್ರಾಣ ಉಳಿಸಿದಂತೆ ಭಾರತವನ್ನು ಜಾಗತೀಕರಣದಿಂದ ಪಾರುಮಾಡಬೇಕಿದೆ ಅನಿಸಿತು…





0 Comments