ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ತಲೆಮಾರಿನವರು- ಹೆಚ್ಚೆನ್ ಅವರನ್ನು ನೋಡಿದ್ರು..!!

ಹೆಚ್.ನರಸಿಂಹಯ್ಯ -ನಿಜ ಅರ್ಥದಲ್ಲಿ ಅಪ್ಪಟ ಗಾಂಧೀಜಿಯವರಷ್ಟೇ ಸರಳವಾಗಿ ಬದುಕಿದವರು.
ವೈಚಾರಿಕತೆಯಲ್ಲಿ ಅವರಿಗಿಂತ ಒಂದು ಹೆಜ್ಜೆ ಮುಂದೇ ಇದ್ದವರು.
ಬೆಂಗಳೂರಿನ ನ್ಯಾಶನಲ್ ಕಾಲೇಜಿನ ಅವರ ಕೋಣೆ ಅವರಷ್ಟೇ ಪ್ರಸಿದ್ಧ..!!
ಭಿನ್ನ ತಲೆಮಾರಿನ ಇಬ್ಬರು ಹೆಚ್ಚೆನ್ ಅವರನ್ನು ಕಂಡದ್ದು ಹೀಗೆ..

 



ಹಳೇಯರ್ ವೆಂಕಟಗರಿಯಪ್ಪ ವೇಣುಗೋಪಾಲ್

 

 

 

 

 

ಇಂದಿಗೆ 9 ವರ್ಷ ಕಳೆಯಿತು (2005). ನಮ್ಮ ನೆಚ್ಚಿನ ಗುರು-ಮಾರ್ಗದರ್ಶಿ-ಆದರ್ಶವಾದಿ-ಶಿಸ್ತಿನಿಂದ ಬಾಳಿದವರು-ನಂಬಿಕೆಯ ಬೇರುಗಳನ್ನು ಬಿಡಿಸಿ ತೋರಿಸಿಕೊಟ್ಟ ಡಾ|| ಎಚ್.ನರಸಿಂಹಯ್ಯ ನಮ್ಮೊಡನೆ ಇಲ್ಲವಾಗಿ. ಅವರ ನೆನಪು ಕಾಡುತ್ತಿದೆ. ಅವರ ಶಿಷ್ಯರುಗಳು, ಅವರ ಹೆಸರು ಹೇಳಿಕೊಂಡು ಸ್ಥಾನ ಗಿಟ್ಟಿಸುವವರು ಅವರು ಬದುಕಿದ ರೀತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.  ಅವರಂತೆ ನಡೆದುಕೊಳ್ಳುವವರನ್ನು ದೂರ ತಳ್ಳಿದ್ದಾರೆ. ಇದು ಗೆಳೆತನದ ಪ್ರಭಾವಶೀಲತೆಯಲ್ಲಿ ಕಾಣುವ ವಿಪರ್ಯಾಸ.

 

 

 

 

 

 

 

 

ನಿಜಕ್ಕೂ ಅವರದು ತೆರೆದ ಮನ..!!

ಚಸ್ವಾ ಹಿರೇಮಠ, ನೀನಾಸಮ್

ಇವತ್ತು ಮಧ್ಯಾಹ್ನ ತೆಗೆದ ಚಿತ್ರ ಇದು ನಾಡೋಜ ಡಾ ಹೆಚ್ ನರಸಿಂಹಯ್ಯನವರು ವಾಸವಿದ್ದ ಕೊಠಡಿ (ನ್ಯಾಷನಲ್‌ಕಾಲೇಜು ಬಸವನಗುಡಿ) ಇವರನ್ನ ಪ್ರತಿ ದಿನಾ ಕಾಲೇಜಿನಲ್ಲಿ ಓಡಾಡೋದು ನೋಡಿದ ಖುಷಿ ನಂದು ಸದಾ ಇವರಸುತ್ತ ವಿದ್ಯಾರ್ಥಿಗಳು ಸುತ್ತುವರೆದಿರುತ್ತಿದ್ದರು. ಅವರು ತಮ್ಮ‌ ರೂಂ ನಲ್ಲಿ ಇದ್ದಾರೆ ಅನ್ನೋದಕ್ಕೆ ಮೇಲೆ ಇದ್ದ ನನಗೆ ಒಂದೇ ಸೂಚನೆ ಈ ರೂಂ ನ ಪಕ್ಕದ ರೂಂ ನಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳು ವಾಸ ಇದ್ದರು ಅವರಿದ್ದರೆ ಇವರು ವಿದ್ಯಾರ್ಥಿಗಳು ಸೈಲೆಂಟ್ ಇಲ್ಲಾ ಅಂದ್ರೆ ವಯೋಧರ್ಮದಂತೆ ಹುಡುಗರ ಗಲಾಟೆ ಜಾಸ್ತಿ ಇರ್ತಿತ್ತು … “ತೆರೆದ ಮನ “ನಿಜಕ್ಕು ಅವರದು ತೆರೆದ ಮನ.

 

 

 

 

 

 

 

‍ಲೇಖಕರು Avadhi GK

7 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading