ಗೆಳೆಯರೇ
ಮೊದಲನೆಯದಾಗಿ “ನನ್ನ ಊರು ಸುಟ್ಟರು ಹನುಮಪ್ಪ ಹೊರಗ” ಕತೆಗೆ ಇಂದಿರಾ ಗೋವಿಂದರಾವ್ ಸ್ಮಾರಕ ಕತಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿದೆ. ಜುಲೈ ೦೯ ರಂದು ೫೦೦೦ ಸಾವಿರ ನಗದು ಫಲ ತಾಂಬೂಲಗಳೊಂದಿಗೆ ಸನ್ಮಾನವಿದೆ.
ಎರಡನೆಯದಾಗಿ ಪುಸ್ತಕ ಪ್ರಾಧಿಕಾರದ ವತಿಯಿಂದ ಮೇ ೧೩. ಬೆಳಗ್ಗೆ ೧೧.೩೦ಕ್ಕ್ಕೆ ನಯನ ಸಭಾಂಗಣದಲ್ಲಿ ನನ್ನ ನನ್ನ ಪ್ರಥಮ ಕಥಾ ಸಂಕಲನ “ಕತ್ತಲ ಗರ್ಭದ ಮಿಂಚು” ಬಿಡುಗಡೆಯಾಗುತ್ತಿದೆ. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ. ನಿಮ್ಮನ್ನು ಎದುರು ನೋಡುತ್ತಿರುತ್ತೇನೆ.
-ಹನಮಂತ ಹಾಲಗೇರಿ








Congrats geleya.
VITHAL DALAWAI
ಹನಮಂತ ಹಾಲಗೇರಿ ಅವರಿಗೆ
ನೀವು ಕೊಟ್ಟ ಕಥಾ ಸಂಕಲನವನ್ನು ಸಂಪೂರ್ಣವಾಗಿ ಓದಿದೆ.
ಕಳೆದ ಸಾಲಿನಲ್ಲಿ ಗವಿಸಿದ್ಧ ಹೊಸಮನಿಯ ವಿಳಾಸ ಇಲ್ಲದವರ ಹುಡುಕುತ್ತಾ ಓದಿದಾಗ ಎಷ್ಟು ಮನ ಮುಟ್ಟಿತ್ತೋ ಅಷ್ಟೇ ಚೆನ್ನಾಗಿ ಬರೆದಿದ್ದೀರಿ.
ಮನಮುಟ್ಟುವಂತಿದೆ. ನಿಮ್ಮ ಹನಮಪ್ಪ..ಕಥೆಯನ್ನು ಈಗಾಗಲೇ ಓದಿದ್ದೆ. ನೀವು ಮೇಲ್ ಮಾಡಿದ್ದಾಗ.
ನಿಮಗೆ ಸಿಕ್ಕ ಮನ್ನಣೆಗೆ ಅಭಿನಂದನೆಗಳು. ಇನ್ನಷ್ಟು ಬರೆಯಲು, ಚೆನ್ನಾಗಿ ಬರೆಯಲು ಈ ಮನ್ನಣೆ ನೆಪವಾಗಲಿ