ಕವಿ, ವಿಮರ್ಶಕ, ಪ್ರಯೋಗಶೀಲ ನಾಟಕಕಾರ ಎಚ್.ಎಸ್.ವೆಂಕಟೇಶಮೂರ್ತಿಯವರಿಗೆ ಹುಬ್ಬಳ್ಳಿಯಲ್ಲಿ ಡಾ.ಡಿ.ಎಸ್.ಕರ್ಕಿ ಕಾವ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಪುರಸ್ಕಾರ ಎಚ್ಎಸ್ವಿಯವರ ಕನ್ನಡಿಯ ಸೂರ್ಯ ಕೃತಿಗೆ ಲಭಿಸಿದೆ.
ಡಾ.ಕರ್ಕಿ ಜನ್ಮಶತಮಾನೋತ್ಸವ ಸಮಾರಂಭದ ನಿಮಿತ್ತ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ಡಾ.ಡಿ.ಎಸ್.ಕರ್ಕಿ ಸಾಹಿತ್ಯ ವೇದಿಕೆ ಇವರ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಡಾ.ಡಿ.ಎಸ್.ಕರ್ಕಿಸಮಗ್ರ ಸಾಹಿತ್ಯ ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರಶಸ್ತಿ ಪ್ರದಾನ ಮಾಡಿದರು.
ವಿಮರ್ಶಕ ಶಾಮಸುಂದರ ಬಿದರಕುಂದಿ, ವಿಮರ್ಶಕ, ಕಥೆಗಾರ ಡಾ.ಪ್ರಹ್ಲಾದ ಅಗಸನಕಟ್ಟೆ, ವೇದಿಕೆಯ ಸಂಚಾಲಕ ನಿರಂಜನ ವಾಲಿಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಇತರರು ಉಪಸ್ಥಿತರಿದ್ದರು.






ತುಂಬಾ ಸಂತೋಷವಾಯಿತು
congrats maava, tumba khushi aaitu.
congrts sir. it is happiest thing to us .
dharmanna chitta
JNV DEVARAHALLI
ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರಶಸ್ತಿ ಪ್ರದಾನ ಮಾಡಿದರು.
congrats sir,