ಖ್ಯಾತ ಲೇಖಕಿ ಎಚ್ ಎಸ್ ಪಾರ್ವತಿ ಅವರ ನೆನಪಿನಲ್ಲಿ ಸ್ಥಾಪಿಸಲಾಗಿರುವ ಪ್ರಶಸ್ತಿಯನ್ನು ಡಾ.ಎಸ್.ವಿ.ಪ್ರಭಾವತಿ ಮತ್ತು ಡಾ.ವೈ.ಸಿ.ಭಾನುಮತಿ ಅವರಿಗೆ ವಿತರಿಸಲಾಯಿತು.
ಕರ್ನಾಟಕ ಲೇಖಕಿಯರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿ ಡಾ. ವಿಜಯಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಕವಯತ್ರಿ ಡಾ ಎಚ್ ಎಲ್ ಪುಷ್ಪ, ಕಲಾವಿದೆ ಡಾ ಎಂ ಎಸ್ ವಿದ್ಯಾ, ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನ ಕುಮಾರ, ಆಶಾ ಹೆಗಡೆ, ಎಲ್ ಗಿರಿಜಾ ರಾಜ್, ನಾಗರತ್ನ ಚಂದ್ರಶೇಖರ್, ಸರಸ್ವತಿ ನಟರಾಜ್, ರೇಣುಕಾ ದೇಸಾಯಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.
0 ಪ್ರತಿಕ್ರಿಯೆಗಳು