ಗಟ್ಟಿಗಿತ್ತಿಯರಾಗ್ತೀವಿ..
ನನ್ನ ತುದಿ ಬೆರಳು ಡಿ.ಆರ್. ನಾಗರಾಜ್ ಅವರ ‘ಅಮೃತ ಮತ್ತು ಗರುಡ’ 24 ಪುಟ ತಿರುಗಿಸಿ, ಲಂಕೇಶರ ‘’ಪಾಪದ ಹೂಗಳು’’ ಎತ್ತಿಕೊಂಡಿದೆ.
ಆಧುನಿಕೋತ್ತರ ಬರಹಗಾರರಲ್ಲಿ ಸಾಕಷ್ಟು ಜನ ಪದ್ಯಗಳನ್ನು ಬರಿಯುತ್ತಿದ್ದರೂ ಐದು ವರ್ಷ ಬಿಟ್ಟು ಓದಿದರೆ ಯಾವುದೋ ದಿನದ ಡೈರಿ ಎನಿಸಿ, ಪದ್ಯದ ಸೂಕ್ಷ್ಮತೆ, ಗಂಭೀರತೆ, ಅಗಾದ ಅರ್ಥ ಮತ್ತು ನಿಗೂಢತೆ ಇಲ್ಲವಾಗುತ್ತವೆ.
ನಮ್ಮ ಬರಹವನ್ನ ನಾವೇ ಅನುಮಾನಿಸುವುದನ್ನ, ಮೇಸ್ಟ್ರು ಮತ್ತು ಪ್ರೊಫೆಸರ್ ಕಲಿಸುತ್ತಾರೆ. ಒಂದಷ್ಟು ಗಟ್ಟಿ ಅಕ್ಷರಗಳು ಉಳಿದು, ಶಾಶ್ವತ ಎನಿಸಿಕೊಳ್ಳುವ ಪ್ರಯತ್ನ ಮಾಡಬಹುದು.
-ಹರವು ಸ್ಫೂರ್ತಿ

ನಿಮ್ಮ ಪ್ರಶ್ನೆ ಇನ್ಬಾಕ್ಸ್ ಗೆ ಬಂದು ಬೀಳುವ ಹೊತ್ತಿಗೆ ನಾನು ಮತ್ತೆ ಎಡ್ವರ್ಡೊ ಗೆಲಿಯಾನೋ ಬರೆದ ‘ಚಿಲ್ಡ್ರನ್ ಆಫ್ ದಿ ಡೇಸ್’ ಪುಸ್ತಕ ಕೈಗೆತ್ತಿಕೊಂಡಿದ್ದೇನೆ.
ವಾಸ್ತವವನ್ನು ಇಷ್ಟೊಂದು ಕಾವ್ಯಾತ್ಮಕವಾಗಿ ಗ್ರಹಿಸಿ ಇಲ್ಲಿನ ದೈನಂದಿನತೆ ಐಹಿಕದಲ್ಲಿ ಕಾಲಸತ್ಯವನ್ನು ಕಾಲಾತೀತ ಸತ್ಯವನ್ನು ಗುರುತಿಸಿ ಇತಿಹಾಸವನ್ನು ಕಾವ್ಯದಂತೆ ಬರೆಯುವ ಇಂಥಾ ಇನ್ನೊಬ್ಬ ಲೇಖಕನನ್ನು ನಾನು ನನ್ನ ಓದಿನ ಮಿತಿಯಲ್ಲಿ ಓದಿಲ್ಲ. ಮತ್ತೆ ಮತ್ತೆ ನಾನು ಓದುವ ಪುಸ್ತಕ ಇದಾಗಿದೆ.
-ಸಂವರ್ಥ ಸಾಹಿಲ್
ಮನಸೆಂಬ ಮಾಯದ ಕುದುರೆ…




0 Comments