ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಕರೆ ಮೊರೆ ಕೇಳಿ ಬಾರೇ..

ನಿವೇದನೆ
ವನಿತಾ ಸತೀಶ 
ನೀ ಮುಡಿದ ಹೂಗಳೇ ಕಲ್ಲಾಗಿ
ಹೆಣೆದ ನಾಗರ ಜಡೆಯ ಎಳೆಗಳೇ
ಸುರುಳಿಯಾಗಿ
ಬೆನ್ನ ಹಿಂದೆ  ಜೀವನ ಭಾರ ಸ್ಥಿರವಾಗಿ
ಕಲ್ಲಾಗಿ ನಿಂತೆಯಾ ಗೆಳತಿ !
ಅಂಗಾಂಗ ಸಿಂಗರಿಸಿShe hair
ಆಭರಣ ತೊಡಿಸಿ
ನಲಿವು ಒಲವು ಹುಡುಕಾಟ !
ಬದುಕು ಬರೆದ ಬವಣೆ
ಕೇಳದೆ ಹೋದ ಕೆತ್ತಿ ನಿನ್ನ ಕಲೆಗಾರ
ಭಾವನೆಗಳ ಬೆಳಗಿ
ಇಲ್ಲದ ಸಲ್ಲದ ಕಾಮ ಕೆರಳಿ
ಮೈನವಿರೇಳಿಸಿ ಮದದಿಂದ
ಮುಂದೆ ಸಾಗಿದನೆ ಮುತ್ತಿಟ್ಟ ಚೋರ
ಹಿಂದೆ ನಿಂತವರೆ? !
ನೋಟದಲ್ಲೆ ನಿನ್ನ ನುಂಗಿ
ತೇಗಿದ ತೃಪ್ತಿ !
ಅಂತರ ನಂತರ !
ಅವರೆಂತು  ಕಂಡರು
ನಿನ್ನ ತಳಮಳ
ನರಳಿ ನಲುಗಿ ವಿರಹ  ತುಮುಲ
ನಾ ನಿನ್ನಂತೆ ನೊಂದ ಮನದ ಜೀವ !
ಬಾರೇ ! ಆತ್ಮಸಖಿ
ಈ ಕರೆ  ಮೊರೆ ಕೇಳಿ ಬಾರೇ
ಜೀವನವ ಜೀಕುತ್ತ ತೂಗಿ ಸಾಗೋಣ ಬಾ
ಜಗ ನಮ್ಮತ್ತ ತಿರುತಿರುಗಿ ನೋಡಲೆನ್ನುತ್ತ

ಎಸ್. ಕೃಷ್ಣಮೂರ್ತಿ

ಮುನಿಸೇಕೆ ಮನದನ್ನೆ ಮನದರಸಿ
ಕಾತುರದಿ ಬಂದಿರುವೆ ನಿನ್ನನರಸಿ

ಕಲ್ಲಾಯಿತೇಕೆ ಕೋಮಲ ಹೃದಯ ?
ಮರೆತೆಯಾ ಜೊತೆಯ ಮಧುರ ದಿನಗಳ ?
ನಕ್ಷತ್ರಗಳ ನೋಡುತ ಕಳೆದ ಕ್ಷಣಗಳ ?
ಮುಂಗಾರು ಮಳೆಯ ಕಚಗುಳಿಗಳ ?

click-kavite-shilabalikeನೀಲವೇಣಿಯೇ ನಿನ್ನ ಕೇಶದಲಿ ಬಂದಿ
ನಾನಾಗಿದ್ದೆ ನಿನ್ನೆದೆಯ ಪಂಜರದಲಿ,
ಸಂತಸದ ಆಗಸದಲಿ ಹಾರಾಡುತ
ಸಗ್ಗದ ಸೀಮೆಯಲಿ ತೇಲುತಲಿದ್ದೆ.

ತಿರುಗಿ ನೋಡೊಮ್ಮೆ ಕುಂಭನಿತಂಬೆ,
ಕಿರುಕಟಿಯ ಸಿರಿಮನದ ಚೆಲುವೆ,
ಬಿರುನುಡಿಯಾಡಿದ ತಪ್ಪು ನನ್ನದು
ಕ್ಷಮಿಸಲಾರೆಯ ನಿನ್ನೆದಯಲ್ಲಿ ನನ್ನನೊರಗಿಸಿ ?

 

ಗೋವರ್ಧನ್ ನವಿಲೇಹಾಳ್

ಅದೆಂಥಾ ಪ್ರೀತಿ ನಿನ್ನದು
ಶಿಲೆಯಾಗುವವರೆಗೂ ಅವನ
ಬರುವಿಕೆಗಾಗಿ ಕಾದು ನಿಂತಿದ್ದೀಯಲ್ಲ,
ಸರ್ವಾಂಗಗಳನೂ ಸಿಂಗರಿಸಿ.

ಶಿಲೆಯ ಮಹಲೊಳಗೆ
ಗರಡುಗಂಬಗಳ ಹೀಗೆ ದಿಟ್ಟಿಸಿ
ನೋಡುತ್ತಲೇ ಇದ್ದೀಯಲ್ಲ
ನಿನ್ನನೇ ನೀ ಮರೆತು
ಅವನು ಬಿಟ್ಟ ಏದುಸಿರ ಕುಡಿಯಲು.

ನೆರಳಲ್ಲೇನೂ ಅರಳದು
ಒಂಚೂರು ಮುಂದೆ ಬಾ
ಬಿಸಿಲಿಗೆ ಮೈಯೊಡ್ಡು
ನಿನ್ನ ಮರೆತು ಹೋದವನ ನೆನಪ
ಸ್ಮೃತಿಫಟಲದ ಕೋಣೆಯಿಂದ ಹೊರದೂಡು
ಮನಸಲ್ಲೊಂದು ಹೊಸ ಬೇರು ಚಿಗುರಿತು.

ಮೈಯನ್ನೊಮ್ಮೆ ಕೊಡವು
ಆ ದರಿದ್ರ ನೆನಪಿನ ಧೂಳು ನೆಲಕಾಣಲಿ
ಪಾದಗಳ ಮೇಲೆ ಬೀಳದಿರಲಿ,
ಬಿದ್ದರೆ ಆಗಾಗ ಕೆರೆದುಕೊಳ್ಳಬೇಕೆನಿಸೀತು
ಕೆಟ್ಟದ್ದಕ್ಕೆ ಅಂಟಿಕೊಳ್ಳುವ ಚಟ ಉಂಟು.

ಒಮ್ಮೆ ಹಿಂತಿರುಗಿ ನೋಡು; ಕಿವಿಕೊಡು
ನಿನಗೆಂದೇ ಕೈಮಾಡಿ ಕರೆದವರಿಗೆ
ಹೂ ನಗೆ ಬೀರಿದರಷ್ಟೇ ಸಾಕು
ಬದುಕು ಬದಲಿಸೀತು
ಚೈತನ್ಯದ ಹೊಳೆ ಹರಿದೀತು.

‍ಲೇಖಕರು Admin

11 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading