ಪ್ರಜಾವಾಣಿ ಕಥಾ ಸ್ಪರ್ಧೆ ಎನ್ನುವುದು ಇಡೀ ಕನ್ನಡ ಜಗತ್ತು ಕಾತರದಿಂದ ಎದುರು ನೋಡುವ ಸ್ಪರ್ಧೆ. ಕನ್ನಡದ ಇಂದಿನ ಬಹುತೇಕ ಮುಖ್ಯ ಕಥೆ, ಕಾದಂಬರಿಕಾರರು, ವಿಮರ್ಶಕರು ಹೊಮ್ಮಿದ್ದು ಈ ಸ್ಪರ್ಧೆಗಳಿಂದ. ಈಗ ಇದರ ಜೊತೆಗೆ ಕವಿತೆ ಹಾಗೂ ವರ್ಣಚಿತ್ರ ಸ್ಪರ್ಧೆ ಸಹಾ ಸೇರಿದೆ.
ಈ ಸಾಲಿನ ಪ್ರಶಸ್ತಿ ವಿತರಣೆಯನ್ನು ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಮುಖ್ಯಸ್ಥರಾದ ಕೆ ಎನ್ ಶಾಂತಕುಮಾರ್ ಹಾಗೂ ಕಾರ್ಯನಿರ್ವಾಹಕ ಸಂಪಾದಕರಾದ ಪದ್ಮರಾಜ ದಂಡಾವತಿ ಅವರು ಸಮಾರಂಭದಲ್ಲಿ ಬಾಗವಹಿಸಿದ್ದರು. ರಾಘವೇಂದ್ರ ಪಾಟೀಲ ಹಾಗೂ ಬಿ ಟಿ ಜಾಹ್ನವಿ ಮುಖ್ಯ ಅತಿಥಿಗಳಾಗಿದ್ದರು.
ಸ್ಪರ್ಧೆ ನಡೆಸುತ್ತಿರುವ ಪ್ರಜಾವಾಣಿ ಬಳಗಕ್ಕೆ ಹಾಗೂ ಬಹುಮಾನ ವಿಜೇತರಿಗೆ ಅವಧಿ ಅಭಿನಂದನೆಗಳು
0 ಪ್ರತಿಕ್ರಿಯೆಗಳು