ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇರುಳ ಕಣ್ಣಿನಿಂದ

ಹಿಂಗಬಹುದೇ ತನು ಸೂತಕ ಹಿಂಗಲಾರದೇ ಮನ ಸೂತಕ?
‘ಪ್ರಜಾವಾಣಿ’ ಗಾಗಿ ಬರೆಯುತ್ತಿದ್ದ ಅಂಕಣ ಇರುಳ ಕಣ್ಣಿನ ಆಯ್ದ ಭಾಗ
ಕಳೆದ ಒಂದು ವಾರದಲ್ಲಿ ಸುರಿದ ರಕ್ತ ಮತ್ತು ಹರಿದ ಕಣ್ಣೀರು ಮತ್ತೊಮ್ಮೆ ನೋವು ಮತ್ತು ಸಿಟ್ಟನ್ನು ಜೊತೆಜೊತೆಯಾಗಿಯೇ ಅನಂತ ರೂಪಗಳಲ್ಲಿ ಪ್ರಕಟಿಸಲು ಅವಕಾಶ ಕಲ್ಪಿಸಿದೆ.  ತಮ್ಮ ಜೀವಗಳನ್ನು ಲೆಕ್ಕಿಸದೆ ಇತರ ಜೀವಗಳನ್ನು ಕಾಯುವ ಛಲ ಮತ್ತು ಹೋರಾಟದ ಮನೋಧರ್ಮವನ್ನು ಪ್ರದರ್ಶಿಸಿದ ಜೀವಂತ ದೇವರುಗಳು ನಮ್ಮ ಬದುಕಿನ ಆದರ್ಶಗಳಾಗಿ ಇರುವಾಗಲೇ ನಮ್ಮನ್ನು ಕಾಯಬೇಕಾದ ನಾಯಕರು ಸಾವಿನ ಸೂತಕದ ಮನೆಯಲ್ಲಿ ತಮ್ಮ ಪ್ರದರ್ಶನಗಳ ಮೂಲಕ ಟೀಕೆಗೆ ಒಳಗಾಗುತ್ತಿದ್ದಾರೆ.
ಕೊಲ್ಲುವ ಜನರು ಇರುವ ಕಾಲದಲ್ಲಿಯೇ ಕಾಯುವವರು ನಮ್ಮ ನಡುವೆ ಇದ್ದಾರೆ ಎನ್ನುವ ಧೈರ್ಯದ ನಡುವೆಯೂ ಅಭದ್ರತೆ, ಆತಂಕ ನಮ್ಮನ್ನು ಇನ್ನಷ್ಟು ಆವರಿಸಿಕೊಂಡಿದೆ.  ನಮ್ಮ ಒಳಗೆ ಮತ್ತು ಹೊರಗೆ ಎರಡೂ ಕಡೆ ಇರುವವರಲ್ಲಿ ಕಾಯುವವರ ಜೊತೆಗೆ ಕೊಲ್ಲುವವರೂ ಇರುವುದೇ ನಮ್ಮ ಭಯಕ್ಕೆ ಕಾರಣ.  ಪರಂಪರೆಯ ಕಟ್ಟಡವೊಂದು ಕುಸಿಯುವುದಕ್ಕಿಂತ ಹೆಚ್ಚಾಗಿ ನೆಮ್ಮದಿಯ ಮನಸ್ಸುಗಳು ಕುಸಿಯುತ್ತಿರುವುದು ತುಂಬಾ ಆತಂಕದ ಸಂಗತಿ.  ಭಗ್ನಗೊಂಡ ಸೌಧವೊಂದನ್ನು ಮತ್ತೆ ಕಟ್ಟಬಹುದು. ಆದರೆ ಭಗ್ನಗೊಂಡ ಮನಸ್ಸುಗಳನ್ನು ಜೋಡಿಸುವುದು ಹೇಗೆ? ಅದನ್ನು ಇನ್ನಷ್ಟು ಭಗ್ನಗೊಳಿಸುವ ಹುನ್ನಾರಗಳು, ಸಾವಿನ ಮನೆಯಲ್ಲಿ ಗಳ ಎಣಿಸುವ ಪ್ರಯತ್ನಗಳು, ಸಂತಾಪವನ್ನು ಬಂಡವಾಳವನ್ನಾಗಿಸುವ ವ್ಯವಸ್ಥೆಗಳು ನಮ್ಮ ಭಯದ ಇನ್ನೊಂದು ಕರಾಳ ಮುಖವನ್ನು ದರ್ಶಿಸುತ್ತವೆ.
ಪೂರ್ಣ ಓದಿಗೆ – ಬಿ ಎ ವಿವೇಕ ರೈ

‍ಲೇಖಕರು avadhi

2 March, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading