ಕೃಷಿಯಲಿ… ಖುಷಿಯಲಿ…
ಇದು ಅಚ್ಚರಿಯ ಕೃಷಿಕತೆಗಳ ಆಗರ
‘ಸಹಜ ಮೀಡಿಯಾ’ ಪ್ರಕಾಶನದ ಮೊದಲ ಕೃತಿ
ಹಿರಿಯ ಪತ್ರಕರ್ತ, ಪ್ರಜಾವಾಣಿಯ ಆನಂದತೀರ್ಥ ಪ್ಯಾಟಿ ಅವರ ಹೊಸ ಪುಸ್ತಕ ಸಧ್ಯದಲ್ಲಿಯೇ ಬಿಡುಗಡೆಯಾಗಲಿದೆ

* ಅಮೆರಿಕದಲ್ಲಿ ಸಾಫ್ಟ್ವೇರ್ ತಂತ್ರಜ್ಞೆಯಾಗಿ ೧೧ ವರ್ಷ ಕೆಲಸ ಮಾಡಿದ ಪ್ರತಿಭಾ ಮರಳಿ ಮಣ್ಣಿಗೆ ಬಂದು ಹಾರೋಹಳ್ಳಿಯಲ್ಲಿ ನೇಗಿಲು ಹಿಡಿದಿದ್ದು;
* ಪತ್ರಕರ್ತನಾಗಿ ದೇಶಗಳನ್ನು ಸುತ್ತಿ, ಬಳಿಕ ಕೃಷಿಕನಾದ ಕೆನ್ಲವ್ ಹಣ್ಣುಗಳಿಗೆ ಹೊಸ ಜೀವ ಕೊಟ್ಟಿದ್ದು;
* ಕುಮಟಾದಲ್ಲಿ ಮೀನುಗಾರಿಕೆ ಅಧ್ಯಯನಕ್ಕೆ ಬಂದ ಬಂಗಾಳಿ ವಿಜ್ಞಾನಿ ಈಗ ಒಡಿಶಾದಲ್ಲಿ ಭತ್ತದ ಅತಿ ದೊಡ್ಡ ನಾಟಿ ತಳಿಬ್ರಹ್ಮನಾಗಿದ್ದು;
* ಆಂಧ್ರದ ಐಎಎಸ್ ಅಧಿಕಾರಿಯ ಮಗಳು ಒಡಿಶಾದಲ್ಲಿ ಹಳ್ಳಿಗರ ನೆರವಿನಿಂದ ಬಹುಮಹಡಿ ಕಾಡನ್ನು ನಿರ್ಮಿಸಿದ್ದು;
* ಕೃಷಿಯೇ ಗೊತ್ತಿಲ್ಲದ ಕುರಿಗಾರ ಮುತ್ತಣ್ಣ ಎಕರೆಗೆ 44 ಕ್ವಿಂಟಾಲ್ ಭತ್ತ ಬೆಳೆದು ನಿಜ ಜೀವನದ ’ಬಂಗಾರದ ಮನುಷ್ಯ’ನಾಗಿದ್ದು.
* ಪುಣೆಯಲ್ಲಿ ಪುರಾತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದ ದೀಪಿಕಾ ಪರಾಗತಜ್ಞೆಯಾಗಿ ಪಾಂಡಿಚೇರಿಯ ಕೈದೋಟದಲ್ಲಿ ತಳಿ ಸಂರಕ್ಷಣೆಯ ದೀಕ್ಷೆ ತೊಟ್ಟಿದ್ದು.
* ಉರುಗ್ವೆ ದೇಶದ ರಾಷ್ಟ್ರಪತಿಯಾಗಿದ್ದರೂ ಕೃಷಿಯಲ್ಲೇ ತೊಡಗಿರುವುದು;
* ಬಹುರಾಷ್ಟ್ರೀಯ ಕಂಪನಿಗಳಿಗಾಗಿ ಐದು ದೇಶಗಳಲ್ಲಿ ಸೇವೆ ಸಲ್ಲಿಸಿದ ಶ್ರೀವತ್ಸ ಮಾಗಡಿಯ ಸಮೀಪ ಕುಬ್ಜತಳಿಯ ದನಗಳ ಸಂಗೋಪನೆಗೆ ತೊಡಗಿದ್ದು… …
ಹೊಸಯುಗದ ಮಣ್ಣಿನ ಮಕ್ಕಳ ತರಾವರಿ ಕತೆಗಳ ಒಂದು ಪುಟ್ಟ ಕಣಜ ಇಲ್ಲಿದೆ.





ಓದಲು ಕಾತರ. ಕಾಯುವೆ. ಒಳ್ಳೆಯದಾಗಲಿ ಆನಂದ… 🙂