ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆದರ್ಶಗಳನ್ನು ಮೆಲುಕು ಹಾಕಲು..

ನನ್ನ ಅಪ್ಪ ‘ಅಗ್ರಾಳ ಪುರಂದರ ರ ‘ಸುಮಾರು ಎಂಬತ್ತೈದು ವರ್ಷ (೩೧ ಆಗಸ್ಟ್ ೧೯೧೬ ರಿಂದ ೫ ಮೇ ೨೦೦೧ ) ಬದುಕಿ , ಎರಡು  ಜಾಗತಿಕ ಮಹಾಯುದ್ಧಗಳನ್ನು, ಭಾರತದ ಸ್ವಾತಂತ್ರ್ಯ ಹೋರಾಟವನ್ನು, ಸ್ವಾತಂತ್ರ್ಯೋತ್ತರ ಭಾರತದ ಕನಸು-ಮುಖವಾಡಗಳನ್ನು ಕಂಡವರು. ಅತಿಸಣ್ಣ ರೈತರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಬರಹಗಾರರಾಗಿ, ಪತ್ರಕರ್ತರಾಗಿ, ಮೌಲ್ಯಗಳಿಗಾಗಿ ನಿರಂತರ ಹೋರಾಡುತ್ತಾ ಬಂದವರು. ೧೯೬೯ರ ವರೆಗೆ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ,ದೇಶಸೇವೆ ಮಾಡಿ, ರಾಜಕಾರಣದಿಂದ ಯಾವುದೇ ಪ್ರಯೋಜನ ಪಡೆಯದೇ ,ಧೀಮಂತವಾಗಿ ಬದುಕಿದವರು. ಸಾವಿನ ಕೊನೆಯ ಕ್ಷಣದ ವರೆಗೂ ಖಾದಿ ಬಟ್ಟೆಯಲ್ಲೇ ತನ್ನ ಬಟ್ಟೆಯನ್ನು ಸಾಗಿಸಿದವರು.
ಅವರು ಸಾಯುವ ಹದಿನೈದು ದಿನಗಳ ಮೊದಲು ಅವರ ಬಗ್ಗೆ ಮತ್ತು ಅವರ ಬರಹಗಳ ಸಂಕಲನ ರೂಪದಲ್ಲಿ , ನಾನು ಸಂಪಾದಿಸಿದ ‘ಅಗ್ರಾಳ ಪುರಂದರ ರೈ -ಸಮಗ್ರ ಸಾಹಿತ್ಯ ‘ (೨೦೦೧) ಗ್ರಂಥದಿಂದ ಅವರು ತಮ್ಮ ಬಗ್ಗೆ ಹೇಳಿಕೊಂಡ , ಅನುಭವದ ಮಾತುಗಳನ್ನು ಇಲ್ಲಿ ಕೊಟ್ಟಿದ್ದೇನೆ. ಮುಂದೆ ಅವರ ಕೆಲವು ಬರಹಗಳನ್ನೂ ಇಲ್ಲಿ ಕೊಡುತ್ತೇನೆ.ಇಪ್ಪತ್ತನೆಯ ಶತಮಾನದ ಆದರ್ಶಗಳನ್ನು ಮೆಲುಕು ಹಾಕಲು ಇದು ಒಂದು ಮಹತ್ವದ ದಾಖಲೆ ಎಂದು ಭಾವಿಸುತ್ತೇನೆ.
ಪೂರ್ಣ ಓದಿಗೆ ಭೇಟಿ ಕೊಡಿ- ಬಿ ಎ ವಿವೇಕ ರೈ

‍ಲೇಖಕರು avadhi

26 February, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading