ಅಶೋಕ ಹೊಸಮನಿ ಹೊಸ ಕವಿತೆ- ಉಡುಗೊರೆಯನ್ನಾಗಿ ಏನನ್ನು ಯಾಚಿಸಬಹುದು?

ಅಶೋಕ ಹೊಸಮನಿ


ಮರಣದ ದಿನ
ನಿನ್ನನ್ನ
ಸಂಧಿಸಿದಾಗಲೇ
ಚಂದಿರ ತುಂಡಾಗಿದ್ದ
ನಡುಮಧ್ಯಾಹ್ನದ ಗಂಟಲು ಆರಿತ್ತು

ನಿನ್ನ ಕೊನೆಯ ಭೇಟಿಗೆ ಪರಿತಪಿಸುವ ಜನಗಳು
ಹೂವಿನ ಹಾರಗಳ ಹಳಹಳಿಕೆಗಳು
ಕೊನೆಗೊಳ್ಳದಿರಲೆಂದು
ಹಾರೈಸುವ ತಾಯಂದಿರು
ಹಸುಳೆಗಳು
ನೋವಿನ ಬೀದಿಗಳು

ನಿನ್ನ ಮರಣದ ದಿನ
ಸವೆದ ಪಾದಗಳು
ಬತ್ತಿದ ಕಣ್ಣಾಲಿಗಳು
ದಣಿದಿಹ ತೋಳುಗಳು
ಏನನ್ನೂ ಉಣಲಾಗಲಿಲ್ಲ
ಉಡಲಾಗಲಿಲ್ಲ

ನಿನ್ನ ಮರಣದ ದಿನ
ಬಿರು ಬಿಸಿಲಿನ ತೋಳ ತೆಕ್ಕೆಯಲ್ಲಿ
ಮುದುಡಿಹ ಗುಬ್ಬಿಯ ಬಾಯಾರಿಕೆಯನ್ನ
ಹೇಗೆ ಮುಂದೂಡಬಲ್ಲೆ?

ನಿನ್ನ ಮರಣದ ದಿನ
ಗಾಯಗಳು ಕ್ಷಮೆಯಾಚಿಸಿದರೂ
ಇರುಳು ಕೊಂಡೊಯ್ದ ದಾರಿಗುಂಟ
ಕೊಲೆಗಾರನ ಸಂಚುಗಳು
ಏನಾಗಿದ್ದವು?
ಯಾವ ಗುರಿಯತ್ತ ಚಲಿಸಿದವು?

ನಿನ್ನ ಮರಣದ ದಿನ
ನಕ್ಷತ್ರದ ಬಿಕ್ಕಳಿಕೆ
ವೃತ್ತದ ಜನಜಂಗುಳಿಯ
ವಿದಾಯದ ಕಂಬನಿ
ಏನನ್ನು ಅರುಹೀತು?

ನಿನ್ನ ಮರಣದ ದಿನ
ನಿತ್ರಾಣ ಗಡಿಯಾರವು
ಉಸಿರಿಲ್ಲದ ಉಂಗುರವು
ಉಡುಗೊರೆಯನ್ನಾಗಿ
ಏನನ್ನು ಯಾಚಿಸಬಹುದು
ಸೃಷ್ಟಿಕರ್ತನಲ್ಲದ ಸೃಷ್ಟಿಕರ್ತನನ್ನ










‍ಲೇಖಕರು avadhi

February 23, 2024

ನಿಮಗೆ ಇವೂ ಇಷ್ಟವಾಗಬಹುದು…

ಹೊಸದೇನ ಬರೆಯಲಿ..?

ಹೊಸದೇನ ಬರೆಯಲಿ..?

ಮನುಷ್ಯ ಜಾತಿ ತಾನೊಂದೆ ವಲಂ ಡಾ. ಪದ್ಮಿನಿ ನಾಗರಾಜು - ಹೊಸದೇನ ಬರೆಯಲಿ ಯುದ್ದದ ಬಗ್ಗೆ ಸಾವಿನ ಸೂತಕವಲ್ಲದೆ ಗೆಲುವು ಒಬ್ಬರಿಗೆ ಸೋಲು...

ಆಪ್ತ ನಗುವೊಂದು ಅಪರಿಚಿತವಾದಾಗ

ಆಪ್ತ ನಗುವೊಂದು ಅಪರಿಚಿತವಾದಾಗ

ಅನಿತಾ ಪಿ. ತಾಕೊಡೆ ** ಅದುರುವ ರೆಪ್ಪೆಯೊಳಗಿನ ಕಣ್ಣ ಬಿಂಬದಲಿಕಂಡೂ ಕಾಣದಂತಿರುವ ನಿನ್ನೆಗಳು ಕೂಡಿಕೊಂಡುಇರುಳ ಮರೆಯಲಿರುವ ಛಾಯೆಗೆ ಬಣ್ಣ...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This