**
ಅಮೂಲ್ಯ ಪುಸ್ತಕ ಮಳಿಗೆಯಲ್ಲಿ ವಿಶ್ವ ಪುಸ್ತಕ ದಿನಾಚಾರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಅಮೂಲ್ಯ ಪುಸ್ತಕ ಪ್ರಕಾಶನದ 2 ನೇ ವರ್ಷದ ಸಂಭ್ರಮ ಮತ್ತು 25 ನೇ ಪುಸ್ತಕ ಪ್ರಕಟಣೆಯ ಸಂತೋಷವನ್ನು ಸಂಭ್ರಮಿಸಲಾಯಿತು.
ಖ್ಯಾತ ಮನಃಶಾಸ್ತ್ರ ಪ್ರಾಧ್ಯಾಪಕರಾದ ಡಾ ಎಂ ಬಸವಣ್ಣ ಅವರು ‘ಸಾಹಿತ್ಯ ಮತ್ತು ಮನೋವಿಜ್ಞಾನ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕೃಷ್ಣ ಚೆಂಗಡಿ, ಸುಭಾಷ್ ರಾಜಮಾನೆ, ಹಿರಿಯ ಕಾನೂನು ತಜ್ಞರಾದ ವೈ ಜಿ ಮುರಳೀಧರನ್, ಹಿರಿಯ ಕವಿಯತ್ರಿ ಪಿ ಚಂದ್ರಿಕಾ, ಚಾಂದ್ ಪಾಶಾ, ಪ್ರವೀಣ ಕುಮಾರ್ ಜಿ, ಶ್ರೀಶೈಲ ಮಗದುಮ್, ಪ್ರಸನ್ನ ಕುಮಾರ್ ಹಾಗೂ ಇನ್ನಿತರ ಕವಿಗಳು ಸಾಹಿತ್ಯ ಆಸಕ್ತರು ಪಾಲ್ಗೊಂಡಿದ್ದರು.
0 ಪ್ರತಿಕ್ರಿಯೆಗಳು