ನನ್ನ ಗುರುಗಳಾದ ಅಂಶಿ ಪ್ರಸನ್ನ ಕುಮಾರ್ ಅವರ ‘ಅನ್ನದಾತರ ಮತ್ತಷ್ಟು ಕಥೆಗಳು’ ಪುಸ್ತಕ ಇದೇ ಭಾನುವಾರ ಬಿಡುಗಡೆ. ಬಿಡುಗಡೆಗೆ ಮುನ್ನವೇ ನನಗೊಂದು ಪುಸ್ತಕ ಕೊಟ್ಟರು.
ವೀರಪ್ಪನ್ ಅಟ್ಟಹಾಸಗಳನ್ನು ವರದಿ ಮಾಡುತ್ತಲೇ ಬೆಳೆದವರು ಅಂಶಿ ಪ್ರಸನ್ನ ಕುಮಾರ್. ನಾನು ಸೇರಿದಂತೆ ಸರಿ ಸುಮಾರು 50 ಪತ್ರಕರ್ತರ ನ್ನು ಬೆಳೆಸಿದ್ದಾರೆ ಅಂಶಿ ಸರ್.
ಅವರ ನೈತಿಕತೆಯ ಶಕ್ತಿ ನನಗೆ ಸದಾ ಸ್ಪೂರ್ತಿ. ಆದಷ್ಟು ಬೇಗ ಪತ್ರಿಕೋದ್ಯಮದ ಬಗ್ಗೆ , ವೀರಪ್ಪನ್ ವರದಿಗಾರಿಕೆ ಅನುಭವಗಳ ಬಗ್ಗೆ ಬರೆಯಿರಿ ಸರ್ ಅಂತ ಕೇಳಿಕೊಂಡೆ.
ಅನ್ನದಾತರ ಆತ್ಮಕಥೆಗಳು ಪುಸ್ತಕಕ್ಕಿಂತ ಹೆಚ್ಚು ಜನಪ್ರಿಯತೆ ಎರಡನೇ ಪುಸ್ತಕಕ್ಕೆ ಸಿಗಲಿ ಎಂದು ಹಾರೈಸುವೆ.
ಈ ಫೋಟೊ ಕ್ಲಿಕ್ಕಿಸಿದ ಗೆಳೆಯ ಕೆಪಿ ಗೂ ಥ್ಯಾಂಕ್ಸ್
-ಅವಿನಾಶ್ ಎಚ್ ಎಸ್





0 Comments