ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಆರೀಫ್ ರಾಜಾ ಬರೀತಾರೆ-
(ಕಾರ್ಯಕ್ರಮ ಆಯೋಜಕರಾದ ಕುಮಾರ್ ಕೆ ಎಚ್ ಅವರಿಗೆ ಮೇಲ್ ಮಾಡಿದ ಯಥಾವತ್ತು ಪ್ರತಿ.)
ಮಾನ್ಯ ರಂಗೋತ್ರಿಯ ಕುಮಾರ್ ಅವರೇ,
ನಿಮ್ಮ ವೈಯಕ್ತಿಕ ಪರಿಚಯ ನನಗೆ ಇಲ್ಲ. ಪ್ರಥಮ ಯುವ ಕವಿ ಸಮ್ಮೇಳನದ ಅಧ್ಯಕ್ಷರು ನೀವಾಗಿದ್ದೀರಿ ಎಂದು ನೀವು ದೂರವಾಣಿ ಮೂಲಕ ತಿಳಿಸಿದ್ರಿ. ಆಗ ನಾನು ನೀವು ಯಾರು ಎಂದು ಪ್ರಶ್ನಿಸಿದೆ. ಬೆಂಗಳೂರಿನಲ್ಲಿ ಕಳೆದ 20 ವರ್ಷಗಳಿಂದ ಕಾರ್ಯಕ್ರಮ ಮಾಡಿಕೊಂಡು ಬಂದಿದೀನಿ ಎಂದು ನೀವು ತಿಳಿಸಿದ್ರಿ. ಬೆಂಗಳೂರಿನ ಹಿರಿಯ ಸಾಹಿತಿಗಳ ಸೂಚನೆ ಮೇರೆಗೆ ನಿಮ್ಮನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಿಕರಿಸಿದ್ದೀರಿ.
ತಕ್ಷಣ ಒಪ್ಪಿಕೊಳ್ಳದ ನಾನು ಸ್ವಲ್ಪ ಕಾಲಾವಕಾಶ ಕೇಳಿದೆ. ನೀವು ಹೇಳಿದ ಹಿರಿಯರಲ್ಲೊಬ್ಬರನ್ನು ಖುದ್ದಾಗಿ ಸಂಪರ್ಕಿಸಿ ಖಚಿತಪಡಿಸಿಕೊಂಡ ನಂತರವೇ ನಾನು ಸಮ್ಮೇಳನದ ಅಧ್ಯಕ್ಷತೆಯನ್ನು ಒಪ್ಪಿಕೊಂಡದ್ದು.
ಆದರೆ, ಈಗ ನಿಮ್ಮ ಮೇಲಿನ ಗಂಭೀರ ಆರೋಪಗಳನ್ನು ದಾಖಲೆ ಸಮೇತ ನೋಡಿದ ಮೇಲೂ ಅನಗತ್ಯ ಚರ್ಚೆ ನಗಣ್ಯ ಎಂದು ತೋರುತ್ತದೆ. ಕಾರ್ಯಕ್ರಮಕ್ಕೆ ಬರಲಾಗದ್ದಕ್ಕೆ ಕ್ಷಮೆ ಇರಲಿ. ನನಗೀಗಾಲೇ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ತಿಳಿಸಿದ ಎಲ್ಲಾ ಯುವ ಲೇಖಕರ ಮೇಲ್ ಗಳನ್ನು ನಿಮಗೆ ಫಾರ್ವರ್ಡ ಮಾಡಿದ್ದೇನೆ.
ಬಹುತೇಕರು ಫೋನ್ ಹಾಗೂ ಫೇಸ್ಬುಕ್ಕಿನ ಮೂಲಕ ಬರಲಾಗದ್ದನ್ನು ತೋಡಿಕೊಂಡಿದ್ದಾರೆ. ಯಾರಿಗೋಸ್ಕರ ಕಾರ್ಯಕ್ರಮ ಮಾಡುತ್ತಿದ್ದೇವೋ ಅವರೇ ಬರುತ್ತಿಲ್ಲವೆಂದ ಮೇಲೆ ಕಾರ್ಯಕ್ರಮಕ್ಕೆ ಯಾವ ಅರ್ಥವೂ ಇಲ್ಲ. ದಯವಿಟ್ಟು ಹಠ ಮಾಡಿ ಮುಂದುವರೆದು ಮುಖಭಂಗ ಅನುಭವಿಸಬೇಡಿ. ನನಗೂ ಮರ್ಯಾದೆಗೇಡು ಮಾಡಬೇಡಿ.
ಟಿ ಎಸ್ ಗೊರವರ ಅಭಿಪ್ರಾಯ ಇಲ್ಲಿದೆ
ನಟರಾಜ್ ಹುಳಿಯಾರ್ ಸರ್ ತುಂಬಾ ಜನ ಯುವಕರನ್ನು ಹುರುದುಂಬಿಸುತ್ತಾ ಪ್ರತಿಭೆಯನ್ನು ಹೊರಹಾಕಲು ಕಾರಣರಾದವರು ಎಂಬುದನ್ನು ನನ್ನ ಗೆಳೆಯರು ಹೇಳಿದ್ದಾರೆ. ಅದು ನಿಜವೂ ಹೌದು.
ನಟರಾಜ್ ಹುಳಿಯಾರ್ ಸರ್ ಬಗ್ಗೆ ”ಗಾಳಿ ಬೆಳಕು” ವಿನಷ್ಟೇ ಗೌರವ ನನಗೂ ಇದೆ ಎನ್ನುತ್ತಲೇ..
ಕುಮಾರ್ ಎಂಬ ವ್ಯಕ್ತಿಯ ಬಗ್ಗೆ ನನ್ನನ್ನೂ ಸೇರಿದಂತೆ ಹಲವರಿಗೆ ಗೊತ್ತಿಲ್ಲ. ಆದರೆ ರಾಜ್ಯ ಮಟ್ಟದ ಒಂದು ಕಾರ್ಯಕ್ರಮ ನಡೆಸುತ್ತಾ ಇದ್ದಾರೆ ಅಂದ ಮೇಲೆ ತಿಳಿಯುವ ಅವಶ್ಯಕತೆ ಖಂಡಿತಾ ಇರುತ್ತದೆ.
ಬಹುಷಃ Arif Raja ರವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಅನ್ನಿಸಿ,ಅವರೂ ಪರ್ಸನಲ್ ಆಗಿ ತೆಗೆದುಕೊಂಡಿರಬೇಕು.. ಇವೆಲ್ಲಾ ಒಂದು ಅಚ್ಚರಿ ಅನ್ನಿಸದಷ್ಟು ಮುಂದೆ ಸಾಗಿದ್ದೇವೆ.
ಮತ್ತೊಬ್ಬ ಹಿರಿಯರ ಅಭಿಪ್ರಾಯವೆಂದರೆ ಆರೀಫರನ್ನು ಅಭಿನಂದಿಸುತ್ತಲೇ ಮತ್ತೆ ಬೇರೆ ಕಾರ್ಯಕ್ರಮವನ್ನು ರೂಪಿಸಿ ಆರೀಫರಿಗಾಗಿರುಬಹುದಾದ ಮುಜುಗರವನ್ನು ತಪ್ಪಿಸ ಬಹುದಾಗಿದೆ.
0 ಪ್ರತಿಕ್ರಿಯೆಗಳು