ಮೇಫ್ಲವರ್ ಮೀಡಿಯಾ ಹೌಸ್ ಮತ್ತು ವಾರ್ತಾ ಇಲಾಖೆ ಹಮ್ಮಿಕೊಂಡಿದ್ದ ಡಾ ರಾಜ್- ನೆನಪಿನ ದೋಣಿಯಲ್ಲಿ ಕಾರ್ಯಕ್ರಮದ ನೋಟ ಇಲ್ಲಿದೆ. ಔಟ್ಲುಕ್ ಸಹ ಸಂಪಾದಕ ಸುಗತ ಶ್ರೀನಿವಾಸರಾಜು, ವಾರ್ತಾ ಇಲಾಖೆಯ ನಿರ್ದೇಶಕ ಎನ್ ಆರ್ ವಿಶು ಕುಮಾರ್, ಚಿತ್ರ ನಟ ರಾಘವೇಂದ್ರ ರಾಜಕುಮಾರ್, ಜಿ ಎನ್ ಮೋಹನ್ ಕಾರ್ಯಕ್ರಮದಲ್ಲಿದ್ದರು. ಮಾಯಾ ಚಂದ್ರ ಅವರ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.
ನೀವು ಬರಲೇಬೇಕು..
ಈ ಕಾರ್ಯಕ್ರಮದಲ್ಲಿ ನಾನೂ ಪಾಲ್ಗೊಂಡಿದ್ದೆ .ಸುಗತರು ಭಾಷೆಯ ಕುರಿತು ಮಾತನಾಡಿದುದು ತುಂಬಾ ಅರ್ಥಪೂರ್ಣವಾಗಿತ್ತು .ಸಾಕ್ಷ್ಯ ಚಿತ್ರ ನೋಡುತ್ತಿರುವಾಗ ನನ್ನ ಬಳಿ ಕೂತಿದ್ದ ರಾಘವೇಂದ್ರ ರಾಜಕುಮಾರ್ ಅವ್ರ ಗಮನಿಸುತ್ತಿದ್ದೆ ,ಮಗು ಮತ್ತು ತಾಯಿಯ ಭಾವನೆಗಳನ್ನು ಹೊರಚೆಲ್ಲುತ್ತಿದ್ದರು .ದುಃಖದ ಹಾಡುಗಳಿಗೆ ಅವರ ಕಣ್ಣು ತೇವ ಗೊಲ್ಲುತ್ತಿದ್ದವು ಹಾಗೆಯೇ ಪ್ರಜಾ ಪ್ರತಿಭೆ ರಾಜ್ ಪ್ರೀತಿ ,ಪ್ರೇಮ ಶುಭ ಕಾಮನೆಗಳ ಸನ್ನಿವೇಶದ ದೃಶ್ಯ ಬಂದಾಗ ತುಟಿಗಳರಲಿ ಸಂಬ್ರಮವ ಸೂಸುತ್ತಿದ್ದವು . ನನ್ನ ಬಳಿ ಕ್ಯಾಮೆರಾ -ಇದ್ದಿದ್ದರೆ ಆ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರರ ಸುಖ,ದುಃಖ,ನೋವು ನಲಿವು ,ವಿಷಾದ ,ಸಂಭ್ರಮ ,ಬೆರಗು ,ಸಂತ ಮನಸ್ತಿತಿ ಇನ್ನು ಹೇಳಲಾಗ ಕಾಣಲಾಗದ ಭಾವ ಭಾವನೆಗಳನ್ನು ಸಹಜವಾಗಿ ಸೆರೆಹಿಡಿಯಲು ಸಾದ್ಯವಿತ್ತು . ಕಾರ್ಯ ಕ್ರಮ ಚೆನ್ನಾಗಿತ್ತು ಮೇ ಫ್ಲವರ್ ಬಳಗಗಕ್ಕೆ ಎದೆಯಾಳದ ಕೃತಜ್ಞತೆಗಳು .
@ನಾಗತಿಹಳ್ಳಿರಮೇಶ
ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು.ನನಗೆ ಎಲ್ಲರಿಗಿಂತಲೂ ರಾಘು ಮಾತೇ ತುಂಬಾ ಇಷ್ಟ ಆಯ್ತು.ಸಾಕ್ಷ್ಯಚಿತ್ರ ಇಂಗ್ಲೀಷ್ ನಲ್ಲಿದ್ದಿದ್ದು ಅಷ್ಟು ಇಷ್ಟ ಆಗಿಲ್ಲ.ಆದರೆ ಕನ್ನಡೇತರರಿಗೂ ಈ ರೀತಿಯಾಗಿ ಡಾ||ರಾಜ್ ಬಗ್ಗೆ ಗೊತ್ತಾಗೋದಾದ್ರೆ ಅದು ಒಳ್ಳೇದೆ.
ಮೋಹನ್ ಅವ್ರೇ ಒಂದು ಚಿಕ್ಕ ಕಂಪ್ಲೇಂಟು.ಕಾರ್ಯಕ್ರಮದ ಮಧ್ಯೆ ಚಾಕಲೇಟ್ ಹಂಚೋದು ನನ್ಗ್ಯಾಕೋ ಅಷ್ಟು ಸರಿ ಅನ್ನಿಸಿಲ್ಲ.ನಾನೂ ಎರಡು ಚಾಕಲೇಟ್ ಗುಳುಂ ಮಾಡಿದ್ದೇನೆ ಅದಕ್ಕೆ ಕ್ಷಮೆ ಇರಲಿ.
ಕಾರ್ಯಕ್ರಮದ ಮಧ್ಯೆ ಎಲ್ಲರೂ ಚಾಕಲೇಟ್ ಸಿಪ್ಪೆ ಬಿಡಿಸಬೇಕಾದರೆ ಪರಪರ ಶಬ್ದ ಆಗುತ್ತೆ .ಇದು ಕಾರ್ಯಕ್ರಮಕ್ಕೆ ಅಡ್ಡಿ ಮಾಡುತ್ತೆ.ಚಾಕಲೇಟ್ ತಗೊಂಡು ಕಾರ್ಯಕ್ರಮ ಮುಗಿದ ಮೇಲೆ ತಿನ್ನೋಣ ಅಂದ್ರೆ ಹಾಳಾದ್ದು ಕಂಟ್ರೋಲ್ ಮಾಡೋಕೆ ಆಗಲ್ಲ:(
ಇದು ನನ್ನ ಅನಿಸಿಕೆ .ಯಾವುದಕ್ಕೂ ಸೆಕೆಂಡ್ ಒಪಿನಿಯನ್ ತಗೊಳ್ಳಿ.
-ಸಂದೀಪ್ ಹೇಳಿದ್ದು ಸರಿ. ಇನ್ನು ಮೇಲೆ ಕಾರ್ಯಕ್ರಮದ ಮಧ್ಯೆ ಚಾಕಲೇಟ್ ಹಂಚಬೇಡಿ. ಚಾಕಲೇಟ್ ಹಂಚೋ ಸಮಯದಲ್ಲಿ ಕಾರ್ಯಕ್ರಮ ಮಾಡಿ.
SCORPIO ಚೆನ್ನಾಗಿದೆ ನಿಮ್ ತಲೆ .ನೀವು ಯಡ್ಯೂರಪ್ಪ್ ನೋರ್ ಕ್ಯಾಬಿನೇಟ್ ನಲ್ಲಿರ್ಬೇಕಾಗಿತ್ತು .