’ಸಾವಕಾಶವಾಗಿ ಉರಿಯಿರಿ, ತುಸುವೇ…’ ಎಂ ಎಸ್ ರುದ್ರೇಶ್ವರಸ್ವಾಮಿ ಕವಿತೆ

– ಎಂ ಎಸ್ ರುದ್ರೇಶ್ವರಸ್ವಾಮಿ

(…He looked at her, her heart is filled with love. They were

together and disappeared early in the morning)

ಇರುಳು ಜಾರಿದೆ
ಸೆರಗು ಹಾಸಿ…
ಉರಿಯುತ್ತಿವೆ ಹಚ್ಚಿಟ್ಟ ಜೋಡಿ-
ಹಣತೆ. ಮೆಲ್ಲಗೆ
ಹೇಳುತ್ತಿದೆ ಹೆಣ್ಣು
ಗಂಡು ದೀಪ-
ಕ್ಕೆ, ತುಸು ಹೊತ್ತು ಇರಿ ಸುಮ್ಮನೆ
ಮನೆಯಾಕೆ ಈಗತಾನೆ
ಕಣ್ಣುಮುಚ್ಚಿದ್ದಾಳೆ, ಆವರಿಸಿಲ್ಲ
ಅವಳನ್ನು ಇನ್ನೂ
ನಿದ್ರೆ, ಹೇಳಿಕೊಳ್ಳದ ಮಾತು ಇವೆ
ಅವಳೆದೆಯಲ್ಲಿ
ಒಂಟಿ ನಕ್ಷತ್ರ ಇದ್ದ
ಹಾಗೆ ಆಗಸದಲ್ಲಿ.
ಗೊತ್ತು ನನಗೆ, ಹೇಳಿತು ಗಂಡು
ದೀಪ. ಗಾಳಿ ಮೆಲ್ಲಗೆ
ಬೀಸಿದರೂ ಎಲ್ಲ
ತಿಳಿಯುತ್ತದೆ,
ಅವಳೆದೆ ಒಡೆದು ಹೋಗಿದೆ.
ಅಷ್ಟು ದೂರದ
ಮಾತು ನೆನಪಿಗೆ ಬಂದು
ಹೆಣ್ಣು ಹೇಳಿತು
ಸಾವಕಾಶವಾಗಿ ಉರಿಯಿರಿ, ತುಸುವೇ
ನನ್ನತ್ತ ಬಾಗಿ
ಜೊತೆಗೆ ಉರಿಯೋಣ
ಜೊತೆಗೇ
ಇನ್ನಿಲ್ಲದಂತೆ ಇಲ್ಲವಾಗೋಣ…
 

‍ಲೇಖಕರು G

July 6, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ಎಂ.ಎಸ್. ರುದ್ರೇಶ್ವರಸ್ವಾಮಿ

    ಪದ್ಯ ಓದಿ, ಇಷ್ಟಪಟ್ಟ ಮತ್ತು ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಜೊತೆಗೆ ಪದ್ಯ ಪ್ರಕಟಿಸಿದ ‘ಅವಧಿ’ ಮತ್ತು ಶ್ರೀಮತಿ ಸಂಧ್ಯಾ ರಾಣಿ ಅವರಿಗೆ ಕೃತಜ್ಞತೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: