ಸಂಕಥನ ಪ್ರಣಾಳಿಕೆ ೨೦೨೦
ಪ್ರಣಾಳಿಕೆಗಳನ್ನು ಸಿದ್ದಮಾಡಿಕೊಂಡು ಕೆಲಸ ಮಾಡುವುದು ರಾಜಕೀಯ ಪಕ್ಷಗಳಿಗೆ ಮಾತ್ರ ಸೀಮಿತವಾಗಬಾರದು. ಅದು ಎಲ್ಲ ಕ್ಷೇತ್ರಗಳಿಗೂ ಹರಡಿಕೊಳ್ಳಬೇಕು. ಆದ್ರೆ ರಾಜಕೀಯ ಪಕ್ಷಗಳಂತೆ ಭ್ರಷ್ಟವೂ ದುಷ್ಟವೂ ಆಗಬಾರದಷ್ಟೇ!
ಕಳೆದ ಒಂದು ದಶಕದಿಂದ ಸೃಜನ, ಅನೇಕ, ಸಂಕಥನ ಅನ್ನುವ ಹೆಸರುಗಳಿಂದ ಸಾಹಿತ್ಯದ ಸಣ್ಣ ಸಣ್ಣ ಕೆಲಸಗಳನ್ನು ಮಾಡುತ್ತಿದ್ದ ‘ಸಂಕಥನ’ವು ೨೦೨೦ರಿಂದ ಚೂರು ವಿಶಾಲ ಹರಹಿನಲ್ಲಿ ಕೆಲಸ ಮಾಡಲು ತೊಡಗಿದೆ. ಅದಕ್ಕಾಗಿ ನಾವೆಲ್ಲಾ ಗೆಳೆಯರು ಒಂದು ಪ್ರಣಾಳಿಕೆಯನ್ನು ಸಿದ್ದಪಡಿಸಿದ್ದೇವೆ ಮತ್ತು ೨೦೨೦ ರ ಮೊದಲ ದಿನವಾದ ಇಂದು ಅದನ್ನು ಬಿಡುಗಡೆಗೊಳಿಸುತ್ತಾ ಇದ್ದೇವೆ.
ಬನ್ನಿ ನಮ್ಮ ಜೊತೆಯಾಗಿ ಈ ಪ್ರಣಾಳಿಕೆಯನ್ನು ಕಾರ್ಯರೂಪಕ್ಕೆ ತರೋಣ..
– ರಾಜೇಂದ್ರ ಪ್ರಸಾದ್
]
ಸಂಕಥನದ ಬೆಂಬಲವಾಗಿರುವ ಅವಧಿ ಮತ್ತು ಜಿ ಎನ್ ಮೋಹನ್ ಅವರಿಗೆ ನನ್ನಿ 🙂