ಸಂಚಯ ತಂಡ ಮಹಾನ್ ನಾಟಕಕಾರ ಶೇಕ್ಸ್ ಪಿಯರ್ ಗೆ ವಿಭಿನ್ನವಾಗಿ ನಮನ ಸಲ್ಲಿಸಿತು. ಐದು ತಂಡಗಳು ಒಟ್ಟಿಗೆ ಕಲೆತು ಐದು ನಾಟಕ ಪ್ರದರ್ಶಿಸುವುದರ ಜೊತೆಗೆ ಷೇಕ್ಸ್ ಪಿಯರ್ ನೆನಪು, ಕವಿತೆ ವಾಚನದ ಮೂಲಕ ರಂಗು ತುಂಬಿತು.
ಜಿ ಕೆ ಗೋವಿಂದರಾವ್ ಹಾಗೂ ಜಿ ಎನ್ ಮೋಹನ್ ಐದೂ ನಾಟಕಗಳ ನಿರ್ದೇಶಕರ ಜೊತೆ ಸೇರಿ ಉತ್ಸವವನ್ನು ಉದ್ಘಾಟಿಸಿದರು.
ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ ಸಂಕಲನದ ಜಿ ಎನ್ ಮೋಹನ್ ಅವರು ಷೇಕ್ಸ್ ಪಿಯರ್ ಸುತ್ತಾ ಬರೆದಿರುವ ಕವಿತೆಗಳನ್ನು ವಾಚಿಸಿದರು. ಜಿ ಕೆ ಗೋವಿಂದ ರಾವ್ ಷೇಕ್ಸ್ ಪಿಯರ್ ನಾಟಕಗಳ ಪಾತ್ರಗಳ ಮನೋಲೋಕವನ್ನು ಬಿಚ್ಚಿಟ್ಟರು.
ಗಣೇಶ ಶೆಣೈ, ಗೌರಿ ದತ್ತು, ಎನ್ ಮಂಗಳಾ, ಮಾಲತೇಶ ಬಡಿಗೇರ್, ದಾಕ್ಷಾಯಿಣಿ ಭಟ್, ಶಶಿಧರ ಬಾರಿಘಾಟ್, ಉತ್ಥಾನ ಉಪಸ್ಥಿತರಿದ್ದರು
ಅಭಿನಯ ತರಂಗ, ದೃಶ್ಯ , ಸಮಷ್ಟಿ , ಸಂಚಾರಿ ಹಾಗೂ ಸಂಚಯ ಶೇಕ್ಸ್ ಪಿಯರ್ ನ ನಾಟಕಗಳನ್ನು ಪ್ರದರ್ಶಿಸಿತು
ಅದರ ಒಂದು ನೋಟ ಇಲ್ಲಿದೆ
0 ಪ್ರತಿಕ್ರಿಯೆಗಳು