ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸರಾಜು ನೆನಪಿನ ಜಾತ್ರೆ

mestrucoverfinal22

ಚಿ. ಶ್ರೀನಿವಾಸರಾಜು ಕಟ್ಟಿದ ಪ್ರತಿಭೆ ಗೂಡು ಚಳಿ ಗಾಳಿಯನ್ನು ತಡೆದುಕೊಂಡು ಉಳಿದಿದೆ. ಅಂತಹ ಗೂಡಿನ ಗಟ್ಟಿ ಕಾಳುಗಳಾದ ಸಂಚಯದ ಡಿ ವಿ ಪ್ರಹ್ಲಾದ್, ಅಭಿನವದ ರವಿಕುಮಾರ್ ರಾಜು ಮೇಷ್ಟ್ರ ನೆನಪನ್ನು ಕಾಪಿಡುವ ಹಲವಾರು ಕೆಲಸ ಮಾಡುತ್ತಿದ್ದಾರೆ.

ವಿಚಿತ್ರವೆಂದರೆ ಶ್ರೀನಿವಾಸ ರಾಜು ಅವರ ಹುಟ್ಟು ಹಾಗೂ ಸಾವು ಒಂದೇ ದಿನಾಂಕದಂದು ಸಂಭವಿಸಿದೆ. ನವೆಂಬರ್ 28 ಹುಟ್ಟಿದ ದಿನ ಡಿಸೆಂಬರ್ 28 ಅವರು ಇಲ್ಲವಾದ ದಿನ. ಈ ಎರಡೂ ದಿನಗಳಂದು ಅವರ ನೆನಪಿನ ಜಾತ್ರೆ ನಡೆಯಲಿದೆ.

ಈ 28 ರಂದು ಪ್ರಹ್ಲಾದ್ ಬೆಂಗಳೂರಿನಲ್ಲಿ ಶ್ರೀನಿವಾಸರಾಜು ಕುರಿತ ಕವಿತಾ ಗುಚ್ಚವನ್ನು ಹೊರತರುತ್ತಿದ್ದಾರೆ. 28 ಕವಿತೆಗಳನ್ನು ಒಳಗೊಂಡ ‘ನಮ್ಮ ಮೇಷ್ಟ್ರಿಗೆ’ ಸಂಕಲನ ಮುದ್ದಾಗಿ ಹೊರಬಂದಿದೆ. ಅದರಲ್ಲೂ ಆ ಸಂಕಲನದ ರಕ್ಶಾಕವಚದಲ್ಲಿರುವ ಎರಡು ಛಾಯಾಚಿತ್ರಗಳು ಇನ್ನಿಲ್ಲದಂತೆ ಕಾಡುತ್ತವೆ.

ಅದೇ ದಿನ ಧಾರವಾಡ ದಲ್ಲ್ಲಿ ರವಿಕುಮಾರ್ ಅವರು ಶ್ರೀನಿವಾಸ ರಾಜು ಹಾಗೂ ಜಿ ಪಿ ರಾಜರತ್ನಂ ಇಬ್ಬರನ್ನೂ ನೆನಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಡಿಸೆಂಬರ್ 28 ರಂದು ಶ್ರೀನಿವಾಸರಾಜು ಅವರ ಸಮಗ್ರ ಕೃತಿಯನ್ನು ಹೊರತರುವ ಆಲೋಚನೆಯಲ್ಲಿದ್ದಾರೆ.

‍ಲೇಖಕರು avadhi

25 November, 2008

2 Comments

  1. sunanda kadame

    Tumba valleya kelasa. All the best.
    -sunanda kadame

  2. kaligananath gudadur

    nija mestaru andare nammantaha nooraru
    hudagarige bareyalu bennu tattuttiddaru.
    kaligananath gudadur

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading