ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶುದ್ಧಗೆ ಬಗ್ಗೆ ಒಂದು ಶುದ್ಧ ಚರ್ಚೆ

ಕನ್ನಡ ಭಾಷಾ ಚರಿತ್ರೆಯ ಬಗ್ಗೆ ಬಂದ ಹೊಸ ನಾಟಕ- ‘ಶುದ್ದಗೆ’. ಈ ನಾಟಕವನ್ನು ಡಾ. ಎಸ್.ವಿ. ಕಶ್ಯಪ್ ರಚಿಸಿದ್ದು ಸುಷ್ಮಾ ಪ್ರಶಾಂತ್ ನಿರ್ದೇಶಿಸಿದ್ದಾರೆ . ಈ ಪುಸ್ತಕದ ಬಿಡುಗಡೆ ಹಾಗು ನಾಟಕ ಪ್ರದರ್ಶನ ಬೆಂಗಳೂರಿನಲ್ಲಿ ಜರುಗಿತ್ತು ಈ ಬಗ್ಗೆ ಅವಧಿಯಲ್ಲಿ ಟಿಪ್ಪಣಿ ಪ್ರಕಟವಾಗಿತ್ತು . ಅದು ಇಲ್ಲಿದೆ
ಈ ಟಿಪ್ಪಣಿಯಲ್ಲಿ ಬಳಸಲಾದ ಇಂಗ್ಲಿಷ್ ಬಗ್ಗೆ ಭಾಷಾತಜ್ಞ ಪಂಡಿತಾರಾಧ್ಯ ಅವರು ಚರ್ಚೆ ಆರಂಭಿಸಿದ್ದಾರೆ ಅದಕ್ಕೆ ಕಶ್ಯಪ್ ನೀಡಿದ ಉತ್ತರ ಇಲ್ಲಿದೆ . ಬನ್ನಿ ನೀವು ಚರ್ಚೆಯಲ್ಲಿ ಭಾಗವಹಿಸಿ
  1. ಪಂಡಿತಾರಾಧ್ಯ
  2. Nov 18, 2010

    ಮಾನ್ಯರೆ,
    ಕನ್ನಡ ನಾಟಕ ಶುದ್ದಗೆಯ ಬಗ್ಗೆ ಅದರ ಲೇಖಕರು ಶುದ್ದ ಇಂಗ್ಲಿಷಿನಲ್ಲಿ ಹೇಳಿಕೊಂಡಿರುವುದು ವಿಚಿತ್ರವಾಗಿದೆ.
    ಕನ್ನಡದ ಬಗ್ಗೆ ಕನ್ಕನಡಿಗರೊಂದಿಗೆ ಕನ್ನಡದಲ್ಲಿ ಮಾತನಾಡಲಾರದಷ್ಟು ಕನ್ನಡಕ್ಕೆ ಪರಕೀಯರಾದವರು ಕನ್ನಡ ಶುದ್ದಗೆಯನ್ನು ಮಕ್ಕಳಿಗೆ ತಿಳಿಸುತ್ತೇವೆನ್ನುವುದು ವಿಚಿತ್ರವಾಗಿದೆ

    *

    ಡಾ.ಎಸ್.ವಿ.ಕಶ್ಯಪ್
    Nov 19, 2010

    ನಮಸ್ಕಾರ

    ಮಾನ್ಯ ಪಂಡಿತಾರಾಧ್ಯ ಅವರೆ,

    ತಮ ಪ್ರತಿಕ್ರಿಯೆ ನೋಡಿ ನನಗೂ ಸಖೇದಾಶ್ಚರ್ಯವಾಗುತ್ತಿದೆ.
    ಮನಸಗಂಗೋತ್ರಿಯಲ್ಲಿ ಕನ್ನಡದ ಪ್ರಾಧ್ಯಾಪಕರಾಗಿರುವ ನೀವು ಹಿಂದು ಮುಂದು ನೋಡದೆ ಹೀಗೆ ಒಬ್ಬ ಬಡ ನಾಟಕ ಕಾರನಮೇಲೆ ಹರಿಹಾಯ್ದಿರುವುದು ಸರಿಯೆ ಎಂದು ಯೋಚಿಸಿ ಸ್ವಾಮಿ.

    ನನ್ನ ಪರಿಚಯ ತಮಗೆ ಇಲ್ಲ ಎಂದು ಇದರಿಂದ ಚೆನ್ನಾಗಿ ತಿಳಿಯುತ್ತದೆ.

    ಪಂಡಿತಾರಾಧ್ಯಾವರೆ,
    ನಾನು ನಿಮ್ಮ ಮಾನಸಗಂಗೋತ್ರಿಯಲ್ಲೆ ಓದಿದ್ದು ಆದರೆ ಕನ್ನಡವನ್ನಲ್ಲ, ಬಿ.ಡಿ.ಎಸ್ – ದಂತವಿಜ್ಞಾನ. ಈಗಲೂ ನನ್ನದೆ ದಂತ ಚಿಕಿತ್ಸಾಲಯದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ಕಾಳಜಿ ಇರದಿದ್ದರೆ ನಾನು ಮಕ್ಕಳ ನಾಟಕಗಳನ್ನು ಬರೆಯುವ ಗೋಜಿಗೆ ಹೋಗದೆ, ನನ್ನ ಪಾಡಿಗೆ ನಾನು ನನ್ನ ಚಿಕಿತ್ಸಾಲಯದಲ್ಲಿ ನಿರತನಾಗಿರಬಹುದಿತ್ತು.ಆದರೆ ಕನ್ನಡದ ಬಗೆಗಿನ ಅಸ್ಥೆ, ನಾನು ಕನ್ನಡ ಸ್ನಾತಕೋತ್ತರ ಪದವಿ ಮಾಡುವಂತೆ ಪ್ರೇರೇಪಿಸಿತು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಅದನ್ನು ಮಾಡಿಯೂ ಮಾಡಿದೆ.

    ಆಮೇಲೆ ಸುಮ್ಮನೆ ಕೂರದೆ ಕುಮಾರವ್ಯಾಸ ನನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದು ಕುಮಾರವ್ಯಾಸ ಡಾಟ್ ಕಾಮ್ ಎಂಬ ಮಕ್ಕಳ ನಾಟಕ ಬರೆದೆ. ಗದುಗಿನ ಭಾರತ ಮಕ್ಕಳ ನಾಲಿಗೆಯ ಮೇಲೆ ನಲಿದಾಡಿತು. ಭಾಷಾಚರಿತ್ರೆಯನ್ನು ಮಕ್ಕಳಿಗೆ ಪರಿಚಯಿಸಬೇಕೆಂದು ಬರೆದ ನಾಟಕವೇ ಶುದ್ಧಗೆ,.

    ಆ ನಾಟಕವನ್ನು ಬರೆದು ೩ ವರ್ಷಗಳಾಯ್ತು. ಈಗ ಅದು ಪ್ರಕಟವಾಗುತ್ತಿದೆ ಎಂದಾಗ ಮನಸ್ಸಿನಲ್ಲಿ ಬಂದ ಸಣ್ಣ ಉದ್ಗಾರ ವನ್ನು ನನ್ನ ಸಂಚಾರಿ ದೂರವಾಣಿಯ ಮೂಲಕ ಫೇಸ್ ಬುಕ್ ನಲ್ಲಿ ಹಾಕಿದ್ದೆ. ನನ್ನ ಸಂಚಾರಿ ದೂರವಾಣಿಯಲ್ಲಿ ಕನ್ನಡ ಬಳಸಲು ಆಗುವುದಿಲ್ಲ ಸ್ವಾಮಿ .
    ಅದು ನನ್ನ ತಪ್ಪೆ. ಇಲ್ಲ ಸಂಚಾರಿ ದೂರವಾಣಿಯಲ್ಲಿ ಕನ್ನಡ ಬಳಸ ಬಹುದಾದರೆ ದಯ ಮಾಡಿ ಅದನ್ನು ನನಗೆ ತಿಳಿಸುವ ಕೃಪೆ ಮಾಡಿ.
    ಕನ್ನಡವನ್ನೆ ಬಳಸಿ ಎನ್ನುವ ತಮ್ಮ ಅಭಿಮತಕ್ಕೆ ನನ್ನ ಸಹಮತವೂ ಇದೆ.

    ಆದರೆ ಮ್ಲೊದಲ ಪ್ರತ್ರಿಕ್ರಿಯೆಯ ತಲೆ ಬರಹದಲ್ಲಿ ತಮ್ಮ ಹೆಸರು ಇಂಗ್ಲೀಷ್ ನಲ್ಲಿರುವುದು ಏತಕ್ಕೋ ?
    ಅದನ್ನು ನಾನು ಕೇಳಿದರೆ ನನ್ನಂಥಹ ಮೂರ್ಖ ಇನ್ನೊಬ್ಬ ನಿಲ್ಲ.
    ಅದು ತಾವು ಹೇಳಬೇಕೆಂದಿರುವ ವಿಷಯವೂ ಅಲ್ಲ , ಕನ್ನಡದ ಬಗ್ಗೆ ನಿರ್ಲಕ್ಷತೆಯೂ ಅಲ್ಲ.
    ಹಾಗೆಯೇ ನನ್ನ ಅ ಉದ್ಗಾರ.
    ಅಂದ ಹಾಗೆ,
    ನಿಮ್ಮ ವಿಳಾಸ ಕೊಡಿ ಸ್ವಾಮಿ
    ..
    ಪುಸ್ತಕ ಕಳಿಸುತ್ತೇನೆ
    ನಿಮ್ಮವ

    -ಡಾ||ಎಸ್.ವಿ.ಕಶ್ಯಪ್

    *

  3. ಉಷಾಕಟ್ಟೆಮನೆ
    Nov 18, 2010 

    ನಾಟಕವೆಂಬುದು ದೃಶ್ಯ ಮಾಧ್ಯಮ. ಪಾಮರರೂ ಅರ್ಥ ಮಾಡಿಕೊಳ್ಳಬಹುದು.ಅದಕ್ಕೆ ಭಾಷೆಯ ಹಂಗಿಲ್ಲ. ಕನ್ನಡೇತರರೂ ಈ ನಾಟಕವನ್ನು ನೋಡಿ, ಕನ್ನಡದ ಅಕ್ಷರಮಾಲೆಯ ಚರಿತ್ರೆಯನ್ನು ತಿಳಿದುಕೊಳ್ಳಲಿ ಎಂಬುದು ನಾಟಕಕಾರರ ಉದ್ದೇಶವಿರಬಹುದೆನೋ!
    ನಾನು ಈಗಾಗಲೇ ಈ ನಾಟಕ ನೋಡಿದ್ದೇನೆ.ಒಳ್ಳೆಯ ಪ್ರಯತ್ನ.ಮಕ್ಕಳು ಲವಲವಿಕೆಯಿಂದ ಅಬಿನಯಿಸಿದ್ದಾರೆ.
    ಉಷಾಕಟ್ಟೆಮನೆ

    *

    panditaradhya

    Nov 18, 2010 @ 19:02:44

    ಉಷಾ ಕಟ್ಟೆಮನೆಯವರಿಗೆ ನಮಸ್ಕಾರಗಳು.

    ನಾನು ನಾಟಕ ನೋಡಿಲ್ಲ. ನಾಟಕದ ಬಗ್ಗೆ ಪ್ರತಿಕ್ರಿಯಿಸಿಲ್ಲ.
    ತಮ್ಮ ಕನ್ನಡ ನಾಟಕದ ಬಗ್ಗೆ ಕನ್ನಡಿಗರಿಗೆ ಇಂಗ್ಲಿಷಿನಲ್ಲಿ ಹೇಳಿಕೊಂಡಿರುವ ನಾಟಕಕಾರರ ಮನೋಧರ್ಮದ ಬಗ್ಗೆ ಸಖೇದಾಶ್ವರ್ಯವಾಗಿದೆ.
    ಕನ್ನಡ ಬಾರದವರಿಗೆ ಕನ್ನಡದ ಬಗ್ಗೆ ಕಲಿಸುವುದು ಬೇರೆ ಮಾತಾಯಿತು.
    ಕನ್ನಡ ಭಾಷೆಯನ್ನು ಬಳಸುವಂತೆ ಕನ್ನಡಿಗರನ್ನೇ ಕೇಳಿಕೊಳ್ಳಬೇಕಾದ ದುಃಸ್ಥಿತಿಯ ಬಗ್ಗೆ ಬೇಸರವಾಗುತ್ತಿದೆ.

    ಕನ್ನಡಿಗರಿಗೆ ನನ್ನ ಮನವಿ
    ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ
    ಕನ್ನಡ ಅಂಕಿಗಳನ್ನೇ ಬಳಸಿ
    ೦ ೧ ೨ ೩ ೪ ೫ ೬೭ ೮ ೯

    ಪ್ರೀತಿಯಿಂದ
    ಪಂಡಿತಾರಾಧ್ಯ

    *

    ಡಾ.ಎಸ್.ವಿ.ಕಶ್ಯಪ್
    Nov 19, 2010 @ 09:44:53

    ಇಲ್ಲಿ ತಮ್ಮ ಹೆಸರು ಇಂಗ್ಲೀಷ್ ನಲ್ಲಿರುವುದು ಆಶ್ಚರ್ಯ !!!!!!!

    *

    shobha venkatesh

    Nov 19, 2010 @ 01:41:16

    ‘ಶುದ್ದಗೆ’ ಮಕ್ಕಳ ನಾಟಕ ತುಂಬಾ ಚೆನ್ನಾಗಿ ಮೂಡಿಬಂತು. ಪ್ರೊ ಜಿ ವೆಂಕಟ ಸುಬ್ಬಯ್ಯ ಅವರು ನಾಟಕ ನೋಡಿ ಹೇಳಿರುವ ಅಭಿಪ್ರಾಯ ಇಂದು ಬಿಡುಗಡೆಯಾದ ಶುದ್ದಗೆ ಮಕ್ಕಳ ಪುಸ್ತಕದಲ್ಲಿ ನಿಜವೆನಿಸಿತು. ಅವರೇ ಹೇಳಿರುವಂತೆ ೨೦೦೦ ವರ್ಷದ ಕನ್ನಡ ಬಾಷಾ ಚರಿತ್ರೆ ಒಂದೂವರೆ  ಗಂಟೆಯ ನಾಟಕದಲ್ಲಿ ಚೆನ್ನಾಗಿ ಮೂಡಿಬಂದಿದೆ.

    ಎಂ ಎಚ್  ಕೃಷ್ಣಯ್ಯ ಅವರ ಅಭಿಪ್ರಾಯವೂ ತುಂಬಾ ಸೂಕ್ತವಾಗಿದೆ ಎನಿಸಿತು. ಮೊದಲ ಪ್ರಯತ್ನ ನೋಡಿ ಹೇಳಿದ ಅಭಿಪ್ರಾಯ ಇದಾದರೆ ಇಂದಿನ  ಮಕ್ಕಳ ನಾಟಕ ನೋಡಿದ ಡಾ  ಸಾ  ಶಿ ಮರುಳಯ್ಯ, ಡಾ ವಿಜಯಾ, ಡಾ ರಾಜಾರಾಂ ಮತ್ತು  ಜೋಗಿ ಅವರುಗಳ ಅಭಿಪ್ರಾಯವೂ ಸಂತಸವಾಯಿತು .

‍ಲೇಖಕರು avadhi

19 November, 2010

2 Comments

  1. Vijayakumar

    Kashyap avara prayatna yavagalu kalatmaka hagu chintanege grasavagirutte. Nanu miss madida nataka idu. Kashamisi kannadadalli hege bareyuvadu anta gottiladde heege englannadadalli baradiddini

    • ಕಶ್ಯಪ್

      ನಿಮ್ಮ ಅಭಿಮಾನಕ್ಕೆ ವಂದನೆಗಳು. ಆದರೆ ೧೯ ರಂದು ಸುಚಿತ್ರಾ ಕ್ಕೆ ಬನ್ನಿ . ಅಂದು ಆ ನಾಟಕ ಪ್ರದರ್ಶನ ಇದೆ
      ನಿಮ್ಮವ
      ಕಶ್ಯಪ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading