ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಕಡೆಯ ಭಾಗ

(ಭಾಗ – ೬ ಇಲ್ಲಿದೆ)

ಬಸವಣ್ಣನವರು ಐಶ್ವರ್ಯಾಂಧಕರ ಮತಕ್ಕೆ ಗತಿಗಾಣಿಸಿದ್ದನ್ನು ಅಲ್ಲಮಪ್ರಭುಗಳು ಹೊಗಳಿದ ಕ್ರಮ ಬಸವಣ್ಣನವರ ಕರ್ತೃತ್ವ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ.
ದೇವಸ್ಥಾನ ಸಂಸ್ಕೃತಿಯು ಅಸ್ಪೃಶ್ಯತೆ, ಅಸಮಾನತೆ, ಭೇದಭಾವ ಮತ್ತು ಮೂಢನಂಬಿಕೆಯ ರಕ್ಷಣಾ ಸ್ಥಾನವಾಗಿದೆ. ಬಡವರ ಶೋಷಣೆಮತ್ತುಶ್ರೀಮಂತರ ಅಭಿವೃದ್ಧಿಗೆ ಕಾರಣವಾಗಿದೆ.ಈ ಕಾರಣದಿಂದಲೇ ಶೋಷಕವರ್ಗ ದೇವಾಲಯಗಳನ್ನು ನಿರ್ಮಿಸಿತು.ಶೋಷಿತವರ್ಗ ಆ ದೇವರುಗಳ ಮುಂದೆ ನಿಂತು ತಮ್ಮ ದುಃಖ ನಿವಾರಣೆಗೆ ಯತ್ನಿಸಿತು. ಹೀಗೆ ಶೋಷಕರ ವಾಸ್ತವ ಮತ್ತು ಶೋಷಿತರ ಭ್ರಮೆಗಳು ಒಟ್ಟೊಟ್ಟಿಗೆ ಸಾಗುತ್ತಿರುವುದನ್ನು ಬಸವಣ್ಣನವರು ಗಮನಿಸಿದರು.’ಉಳ್ಳವರು ಶಿವಾಲಯ ಮಾಡಿಹರು, ನಾನೇನು ಮಾಡಲಿ ಬಡವನಯ್ಯಾ’ ಎಂದು ಬಡವರ ಪರವಾಗಿ ನಿಂತರು. ಉಳ್ಳವರು’ಶಿವಾಲಯಗಳನ್ನೇಕೆ ನಿರ್ಮಿಸುವರು?’ಎಂಬ ರಹಸ್ಯವನ್ನು ಬಹಿರಂಗಪಡಿಸಿದರು. ತಾವು ದೇಗುಲಸಂಸ್ಕೃತಿಯಿಂದ ದೂರವಾದವರು ಎಂಬುದನ್ನು ಬಸವವಣ್ಣನವರು ಸ್ಪಷ್ಟಪಡಿಸಿದರು. ‘ಅಂಗದ ಮೇಲೆ ಲಿಂಗ ಸಾಹಿತ್ಯವಾದ ಬಳಿಕ ಸ್ಥಾವರ ದೈವಕ್ಕೆರಗಲಾಗದು’ ಎಂದು ಎಚ್ಚರಿಸಿದರು.’ವೇದ, ಶಾಸ್ತ್ರ ಆಗಮಂಗಳನೋದಿದವರು ಹಿರಿಯರೆ? .. .. .. ಸುವಿದ್ಯವ ಕಲಿತ ಡೊಂಬನೇನು ಕಿರಿಯನೆ?’ಎಂದು ಪ್ರಶ್ನಿಸಿ ಕಟ್ಟ ಕಡೆಯ ಮನುಷ್ಯನ ಮತ್ತು ಆತನ ಜೀವನಾನುಭವದ ಪರವಾಗಿ ವಾದಿಸಿದರು. ಗಿಳಿಪಾಠದ ಶಾಸ್ತ್ರಪಂಡಿತರು ಅದು ಹೇಗೆ ಹಿರಿಯರಾಗುತ್ತಾರೆ ಎಂದು ಪ್ರಶ್ನಿಸಿದರು.
‘ಕಳ್ಳನಾಣ್ಯಸಲುಗೆಗೆಸಲ್ಲದು’ ಎಂದು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರು. ‘ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ’ ಎಂದು ಸಂಗ್ರಹ ಬುದ್ಧಿಗೆ ಕಡಿವಾಣ ಹಾಕಿದರು.’ಕಾಯಕವಾವುದೆಂದು ಬೆಸಗೊಂಡಡೆ ನಿಮ್ಮಾಣೆ’ ಎಂದು ಎಲ್ಲ ಕಾಯಕಜೀವಿಗಳು ಸಮಾನರು ಎಂಬುದನ್ನು ಸೂಚಿಸಿದರು. ‘ಒಮ್ಮೆ ಶರಣೆಂದಡೆ ಪಾಪ ಕರ್ಮ ಓಡುವವು’ ಎಂದು ಕರ್ಮಸಿದ್ಧಾಂತದಿಂದ ತುಳಿತಕ್ಕೊಳಗಾದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದರು. ‘ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ ನೀವುಹೋದಿರಲ್ಲಾ’ ಎಂದು ಶೋಷಕ ವರ್ಗದ ಕೃತ್ರಿಮ ಬದುಕಿನ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ‘ಏನಯ್ಯಾ ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ ತಮಗೊಂದುಬಟ್ಟೆ (ದಾರಿ), ಶಾಸ್ತ್ರಕ್ಕೊಂದು ಬಟ್ಟೆ!’ಎಂದು ಪುರೋಹಿತಶಾಹಿಗಳ ಜೀವನ ವಿಧಾನಕ್ಕೆ ಅಸಹ್ಯಪಟ್ಟರು. ‘ಉಂಬು ಜಂಗಮ ಬಂದಡೆ ನಡೆಯಂಬರು; ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ’ ಎಂದುಸಾಮಾಜಿಕಪ್ರಜ್ಞೆ ಇಲ್ಲದೆ ಲಿಂಗಪೂಜೆ ಮಾಡುವುದು ನಿಷ್ಪ್ರಯೋಜಕ ಎಂದುಸಾರಿದರು.’ಕುಲಕ್ಕೆ ತಿಲಕ್ಕೆನಮ್ಮಮಾದಾರಚೆನ್ನಯ್ಯ, ನಿಮ್ಮಿಂದಧಿಕ ಕೂಡಲಸಂಗಮದೇವಾ’ ಎಂದು ತಿಳಿಸುತ್ತ ಮನುವಾದಿ ಸಮಾಜದಿಂದ ಬಂದ ಕಟ್ಟಕಡೆಯ ಮನುಷ್ಯರು ಕೂಡ ತಮ್ಮಸಚ್ಚಾರಿತ್ರ್ಯದಿಂದ ವ್ಯಕ್ತಿತ್ವ ವಿಕಸನ ಹೊಂದುತ್ತ ದೇವರಿಗಿಂತ ದೊಡ್ಡವರಾಗಬಲ್ಲರು ಎಂಬ ಆಶಾಭಾವವನ್ನು ಮೂಡಿಸಿದರು. ‘ನ್ಯಾಯನಿಷ್ಠುರಿ ದಾಕ್ಷಿಣ್ಯಪರನಾನಲ್ಲ. ಲೋಕವಿರೋಧಿ ಶರಣನಾರಿಗಂಜುವವನಲ್ಲ’ ಎಂದು ಅನ್ಯಾಯವನ್ನುವಿರೋಧಿಸಿದರು. ‘ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ’ ಎಂದು ಎಲ್ಲರನ್ನೂ ರಕ್ತ ಸಂಬಂಧದಿಂದ ಕರೆಯುತ್ತ ಮಾನವಕುಲದ ಏಕತೆಯ ಬಗ್ಗೆ ಅರಿವು ಮೂಡಿಸಿದರು.’ಕೈಲಾಸವೆಂಬುದೇನೊ, ಪೃಥ್ವಿಯ ಮೇಲೊಂದು ಮೊರಡಿ’ ಎಂದು ಸ್ವರ್ಗದ ಮಹತ್ವವನ್ನು ಅಲ್ಲಗಳೆದರು.ಸಕಲ ಜೀವತ್ಮಾರಿಗೆಲೇಸನೆ ಬಯಸುವ ಜೀವಕಾರುಣ್ಯವೊಂದೇ ಧರ್ಮದ ತಳಹದಿ ಎಂಬುದನ್ನು ಲೋಕದ ಜನರಿಗೆ ತಿಳಿಸಿಕೊಟ್ಟರು. ‘ಗಣ ತಿಂಥಿಣಿಯೊಳಗಿರಿಸೆನ್ನಲಿಂಗವೆ’ ಎಂದು ಜನಸಾಗರದ ಮಧ್ಯೆ ತಮ್ಮ ಅಸ್ತಿತ್ವವನ್ನು ಕಂಡುಕೊಂಡರು.’ಭಕ್ತಿ ಇಲ್ಲದ ಬಡವನಾನಯ್ಯ; ಕಕ್ಕಯ್ಯನ ಮನೆಯಲ್ಲೂ ಬೇಡಿದೆ, ಚೆನ್ನಯ್ಯನ ಮನೆಯಲ್ಲೂ ಬೇಡಿದೆ’ ಎಂದು ಹೇಳುತ್ತ ಕೆಳಜಾತಿ ಮತ್ತು ಕೆಳವರ್ಗದ ಜನರ ಅನುಭವಗಳನ್ನು ಎತ್ತಿಹಿಡಿದು ಅವುಗಳಿಂದ ಪಾಠ ಕಲಿತಿರುವುದಾಗಿ ತಿಳಿಸಿದರು.ವಿವಿಧ ದೇವರುಗಳ ಆರಾಧಕರಮೂಲ ದೇವರು ಒಬ್ಬನೆ ಮತ್ತು ಆರಾಧಕರೆಲ್ಲರೂ ಒಂದೇ ಮಾನವ ಜನಾಂಗ ಹಾಗೂ ಒಂದೇ ಜಗತ್ತಿಗೆ ಸೇರಿದವರು ಎಂಬುದನ್ನು ಮನದಟ್ಟು ಮಾಡಿಕೊಟ್ಟರು. ‘ಕರ್ಣದಲಿ ಜನಿಸಿದವರುಂಟೆ ಜಗದೊಳು?’ಎಂದು ಮುಂತಾಗಿ ಪ್ರಶ್ನಿಸುವ ಮೂಲಕ ಎಲ್ಲ ತೆರನಾದ ಮೂಢನಂಬಿಕೆಗಳನ್ನು ಬಸವಣ್ಣನವರು ಅಲ್ಲಗಳೆದರು.’ಲಿಂಗವ್ಯಸನಿ ಜಂಗಮಪ್ರೇಮಿ ಎಂದೆನಿಸಯ್ಯಾ’ ಎಂದು ಬೇಡುವ ಮೂಲಕ ಆದರ್ಶಗಳಿಗೆ ಅಂಟಿಕೊಂಡು ಸಮಾಜ ಪ್ರೇಮಿಗಳಾಗಿರಬೇಕು ಎಂಬ ಭಾವ ವ್ಯಕ್ತಪಡಿಸಿದರು. ಹೀಗೆ ಬಸವಣ್ಣನವರಿಗೆ ಸಮಾಜವೇ ದೇವರಾಗಿದೆ. ಜನಸೇವೆಯೇ ಪೂಜೆ, ಪ್ರಾರ್ಥನೆಗಳಾಗಿವೆ. ಬಸವಧರ್ಮವು ನಿಜವಾದ ಅರ್ಥದಲ್ಲಿ ಸಮಾಜಸೇವಾ ಧರ್ಮವಾಗಿದೆ. ಸರ್ವಸಮತ್ವವನ್ನು ಸಾಧಿಸುವ ಮಹಾಸಾಧನವಾಗಿದೆ.
 
ಬಸವಣ್ಣನವರ ಜೊತೆಗಿದ್ದ ಶರಣರೆಲ್ಲರೂ ಇದೇ ಕ್ರಮದಲ್ಲಿ ಚಿಂತನೆ ಮಾಡಿದ್ದಾರೆ.ವೈವಿಧ್ಯದಲ್ಲಿ ಏಕತೆಯನ್ನು ಸಾಧಿಸಿದ್ದಾರೆ.

ಕುರಿ ಕೋಳಿ ಕಿರಿಮೀನು ತಿಂಬುವರಿಗೆ ಕುಲಜ ಕುಲಜರೆಂದೆಂಬರು.
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು.
ಅವರೆಂತು ಕೀಳುಜಾತಿಯಾದರು?ಜಾತಿಗಳು ನೀವೇಕೆ ಕೀಳಾಗಿರೊ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಅದೆಂತೆಂದಡೆ; ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.
ಸಿದ್ಧಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿವ ಬುದ್ಧಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯಾ;
ಉರಿಲಿಂಗಪೆದ್ದಿಗಳ ಅರಸು ಒಲ್ಲನವ್ವಾ.
-ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
 
ದಲಿತ ವಚನಕಾರ್ತಿ ಕಾಳವ್ವೆ ಎಷ್ಟೊಂದು ನೋವಿನಿಂದ ಈ ವಚನವನ್ನು ಬರೆದಿರಬಹುದು! ತರ್ಕಹೀನ ಜಾತೀಯತೆಯ ಜನಕರಾದ ವಿಪ್ರರು ಚರ್ಮದ ಸಿದ್ದಲಿಕೆಯಲ್ಲಿನ ತುಪ್ಪವನ್ನು ಮತ್ತು ಚರ್ಮದ ಚೀಲವಾದ ಸಗ್ಗಳೆಯ ನೀರನ್ನು ಶುದ್ಧ ಎಂದು ಕುಡಿಯುವ ಬುದ್ಧಿಗೇಡಿಗಳೆಂದು ಕಾಳವ್ವೆ ಮೂದಲಿಸುತ್ತಾಳೆ. ಜಾತೀಯತೆಯ ನೋವು ಮತ್ತು ಅಪಮಾನಗಳು ಅನುಭವಿಸುವವರಿಗೇ ಗೊತ್ತು. ಆ ನೋವನ್ನು ತಮ್ಮದಾಗಿಸಿಕೊಂಡ ಬಸವಣ್ಣನವರಿಗೇ ಗೊತ್ತು.
‘ಪೃಥ್ವಿಯಿಂದ ಸಕಲ ಜೀವರೆಲ್ಲರೂ ಉದ್ಭವ ಗುಹೇಶ್ವರಾ’ ಎಂದು ಅಲ್ಲಮ ಪ್ರಭುಗಳು ಹೇಳುವಲಿ ಸಕಲಜೀವರಾಶಿಗಳಮಧ್ಯದ ಘನಸಂಬಂಧವನ್ನುಸೂಚಿಸುತ್ತಾರೆ.ಸರ್ವಸಮತ್ವದ ಚಿಂತನೆಗೆ ಮೂಲ ಆಕರ ಒದಗಿಸುತ್ತಾರೆ.’ಒಂದೇ ವಸ್ತು ತನ್ನ ಲೀಲೆಯಿಂದ ಪರಮಾತ್ಮ ಜೀವಾತ್ಮ ಎಂದಾಯಿತು’ ಎಂದು ಉರಿಲಿಂಗಪೆದ್ದಿಗಳು ಜೀವಮತ್ತು ದೇವರಮಧ್ಯದ ಅವಿರತ ಸಂಬಂಧವನ್ನು ಗುರುತಿಸುತ್ತಾರೆ.’ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ’ ಎಂದುಹೇಳುವ ಮೂಲಕ ನುಲಿಯ ಚಂದಯ್ಯನವರು, ಎಲ್ಲರೂ ಉತ್ಪಾದನೆಯಲ್ಲಿ ತೊಡಗಿದಾಗ ಮಾತ್ರ ಸರ್ವಸಮತ್ವದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸೂಚಿಸುತ್ತಾರೆ.’ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು’ ಎಂದು ಆಯ್ದಕ್ಕಿ ಮಾರಯ್ಯನವರು ಇನ್ನೂ ಮುಂದುವರಿದು ಮೇಲಿನ ಮಾತಿಗೆ ಪುಷ್ಟಿ ಕೊಡುತ್ತಾರೆ.’ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ’ ಎಂದು ಕಾಳವ್ವೆಹೇಳುತ್ತ ಉತ್ಪಾದನಾ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲದ ಮಹತ್ವವನ್ನು ಸಾರುತ್ತಾಳೆ. ‘ಹದಮಣ್ಣಲ್ಲದೆ ಮಡಕೆಯಾಗಲಾರದು’ ಎಂದು ಹೇಳುವ ಕೇತಲದೇವಿ, ಗುಣಮಟ್ಟದ ಉತ್ಪನ್ನವಿರಬೇಕು ಮತ್ತು ಬದುಕು ಕೂಡ ಹಾಗೇ ಉನ್ನತವಾಗಿ ಇರಬೇಕು ಎಂದು ಸೂಚಿಸುತ್ತಾಳೆ. ‘ಲಂಚವಂಚನಕ್ಕೆ ಕೈಯಾನದಭಾಷೆ’ ಎಂದು ಕಸಗುಡಿಸುವ ಸತ್ಯಕ್ಕ ಪ್ರತಿಜ್ಞೆ ಮಾಡುವುದರ ಮೂಲಕ ಸಮಾಜವು ಕಾಯಕದಿಂದ ಬದುಕ ಬೇಕೆ ಹೊರತು ಭ್ರಷ್ಟಾಚಾರದಿಂದ ಅಲ್ಲ ಎಂಬ ಸಂದೇಶವನ್ನು ನೀಡುತ್ತಾಳೆ.’ಆನೆ ಕುದುರೆ ಭಂಡಾರವಿರ್ದಡೇನೊ ತಾನುಂಬುದು ಪಡಿಯಕ್ಕಿ’ ಎಂದು ದೊರೆಯಾಗಿದ್ದ ಮಹಾದೇವ ಭೂಪಾಲರು, ಕಾಯಕ ಸಿದ್ಧಾಂತವನ್ನು ಸ್ವೀಕರಿಸಿ ಮೋಳಿಗೆಯ ಮಾರಯ್ಯನವರಾಗಿ ಸಂಗ್ರಹ ಬುದ್ಧಿಗೆ ಕಡಿವಾಣ ಹಾಕುತ್ತಾರೆ.
ಹೀಗೆ ಎಲ್ಲ ಶರಣರು ಬಸವಣ್ಣನವರ ಜಾತ್ಯತೀತ ಕಾಯಕತತ್ತ್ವವನ್ನು ಎತ್ತಿಹಿಡಿದಿದ್ದಾರೆ.ಬಸವತತ್ತ್ವ, ಕಾಯಕತತ್ತ್ವ ಮತ್ತು ಇಷ್ಟಲಿಂಗ ತತ್ತ್ವ ಬೇರೆ ಅಲ್ಲ ಎಂದು ತೋರಿಸಿಕೊಟ್ಟಿದ್ದಾರೆ.ಸಮಾನತೆಯಿಂದ ಕೂಡಿದ ಸಮಾಜದ ಬೇರುಗಳು ‘ಯೋಗ್ಯ ರೀತಿಯಲ್ಲಿ ಉತ್ಪಾದನೆ, ಯೋಗ್ಯ ರೀತಿಯಲ್ಲಿ ಬಳಕೆ ಮತ್ತು ಯೋಗ್ಯರೀತಿಯಲ್ಲಿ ಸಾಮಾಜಿಕ ವಿತರಣೆ’ ಎಂಬ ಸೂತ್ರದ ಮೇಲೆ ನಿಂತಿವೆ ಎಂಬುದನ್ನು ಶರಣರು ಸೂಚಿಸಿದ್ದಾರೆ.ಇದನ್ನೇ ಬಸವ ಧರ್ಮದ ಪರಿಭಾಷೆಯಲ್ಲಿ ‘ಕಾಯಕ – ಪ್ರಸಾದ – ದಾಸೋಹ’ ಎಂದು ಹೇಳಲಾಗಿದೆ. ಕಾಯಕದಿಂದ ಬಂದದ್ದು ವೈಯಕ್ತಿಕ ಆಸ್ತಿಯಾಗುವುದು. ಅದನ್ನು ದೇವರ ಪ್ರಸಾದವಾಗಿ ಸ್ವೀಕರಿಸುವುದರಿಂದ ಸಮಾಜವೆಂಬ ದೇವರಿಗೆ ವಿನಿಯೋಗಿಸುವ ಜವಾಬ್ದಾರಿಯಿಂದಾಗಿ ಇತಿಮಿತಿಯಿಂದ ಬಳಸಬೇಕಾಗುವುದು. ಹೀಗೆ ಪ್ರಸಾದ ಪ್ರಜ್ಞೆಯು ಖಾಸಗಿ ಆಸ್ತಿಯನ್ನು ಸಾಮೂಹಿಕ ಆಸ್ತಿಯಾಗಿ ಪರಿವರ್ತಿಸುವುದು. ನಂತರ ಮಿಗುತಾಯವೆಲ್ಲ ದಾಸೋಹ ರೂಪದಲ್ಲಿ ಶಿವನಿಧಿಗೆ ಸೇರುವುದು. ಆ ಮೂಲಕ ಆರ್ಥಿಕ ಸಮಸ್ಯೆ ಬಗೆಹರಿದು ಸಾಮಾಜಿಕ ಸ್ವಾಸ್ಥ್ಯಕ್ಕೆ ಕಾರಣವಾಗುವುದು.ಹೀಗೆ ಬಸವಧರ್ಮದಲ್ಲಿ ಮಾನವರು ವಿಶ್ವಮಾನವರಾಗುತ್ತಾರೆ.
ಅನುಭವದ ಬದುಕಿನಲ್ಲಿ ಸಂಗ್ರಹವಾಗುವ ಖಾಸಗಿ ಆಸ್ತಿ, ಅನುಭಾವದ ಬದುಕಿನಲ್ಲಿ ಶಿವನಿಧಿಗೆ ಸಲ್ಲುವ ಮೂಲಕ ಸಾಮೂಹಿಕ ಆಸ್ತಿಯಾಗುತ್ತದೆ. ಆಗ ‘ಎಲ್ಲವೂ ನನ್ನದು’ ಎಂಬ ಭಾವವನ್ನು ಕಳೆದುಕೊಂಡು ‘ಎಲ್ಲವೂ ನಮ್ಮದು’ ಎಂಬ ಭಾವದೊಂದಿಗೆ ಕ್ರಿಯಾಶೀಲವಾಗಿ ಬದುಕುವಾಗ ಸಕಲಜೀವಿಗಳಿಗೆ ಲೇಸೆನಿಸುವ ಸಮಾಜದ ನಿರ್ಮಾಣವಾಗುವುದು.
‘ಕರುಣಿ ಬಸವಾ, ಕಾಲಹರ ಬಸವಾ, ಕರ್ಮಹರ ಬಸವಾ, ನಿರ್ಮಳ ಬಸವಾ, ಶಿವಜ್ಞಾನಿ ಬಸವಾ, ನಿಮ್ಮ ಧರ್ಮವಯ್ಯಾ ಈ ಭಕ್ತಿಯ ಪದವು ಕರುಣಿ ಕಪಿಲ ಸಿದ್ಧಮಲ್ಲಿನಾಥಯ್ಯಾ ನಿಮಗೂ ಎನಗೂ ಬಸವಣ್ಣನ ಧರ್ಮವಯ್ಯಾ’ ಎಂದು ಸಿದ್ಧರಾಮರು ಹೇಳುವಲ್ಲಿ ಬಸವಣ್ಣನವರೇ ಸಮಾನತೆ ಸಾರುವ ಲಿಂಗವಂತ ಧರ್ಮಸ್ಥಾಪಕರು ಎಂಬುದನ್ನು ಸೂಚಿಸಿದ್ದಾರೆ.
– ಮುಗಿಯಿತು

‍ಲೇಖಕರು avadhi

30 June, 2013

247 Comments

  1. Amaresh

    Annapoorna says:
    June 29, 2013 at 6:45 pm
    ನೀನೊಲಿದ ಕುಲಕ್ಕೆ
    ನೀನೊಲಿದ ಹೊಲೆಗೆ ಮೇರೆಯುಂಟೇ, ದೇವ ?
    ಶ್ವಪಚೋಪಿ ಮುನಿಶ್ರೇಷ್ಠಃ
    ಯಸ್ತು ಲಿಂಗಾರ್ಚನೇ ರತಃ |
    ಲಿಂಗಾರ್ಚನವಿಹೀನೋಪಿ
    ಬ್ರಾಹ್ಮಣಃ ಶ್ವಪಚಾಧಮಃ ||

    • Ramjan Darga

      ಅನ್ನಪೂರ್ಣ ಅವರು ಕೂಡ ಇದೇ ವಚನವನ್ನು ಬಳಸಿ ಪ್ರಶ್ನಿಸಿದ್ದಾರೆ. ಅವರಿಗೆ ಉತ್ತರಿಸಿದ್ದೇನೆ. ಓದಿ ನೋಡಿ.

  2. Amaresh

    “ತರ್ಕಹೀನ ಜಾತೀಯತೆಯ ಜನಕರಾದ ವಿಪ್ರರು” is there any historical evidence to support this fancy claim? What is the origin of this claim? Is there a vachana that makes such a claim? Or is it a fancy imagination of Ranjan Darga?
    Suppose one takes it granted for a minute that “ತರ್ಕಹೀನ ಜಾತೀಯತೆಯ ಜನಕರಾದ ವಿಪ್ರರು”. Were the rest of the people in the society also illogical and stupid to accept ತರ್ಕಹೀನ ಜಾತೀಯತೆ?
    Interestingly even Kalavve hasn’t said that there must not be castes in the society. Her complaint is about the standards used to determine melu-keelu of jaati.

    • Ramjan Darga

      ಅಮರೇಶ್ ಅವರೆ ಕಾಯಕಕ್ಕೆ ಸಮಾನವಾದ ಪದ ಯಾವ ಧರ್ಮದಲ್ಲೂ ಇಲ್ಲ. ಆ ಪದವನ್ನು ಯಾವುದೇ ಭಾಷೆಗೆ ಅನುವಾದ ಮಾಡಲಿಕ್ಕಾಗುವುದಿಲ್ಲ ಎಂದು ನಾನು ಅನೇಕ ವರ್ಷಗಳಿಂದ ಹೇಳುತ್ತ ಮತ್ತು ಬರೆಯುತ್ತ ಬಂದಿದ್ದೇನೆ. ಕಾಯಕ ಎಂದರೆ ವರ್ಕ್ ಅಲ್ಲ. ವರ್ಕ್ ಎಂದರೆ ಕೆಲಸ ಎಂಬ ಅರ್ಥ ಬರುತ್ತದೆ. ಉದ್ದಂಡ ವೃತ್ತಿ ಕಾಯಕವಲ್ಲ ಎಂದು ಚನ್ನಬಸವಣ್ಣನವರು ಹೇಳಿದ್ದಾರೆ. ಕಾಯಕಕ್ಕೆ ಪ್ರಸಾದ ಮತ್ತು ದಾಸೋಹದ ಜವಾಬ್ದಾರಿ ಇದೆ. ಕಾಯಕಜೀವಿಗಳು ತಮ್ಮ ಕಾಯಕದಲ್ಲಿ ನಿರತವಾಗುವುದರ ಮೂಲಕ ಪಡೆದದ್ದನ್ನು ದೇವರ ಪ್ರಸಾದ ಎಂದು ಸ್ವೀಕರಿಸುತ್ತಾರೆ. ಹಾಗೆ ಸ್ವೀಕರಿಸುವುದರಿಂದ ಅವರು ಸಮಾಜ ಎಂಬ ದೇವರ ಪೂಜೆ ಮಾಡುವ (ಅಂದರೆ ಸಮಾಜಸೇವೆ ಮಾಡುವ)ಕರ್ತವ್ಯ ಪಾಲನೆ ಮಾಡಬೇಕಾಗುತ್ತದೆ. ಅದುವೆ ದಾಸೋಹ. ಹೀಗೆ ಕಾಯಕ, ಪ್ರಸಾದ ಮತ್ತು ದಾಸೋಹಗಳು ಅಭೇದ್ಯವಾಗಿವೆ. ಅಂತೆಯ ಬಸವಣ್ಣನವರು ‘ಲಿಂಗಾರ್ಚನಂ ನ ಕರ್ತವ್ಯಂ, ಕರ್ತವ್ಯಂ ಜಂಗಮಾರ್ಚನಂ’ ಎಂದು ಹೇಳಿದ್ದಾರೆ. ಲಿಂಗಾಯತ ಧರ್ಮದಲ್ಲಿ ಬರಿ ಇಷ್ಟಲಿಂಗ ಪೂಜೆ ಮಾಡಿದರೆ ಸಾಲದು. ಅವರು ಕಾಯಕ, ಪ್ರಸಾದ ಮತ್ತು ದಾಸೋಹ ಪ್ರಜ್ಞೆಯ ಮೂಲಕ ಜಂಗಮಲಿಂಗ ಪೂಜೆ (ಸಮಾಜಸೇವೆ) ಮಾಡಬೇಕಾಗುತ್ತದೆ. ಟೀಕೆ ಮಾಡುವ ಮೊದಲು ನಾನು ಬರೆದಿದ್ದನ್ನು ಒಮ್ಮೆ ಸರಿಯಾಗೊ ಓದಿ.

      • Amaresh

        ಸರಿಯಾಗಿ ಓದಬೇಕಾದವರು ನೀವು. ಇಲ್ಲಿ ಇನ್ನೊಮ್ಮೆ ಓದಿ: “ತರ್ಕಹೀನ ಜಾತೀಯತೆಯ ಜನಕರಾದ ವಿಪ್ರರು” is there any historical evidence to support this fancy claim? What is the origin of this claim? Is there a vachana that makes such a claim? Or is it a fancy imagination of Ranjan Darga?
        Suppose one takes it granted for a minute that “ತರ್ಕಹೀನ ಜಾತೀಯತೆಯ ಜನಕರಾದ ವಿಪ್ರರು”. Were the rest of the people in the society also illogical and stupid to accept ತರ್ಕಹೀನ ಜಾತೀಯತೆ?
        Interestingly even Kalavve hasn’t said that there must not be castes in the society. Her complaint is about the standards used to determine melu-keelu of jaati.

        • jayateerth joshi

          Mr. Amaresh read the Purusha sukta in Rigveda and Manu smriti. Everything is clear in it. Dont pretend ignorance as if u dont know it.

    • Ramjan Darga

      ಹೊಲೆಯೊಳಗೆ ಹುಟ್ಟಿ ಕುಲವನರಸುವೆ
      ಎಲವೋ ಮಾತಂಗಿಯ ಮಗ ನೀನು.
      ಸತ್ತುದನೆಳೆವ ಎತ್ತಣ ಹೊಲೆಯ?
      ಹೊತ್ತು ತಂದು ನೀವು ಕೊಲುವಿರಿ!
      ಶಾಸ್ತ್ರವೆಂಬುದು ಹೋತಿಂಗೆ ಮಾರಿ;
      ವೇದವೆಂಬುದು ನಿಮಗೆ ತಿಳಿಯದು;
      ನಮ್ಮ ಕೂಡಲಸಂಗನ ಶರಣರು
      ಕರ್ಮ ವಿರಹಿತರು ಶರಣ ಸನ್ನಿಹಿತರು ಅನುಮಪ ಚರಿತ್ರರು
      ಅವರಿಗೆ ತೋರಲು ಪ್ರತಿ ಇಲ್ಲವೊ!
      ಹೀಗೆ ವಿಪ್ರರು ತರ್ಕಹೀನ ಜಾತೀಯತೆಯ ಜನಕರಾದುದರ ಬಗ್ಗೆ ಬಸವಣ್ಣನವರು ಕೆಂಡ ಕಾರಿದ್ದಾರೆ. ಕೆಳವರ್ಗ ಮತ್ತು ಕೆಳಜಾತಿಗಳಿಂದ ಬಂದ ಬಹುಪಾಲು ಜನರು ಕೂಡಲಸಂಗನ ಶರಣರಾಗಿ ಜಾತಿಗಳನ್ನು ಮೀರಿ ಅನುಪಮ ಚರಿತರಾಗಿದ್ದಾರೆ ಎಂಬುದನ್ನು ಬಸವಣ್ಣನವರು ಈ ವಚನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

  3. Amaresh

    “ಉತ್ಪಾದನೆಯಲ್ಲಿ ತೊಡಗಿದಾಗ ಮಾತ್ರ ಸರ್ವಸಮತ್ವದ ಸಮಾಜ ನಿರ್ಮಾಣ ಮಾಡಲು ಸಾಧ್ಯ ” this is meaningless fitting of pseudo-Marxist ideology to the times and works of vachanakaras. I say it is pseudo-Marxist because Marx would never have approved of the anubhaava of the vachanakaras. Marx said religion is the opium of a masses and he would have said anubhaava is the kallu of Indians who couldn’t afford to buy opium!

    • Ramjan Darga

      ಅಮರೇಶ್ ಅವರೆ ಸುಮ್ಮನೆ ಮಿಸ್ ಇಂಟರ್ಪಿಟೆಶನ್ ಎಂದು ಹೇಳಿದರೆ ಹೇಗೆ? ನನ್ನ ವಿವರಣೆಗಳೆಲ್ಲ ನಿಮ್ಮ ಮುಂದೆ ಇವೆ. ನಿಮಗೆ ತಪ್ಪು ಅನಿಸಿದ್ದನ್ನು ಎತ್ತಿ ತೋರಿಸಿ ನನಗೆ ತಪ್ಪು ಎಂಬುದು ಮನವರಿಕೆಯಾದರೆ ಖಂಡಿತ ಒಪ್ಪಿಕೊಳ್ಳುವೆ. ನಮ್ಮ ವಾದ ವಿವಾದಗಳಿಗೆ ಜಗತ್ತಿನಾದ್ಯಂತ 25 ಸಾವಿರಕ್ಕೂ ಹೆಚ್ಚು ಕನ್ನಡಿಗರು ಸಾಕ್ಷಿಯಾಗಿದ್ದಾರೆ ಎಂಬುದು ನೆನಪಿರಲಿ. ನನ್ನ ವಾದ ಅಥವಾ ನಿಮ್ಮ ವಾದ ನನಗೆ ಮುಖ್ಯ ಅಲ್ಲ. ಸತ್ಯ ಮುಖ್ಯ.

      • Ramjan Darga

        ‘ಧರ್ಮ ಎಂಬುದು ಹೃದಯಹೀನ ಜಗತ್ತಿನ ಹೃದಯ’ ಎಂದು ಮಾರ್ಕ್ಸ್ ಹೇಳಿದ್ದರ ಕಡೆಗೆ ಅಮರೇಶ್ ಏಕೆ ಗಮನ ಹರಿಸುತ್ತಿಲ್ಲ? ಧರ್ಮದ ದುರುಪಯೋಗ ಮಾಡಿಕೊಳ್ಳುವವ ಸೂಡೋಗಳು ಅದನ್ನು ಜನರ ಮೇಲೆ ಅಪೀಮಿನ ಹಾಗೆ ಬಳಸುತ್ತಾರೆ. 12ನೇ ಶತಮಾನದ ಬಸವಣ್ಣ 19ನೇ ಶತಮಾನದ ಮಾರ್ಕ್ಸ್ ಅವರಿಗೆ ಐತಿಹಾಸಿಕವಾಗಿ ಗುರು ಸ್ಥಾನದಲ್ಲಿದ್ದಾರೆ. ಮೆನ್ ಮೇಕ್ ದೆಯರ್ ಓನ್ ಹಿಸ್ಟ್ರಿ ಎಂದು ಮಾರ್ಕ್ಸ್ ಹೇಳಿದ್ದಾರೆ. ದುಡಿಯುವ ಜನರು ಅನುಭವದ ಮೂಲಕ ಅಂಥ ಇತಿಹಾಸ ನಿರ್ಮಿಸಿದ್ದಾರೆ. ಮಾರ್ಕ್ಸ್ ಮತ್ತು ವಿವೇಕಾನಂದ ಅವರಿಗೆ ಬಸವಣ್ಣ ಮತ್ತು ಶರಣರ ಚಳವಳಿಯ ನಿಖರವಾದ ತಿಳಿವಳಿಕೆ ಇದ್ದಿದ್ದರೆ ಈ ಜಗತ್ತಿನ ಮತ್ತು ಭಾರತದ ಇತಿಹಾಸಗ ಗತಿ ಬೇರೆಯಾಗುತ್ತಿತ್ತು.

        • Amaresh

          ಸ್ವಾಮಿ, ಧರ್ಮಗಳ ವಿಚಾರ ಬಿಡಿ, ವಚನಗಳನ್ನೇ ನೋಡಿ, ಹೇಗೆ ತಾವು ಅವುಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ ಅಂತ ತಮ್ಮ ಪ್ರತಿಕ್ರಿಯೆಗಳಿಂದ ವೇದ್ಯವಾಗಿದೆಯಲ್ಲವೇ!!

          • Ramjan Darga

            ದುರುಪಯೋಗ ಮಾಡಿಕೊಳ್ಳುವುದನ್ನು ಎತ್ತಿ ತೋರಿಸಿ ನೋಡುವಾ.

          • Amaresh

            ನಿಮ್ಮ ಐಡಿಯಾಲಜಿಯ ಪ್ರತಿಪಾದನೆಗೆ ವಚನಗಳ ಅರ್ಥವನ್ನು ತಿರುಚಿ ಅವುಗಳಲ್ಲಿ ಇಲ್ಲದ ಕಲ್ಪನೆಗಳನ್ನು ಅವುಗಳ ಮೇಲೆ ಹೇರಿದ್ದು ದುರುಪಯೋಗವಲ್ಲ ಅಂತೀರಾ?

          • jayateerth joshi

            you are doing that distortion and misinterpretation in the name sharanas

      • Amaresh

        ಸ್ವಾಮಿ, ಸುಮ್ಮನೆ ಹೇಳುವುದು ನೀವು. ಆಧಾರಗಳಿಲ್ಲದೆ ಬೇಕು ಬೇಕಾದ ಹಾಗೆ ವಚನಗಳನ್ನು misinterpret ಮಾಡಿ ಕೇಳಿದ ಯಾವ ಪ್ರಶ್ನೆಯನ್ನೂ ನೇರವಾಗಿ ಎದುರಿಸದೆ ರಾಜಕಾರಣಿಯ ವರಸೆಯಲ್ಲಿ ರಾಜಕೀಯದ ಭಾಷೆಯಲ್ಲಿ..

        • Ramjan Darga

          ಮತ್ತೆ ಅದೇ ರಾಗ. ನಾನು ಹೇಳುವುದು ನಿಮ್ಮ ಅಸಹನೆಗೆ ಕಾರಣವಾದ ನನ್ನ ವಿಚಾರಗಳನ್ನು ತಪ್ಪೆಂದು ಎತ್ತಿ ತೋರಿಸಿ ಎಂದು.

        • jayateerth joshi

          U r doing political conspiracy against vachanakars. Thats why u people hv removed all my earlier comments. That shows how hollow ur mind is.

    • jayateerth joshi

      Marx didnt believe in religion and existence of god. that is true. Because he knew that priests in the name of religion and rituals will exploit the innocent. Marx approach is Dialectical Materialism. Basavanna s approach is Spiritual Materialism. It means through religious freedom and equality Basavanna wanted to unite all the people.

  4. Amaresh

    Ranjan Darga has misinterpreted ಕಾಯಕ as work/production. The term ಕಾಯಕ is a technical term in the adhyatmic discourse of vachanakaras. It shouldn’t be read literally to mean work/production. Mr. Darga should at minimum look at the use of the term ಕಾಯಕ in all the vachanas and ask himself whether it makes any sense to interpret the term as work/production.

    • jayateerth joshi

      mr. Amaresh ur interpretation of kayaka declares u r completely ignorant of vachanas. First u read vachanas and try to understand. If u dont find the meaning of kayaka i pity u. Thats all i can do

  5. Umesh

    It is unfortunate that Ramjaan Darga used the Avadhi forum to further his Marxist ideology in the garb of Sharanas and Vachanakaras. It is also sad that he has tried to belittle some of the sacred beliefs people have like –
    1. Worshiping multiple Gods against one God.(What is wrong in multiple Gods worship as he himself quoted earlier “Eko Sat vipraa bahuda vadanti”?).
    2. Denigrating Temple worship without any proper substantiation.
    3. Putting down an entire Brahmin community with no proof.(despite the fact that Brahmins were and are a community of people who strove for the welfare of the entire community and never went after wealth. I can give umpteen examples for this if he so wishes.)
    4. Trying to divide the society by stating Lingavantas are separate religion and does not belong to Hindu religion. (On the contrary, it is on record that param pujya sri Shivakumar swamiji has categorically stated that Lingayats belong to Hindu Religion. See the book “Chidanandayana” for proof of this.)
    5. Cherry picked some of the sayings of Swami Vivekananda to suit his arguments forgetting that Vivekananda strove for Hindu Unity and Propagation of its ideals (example, his Chicago address).
    Sharanas and Vachanakaars are selfless and pure beings who strove to uplift the society and correct some of the practices prevalent at that time. This they did within the parameters of the Hindu Religion otherwise they would have rejected all Hindu practices(like shiva worship, ishta linga worship, Vibuthi, Prasada, Dhyana, shiva panchakshari Mantra etc.) which they did not.

    • Amaresh

      You are right about the nature of Ranjan Darga’s diatribe against Vipras and the Vedic traditions. He has simply rehashed what he wrote earlier in the Ladai blog but given a very distasteful and provocative title to his series. He has to this date remained silent on the many questions asked to him. He has failed to address the many flaws identified by readers in his writing. He has misused Marxist ideology to denigrate Indian traditions. The ruthlessness with which he condemns and dismisses the mult cultural traditions of India is suggestive of fundamental intolerance in his outlook despite his tall claims about universal humanism. I am sure the Sharanas of Basavanna’s times would not have approved the regressive views expressed by Ranjan Darga in this series. It is unfortunate that Avadhi promised intellectual debate on Vachanas but ended up being a stage for a farcical drama.

    • Ramjan Darga

      ಉಮೇಶ ಅವರೆ, ಜಾತಿವಿಜಾತಿ ಕುಲಗೋತ್ರಗಳಲ್ಲಿ ಒಡೆದು ಹೋದ ಧರ್ಮವನ್ನು ಇನ್ನು ಒಡೆಯಲು ಸಾಧ್ಯವೆ? ಯಾರು ಬೇಕಾದವರು ಯಾವುದೇ ದೇವರು, ಧರ್ಮ, ಜಾತಿ ಮತ್ತು ಕುಲಗೋತ್ರಗಳನ್ನು ನಂಬಬಹುದು. ಅದರಿಂದ ನನಗೇನಾಗಬೇಕಿದೆ? ನಾನು ನನ್ನ ವಿಚಾರಗಳನ್ನು ಹೇಳುತ್ತಿಲ್ಲ. ಬಸವಾದಿ ಪ್ರಮಥರು ವಚನಗಳಲ್ಲಿ ಏನು ಹೇಳಿದ್ದಾರೊ ಅದನ್ನು ಹೇಳುತ್ತಿದ್ದೇನೆ. ಅದು ತಪ್ಪೆಂದು ನೀವು ಸಾಧಿಸಿದರೆ ಮತ್ತು ನನ್ನ ವಿಚಾರಗಳು ಸರಿ ಎಂಬುದನ್ನು ಸಿದ್ಧಪಡಿಸಲು ನನ್ನಿಂದ ಆಗದಿದ್ದರೆ ನಿಮ್ಮ ವಿಚಾರಗಳನ್ನು ಸ್ವೀಕರಿಸುತ್ತೇನೆ. ವಚನಗಳ ವಿಶ್ಲೇಷಣೆ ಮಾಡುವುದನ್ನು ಬಿಟ್ಟು ಏನೆಲ್ಲ ಬರೆದರೆ ಆಗುವ ಪ್ರಯೋಜನವಾದರೂ ಏನು?

    • jayateerth joshi

      What a joke Mr. Umesh has said. Whatever he said is just exactly opposite. People know the facts like these.
      1. They know who is deceiving the innocent people in the name of religion and rituals
      2.They who is dividing the society in the name of religion and creating communal hatred to serve their purposes.
      3. people who has been doing conspiracies for their selfish needs since centuries

  6. ರಮೇಶ್ ಹಿರೇಜಂಬೂರು

    ಸ್ನೇಹಿತರೇ, (ಇಲ್ಲಿ ಯಾರನ್ನೂ ವಯಕ್ತಿಕವಾಗಿ ತೆಗಳುವ ಉದ್ದೇಶವಿಲ್ಲ) ಜಾತಿಗಳ ಮೇಲೆ ನಂಬಿಕೆ ಇದ್ದವರು ತಮ್ಮ ಚೌಕಟ್ಟನ್ನು ಮೀರಿ ಮದುವೆಯಾಗಲು ಇಷ್ಟಪಡುವುದಿಲ್ಲ, ಜತೆಗೆ ಅಂಥವರಿಗೆ ಬೆಂಬಲವನ್ನೂ ಕೊಡುವುದಿಲ್ಲ. ಇದು ಸಾರ್ವಜನಿಕ ಸತ್ಯ. ಅದನ್ನು ಬಾಯಿ ಬಿಟ್ಟು ಬೇರೆ ಹೇಳಬೇಕಿಲ್ಲ!
    ವಚನಚಳವಳಿಯಿಂದ ಇಂದಿನ ವರೆಗೆ ಅಂಥ ಸಹಸ್ರ ಸಹಸ್ರ ಅಂತರ್ಜಾತಿ ಹಾಗೂ ಅಂತರ್ ಧರ್ಮೀಯ ಮದುವೆಗಳು ನಡೆದಿವೆ. ಹಿಂದಿನ ಸಂಗತಿ ಯಾಕೆ? ಇವತ್ತು ನಮ್ಮ ನಿಮ್ಮ ಸುತ್ತ ನಡೆಯುವ ಮದುವೆಗಳನ್ನು ಸುಮ್ಮನೆ ಅವಲೋಕಿಸಿದರೆ ಸಾಕು ಅದರ ಮೂಲ ಉದ್ದೇಶ ಅಂರ್ಥವಾಗುತ್ತದೆ. ಇಲ್ಲಿ ಕಾಣುವುದು ಎರಡೇ ಸತ್ಯ ಒಂದು ಹೆಣ್ಣು ಗಂಡಿನ ನಡುವೆ ಹುಟ್ಟಿರುವ “ಜಾತಿ ಮೀರಿದ ಪ್ರೀತಿ”. ಇನ್ನೊಂದು “ಜಾತಿ ವಿನಾಶದ ಅಥವಾ ಅವುಗಳ ಮೇಲಿನ ಜಿಜ್ಞಾಸೆ”.
    ದರ್ಗಾ ಅವರು “ವಚನದ ಬಗ್ಗೆ ಅವರಿಗೇನು ಗೊತ್ತು?” ಎಂದು ಪ್ರಶ್ನೆ ಮಾಡಿರುವುದು ಪೌರೋಹಿತ್ಯಶಾಹಿಗಳನ್ನು. ಅದರ ಬಗ್ಗೆ ಅವರಿಗೆ ಅರಿವಿರಲಿಲ್ಲ ನಿಜ, ಆದರೆ ಆಘಾತವಾಗುವ ಭಯ ಇತ್ತು. ಆ ಕಾರಣಕ್ಕೆ ಪೌರೋಹಿತ್ಯಶಾಹಿಗಳು ಕಲ್ಯಾಣದಲ್ಲಿ ವಚನಕಾರರ ಮೇಲೆ ದೌರ್ಜನ್ಯ ನಡೆಸಿದ್ದು, ವಚನದ ಕಟ್ಟುಗಳನ್ನು ಸುಟ್ಟು ಹಾಕಿದ್ದು. ಅದೆಲ್ಲವನ್ನೂ ದರ್ಗಾ ಅವರು ಯಥಾವತ್ತಾಗಿ ವಾಸ್ತವದ ನೆಲೆಗಟ್ಟಿನ ಮೇಲೆ ವಿವರಿಸಿದ್ದಾರೆಯೇ ಹೊರತು ಯಾವುದೇ “ಇಸ್ಲಾಮಿಕ್ ಐಡಿಯಾಲಜಿ” ಹಿನ್ನೆಲೆಯಿಂದ ಅಲ್ಲ ಎನ್ನುವುದು ಸ್ಪಷ್ಟ.
    ಆರೋಗ್ಯಕರವಾಗಿ ತರ್ಕ ಮಾಡದವರು ಹಾಗೂ ಹಾಗೆ ಮಾಡಲಾಗದವರು ಅನಾವಶ್ಯಕವಾಗಿ ಇಂಥ ಅನಾರೋಗ್ಯಕರ ಪದಗಳನ್ನು ಹುಟ್ಟು ಹಾಕಿ ಚರ್ಚೆಯ ದಿಕ್ಕು ಬದಲಾಯಿಸುವ ಪಯತ್ನ ಸಲ್ಲದು (ಹೀಗೆ ಒಂದು ವಿಚಾರದ ಬಗ್ಗೆ ಮುಕ್ತ ಚರ್ಚೆ ನಡೆಸಲು ವೇದಿಕೆ ಒದಗಿಸಿದವರನ್ನೇ ಅವರ ಹೆಸರಿನ ಆಧಾರದ ಮೇಲೆ ಧರ್ಮವನ್ನು ಗುರುತಿಸಿ ಚರ್ಚೆಯನ್ನು ದಿಕ್ಕು ತಪ್ಪಿಸುವುದು ಸರಿಯಲ್ಲ. ಇದು ಅವರ ಜ್ಞಾನ ಮಟ್ಟವನ್ನು ಹಾಗೂ ಪೌರೋಹಿತ್ಯ ಶಾಹಿ ಕುತಂತ್ರವನ್ನು ಎತ್ತಿತೋರಿಸುತ್ತದೆ. ಅದರ ಅರಿವಿದ್ದು ಚರ್ಚೆ ನಡೆಸುವುದು ಒಳಿತು). ಘಸ್ನಿ ಹಾಗೂ ಮಲ್ಲಿಕಾಫರು ದೇವಾಲಯಗಳ ಮೇಲೆ ಧಾಳಿ ಮಾಡಿದ್ದರಿಂದ ಶೋಷಿತ ವರ್ಗಕ್ಕೆ ಅನುಕೂಲವಾಯಿತು ಎಂದು ಹೇಳಿರುವುದೇ ಹೊರತು. ಘಸ್ನಿ ಹಾಗೂ ಮಲ್ಲಿಕಾಫರರ ಧಾಳಿ ಸರಿಯಾದದ್ದು ಎಂದು ವಾದಿಸಿಲ್ಲ.
    ವಚನಕಾರರು ಎಲ್ಲ ಜಾತಿ ವ್ಯವಸ್ಥೆಯನ್ನೂ ವಿರೋಧಿಸಿದವರೆ ಅದಕ್ಕೆ ಸಾಕ್ಷಿ ಒಟ್ಟು ೨೧,೭೮೮ ವಚನಗಳಲ್ಲಿ ೬೫೩ ವಚನಗಳು ಜಾತಿ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಳ್ಳುತ್ತವೆ. ಆದರೆ ಇಲ್ಲಿ ೧೯೫ ವಚನಗಳಲ್ಲಿ ಬ್ರಾಹ್ಮಣ್ಯ ಹಾಗೂ ಪೌರೋಹಿತ್ಯಶಾಯಿ ವ್ಯವಸ್ಥೆಯನ್ನು ಧಿಕ್ಕರಿಸಿ, ಹೀಯ್ಯಳಿಸಿ ಬರೆಯಲಾಗಿದೆ. ಜತೆಗೆ ೪೫೮ ವಚನಗಳಲ್ಲಿ ಇತರ ಜಾತಿಗಳಲ್ಲಿನ ವ್ಯವಸ್ಥೆಯನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಕೆಲವರು ಕೇವಲ ೧೯೫ ವಚನಗಳಲ್ಲಿ ಮಾತ್ರ ಬ್ರಾಹ್ಮಣ ಜಾತಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ಉಳಿದ ವಚನಗಳಲ್ಲಿ ಇಲ್ಲ ಎಂದು ಭಂಡತನದಲ್ಲಿ ವಾದ ಮಾಡುವವರೂ ಇದ್ದಾರೆ! ಆದರೆ ಎಲ್ಲ ವಚನಗಳಲ್ಲೂ ಬ್ರಾಹ್ಮಣ ಸಂಸ್ಕೃತಿಯನ್ನು ಬೆಂಡೆತ್ತಲು ಅವರಿಗೆ ಬೇರೆ ವಿಚಾರಗಳು ಇರಲಿಲ್ಲವಾ!? ಸಮಸ್ಯೆ ಎಲ್ಲ ಜಾತಿ, ವರ್ಗದಲ್ಲೂ ಇದ್ದವು. ಅವುಗಳನ್ನು ಸರಿಪಡಿಸಬೇಕು. ಸಮಾನತೆಯನ್ನು ಸಾರಬೇಕು. ಮೇಲ್ವರ್ಗದ ಜನ ಆಡುವುದೆಲ್ಲ ಸರಿ ಎಂದು ಕೋಲೆ ಬಸವನಂತೆ ತಲೆ ಅಲ್ಲಾಡಿಸುವ ಕೆಳ ವರ್ಗದ ಜನರನ್ನು ತಿದ್ದುವುದೂ ವಚನಕಾರರ ಉದ್ದೇಶವಾಗಿತ್ತು. ಆ ಕಾರಣಕ್ಕೇ ಅವರು ಎಲ್ಲ ರೀತಿಯಲ್ಲೂ ಪ್ರಯತ್ನ ನಡೆಸಿದ್ದರು.
    ಆದರೆ ವಚನಗಳನ್ನು ಸರಿಯಾಗಿ ಅರ್ಥೈಸದೆ ಅವುಗಳನ್ನು ತಮಗೆ ಹೇಗೆ ಬೇಕೋ ಹಾಗೆ ತಿರುಚಿಕೊಂಡು ಅವರು ಜಾತಿ ವ್ಯವಸ್ಥೆಯನ್ನು ವಿರೋಧಿಸಲೇ ಇಲ್ಲ ಎನ್ನುವುದು ಸರಿಯೇ? ಅದಕ್ಕೆ ದರ್ಗಾ ಅವರು ‘ವಚನಗಳ ಬಗ್ಗೆ ಅವರಿಗೇನು ಗೊತ್ತು ?’ ಎಂದಿರಬೇಕು. ಇದೆಲ್ಲವನ್ನು ನೋಡಿದ ಮೇಲೆ ಅವರ ಪ್ರಶ್ನೆ ಸರಿಯಾಗಿಯೇ ಇದೆ ಎನಿಸದಿರದು.

    • Annapoorna

      ತಾವೂ ಕೂಡ ಇದೊಂದು ಆಶು ಭಾಷಣ ಸ್ಪರ್ಧೆ ಎಂದು ತಿಳಿದು ತಮಗೆ ಸಿಕ್ಕ ಎರಡು ನಿಮಿಷಗಳಲ್ಲಿ ಅನೇಕ ವಿಷಯಗಳ ಕಲಸೋಮೆಲೋಗರ ಮಾಡಿ ಅಸಂಬದ್ಧ ವಾದ ಮಂಡಿಸಿದ್ದೀರಿ. ವಚನಕಾರು ಬ್ರಾಹ್ಮಣರನ್ನು ಟೀಕಿಸಿ ಬರೆದುದ್ದನ್ನು ಬೇರೆ ರೀತಿಯಲ್ಲಿ ತರ್ಕ ಬದ್ಧವಾಗಿ ಸುಸಂಬದ್ಧವಾಗಿ ಅರ್ಥೈಸಲು ಸಾಧ್ಯವಿದೆ. ವಚನಕಾರರ ಆಧ್ಯಾತ್ಮಿಕ ವಿಚಾರಗಳಿಗೆ ತಾತ್ವಿಕವಾಗಿ ಪ್ರತಿವಾದ ಬಂದದ್ದು ಬ್ರಾಹ್ಮಣ ಪಂಥಗಳಿಂದ ಎನ್ನುವುದನ್ನು ಮರೆಯಬಾರದು. ಭಾರತದ ಬಹುಮುಖಿ ಆಧ್ಯಾತ್ಮಿಕ ಸಂಪ್ರದಾಯಗಳ ನಡುವೆ ತಾತ್ವಿಕ ತಿಕ್ಕಾಟ ಅನಾದಿ ಕಾಲದಿಂದಲೂ ನಡೆದು ಬಂದಿದೆ. ವಚನಕಾರರ ಸಂದರ್ಭದಲ್ಲೂ ಇಂತದ್ದೆ ಒಂದು ತಾತ್ವಿಕ ತಿಕ್ಕಾಟ ಬ್ರಾಹ್ಮಣ ಪಂಥಗಳ ಜೊತೆ ನಡೆದಿತ್ತು. ಇದರ ಫಲಸ್ವರೂಪವಾಗಿ ವಚನಕಾರರು ಬ್ರಾಹ್ಮಣರ ಟೀಕೆ ಮಾಡಿದ್ದಾರೆ. ಇದರಲ್ಲಿ ಕ್ರಾಂತಿಕಾರಕವಾದದ್ದು ಏನೂ ಇಲ್ಲ. ಹಾಗೆ ನೋಡಿದರೆ ಇಂತಹ ಟೀಕೆಗಳನ್ನು ಬ್ರಾಹ್ಮಣ ಪಂಥಗಳು ಪರಸ್ಪರ ಮಾದುತ್ತಲೇ ಬಂದಿವೆ. ಬೇಕಿದ್ದರೆ ಪುರಂದರದಾಸರ ಕೃತಿಗಳನ್ನೇ ತೆಗೆದು ನೋಡಿ, ಅಲ್ಲೂ ನಿಮಗೆ ಟೀಕೆ ಸಿಗುತ್ತದೆ.

    • ಸಹನಾ

      “ಅಂತರಜಾತಿ ಮಧುವೆಯಾಗುವವರು ಜಾತಿಗಳಲ್ಲಿ ನಂಬಿಕೆಯಿಲ್ಲದೆ ಮಧುವೆಯಾಗುತ್ತಾರೆ”. ಇದೇ ತರ್ಕವನ್ನು ಮುಂದುವರಿಸಿದರೆ, ಅಂತರ್ ಧರ್ಮೀಯರು ಮಧುವೆಯಾದರೆ ಧರ್ಮಗಳಲ್ಲಿ ನಂಬಿಯಲ್ಲದಿದ್ದರಿಂದ ಹೀಗೆ ಮಧುವೆಯಾಗುತ್ತಿದ್ದಾರೆ!!! ಅಂತರ್ ಭಾಷಿಕರು ಮಧುವೆಯಾದರೆ, ಭಾಷೆಯ ಮೇಲೆ ನಂಬಿಕೆ ಇಲ್ಲದೆ ಮಧುವೆಯಾಗುತ್ತಿದ್ದಾರೆ, ಶ್ರೀಮಂತಿಕೆ-ಬಡವರು ಮಧುವೆಯಾದರೆ ಹಣ ಆಸ್ತಿಯ ಮೇಲೆ ಮೇಲೆ ನಂಬಿಕೆ ಇಲ್ಲದಿದ್ದರಿಂದ ಹೀಗೆ ಮಧುವೆಯಾಗುತ್ತಿದ್ದಾರೆ!!! ಅಂದಮೇಲೆ ಈ ರೀತಿಯ ಮಧುವೆಗಳಾದ ಮೇಲೆ ಅವರುಗಳು ಇವುಗಳೆಲ್ಲವನ್ನೂ ಬಿಟ್ಟುಬಿಟ್ಟಿದ್ದಾರೆ ಎಂದಾಯಿತು!!! ಹೌದೇ? ‘ಸಾರ್ವಜನಿಕ ಸತ್ಯ’ ನೀವಂದದ್ದಕ್ಕಿಂತ ಬೇರೆಯದೇ ಇದೆ. ಇದನ್ನು ಅಂತವರನ್ನು ‘ಬಾಯಿಬಿಟ್ಟು ಕೇಳಿ’ ಎಂಪಿರಿಕಲ್ ಅಧ್ಯಯನಮಾಡಿದರೆ ಮನದಟ್ಟಾಗುತ್ತದೆ.
      ವಾಸ್ತವವನ್ನು ಇರುವಂತೆ ಗ್ರಹಿಸಬೇಕು ಎಂದರೆ ಪುರೋಹಿತಶಾಹಿ ಎಂದೆಲ್ಲಾ ಏಕೆ ಹೇಳಬೇಕು? ಅರ್ಥವಾಗಲಿಲ್ಲ!!! ಇದ್ದದ್ದನ್ನು ಇದ್ದಹಾಗೆ ಅರ್ಥಮಾಡಿಕೊಳ್ಳುವ ತಿಳುವಳಿಕೆ/ಜ್ಞಾನ ಬೇಕಿಲ್ಲವೇ? ಯಾರೋ ಸುಳ್ಳು ಹೇಳುತ್ತಿದ್ದು ಅಲ್ಲಿರುವ ಮಕ್ಕಳು ನಿಜ ಆ ಹೇಳಿದರೆ ಆ ಮಕ್ಕಳಿಗೆ ಗದರುವಂತೆ ಇವರೇಕೆ ತಮ್ಮ ವಾದಕ್ಕೆ ಪ್ರತಿವಾದ ಮಾಡುವವರನ್ನು ಕೆಟ್ಟಕಟ್ಟ ಉದ್ದೇಶಗಳನ್ನು ಆರೋಪಿಸುತ್ತಾರೆ? ಎಲ್ಲಕ್ಕೂ ಪ್ರತಿವಾದಿಗಳನ್ನು ಪುರೋಹಿತಶಾಹಿ ಪುರೋಹಿತಶಾಹಿ (ತಪ್ಪು ಜ್ಞಾನವನ್ನು ಹರಡಿ ಜನರನ್ನು ಮೂಢರನ್ನಾಗಿಸವವರು) ಎನ್ನುತ್ತಾ ತಾವು ಅದೇ ಕೆಲಸವನ್ನು ಮಾಡುತ್ತಿದ್ದಾರಲ್ಲಾ!!!

      • Ramjan Darga

        ಅಂತರ್ಜಾತೀಯ ಮದುವೆಯಾಗುವವರು ಜಾತಿಗಳೆಲ್ಲ ಸಮ ಎಂದು ಭಾವಿಸುತ್ತಾರೆ. ಅಂತರ್ಧರ್ಮೀಯ ಮದುವೆಯಾಗುವವರು ಧರ್ಮಗಳೆಲ್ಲ ಸಮ ಎಂದು ಭಾವಿಸುತ್ತಾರೆ. ಅಂತರ್ಭಾಷಿಕರು ಭಾಷೆಗಳು ಬೇರೆಯಾದರೂ ಭಾವ ಒಂದೇ ಎಂದು ಭಾವಿಸುತ್ತಾರೆ. ಶ್ರೀಮಂತರು ಮತ್ತು ಬಡವರ ಮಧ್ಯೆ ಮದುವೆಯಾದರೆ ಒಲವೆ ನಮ್ಮ ಬದುಕು ಎಂದು ಭಾವಿಸುತ್ತಾರೆ. ಹೀಗೆ ಭಾವಿಸದೆ ಇದ್ದರೆ ಬದುಕಿನುದ್ದಕ್ಕೂ ಅಭಾವವನ್ನೆದುರಿಸಬೇಕಾಗುತ್ತದೆ. ಆದರೆ ಜಾತಿ ಕುಲ ಗೋತ್ರಗಳಲ್ಲಿ ನಂಬಿಕೆ ಇಟ್ಟವರು ಇಂಥ ಮದುವೆಗಳಿಗೆ ಕಂಟಕಪ್ರಾಯವಾಗಿರುತ್ತಾರೆ.

  7. ರೇಣುಕಾ ಹೆಳವರ

    ಎನಗೊಂದು ಲಿಂಗ
    ನಿನಗೊಂದು ಲಿಂಗ
    ಮನೆಗೊಂದು ಲಿಂಗವಾಯಿತ್ತು !
    ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ !
    ಉಳಿ ಮುಟ್ಟಿದ ಲಿಂಗವ
    ಮನ ಮುಟ್ಟಬಲ್ಲುದೇ ಗುಹೇಶ್ವರ ?
    ದೇವಲೋಕ ಮರ್ತ್ಯಲೋಕವೆಂಬುದು
    ಬೇರೆ ಮತ್ತುಂಟೆ ? ಇಹಲೋಕದೊಳಗೇ ಮತ್ತನಂತಲೋಕ!
    ಶಿವಲೋಕ ಶಿವಾಚಾರವಯ್ಯ,
    ಶಿವಭಕ್ತನಿದ್ದ ಠಾವೇ ದೇವಲೋಕ,
    ಭಕ್ತನಂಗಳವೇ ವಾರಣಾಸಿ,
    ಶಿವಭಕ್ತನ ಕಾಯವೇ ಕೈಲಾಸ, ಇದು ಸತ್ಯ ಕೂಡಲಸಂಗಮದೇವ.
    ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು;
    ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ!
    ಉಂಬ ಜಂಗಮ ಬಂದರೆ ನಡೆ ಎಂಬರು;
    ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!
    ನಮ್ಮ ಕೂಡಲಸಂಗನ ಶರಣರ ಕಂಡು
    ಉದಾಸೀನವ ಮಾಡಿದರೆ,
    ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ!
    ಇಂಥ ಹಲವಾರು ವಚನಗಳು ನಮ್ಮಲ್ಲಿ ಸಿಗುತ್ತವೆ. ಇವುಗಳ ಅರ್ಥ ನಮ್ಮಲ್ಲಿನ ಗೊಡ್ಡು ಸಂಪ್ರದಾಯ, ಜಾತೀಯತೆ, ಜಾತಿ ಹೆಸರಿನಲ್ಲಿ ನಡೆಯುವು ವಿವಿಧ ಪೂಜೆ ಪುನಸ್ಕಾರಗಳನ್ನು ತಿರಸ್ಕರಿಸುವುದಲ್ಲದೆ ಮತ್ತೇನು? ವಚನಗಳು ಸಾರುವ ನಿಜವಾದ ಅರ್ಥವನ್ನೇ ಮರೆ ಮಾಚಿ ವಾದ ಮಾಡುವುದು ಸರಿಯಲ್ಲ. ವಚನ ಚಳವಳಿಯಲ್ಲಿ ನಡೆದ ಅಷ್ಟೂ ಘಟನಾವಳಿಗಳನ್ನು ಗಮನಿಸಿದರೆ ಅದು ಸಮಾನತೆಯ ಹೋರಾಟ, ಜಾತಿ ವಿರುದ್ಧದ ಹೋರಾಟ ಎನ್ನಲು ಇನ್ನೇನು ಸಾಕ್ಷಿ ಬೇಕು? ರಮೇಶ್ ಅವರು ಹೇಳಿದ ಹಾಗೆ ಎಲ್ಲ ವಚನಗಳಲ್ಲೂ ಪೌರಾಹಿತ್ಯವನ್ನು ವಿರೋಧಿಸಬೇಕಿತ್ತೇ? ಆಗ ಮಾತ್ರ ಅದು ಪುರೋಹಿತ ಶಾಹಿ ವ್ಯವಸ್ಥೆಯನ್ನು ವಿರೋಧಿಸಿದ್ದು ಎಂದು ಒಪ್ಪಿಕೊಳ್ಳಲಾಗುತ್ತಿತ್ತೇ…? really Its real fight for Freedom, Its real fight for Socialism… ಇದೆಲ್ಲವೂ ನಮ್ಮ ಕಣ್ಣ ಮುಂದಿದ್ದರೂ ಅದನ್ನು ಒಪ್ಪಿಕೊಳ್ಳದೆ ಪೊಳ್ಳು ವಾದ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ.

    • Annapoorna

      “ಇವುಗಳ ಅರ್ಥ ನಮ್ಮಲ್ಲಿನ ಗೊಡ್ಡು ಸಂಪ್ರದಾಯ, ಜಾತೀಯತೆ, ಜಾತಿ ಹೆಸರಿನಲ್ಲಿ ನಡೆಯುವು ವಿವಿಧ ಪೂಜೆ ಪುನಸ್ಕಾರಗಳನ್ನು ತಿರಸ್ಕರಿಸುವುದಲ್ಲದೆ ಮತ್ತೇನು? ” ಇದು ತಮ್ಮ ಇಂಟರ್ಪ್ರಿತೆಶನ್. ಆದರೆ ವಚನಕಾರರಿಗೆ ತಮ್ಮ ಧೋರಣೆ ಇತ್ತು ಎಂಬುದರ ಬಗ್ಗೆ ಖಚಿತವಾದ ಪುರಾವೆಗಳಿಲ್ಲ.

      • Annapoorna

        ವಿಜಯ್ ಅವರ ಕಮೆಂಟಿನಿಂದ ಆಯ್ದು ರೇಣುಕಾ ಅವರ ಗಮನಕ್ಕೆ:
        ಚನ್ನಬಸವಣ್ಣನವರು ಇಷ್ಟಲಿಂಗ ದೀಕ್ಷೆ ನೀಡುವ ಸಂದರ್ಭದಲ್ಲಿ ಸಿದ್ಧರಾಮರಿಗೆ ೫೦ ಬಗೆಯ ಆಚಾರಗಳನ್ನು ಬೋಧಿಸಿದ್ದಾರೆ.
        ೧. ಪರಸ್ತ್ರೀಯನ್ನು ಬಯಸದೆ ಇರುವುದು. ೨. ಪರಧನವನ್ನು ಅಪಹರಿಸದಿರುವುದು.೩. ಹುಸಿಯ ನಡಿಯದಿರುವುದು. ೪. ವಿಶ್ವಾಸಘಾತ ಮಡದಿರುವುದು. ೫. ಪ್ರಾಣಿಹಿಂಸೆಯ ಮಡದಿರುವುದು. ೬. ಶರಣಸಂಕುಲವನ್ನು ಸಂತೋಷದಲ್ಲಿಡುವುದು. ೭. ಸ್ವೀಕರಿಸಿದ ನೇಮವನ್ನು ಬಿಡದಿರುವುದು. ೮. ಷಟ್‌ಸ್ಥಲದವರ ಧಿಕ್ಕರಿಸುವ ಜನರ ಸೀಳುವೆನೆಂಬುವ ವ್ರತ. ೯. ಕೆಟ್ಟವರ ಸಹವಾಸ ಮಡದಿರುವುದು. ೧೦. ಸಜ್ಜನರ ಸಂಗವನ್ನು ಬಿಡದಿರುವುದು. ೧೧. ಅನ್ಯದೇವತಾ ಭಜನೆಗೆ ವಿಮುಖವಾಗಿರುವುದು. ೧೨. ಶಿವನೊಬ್ಬನೇ ಪರಮತ್ಮ ಎಂಬುದನ್ನು ಮನದಲ್ಲಿ ತುಂಬಿಕೊಳ್ಳುವುದು. ೧೩. ಶಿವ ಮತ್ತು ಶಿವಗಣಗಳ ಮಧ್ಯೆ ಭೇದ ಮಡದಿರುವುದು. ೧೪. ಸಕಲಜೀವಿಗಳ ಹಿತ ಬಯಸುವುದು. ೧೫. ಸರ್ವರಿಗೂ ಹಿತಮಡುವುದು. ೧೬. ಕಡ್ಡಿಯ ಲಿಂಗಕ್ಕೆ ತೋರಿ ದಂತಧಾವನೆಯ ಮಡುವುದು. ೧೭. ಸರ್ವ ಅವಯವವ ಸ್ವಚ್ಛಗೊಳಿಸುವುದು. ೧೮. ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಡದಿರುವುದು. ೧೯. ಪ್ರಣವಮುದ್ರೆಯಿಲ್ಲದ ವಸ್ತ್ರವ ಹೊದಿಯದಿರುವುದು. ೨೦. ಹುಟ್ಟಿದ ಶಿಶುವಿಗೆ ಲಿಂಗಧಾರಣೆ ಮಡದೆ ತಾಯ ಮೊಲೆಹಾಲ ಜೇನುತುಪ್ಪ ಮುಟ್ಟಿಸದಿರುವುದು. ೨೧. ವಚನಭ್ರಷ್ಟ ಆಗದೆ ಇರುವುದು. ೨೨. ಸತ್ಯವ ನುಡಿದು ತಪ್ಪದಿರುವುದು. ೨೩. ಹಸುಗಳನ್ನು ಕಟ್ಟಿ ರಕ್ಷಿಸುವುದು. ೨೪. ಹಸುಗಳಿಗೆ ಲಿಂಗೆಮುದ್ರೆ ಹಾಕಿ ಹಾಲು ಕರೆಯುವುದು. ೨೫. ಮಂತ್ರಸಹಿತ ಗೋಮಯವ ಹಿಡಿದು, ಮಂತ್ರಸಹಿತ ಪುಟವಿಕ್ಕಿ ಭಸ್ಮದ ರಾಶಿಯ ಮಡುವುದು. ೨೬. ಪಾದೋದಕದೊಡನೆ ಆ ಭಸ್ಮದ ರಾಶಿಯ ಉಂಡಿಯ ಕಟ್ಟುವುದು. ೨೭. ವಿಧಿಯರಿತು, ಸ್ಥಾನವರಿತು ರುದ್ರಾಕ್ಷಿಗಳ ಧರಿಸುವುದು. ೨೮. ಶಿವಾನುಭವವ ಶಾಸ್ತ್ರವ ವಿಚಾರಿಸುವುದು. ೨೯. ಮನ ನೋಯಿಸದೆ ಮಾತನಾಡುವುದು. ೩೦. ಲಿಂಗದ ಕಲೆ ಅರಿತು ಲಿಂಗಪೂಜೆ ಮಡುವುದು. ೩೧. ಗುರುಮುಖದಿಂದ ತಾನಾರು ತನ್ನ ನಿಜವೇನೆಂದು ಬೆಸಗೊಳ್ಳುವುದು. ೩೨. ಷಡ್ವರ್ಗಂಗಳ ಮೆಟ್ಟಿ ಷಟ್‌ಸ್ಥಲವನಿಂಬುಗೊಳ್ಳುವುದು. ೩೩. ಅವಿಚ್ಛಿನ್ನವಾಗಿ ಅಂಗ್ರಯದಲ್ಲಿ ಮನ ಓಕರಿಸಿಕೊಳ್ಳುವುದು. ೩೪. ಲಿಂಗದಲ್ಲಿ ಶಿಲೆಯ ಭಾವ ಅರಿಸದೆ ಇರುವುದು. ೩೫ ಜಂಗಮದಲ್ಲಿ ಕುಲವನರಿಸದಿರುವುದು. ೩೬. ವಿಭೂತಿಯ ಮಣ್ಬದಿಹುದು. ೩೭. ರುದ್ರಾಕ್ಷಿಯ ಶುದ್ಧ ಮಡಿ ಮಣಿಗಳ ಧರಿಸುವುದು. ೩೮. ಪಾದೋದಕದಲ್ಲಿ ಉಚ್ಛಿಷ್ಟವಳಿದುದು. ೩೯. ಪ್ರಸಾದದಲ್ಲಿ ರುಚಿಯ ನೋಡದಿರುವುದು. ೪೦. ಕುತ್ಸಿತ ಕಲ್ಪನೆಯ ಮಡದಿರುವುದು. ೪೧. ಲಿಂಗಾರ್ಚನ ವಿರಹಿತ ಭೋಜನ ಮಡದಿರುವುದು. ೪೨. ಐಕ್ಯರ ಸಮಧಿಗೊಳಿಸಿ ತಾನು ಲಿಂಗಪೂಜೆಯ ಮಡುವುದು. ೪೩. ಲಿಂಗದ್ರೋಹ ಕೇಳಿ ಪ್ರಾಣಬಿಡುವುದು. ೪೪. ಜಂಗಮದ್ರೋಹ ಕೇಳಿ ಐಕ್ಯನಾಗುವುದು. ೪೫. ಲಿಂಗದ್ರೋಹಿಯ ಪ್ರಾಣವ ಭೇದಿಸುವುದು. ೪೬. ಜಂಗಮದ್ರೋಹಿಯ ಶಿರವನೀಡಾಡುವುದು. ೪೭. ಅಷ್ಟಾವರಣ ಸಂಗವ ಮಡುವ ಭೇದವ ತಿಳಿವುದು. ೪೮. ತಾನಾರು ಲಿಂಗವಾರು ಎಂಬ ಭೇದವಿಲ್ಲದಿರುವುದು. ೪೯. ತನ್ನ ನಿಜವಿಚಾರವ ತಾ ಮರೆಯದೆ ಷಟ್‌ಸ್ಥಲದವರಿಗೆ ಅರುಹಿ ತನ್ನಂತೆ ಮಡುವುದು.
        ೫೦. ಈ ಎಲ್ಲ ಆಚಾರಗಳನ್ನು ಕಡೆಮುಟ್ಟಿಸುವುದು.
        ಇಲ್ಲಿ ಅನೇಕ ಆಚರಣೆಗಳ ಪ್ರಸ್ತಾಪವಾಗಿದೆ. ಈ ಆಚರಣೆಗಳು ಗೊಡ್ಡು ಅಲ್ಲ ಅಂತ ಹೇಳ್ತೀರಾ ರೇಣುಕಾ? 😛

      • Annapoorna

        ಶ್ವಪಚೋಪಿ ಮುನಿಶ್ರೇಷ್ಠಃ
        ಯಸ್ತು ಲಿಂಗಾರ್ಚನೇ ರತಃ |
        ಲಿಂಗಾರ್ಚನವಿಹೀನೋಪಿ
        ಬ್ರಾಹ್ಮಣಃ ಶ್ವಪಚಾಧಮಃ ||
        ಇದರರ್ಥ ಇದು:
        ಲಿಂಗಾರ್ಚನೆ ಮಾಡುವ ಶ್ವಪಚ ಮುನಿಶ್ರೇಷ್ಠ; ಲಿಂಗಾರ್ಚನೆ ಮಾಡುವ ಬ್ರಾಹ್ಮಣನೂ ಮುನಿಶ್ರೇಷ್ಠ
        ಲಿಂಗಾರ್ಚನೆ ಮಾಡದ ಬ್ರಾಹ್ಮಣ ಅಧಮ; ಲಿಂಗಾರ್ಚನೆ ಮಾಡದ ಶ್ವಪಚನೂ ಅಧಮ.
        ವಚನಕಾರರ ಎಲ್ಲಾ ಬ್ರಾಹ್ಮಣರನ್ನೂ ಟೀಕೆ ಮಾಡಿಲ್ಲ. ಲಿಂಗಾರ್ಚನೆ ಮಾಡದ ಬ್ರಾಹ್ಮಣರ ಬಗ್ಗೆ ಮಾತ್ರ ಅವರ ಟೀಕೆ ಇತ್ತು. ವಚನಕಾರರು ಎಲ್ಲಾ ಶ್ವಪಚರ ಪರವಾಗಿ ಇರಲಿಲ್ಲ, ಕೇವಲ ಲಿಂಗಾರ್ಚನೆ ಮಾಡುವ ಶ್ವಪಚರ ಪರವಾಗಿ ಇದ್ದರು. ಇದು ವಚನಗಲಿಂದಲೇ ಸುಸ್ಪಷ್ಟವಾಗಿರುವಾಗ ವಚನಕಾರರು ಜಾತಿರಹಿತ ಸಮಾಜದ ಹರಿಕಾರರು ಆಗಿದ್ದರು ಎಂದು ಹೇಗೆ ಹೇಳಲು ಸಾಧ್ಯ?

        • Ramjan Darga

          ಇಷ್ಟಲಿಂಗಾರ್ಚನೆ ಮಾಡುವ ಬ್ರಾಹ್ಮಣ ಬ್ರಾಹ್ಮಣನಾಗಿ ಉಳಿಯುವುದಿಲ್ಲ. ಅವನು ಯಾವುದೇ ಗೋತ್ರದವನಿರಬಹುದು ಮತ್ತು ತ್ರಿ ಮತಸ್ಥರಲ್ಲಿ ಯಾವುದೇ ಮತದವನಿರಬಹುದು. ಆತ ತನ್ನ ಪೂರ್ವಾಶ್ರಮದ ಇಂಥ ಎಲ್ಲ ತೊಡಕುಗಳನ್ನು ಕಳೆದುಕೊಳ್ಳುವುದರ ಮೂಲಕ ಮೇಲುರಿಮೆಯಿಂದ ಕೆಳಗಿಳಿದು ನವಮಾನವನಾಗುವನು. ಇಷ್ಟಲಿಂಗಾರ್ಚನೆ ಮಾಡುವ ಶ್ವಪಚ ತನ್ನ ಕೀಳರಿಮೆಯಿಂದ ಮೇಲೇರಿ ನವಮಾನವನಾಗುವನು. ದಾಸೀಪತ್ರನಾಗಲಿ, ವೇಶ್ಯಾಪುತ್ರನಾಗಲಿ, ಬ್ರಾಹ್ಮಣನಾಗಲಿ, ಶ್ವಪಚನಾಗಲಿ ಶಿವದೀಕ್ಷೆಯಾದ ಬಳಿಕ ಶಿವಸ್ವರೂಪಿಗಳೇ ಆಗುವರು. ಅವರಲ್ಲಿ ಯಾವುದೇ ಅಂತರ ಇರುವುದಿಲ್ಲ. ಇಂಥ ಶಿವಸ್ವರೂಪಿಗಳ ಲಿಂಗಾಯತ ಧರ್ಮದಲ್ಲಿ ಜಾತಿಗಳಿಲ್ಲ, ಮತಗಳಿಲ್ಲ, ಕುಲಗೋತ್ರಗಳಿಲ್ಲ, ಅಸ್ಪೃಶ್ಯತೆ ಇಲ್ಲ, ಬಡವ ಮತ್ತು ಶ್ರೀಮಂತ ಎಂಬ ಭೇದಭಾವವೂ ಇಲ್ಲ. ಈ ಕಾರಣದಿಂದಲೇ ವಚನಕಾರರು ಜಾತಿರಹಿತ ಮತ್ತು ವರ್ಗರಹಿತ ಸಮಾಜದ ಹರಿಕಾರರು. ಇಲ್ಲಿ ಎಲ್ಲರಿಗೂ ಪ್ರವೇಶವಿದೆ. ಶ್ವಪಚರಷ್ಟೇ ಅಲ್ಲದೆ ಅನೈತಿಕ ಸಂಬಂಧದಿಂದ ಜನಿಸಿದವನಿಗೂ ಪ್ರವೇಶವಿದೆ. ಆದರೆ ಶ್ವಪಚನನ್ನು ಬ್ರಾಹ್ಮಣನನ್ನಾಗಿ ಮಾಡುವ ಯಾವ ಮಂತ್ರಗಳು ವೇದಗಳಲ್ಲಿವೆ? ಬ್ರಾಹ್ಮಣರಾದರೂ ಒಂದಾಗಿ ಇರುವಂಥ ಸ್ಥಿತಿ ಇದೆಯೆ? ಇದ್ದರೆ ತ್ರಿ ಮತಸ್ಥರೇಕೆ ಇರುತ್ತಿದ್ದರು?

        • jayateerth joshi

          Ms. Annapoorna i hv repeatedly told u about ur ignorance. What is linga? It is the symbol of supreme soul. Basavanna wanted to unite all people with symbol of supreme soul. He was with everybody not as u said only with those who worship linga. Brahmin is also not by caste. Brahmin means BRAHMAM JAANAATI ITI BRAHMANA

  8. ವಿಜಯ್

    ತಪ್ಪದೇ ಈ ೫೦ ಆಚಾರಗಳನ್ನು ಓದಿ.
    ಐವತ್ತು ಆಚಾರ: ಇಷ್ಟಲಿಂಗ ಸಂಬಂಧವಾದ ಆಚಾರಗಳಿಂದ ನಮ್ಮ ಕಾಯವನ್ನೇ ಕೈಲಾಸ ಮಾಡಿಕೊಳ್ಳಬಹುದು. ಚನ್ನಬಸವಣ್ಣನವರು ಇಷ್ಟಲಿಂಗ ದೀಕ್ಷೆ ನೀಡುವ ಸಂದರ್ಭದಲ್ಲಿ ಸಿದ್ಧರಾಮರಿಗೆ ೫೦ ಬಗೆಯ ಆಚಾರಗಳನ್ನು ಬೋಧಿಸಿದ್ದಾರೆ.
    ೧. ಪರಸ್ತ್ರೀಯನ್ನು ಬಯಸದೆ ಇರುವುದು. ೨. ಪರಧನವನ್ನು ಅಪಹರಿಸದಿರುವುದು.೩. ಹುಸಿಯ ನಡಿಯದಿರುವುದು. ೪. ವಿಶ್ವಾಸಘಾತ ಮಡದಿರುವುದು. ೫. ಪ್ರಾಣಿಹಿಂಸೆಯ ಮಡದಿರುವುದು. ೬. ಶರಣಸಂಕುಲವನ್ನು ಸಂತೋಷದಲ್ಲಿಡುವುದು. ೭. ಸ್ವೀಕರಿಸಿದ ನೇಮವನ್ನು ಬಿಡದಿರುವುದು. ೮. ಷಟ್‌ಸ್ಥಲದವರ ಧಿಕ್ಕರಿಸುವ ಜನರ ಸೀಳುವೆನೆಂಬುವ ವ್ರತ. ೯. ಕೆಟ್ಟವರ ಸಹವಾಸ ಮಡದಿರುವುದು. ೧೦. ಸಜ್ಜನರ ಸಂಗವನ್ನು ಬಿಡದಿರುವುದು. ೧೧. ಅನ್ಯದೇವತಾ ಭಜನೆಗೆ ವಿಮುಖವಾಗಿರುವುದು. ೧೨. ಶಿವನೊಬ್ಬನೇ ಪರಮತ್ಮ ಎಂಬುದನ್ನು ಮನದಲ್ಲಿ ತುಂಬಿಕೊಳ್ಳುವುದು. ೧೩. ಶಿವ ಮತ್ತು ಶಿವಗಣಗಳ ಮಧ್ಯೆ ಭೇದ ಮಡದಿರುವುದು. ೧೪. ಸಕಲಜೀವಿಗಳ ಹಿತ ಬಯಸುವುದು. ೧೫. ಸರ್ವರಿಗೂ ಹಿತಮಡುವುದು. ೧೬. ಕಡ್ಡಿಯ ಲಿಂಗಕ್ಕೆ ತೋರಿ ದಂತಧಾವನೆಯ ಮಡುವುದು. ೧೭. ಸರ್ವ ಅವಯವವ ಸ್ವಚ್ಛಗೊಳಿಸುವುದು. ೧೮. ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಡದಿರುವುದು. ೧೯. ಪ್ರಣವಮುದ್ರೆಯಿಲ್ಲದ ವಸ್ತ್ರವ ಹೊದಿಯದಿರುವುದು. ೨೦. ಹುಟ್ಟಿದ ಶಿಶುವಿಗೆ ಲಿಂಗಧಾರಣೆ ಮಡದೆ ತಾಯ ಮೊಲೆಹಾಲ ಜೇನುತುಪ್ಪ ಮುಟ್ಟಿಸದಿರುವುದು. ೨೧. ವಚನಭ್ರಷ್ಟ ಆಗದೆ ಇರುವುದು. ೨೨. ಸತ್ಯವ ನುಡಿದು ತಪ್ಪದಿರುವುದು. ೨೩. ಹಸುಗಳನ್ನು ಕಟ್ಟಿ ರಕ್ಷಿಸುವುದು. ೨೪. ಹಸುಗಳಿಗೆ ಲಿಂಗೆಮುದ್ರೆ ಹಾಕಿ ಹಾಲು ಕರೆಯುವುದು. ೨೫. ಮಂತ್ರಸಹಿತ ಗೋಮಯವ ಹಿಡಿದು, ಮಂತ್ರಸಹಿತ ಪುಟವಿಕ್ಕಿ ಭಸ್ಮದ ರಾಶಿಯ ಮಡುವುದು. ೨೬. ಪಾದೋದಕದೊಡನೆ ಆ ಭಸ್ಮದ ರಾಶಿಯ ಉಂಡಿಯ ಕಟ್ಟುವುದು. ೨೭. ವಿಧಿಯರಿತು, ಸ್ಥಾನವರಿತು ರುದ್ರಾಕ್ಷಿಗಳ ಧರಿಸುವುದು. ೨೮. ಶಿವಾನುಭವವ ಶಾಸ್ತ್ರವ ವಿಚಾರಿಸುವುದು. ೨೯. ಮನ ನೋಯಿಸದೆ ಮಾತನಾಡುವುದು. ೩೦. ಲಿಂಗದ ಕಲೆ ಅರಿತು ಲಿಂಗಪೂಜೆ ಮಡುವುದು. ೩೧. ಗುರುಮುಖದಿಂದ ತಾನಾರು ತನ್ನ ನಿಜವೇನೆಂದು ಬೆಸಗೊಳ್ಳುವುದು. ೩೨. ಷಡ್ವರ್ಗಂಗಳ ಮೆಟ್ಟಿ ಷಟ್‌ಸ್ಥಲವನಿಂಬುಗೊಳ್ಳುವುದು. ೩೩. ಅವಿಚ್ಛಿನ್ನವಾಗಿ ಅಂಗ್ರಯದಲ್ಲಿ ಮನ ಓಕರಿಸಿಕೊಳ್ಳುವುದು. ೩೪. ಲಿಂಗದಲ್ಲಿ ಶಿಲೆಯ ಭಾವ ಅರಿಸದೆ ಇರುವುದು. ೩೫ ಜಂಗಮದಲ್ಲಿ ಕುಲವನರಿಸದಿರುವುದು. ೩೬. ವಿಭೂತಿಯ ಮಣ್ಬದಿಹುದು. ೩೭. ರುದ್ರಾಕ್ಷಿಯ ಶುದ್ಧ ಮಡಿ ಮಣಿಗಳ ಧರಿಸುವುದು. ೩೮. ಪಾದೋದಕದಲ್ಲಿ ಉಚ್ಛಿಷ್ಟವಳಿದುದು. ೩೯. ಪ್ರಸಾದದಲ್ಲಿ ರುಚಿಯ ನೋಡದಿರುವುದು. ೪೦. ಕುತ್ಸಿತ ಕಲ್ಪನೆಯ ಮಡದಿರುವುದು. ೪೧. ಲಿಂಗಾರ್ಚನ ವಿರಹಿತ ಭೋಜನ ಮಡದಿರುವುದು. ೪೨. ಐಕ್ಯರ ಸಮಧಿಗೊಳಿಸಿ ತಾನು ಲಿಂಗಪೂಜೆಯ ಮಡುವುದು. ೪೩. ಲಿಂಗದ್ರೋಹ ಕೇಳಿ ಪ್ರಾಣಬಿಡುವುದು. ೪೪. ಜಂಗಮದ್ರೋಹ ಕೇಳಿ ಐಕ್ಯನಾಗುವುದು. ೪೫. ಲಿಂಗದ್ರೋಹಿಯ ಪ್ರಾಣವ ಭೇದಿಸುವುದು. ೪೬. ಜಂಗಮದ್ರೋಹಿಯ ಶಿರವನೀಡಾಡುವುದು. ೪೭. ಅಷ್ಟಾವರಣ ಸಂಗವ ಮಡುವ ಭೇದವ ತಿಳಿವುದು. ೪೮. ತಾನಾರು ಲಿಂಗವಾರು ಎಂಬ ಭೇದವಿಲ್ಲದಿರುವುದು. ೪೯. ತನ್ನ ನಿಜವಿಚಾರವ ತಾ ಮರೆಯದೆ ಷಟ್‌ಸ್ಥಲದವರಿಗೆ ಅರುಹಿ ತನ್ನಂತೆ ಮಡುವುದು.
    ೫೦. ಈ ಎಲ್ಲ ಆಚಾರಗಳನ್ನು ಕಡೆಮುಟ್ಟಿಸುವುದು.
    ಲೇಖನವೊಂದರಲ್ಲಿ ಇವನೆಲ್ಲ ಬರೆದ ನಂತರ ರಂಜಾನ ದರ್ಗಾ ಈ ಕೆಳಗಿನಂತೆ ಶರಾ ಬರೆಯುತ್ತಾರೆ.
    ಈ ಆಚಾರಗಳಲ್ಲಿ ಬರುವ ಸೀಳುವುದು, ಪ್ರಾಣಬಿಡುವುದು, ಪ್ರಾಣವ ಭೇದಿಸುವುದು, ಐಕ್ಯನಾಗುವುದು, ಶಿರವನೀಡಾಡುವುದು ಮುಂತಾದ ಆಚಾರಗಳನ್ನು ಶಾಬ್ದಿಕವಾಗಿ ಅರ್ಥೈಸದೆ ಅವುಗಳ ಲಕ್ಷಣಾರ್ಥವನ್ನು ಗ್ರಹಿಸಬೇಕು. ಹೊಸಧರ್ಮ ಅಥವಾ ಜೀವನವಿಧಾನವೊಂದು ರೂಪುಗೊಳ್ಳುವ ಸಂದರ್ಭದಲ್ಲಿ ಅದರ ಅನುಯಾಯಿಗಳು ಅಲ್ಪಸಂಖ್ಯಾತರಾಗಿರುತ್ತಾರೆ. ಬಹುಸಂಖ್ಯಾತರ ದಬ್ಬಾಳಿಕೆಯನ್ನು ಎದುರಿಸುವ ಮಾನಸಿಕ ಸ್ಥಿತಿಯನ್ನು ಹೊಂದುವ ಸಂದರ್ಭದಲ್ಲಿ ಸ್ವರಕ್ಷಣೆಗಾಗಿ ಇಂಥ ಶಬ್ದಗಳ ಬಳಕೆಯಾಗುತ್ತವೆ. ಮರಿಗಳನ್ನು ತಿನ್ನಲು ರಣಹದ್ದು ಬಂದಾಗ ಕೋಳಿ ತನ್ನ ಮರಿಗಳನ್ನೆಲ್ಲ ರೆಕ್ಕೆಗಳಲ್ಲಿ ಅಡಗಿಸಿಕೊಂಡು ವೀರೋಚಿತ ಧ್ವನಿ ಹೊರಡಿಸಿ, ಅಂಜಿಸಿ ತನ್ನ ಮರಿಗಳನ್ನು ಕಾಪಾಡುವಂತೆ ಶರಣರು ತಮ್ಮ ತತ್ತ್ವಗಳ ರಕ್ಷಣೆ ಮಾಡಿದರು.
    ವಾವ್.. ವೇದದಲ್ಲಿ, ಪುರಾಣದಲ್ಲಿ ಏನನ್ನಾದರು ಹೇಳಿದರೆ ಶಾಬ್ದಿಕವಾಗಿ ಅರ್ಥೈಸಬೇಕು.. ಉದಾ: ಇವರ ಪ್ರೀತಿಯ ಹೇಳಿಕೆಯಾದ ಮನುವಿನ ‘ ಕಾದ ಸೀಸ ಕಿವಿಯಲ್ಲಿ ಸುರಿಯಬೇಕು’ ಎಂದರೆ ಇದ್ದಿದ್ದನ್ನು ಇದ್ದ ಹಾಗೆ ತೆಗೆದುಕೊಳ್ಳಬೇಕು..ಇಲ್ಲಿ ಲಕ್ಷಣಾರ್ಥ ಬೇಕು!

    • Annapoorna

      ಏನ್ರೀ ಇದು!! ಬರೀ ಗೊಡ್ಡು ಆಚರಣೆಗಳೇ ಇವೆಯಲ್ಲ ಚನ್ನಬಸವಣ್ಣನವರ ಪಟ್ಟಿಯಲ್ಲಿ! ಇಂತಹವನ್ನೆಲ್ಲ ಅದು ಹೇಗೆ ಇವರು ವೈಜ್ಞಾನಿಕ ಅಂತ ಕರೆದಿದ್ದಾರೆ ಅಂತ ಇವರೇ ಬಲ್ಲರು!

      • Ramjan Darga

        ವಿಜಯ್ ಅವರೆ, ನನ್ನ ಅವಧಿ ಲೇಖನಕ್ಕೆ ಸಂಬಂಧಿಸದ ವಿಚಾರವಿದು. ಆದರೂ ಉತ್ತರಿಸುತ್ತಿರುವೆ.
        ಲಿಂಗಾಯತ ಧರ್ಮದಲ್ಲಿ ಗುರು,ಲಿಂಗ,ಜಂಗಮ,ಪಾದೋದಕ, ಪ್ರಸಾದ,ವಿಭೂತಿ, ರುದ್ರಾಕ್ಷಿ,ಮಂತ್ರ ಎಂಬ ಎಂಟು ಪ್ರಕಾರದ ಆವರಣಗಳಿಗೆ ಅಷ್ಟಾವರಣಗಳೆನ್ನುವರು. ಐಹಿಕ ಜಗತ್ತಿನ ಮೋಹಕ್ಕೆ ಒಳಗಾಗದಂತೆ ಮಾನವನನ್ನು ಈ ಆವರಣಗಳು ತಡೆಯುತ್ತವೆ.
        ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಮತ್ತು ಭೃತ್ಯಾಚಾರ ಎಂಬ ಐದು ಬಗೆಯ ಆಚಾರಗಳಿಗೆ ಪಂಚಾಚಾರಗಳೆಂದು ಕರೆಯುತ್ತಾರೆ. ಏಕದೇವೋಪಾಸಕರಾಗಿ ಇಷ್ಟಲಿಂಗದಲ್ಲಿ ಮಾತ್ರ ನಂಬಿಕೆ ಇಡುವುದು ಲಿಂಗಾಚಾರ. ಪರಹಿತ ಬಯಸುವುದು ಸದಾಚಾರ. ಜಾತಿಭೇದ ಮಾಡದಿರುವುದು ಶಿವಾಚಾರ. ಶಿವಭಕ್ತರ ನಿಂದೆಯನ್ನು ಸಹಿಸದಿರುವುದು ಗಣಾಚಾರ. ಶಿವಭಕ್ತರಲ್ಲಿ ಸೇವಾಭಾವದಿಂದ ಇರುವುದು ಭತ್ಯಾಚಾರ.
        ಭಕ್ತನು ಇಷ್ಟಲಿಂಗದಲ್ಲಿ ನಂಬಿಕೆ ಇಟ್ಟು, ಧರ್ಮವಂತನಾಗಿ ಜೀವಿತಾವಧಿಯಲ್ಲೇ ಮುಕ್ತಿಯನ್ನು ಸಾಧಿಸಲು ಇರುವ ಆರು ಹಂತಗಳಿಗೆ ಷಟ್‍ಸ್ಥಲಗಳೆಂದು ಕರೆಯುತ್ತಾರೆ. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಸ್ಥಲಗಳೇ ಷಟ್‍ಸ್ಥಲಗಳು. ಇವು ಮಾನವನ ಒಳಲೋಕಕ್ಕೆ ಸಂಬಂಧಿಸಿವೆ.
        ಈ ಮೂರು ಪ್ರಕಾರಗಳು ಲಿಂಗಾಯತ ಧರ್ಮದ ಆಧಾರ ಸ್ತಂಭಗಳು. ಇವುಗಳನ್ನು ಪಾಲಿಸುವುದೇ ಲಿಂಗವಂತರ ಆದ್ಯ ಕರ್ತವ್ಯವಾಗಿದೆ.
        ಯುವಕರಾಗಿದ್ದ ಚನ್ನಬಸವಣ್ಣನವರು ವೃದ್ಧರಾಗಿದ್ದ ಸಿದ್ಧರಾಮರಿಗೆ ಇಷ್ಟಲಿಂಗ ದೀಕ್ಷೆ ಕೊಡುವ ಸಂದರ್ಭದಲ್ಲಿ ಕಲ್ಯಾಣದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕ್ರೌರ್ಯ ಶರಣರ ವಿರುದ್ಧ ಎದ್ದು ಕಾಣುತ್ತಿತ್ತು. ಆ ಹಿನ್ನೆಲೆಯಲ್ಲಿ ಚನ್ನಬಸವಣ್ಣನವರು ಹೇಳಿದ್ದಾರೆ. ಇಲ್ಲಿಯ ವರೆಗೆ ಯಾವ ಲಿಂಗಾಯತನೂ ಯಾವುದೇ ಲಿಂಗಾಯತಧರ್ಮ ವಿರೋಧಿಯ ಶಿರವನ್ನು ಈಡಾಡಿಲ್ಲ. ‘ಹುಲಿಗಳಿಗೆ ನಖಗಳಿರುವ ವರೆಗೆ ಹಸುಗಳಿಗೆ ಕೋಡುಗಳಿರುತ್ತವೆ’ ಎಂಬರ್ಥದಲ್ಲಿ ನಾನು ಹೇಳಿದರೆ. ವಿಜಯ್ ಅವರು ‘ಹಸುಗಳಿಗೆ ಕೋಡುಗಳಿರುವ ವರೆಗೆ ಹುಲಿಗೆ ನಖಗಳಿರುತ್ತವೆ’ ಎಂಬರ್ಥದಲ್ಲಿ ಹೇಳುತ್ತಿದ್ದಾರೆ. ಅವರಿಗೆ ಮನುಸ್ಮೃತಿ ಅಷ್ಟೊಂದು ಪ್ರಿಯವಾಗಿದ್ದರೆ ಅದು ಸಹಜವಾದುದೇ ಆಗಿದೆ.

        • ವಿಜಯ್

          ಈ ಮೇಲಿನ ಆಚಾರಗಳೆಲ್ಲ ನೀವು ಲೇಖನದಲ್ಲಿ ವರ್ಣಿಸಿದ ಶರಣಧರ್ಮಕ್ಕೆ (ಪ್ರಗತಿಪರ,ವೈಜ್ಞಾನಿಕ ಇತ್ಯಾದಿ) ವಿರುದ್ಧವಾಗಿ ಇಲ್ಲವೆಂದು ನೀವು ಭಾವಿಸಿದರೆ ಮತ್ತೆ ಹೇಳುವುದೇನು ಇಲ್ಲ. ನನಗೆ ನಿಮ್ಮ ವರ್ಣನೆಯ ಶರಣಧರ್ಮ ಮತ್ತು ಬಸವಣ್ಣನವರ ಶರಣಧರ್ಮ ಎರಡು ಬೇರೆಯೆ ಅನಿಸುತ್ತಿದೆ.
          [ಇಲ್ಲಿಯ ವರೆಗೆ ಯಾವ ಲಿಂಗಾಯತನೂ ಯಾವುದೇ ಲಿಂಗಾಯತಧರ್ಮ ವಿರೋಧಿಯ ಶಿರವನ್ನು ಈಡಾಡಿಲ್ಲ.]
          ಸರಿ..ಕಾದ ಸೀಸವನ್ನು ಎಷ್ಟು ಜನರ ಕಿವಿಗೆ ಹಾಕಿದರು?
          [‘ಹುಲಿಗಳಿಗೆ ನಖಗಳಿರುವ ವರೆಗೆ ಹಸುಗಳಿಗೆ ಕೋಡುಗಳಿರುತ್ತವೆ’ ಎಂಬರ್ಥದಲ್ಲಿ ನಾನು ಹೇಳಿದರೆ. ವಿಜಯ್ ಅವರು ‘ಹಸುಗಳಿಗೆ ಕೋಡುಗಳಿರುವ ವರೆಗೆ ಹುಲಿಗೆ ನಖಗಳಿರುತ್ತವೆ’ ಎಂಬರ್ಥದಲ್ಲಿ ಹೇಳುತ್ತಿದ್ದಾರೆ. ]
          ಅಂಬಾ ಅನ್ನುವುದನ್ನು ಬಿಟ್ಟು ..ಗುರ್ ಅನ್ನುವುದು ಕೇಳಿಸಿದರು ನೀವು ಹಸು ಎನ್ನುತ್ತಿದ್ದಿರಿ,,ಕನಿಷ್ಟ ಪಕ್ಷ ಬೆಕ್ಕು ಎಂದಾದರೂ ಹೇಳಬಹುದಿತ್ತು!
          [ಅವರಿಗೆ ಮನುಸ್ಮೃತಿ ಅಷ್ಟೊಂದು ಪ್ರಿಯವಾಗಿದ್ದರೆ ಅದು ಸಹಜವಾದುದೇ ಆಗಿದೆ.]
          ನಿಮ್ಮ ಮತ್ತು ನಮ್ಮೆಲ್ಲ ‘ಪ್ರಗತಿಪರ,ಪ್ರಜ್ಞಾವಂತ,ಸಾಕ್ಷಿಪ್ರಜ್ಞೆ’ಗಳ ಮನು ಜಪ ನೋಡಿದರೆ ಯಾರಿಗೆ ಅದು ಹೆಚ್ಚು ಪ್ರಿಯ ಎಂದು ಗೊಂದಲವಾಗುತ್ತಿದೆ.

          • Ramjan Darga

            ಇಲ್ಲಿಯವರೆಗೂ ಜಾತಿಗಳು ಮತ್ತು ಅಸ್ಪೃಶ್ಯತೆ ಇರುವುದು ಕಾದ ಸೀಸು ಕಿವಿಯಲ್ಲಿ ಹಾಕಿದ್ದಕ್ಕಿಂತಲೂ ಹೆಚ್ಚಿನದು. ಅಂಬೇಡ್ಕರರಿಗೆ 20ನೇ ಶತಮಾನದಲ್ಲೇ ಸಂಸ್ಕೃತ ಕಲಿಯಲು ಬಿಡಲಿಲ್ಲ. ಅವರು ಪರ್ಸಿಯನ್ ಕಲಿಯಬೇಕಾಯಿತು. ನಂತರ ಅವರು ಸಂಸ್ಕತದಲ್ಲಿ ಪ್ರಕಾಂಡ ಪಂಡಿತರಾದರು. ಮನುವಾದವನ್ನು ಧಿಕ್ಕರಿಸಿ ಬೌದ್ಧ ಧರ್ಮ ಸ್ವೀಕರಿಸಿದರು. ಈ ದೇಶದ ತುಳಿತಕ್ಕೊಳಗಾದ ಜನಸಮುದಾಯಕ್ಕೆ ಸ್ವಾಭಿಮಾನದ ಪ್ರತೀಕವಾದರು. 21ನೇ ಶತಮಾನದಲ್ಲೇ ಇಷ್ಟೊಂದು ಅಸಹನೆಯಿಂದ ವಾದಿಸುವವರು ಕಳೆದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಎಷ್ಟೊಂದು ಅಸಹನೆ ವ್ಯಕ್ತಪಡಿಸಿರಬಹುದು!

        • Amaresh

          “ಏಕದೇವೋಪಾಸಕರಾಗಿ ಇಷ್ಟಲಿಂಗದಲ್ಲಿ ಮಾತ್ರ ನಂಬಿಕೆ ಇಡುವುದು ಲಿಂಗಾಚಾರ.” ಸರಿ. ಆದರೆ ಇದು ಯಾವ ದೃಷ್ಟಿಯಿಂದ ವೈಜ್ಞಾನಿಕ ಅಂತ ಹೇಳಿ ಮಾರಾಯ್ರೆ! ಏಕದೇವೋಪಾಸನೆಯನ್ನೂ ಇಷ್ಟಲಿಂಗದಲ್ಲಿ ನಂಬಿಕೆ ಇದುವುದನ್ನೂ ಯಾವ ಸೀಮೆಯ ವಿಜ್ಞಾನ ಒಪ್ಪುತ್ತದೆ ಅಂತ ಹೇಳ್ತೀರಾ ಪ್ಲೀಸ್?

          • Ramjan Darga

            ಇಷ್ಟಲಿಂಗ ಎಂಬುದು ಶಿವಯೋಗ ಸಾಧನ. ಅದು ದೇವರಲ್ಲ. ಧರ್ಮ ಲಾಂಛನ ಮತ್ತು ದೇವರ ಕುರುಹು. ಅರಿವೇ ಗುರು; ಗುರುವೇ ದೇವರು. ‘ಅರಿವು ಹಿಡಿಯೆಂದಡೆ ಕುರುಹು ಹಿಡಿದರು ನೋಡಾ’ ಎಂದು ಅಲ್ಲಮಪ್ರಭುಗಳು ತಿಳಿಸಿದ್ದಾರೆ.
            ವಿಜ್ಞಾನ ಎಂಬುದು ಸೃಷ್ಟಿಗೆ ಸಂಬಂಧಿಸಿದುದು, ಸೃಷ್ಟಿಕರ್ತನಿಗೆ ಅಲ್ಲ. ವಿಜ್ಞಾನದಿಂದ ಸೃಷ್ಟಿಯನ್ನು ಅರಿತುಕೊಳ್ಳಬಹುದು. ಸೃಷ್ಟಿಕರ್ತ ವಿಜ್ಞಾನದ ಕೈಗಿ ನಿಲುಕಿದ್ದರೆ ಅವನ ಗತಿ ಏನಾಗುತ್ತಿತ್ತು?

          • Amaresh

            Simple question. Does science accept ಲಿಂಗಾಚಾರ as scientific?

          • Ramjan Darga

            ಸಿಂಪಲ್ ಉತ್ತರ; ದೇವರು ವಿಜ್ಞಾನಕ್ಕೆ ನಿಲುಕದವನು. ಅಗಮ್ಯ, ಅಗೋಚರ, ಅಪ್ರತಿಮ, ಅಪ್ರಮಾಣನಾದವನು. ಇಲ್ಲಿ ವಿಜ್ಞಾನದ ಕೆಲಸವಿಲ್ಲ. ಸೃಷ್ಟಿಕರ್ತ ವಿಜ್ಞಾನಕ್ಕೆ ಹೊರಗಾದರೂ ಆತನ ಸೃಷ್ಟಿ ವೈಜ್ಞಾನಿಕವಾಗಿದೆ. ಸೃಷ್ಟಿಯ ರಹಸ್ಯವನ್ನು ಅರಿತು ಸಕಲಜೀವಾತ್ಮರಿಗೆ ಲೇಸನೇ ಬಯಸುವುದೇ ವಿಜ್ಞಾನದ/ವಿಜ್ಞಾನಿಗಳ ನಿಜವಾದ ಕಾಯಕವಾಗಿದೆ. ಹೀಗೆ ಶರಣರು ವೈಜ್ಞಾನಿಕ ಮನೋಭಾವದವರಾಗಿದ್ದಾರೆ. ಆ ಕಾರಣದಿಂದಲೇ ವೈದಿಕದ ಟೊಳ್ಳುತನವನ್ನು ಬಯಲಿಗೆಳೆಯಲು ಅವರಿಗೆ ಸಾಧ್ಯವಾಯಿತು. ಆ ಮೂಲಕ ಎಲ್ಲ ತೆರನಾದ ಅಸಮಾನತೆಗಳ ವಿರುದ್ಧ ಹೋರಾಡಲು ಸಾಧ್ಯವಾಯಿತು.

          • Amaresh

            “ಸೃಷ್ಟಿಕರ್ತ ದೇವರು ವಿಜ್ಞಾನಕ್ಕೆ ನಿಲುಕದವನು” ಎಂಬ ಧೋರಣೆ ವಚನಕಾರರದ್ದಲ್ಲ, ಅದು ಸೆಮೆಟಿಕ್ ಮತಗಳ ಹಿನ್ನೆಲೆಯಲ್ಲಿ ರೂಪಿತವಾಗಿರುವ ತಮ್ಮ ಐಡಿಯಾಲಜಿಯದ್ದು. ಸಹನಾ ಅವರು ಹೇಳಿರುವ ಹಾಗೆ “ಶರಣರ ವಚನಗಳ ಅನುಭಾವವು ಸೃಷ್ಟಿಕರ್ತ personal God ಬಗ್ಗೆ ಮಾತನಾಡುವುದಿಲ್ಲ. ಅಮೂರ್ತವಾದ ನಿರ್ಗುಣ ಚೈತನ್ಯ ಸ್ವರೂಪಿಯನ್ನು ಕಲ್ಪಿಸುತ್ತಾರೆ. ಅದಕ್ಕೂ ಸೃಷ್ಟಿಕರ್ತ ಏಕದೇವನಿಗೂ ಸಂಬಂದವೇ ಇಲ್ಲ”.
            ವೇದಗಳ ಬಗ್ಗೆ ಲಘುವಾದ ಕೆಲವು ಮಾತುಗಳು ವಚನಗಳಲ್ಲಿ ಕಂಡುಬರುತ್ತವೆಯಾದರೂ, ವೇದಗಳೊಂದಿಗೆ ತಾತ್ವಿಕ ಜಿಜ್ನಾಸೆ ನಡೆಸಿ ನೀವು claim ಮಾಡಿರುವ ಹಾಗೆ ಟೊಳ್ಳು ಎಂದು prove ಮಾಡುವ ಯತ್ನವೇ ಇಲ್ಲ. ಪದೇ ಪದೇ ತರ್ಕಹೀನವಾಗಿ “ವೈದಿಕದ ಟೊಳ್ಳುತನವನ್ನು ಬಯಲಿಗೆಳೆಯಲು ಅವರಿಗೆ ಸಾಧ್ಯವಾಯಿತು. ಆ ಮೂಲಕ ಎಲ್ಲ ತೆರನಾದ ಅಸಮಾನತೆಗಳ ವಿರುದ್ಧ ಹೋರಾಡಲು ಸಾಧ್ಯವಾಯಿತು” ಅಂತ ಹೇಳಿದರೆ ಹೇಳಿದ್ದು ನಿಜವಾಗಿಬಿಡುವುದಿಲ್ಲ.

          • ಸಹನಾ

            “ಸೃಷ್ಟಿಕರ್ತ ವಿಜ್ಞಾನಕ್ಕೆ ಹೊರಗಾದರೂ ಆತನ ಸೃಷ್ಟಿ ವೈಜ್ಞಾನಿಕವಾಗಿದೆ. ಸೃಷ್ಟಿಯ ರಹಸ್ಯವನ್ನು ಅರಿತು” ಗಾಡ್ ನ ನಿಯಮಗಳು ತಿಳಿದು ಮತ್ತು ಆತನ ಇಚ್ಚ ಹೇಗೆಲ್ಲಾ ಪ್ರಕಟವಾಗಿದೆ ಶೋಧಿಸಿ ಜನರಿಗೆ ಸೃಷ್ಟಿಕರ್ತನ ಗಾಡ್ ಆಣತಿಯಂತೆ ಬದುಕುವಂತೆ ಮಾಡಬೆಕೆಂಬುದೇ ಆರಂಭಿಕ ಕ್ರಿಶ್ಚಿಯನ್ನರ ನಂಬಿಕೆಯಾಗಿತ್ತು. ಹೀಗೆ History of Science ಓದಿದರೆ ವಿಶ್ವದ ರಚನೆಯ ಮೂಲಭೂತ ನಿಯಮಗಳ ಹುಡುಕಾಟಕ್ಕೆ ತೊಡಗಬೇಕೆಂದು ಹೊರಟಾಗ ಕ್ರಿಶ್ಚಯನ್ನರ ನಿಲುವು ಇದೇ ಆಗಿತ್ತು ಎನ್ನುವುದು ತಿಳಿಯುತ್ತದೆ. (ಅಷ್ಟೇ ಏಕೆ ಸಾಯುವವರೆಗೂ ನ್ಯೂಟನ್ gravitation Godನ ನಿಯಮವೆಂದೇ ಭಾವಿಸಿದ್ದ) ಅದರ ಫಲವಾಗಿಯೇ ವೈಜ್ಞಾನಿಕ ಆವಿಷ್ಕಾರಗಳು ಪಶ್ಚಿಮದಲ್ಲಿ ನಿರಂತರವಾಗಿ ನಡೆದವು. ಅಂದರೆ ವೈಜ್ಞಾನಿಕ ಹುಡುಕಾಟದ ಹಿಂದ ಸೆಮೆಟಿಕ್ ಥಿಯಾಲಜಿಯ ತುಡಿತವಿದೆ ಒಪ್ಪೋಣ. ಆದರೆ ಅದನ್ನು ಏಕೆ ಶರಣರ ದೇವರಿಗೆ ತಳುಕುಹಾಕುತ್ತೀರಿ. ವಚನಶರಣರು ಹೀಗೆ ಹೇಳಿದ್ದರೆ ಶರಣಪರಂಪರೆಯಲ್ಲಿ ಪಶ್ಚಿಮದಲ್ಲಿ ನಡೆದಂತೆ ವಿಪರೀತ ವೈಜ್ಞಾನಿಕ ಆವಿಷ್ಕಾರಗಳು ಹುಟ್ಟಬೇಕಿತ್ತಲ್ಲವೇ? ಏಕೆ ಹುಟ್ಟಲಿಲ್ಲ!
            ಭೌತಿಕ ಜಗತ್ತಿಗೆ ಸಂಬಂದಿಸಿದ ಆವಿಷ್ಕಾರಗಳಿಗೂ, ಹುಡುಕಾಟಗಳಿಗೂ ಅನುಭಾವಕ್ಕೂ ಸಂಬಂಧವಿಲ್ಲ ವೆಂದು ಮಾತ್ರವೇ ಶರಣರು ತಿಳಿದಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ, ಇದು ಅನುಭಾವಿ ಸಾಯುಜ್ಯಕ್ಕೆ ಅಡ್ಡಿ ಎಂಬದನ್ನೂ ಅರಿತಿದ್ದರು. ಹಾಗಾಗಿಯೇ, ಭೌತಿಕ ಪ್ರಪಂಚದ ರಚನೆಗಳು (ಗುಡಿ ಗೋಪುರಗಳು) ಸಾಮಾಜಿಕ ರಚನೆಗಳು (ಜಾತಿ, ಕುಲ, ಶಾಸ್ತ್ರ, ಆಚಾರಗಳು)ಶರಣರಿಗೆ ಅರ್ಥಮಾಡಿಂಡು ಇನ್ನೂ ಹೆಚ್ಚು ಸಂಕೀರ್ಣವಾದ ರಚನೆಗಳನ್ನು (ವಿಜ್ಞಾನದ ಮೂಲಕ) ಕಟ್ಟಬೇಕಿದ್ದ ವಿಚಾರಗಳಲ್ಲ, ಅವುಗಳಿಂದ ಬಿಡುಗಡೆ ಹೊಂದಬೇಕಿರುವ ವಿಚಾರಗಳಾಗಿದ್ದವು.

          • Amaresh

            ಸಹನಾ ಅವರೇ, ವಚನಗಳ ಬಗ್ಗೆ ಉತ್ತಮ ಹೊಳಹನ್ನೇ ಇಲ್ಲಿ ನೀವು ನೀಡಿದ್ದೀರಿ. ನೀವ್ಯಾರೋ ನನಗೆ ಗೊತ್ತಿಲ್ಲ, ಆದರೆ ಉತ್ತಮವಾದ ವಿಚಾರಗಳು ಎಲ್ಲಿಂದ ಬಂದರೇನು, ಅದನ್ನು ಸ್ವೀಕರಿಸುವುದು ಮುಖ್ಯ. ಧನ್ಯವಾದಗಳು.

          • ಸಹನಾ

            ಧನ್ಯವಾದಗಳು ಅಮರೇಶ‍್ ರವರೇ, ರಂಜಾನ್ ದರ್ಗಾರವರು ವಚನಗಳನ್ನು ತಿರುಚಿ ಹೇಗೆ ಅದರ ಆಶಯಗಳ ವಿರುದ್ದವಾಗಿ ಸೆಮೆಟಿಕ್ ಐಡಿಯಾಲಜಿಯನ್ನು ಶರಣರ ವಚನಗಳ ಹೆಸರಿನಲ್ಲಿ ಹೇಳುತ್ತಿದ್ದಾರೆ ಎಂಬುದನ್ನು ತರ್ಕಬದ್ದವಾಗಿ ತೋರಿಸುತ್ತಿದ್ದೇವೆ. ನಾವೆಲ್ಲರೂ ದರ್ಗಾರವ ನಿರೂಪಣೆಯ ಸಮಸ್ಯೆಗಳನ್ನು ಎತ್ತಿತೋರಿಸಿದರೆ ದರ್ಗಾರವರು ಅವನ್ನು ವಚನಕಾರರು ಮತ್ತು ಬಸವಣ್ಣನವರಿಗೆ ಮಾಡುತ್ತಿರುವ ಅಗೌರವ ಎಂಬಂತೆ ಬಿಂಬಿಸುತ್ತಿದ್ದಾರೆ.ಆದರೆ ಅದನ್ನು ಅರ್ಥಮಾಡಿಕೊಳ್ಳದೆ ಮತ್ತು ಅವರ ಈ ತಂತ್ರವನ್ನು ಅರಿಯದ ಕೆಲವರು ಅದನ್ನೇ ನಂಬಿ ನಾವೇ ವಚನಕಾರರ ವಿರೋಧಿಗಳು ಎನ್ನುವಂತೆ ಮಾತನಾಡುತ್ತಿರುವುದಕ್ಕೆ ಏನು ಹೇಳಬೇಕೆಂದು ತೋರುತ್ತಿಲ್ಲ. ಇದು ವಚನಕಾರರ ‘ಅನುಭಾವ’ದ ಜ್ಞಾನವನ್ನು ಈ ರೀತಿಯ ನಿರೂಪಕರು ಎಷ್ಟರ ಮಟ್ಟಗೆ ಲಿಂಗಾಯತ ಸಂಪ್ರಧಾಯದ ಅನುಯಾಯಿಗಳಿಂದ ಕಿತ್ತುಕೊಂಡಿದ್ದಾರೆ ಮತ್ತು ಸೆಮೆಟಿಕ್ ಐಡಿಯಾಲಜಿಗಳನ್ನು ಅವರಲ್ಲೂ ತುರುಕಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಎಂದಷ್ಟೇ ನನಗೆ ಅನಿಸುತ್ತಿದೆ.

          • Amaresh

            Dear Sahana, I too was shocked by the intolerant and anti democratic attitude of some readers towards those who expose flaws in Ranjan Darga’s argumentation. I suspect these uncivilized readers were motivated by Ranjan Darga’s approach towards criticism. Remember how he transformed criticism of his argumentation into criticism of Vachanakaras and Lingayata tradition. Remember his false accusation of foreign money behind the criticism. Remember how he raised the Manu gumma.

          • Ramjan Darga

            ಭೇರುಂಡನ ಪಕ್ಷಿಗೆ ದೇಹ ಒಂದೇ
            ತಲೆ ಎರಡರ ನಡುವೆ ಕನವಡ ಕಟ್ಟಿ
            ಒಂದು ತಲೆಯಲಿ ಹಾಲನೆರೆದು
            ಒಂದು ತಲೆಯಲಿ ವಿಷವನೆರೆದಡೆ
            ದೇಹವೊಂದೇ ವಿಷ ಬಿಡುವುದೇ ಅಯ್ಯಾ?
            ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ
            ನಿಂದೆಯ ಮಾಡಿದಡೆ
            ನಾ ಬೆಂದೆ ಕಾಣಾ, ಕೂಡಲಸಂಗಮದೇವಾ. (ಬಸವಣ್ಣನವರು)
            ಬಸವಣ್ಣನವರ ಚೈತನ್ಯಾತ್ಮಕ ಭೌತಿಕವಾದದ ಮಹತ್ವವನ್ನು ಸಾರುವ ವಚನವಿದು. ಗಂಡಭೇರುಂಡ ಪಕ್ಷಿಯ ಕಾವ್ಯಪ್ರತಿಮೆಯ ಮೂಲಕ ಅವರು ಅನುಭಾವದ ಜಗತ್ತು ಮತ್ತು ಭೌತಿಕ ಜಗತ್ತಿನ ಮೂಲ ಒಂದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಗಂ ಭೇರುಂಡ ಪಕ್ಷಿಯ ಎರಡೂ ತಲೆಗಳ ಮಧ್ಯೆ ಪರದೆ ಕಟ್ಟಿ ಒಂದು ಬಾಯಲ್ಲಿ ಹಾಲು ಮತ್ತು ಇನ್ನೊಂದು ಬಾಯಲ್ಲಿ ವಿಷ ಹಾಕಿದಾಗ ಅವೆರಡೂ ಆ ಪಕ್ಷಿಯ ಜಠರವನ್ನು ಸೇರಿದ ನಂತರ ಎಲ್ಲವೂ ವಿಷವಾಗಿ ಪಕ್ಷಿ ಸಾಯುವುದರಲ್ಲಿ ಸಂಶಯವಿಲ್ಲ. ಅದೇ ರೀತಿ ಇಷ್ಟಲಿಂಗ ಪೂಜಿಸಿ ಜಂಗಮ (ಸಮಾಜ) ಲಿಂಗವನ್ನು ಕಡೆಗಣಿಸಿದರೆ, ಅಂದರೆ ಸಾಮಾಜಿಕ ಪ್ರಜ್ಞೆ ಇಲ್ಲದೆ ಬರೆ ಅಧ್ಯಾತ್ಮ, ಅಧ್ಯಾತ್ಮ ಎಂದು ಬದುಕಿದರೆ ಪ್ರಯೋಜನ ಇಲ್ಲ ಎಂದು ಸೂಚಿಸುತ್ತಾರೆ.
            ಇದಕ್ಕೆ ಉಭಯಕುಳ ಎನ್ನುವರು. ಇನ್ನು ಜಂಗಮವೇ ಲಿಂಗವೆಂದು ನಂಬಿದೆ ಎಂದು ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ. ಹೀಗೆ ಬಸವಣ್ಣನವರು ಸಮಾಜವನ್ನೇ ದೇವರ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ’ ಎಂದು ಹೇಳಿದ್ದಾರೆ. ಕೈಲಾಸವೆಂಬುದೇನೋ ಪೃಥ್ವಿಯ ಮೇಲೊಂದು ಮೊರಡಿ’ ಎಂದು ಕೈಲಾಸವನ್ನು ಅಲ್ಲಗಳೆದಿದ್ದಾರೆ. ‘ಲಿಂಗಾರ್ಚನಂ ನ ಕರ್ತವ್ಯಂ, ಜಂಗಮಾರ್ಚನಂ ಕರ್ತವ್ಯಂ’ ಎಂದು ತಿಳಿಸಿದ್ದಾರೆ.
            ಇವಾವುದನ್ನೂ ಅರ್ಥ ಮಾಡಿಕೊಳ್ಳದೆ ಸೆಮಿಟಿಕ್ ಥಿಯಾಲಾಜಿ ಎಂದು ನೀವೆಲ್ಲ ಪದೆ ಪದೆ ಗಿಳಿಪಾಠ ಒಪ್ಪಿಸಿದರೆ ಏನು ಪ್ರಯೋಜನ? ‘ನಿರ್ಗುಣ ನಿರಾಕಾರ ಬ್ರಹ್ಮ’ ಸೆಮಿಟಿಕ್ ಥಿಯಾಲಾಜಿಯೆ? ‘ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ (ಉದಾತ್ತ ವಿಚಾರಗಳು ನಮಗೆ ಎಲ್ಲೆಡೆಯಿಂದ ಬರಲಿ) ಎಂದು ಋಗ್ವೇದ ಆರು ಸಾವಿರ ವರ್ಷಗಳ ಹಿಂದೆ ಹೇಳಿದ್ದನ್ನು ಮರೆತಿರುವಿರಾ? ಸಂಸ್ಕತ, ಪಾರ್ಸಿ, ಇಂಗ್ಲಿಷ್, ಗ್ರೀಕ್ ಮುಂತಾದ ಭಾಷೆಗಳು ಒಂದೇ ಮೂಲದವು ಎಂಬುದನ್ನು ಗೊತ್ತಿಲ್ಲವೆ? ಒಬ್ಬನೇ ದೇವರು, ಒಂದೇ ವಿಶ್ವ, ಒಂದೇ ಮಾನವಕುಲ ಎಂಬುದನ್ನು ಘೋಷಿಸುವುದಕ್ಕಾಗಿ ಬಸವಣ್ಣನವರು ಸೆಮಿಟಿಕ್ ಥಿಯಾಲಾಜಿಯನ್ನೇ ಆಭ್ಯಸಿಸಬೇಕೆ?

          • Amaresh

            This is about the gandabherunda vachana.it doesn’t admit Ranjan Darga’s interpretation. The vachana is drawing the attention of the reader to the fact that linga and jangama share the same body like the two heads of gandabherunda. It is saying that linga shouldn’t be favored over jangama. They share the same body and if one is disregarded, the other is also affected like poison fed into one mouth of gandabherunda. This is made explicit by the lines “ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ”. So the questions to ask here are:
            1. In what context is the Vachanakara making the above point?
            2. What does he mean when he says linga and jangama share the same body?
            Ranjan Darga is interpreting jangama as social life and linga as spiritual life (adhyatmic) to force fit social dimension to the vachana. Unfortunately for him, his attempt falls flat because it fails to see the context in which the Vachanakara makes the point on linga and jangama.

          • ಸಹನಾ

            “ಜಂಗಮನು ಇವಕ್ಕೆ ಅತೀತನಾಗಿ ಇರುವನು. ಹಸಿವು ನೀರಡಿಕೆ ಪ್ರಾಣನ ಧರ್ಮಗಳು ; ಜ್ಞಾನ ಅಜ್ಞಾನಗಳು ಇನ್ನೂ ಸಾಧಕಾವಸ್ಥೆ ಯಲ್ಲಿರುವವನ ಲಕ್ಷಣಗಳು ನಿಜಜ್ಞಾನಿಯೂ ಸಿದ್ಧಪುರುಷನೂ ಆದ ಜಂಗಮನಿಗೆ ದೇಹ, ಪ್ರಾಣ, ಮನೋಧರ್ಮಗಳು ಕಾಡವು.
            ಆ ಭಕ್ತನು ಆಚಾರ ಸಂಪನ್ನನಾಗಿ ಅರವು-ಅನುಭಾವಗಳಿಂದ ಜಂಗಮ ಆಗುವನು”
            http://www.lingayatsite.com/LingayatBasics/Jangama.htm
            ಈ ಮೇಲಿನ ವಿವರಣೆಗಳನ್ನು ನೋಡಿದರೂ ವಚನಗಳಲ್ಲಿನ ‘ಜಂಗಮ’ ಪದ ಪ್ರಯೋಗವು ಆತ್ಮಸ್ವರೂಪಿ ಚೈತನ್ಯ ಎನ್ನುವ ಅರ್ಥ ಬರುತ್ತದೆ . ಹೀಗಾಗಿ ಜಂಗಮ=ಸಮಾಜ ಎಂಬರ್ಥದ ಸಮೀಕರಣವೇ ತಪ್ಪು. ಜಂಗಮ ಅಂದರೆ society ಅಲ್ಲ.
            ಇಲ್ಲಿರುವ ವಚನದಲ್ಲಿನ ಗಂಡಭೇರುಂಡ ಉಧಾಹರಣೆಯನ್ನು ಸೆಮಿಟಿಕ್ ರಿಲಿಜನ್ ಗಳಲ್ಲಿರುವ godly divine spiritual world and temporal human society ಎನ್ನುವ ಚೌಕಟ್ಟಿನಲ್ಲಿ ವಿವರಿಸುತ್ತಿದ್ದಾರೆ. ಯೂರೋಪಿನ ಇತಿಹಾಸ ಗೊತ್ತಿರುವ ದರ್ಗಾರವರಿಗೆ ಚರ್ಚ್ vs ಸ್ಟೇಟ್ ವಿವಾದ ಮತ್ತು ಅದರಲ್ಲಿನ ಸೈಂಟ್ ಆಗಸ್ಟೈನ್ ಹಾಗೂ ಥಾಮಸ್ ಅಕ್ವಿನಾಸ್ ರ ವಾದಗಳು ಗೊತ್ತಿರಬೇಕೆಂದು ಭಾವಿಸುವೆ. ಈ ಸೆಮೆಟಿಕ್ ಚೌಕಟ್ಟನ್ನು ಇಷ್ಟು ಸಡಿಲವಾಗಿ ಅವರು ವಚನಕಾರರ ಸಂಧರ್ಬದಲ್ಲಿ ಬಸುತ್ತಿರುವುದು ಆಶ್ಚರ್ಯವಾಗುತ್ತಿದೆ.

          • Amaresh

            ರಂಜಾನ್ ದರ್ಗಾ ಅವರು ಈ ಹಿಂದೆ ಅನ್ನಪೂರ್ಣ ಅವರಿಗೆ “ಅಷ್ಟಾವರಣ, ಪಂಚಾಚಾರ ಮತ್ತು ಷಟ್‍ಸ್ಥಲಗಳು ಗೊಡ್ಡು ಆಚರಣೆಗಳೆ. ಮನುಸ್ಮೃತಿಯು ವೈಜ್ಞಾನಿಕ ಆಚರಣೆಯೆ?” ಅಂತ ಪ್ರಶ್ನೆ ಹಾಕಿದ್ದರು. ಆಗ ಅಷ್ಟಾವರಣ, ಪಂಚಾಚಾರ ಮತ್ತು ಷಟ್‍ಸ್ಥಲಗಳು ವೈಜ್ಞಾನಿಕವಾಗಿ ಸಮರ್ಥಿಸಿಕೊಳ್ಳಬಹುದಾದ ಆಚರಣೆಗಳು ಎಂಬಂತೆ ವಾದ ಮಾಡಿದ್ದರು. ಈಗ ಇವೆಲ್ಲ ಸೃಷ್ಟಿಗೆ ಸಂಬಂಧಿಸಿದ್ದಲ್ಲ, ಸೃಷ್ಟಿಕರ್ತನಿಗೆ ಸಂಬಂಧಿಸಿದುದು, ಆದುದರಿಂದ ವಿಜ್ಞಾನಕ್ಕೆ ನಿಲುಕದ ಆಚರಣೆಗಳು ಅಂತ ಹೇಳುತ್ತಿದ್ದಾರೆ. ಇದು ಇವರ ಮಾಮೂಲಿ ಟಾಕ್ಟಿಕ್. ಮೊದಲು ಶರಣರ ತತ್ತ್ವಗಳನ್ನೂ ಆಚರಣೆಗಳನ್ನೂ ವೈಜ್ಞಾನಿಕ ಎಂದೂ ವೈದಿಕ ತತ್ತ್ವಗಳನ್ನೂ ಆಚರಣೆಗಳನ್ನೂ ಅವೈಜ್ಞಾನಿಕ ಎಂದೂ ಹೇಳುವುದು, ನಂತರ ಅದನ್ನು ಪ್ರಶ್ನಿಸಿದಾಗ ಶರಣರದ್ದು ವಿಜ್ಞಾನಕ್ಕೆ ನಿಲುಕದ ವಿಚಾರಗಳು ಅಂತ ಹೇಳುವುದು – ಇದು ಇವರ ವಾದದ ಪರಿ! ಯಾವ ಆಧಾರಗಳ ಬಲವದಿಂದ ಶರಣರ ತತ್ತ್ವಗಳು ಆಚರಣೆಗಳು ವೈಜ್ಞಾನಿಕ ಎಂದು ಈ ಮೊದಲು ಕರೆದರೋ ಅವರೇ ಬಲ್ಲರು! ಆದರೆ ವೈದಿಕ ತತ್ತ್ವಾಚರಣೆಗಳು ಅವೈಜ್ಞಾನಿಕ ಎಂದು ಕರೆದಿರುವುದರ ಹಿಂದೆ ಅವರ ಐಡಿಯಾಲಜಿ ಕೆಲಸ ಮಾಡಿದೆ.

          • Ramjan Darga

            ಅಮರೇಶ್ ಮತ್ತು ಸಹನಾ ಅವರೇ ನಿಮ್ಮ ಸೆಮಿಟಿಕ್ ಗಿಳಿಪಾಠ ಇನ್ನೂ ಮುಂದುವರಿದಿದೆಯಲ್ಲ! “ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ” ಎಂಬುದಕ್ಕೆ ಅಮರೇಶ್ ನೀವು ಯಾವ ಅರ್ಥ ಹಚ್ಚುವಿರಿ?
            ಸಹನಾ ಅವರೆ,
            “ಉಳ್ಳವರು ಶಿವಾಲಯ ಮಾಡಿಹರು
            ನಾನೇನು ಮಾಡಲಿ ಬಡವನಯ್ಯಾ
            …..
            ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎಂದು ಬಸವಣ್ಣನವರು ಹೇಳುವಾಗಿನ ಜಂಗಮದ ಅರ್ಥ ಮತ್ತು “ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ. ಸ್ಥಾವರ ಜಂಗಮ ಒಂದೇ ಎಂದುದು ಕೂಡಲಸಂಗನ ವಚನ” ಎಂಬಲ್ಲಿನ ಜಂಗಮದ ಅರ್ಥ ಬೇರೆ. ಈ ವಾಸ್ತವದ ಅರಿವಾಗದಿದ್ದರೆ ಬಸವಣ್ಣನವರ ಹೇಳಿಕೆ ತದ್ವಿರುದ್ಧವಾಗಿದೆ ಎಂಬ ಭಾವ ಮೂಡುವುದಲ್ಲವೆ? ಅದೇ ರೀತಿ ‘ಜಂಗಮದಲ್ಲಿ ನಿಂದೆಯ ಮಾಡಿದಡೆ’ ಎಂಬಲ್ಲಿನ ಅರ್ಥ ಬೇರೆ ಆಗುತ್ತದೆ. ಜಂಗಮಕ್ಕೆ ಎಂಟು ಅರ್ಥಗಳಿವೆ. ಅದರಲ್ಲಿ ನೀವು ಪ್ರತಿಪಾದಿಸುವ ಚೈತನ್ಯ ಎಂಬ ಅರ್ಥವೂ ಇದೆ. ಎಲ್ಲೆಡೆ ಅದನ್ನೇ ಬಳಸಿದರೆ ನಗೆಪಾಟಲಾಗುತ್ತದೆ. ‘ಉಂಬ ಜಂಗಮ ಬಂದಡೆ ನಡೆಯೆಂಬರು ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ’ ಎಂಬಲ್ಲಿ ಜಂಗಮದ ಅರ್ಥ ಬೇರೆ. ‘ಇನ್ನು ಜಂಗಮವೇ ಲಿಂಗವೆಂದು ನಂಬಿದೆ’ ಎಂದು ಹೇಳುವಲ್ಲಿನ ಅರ್ಥ ಬೇರೆ. ವಚನಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಮಾತು ಮಾತಿಗೆ ‘ಸೆಮಿಟಿಕ್’, ‘ಸೆಮಿಟಿಕ್’ ಎಂದು ಬಡಬಡಿಸಿದರೆ ಏನು ಪ್ರಯೋಜನ? ಕಾಮಾಲೆ ಆದವರಿಗೆ ಜಗತ್ತು ಹಳದಿ ಕಾಣುವುದಂತೆ. ನೀವು ಸೆಮಿಟಿಕ್ ಗಾಗಲ್ ಹಾಕಿಕೊಂಡು ವಚನ ಚಳವಳಿಯನ್ನು ನೋಡುತ್ತಿದ್ದೀರಿ. ಅಂತೆಯೆ ನೀವು ‘ಬಾಲ’ಗ್ರಹ ಪೀಡಿತರಾಗಿದ್ದೀರಿ. ನಿಮ್ಮಿಂದ ನನಗೆ ಕಲಿಯುವ ಬಯಕೆ ಇದೆ. ನಿಮಗೆ ಅಂಥ ಬಯಕೆ ಇಲ್ಲ ಎಂಬುದೇ ಬೇಸರದ ವಿಚಾರ.

          • ಸಹನಾ

            “ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ”
            ದೈಹಿಕವಾಗಿ ಪೂಜೆಮಾಡಿ (ಗೌರವಿಸಿ) ಮಾನಸಿಕವಾಗಿ (ಆಂತರ್ಯದಲ್ಲಿ) ನಿಂದಿಸಿದರೆ ಎನ್ನುವ ಅರ್ಥವನ್ನೂ ಮಾಡಿದರೆ ಏನು ಅನಾಹತವಾಗುತ್ತದೆ ದರ್ಗಾ ಸರ್???
            “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ”
            ಕಟ್ಟಡ, ದೇಹಕ್ಕೂ ಅಳಿವುಂಟು ಜಗದ ಚರಾಚರಗಳೊಳಗಿರುವ ಚೈತನ್ಯಕ್ಕೆ ಸಾವಿಲ್ಲ. ಅದಕ್ಕೆ ಹುಟ್ಟೂ.. ಇಲ್ಲ ಅಳಿವೂ ಇಲ್ಲ. ಜಗದೆಲ್ಲದರಲ್ಲೂ ಅದೇ ಇದೆ. ಅದು ಅನಾದಿ ಅನಂತ.. ಈ ಹಿನ್ನೆಲೆಯಲ್ಲಿಯೇ ಅದಕ್ಕೆ ಸೃಷ್ಟಿಯ ಕಲ್ಪನೆಯೇ ಇಲ್ಲ.. ಅಂದಮೇಲೆ ಸೃಷ್ಟಿಕರ್ತ ಪರಿಕಲ್ಪನೆ ಶರಣರಲ್ಲಿರಲು ಸಾಧ್ಯವೇ ಇಲ್ಲ.
            “ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ. ಸ್ಥಾವರ ಜಂಗಮ ಒಂದೇ ಎಂದುದು ಕೂಡಲಸಂಗನ ವಚನ” ಅಂದರೆ “ಚರಾಚರವಸ್ತುಗಳಲ್ಲೂ ಚೈತನ್ಯವೇ ತುಂಬಿರುವಾಗ ವಸ್ತು-ಚೈತನ್ಯ ಬೇರೆ ಎಂದು ನೋಡಲಾಗದು ಎರಡೂ ಒಂದೇ ಎಂದುದು ಕೂಡಲಸಂಗನ ವಚನ” ಇಲ್ಲಿ ಏನು ಅಭಾಸ ಕಾಣುವಿರಿ ದರ್ಗಾ ಸರ್.
            “ಉಂಬ ಜಂಗಮ ಬಂದಡೆ ನಡೆಯೆಂಬರು ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ”- ಸಕಲ ವಸ್ತು ಜೀವಿಗಳಲ್ಲೂ ಚೈತನ್ಯವಿದೆ ಎಂದಾಗ ಉಣ್ಣುವ ಜೀವಿ(ಒಳಗೂ ಚೈತನ್ಯವಿದೆ) ಬಂದರೆ ನಡೆ ಎನ್ನುತ್ತಾರೆ ಉಣ್ಣದಿರುವ ಲಿಂಗ (ಅದರಲ್ಲೂ ಚೈತನ್ಯವಿದೆ) ಬೋನವ…’ ಏನು ಅಪಾರ್ಥವಾಯಿತು??
            “ಇನ್ನು ಜಂಗಮವೇ ಲಿಂಗವೆಂದು ನಂಬಿದೆ” – ಮೇಲೆ ಕಾಣುವ ಲಿಂಗ ವನ್ನೇ ದೇವರೆಂದು ಸಾಮಾನ್ಯ ತಿಳುವಳಿಕೆ ಅನುಭಾವೀ ಜ್ಞಾನ ಪ್ರಾಪ್ತಿಯಾದಾಗ ಲಿಂಗದೊಳಗೆ ಮತ್ತು ಜಗದ ಪ್ರತಿಯೊಂದರಲ್ಲೂ ಇರುವ ಚೈತನ್ಯವೇ ನಾವು ದೇವರೆಂದು ಕೊಂಡಿರುವುದರ(ಲಿಂಗ) ವಾಸ್ತವ ಎಂದು ಕಂಡುಕೊಂಡೆ.. ಏನು ಅಭಾಸವಾಗುತ್ತದೆ ಇಲ್ಲಿ???
            ನಾವು ಸುಮ್ಮನೆ ಸೆಮೆಟಿಕ್ ಸೆಮೆಟಿಕ್ ಎಂದು ಬಡಬಡಿಸುತ್ತಿರುವೆವೆ.??
            ಕೇಳಿ, ಇಲ್ಲಿ ಈ ವಚನಕಾರರನ್ನು ಈ ರೀತಿಯಲ್ಲಿ ಅರ್ಥೈಸಲು ನಿಮಗಿರುವ ಅಡ್ಡಿಯಾದರೂ ಏನು? ಅದೇ ಸೆಮೆಟಿಕ್ ಐಡಿಯಾಲಜಿಯ ಚೌಕಟ್ಟು.
            ಭಾರತೀಯ ಸಂಪ್ರದಾಯಗಳಲ್ಲಿ ಸಕಲ ಚರಾಚರಗಳಲ್ಲೂ ಚೈತನ್ಯವಿದೆ/ಆತ್ಮವಿದೆ/ಜಂಗಮವಿದೆ ಎನ್ನುವುದಿದೆ. ಇದನ್ನು ಸೆಮೆಟಿಕ್ ಚೌಕಟ್ಟು(ಕ್ರಿಶ್ಚಿಯಾನಿಟಿ/ಇಸ್ಲಾಂ/ಜುಡಾಯಿಸಂ) ಒಪ್ಪುವುದಿಲ್ಲ. ಅವುಗಳ ಪ್ರಕಾರ Soul (ನಾವು ಸಾಮಾನ್ಯವಾಗಿ soul ಆತ್ಮವೆಂದು ತರ್ಜಮೆ ಮಾಡುವುದೆ ದುರಂತ) ಎನ್ನುವುದು ಮಾನವರಿಗೆ ಮಾತ್ರವೇ ಇರುತ್ತದೆ. ಸಕಲ ಚರಾಚರಗಳಲ್ಲಿಯೂ ಇರುವುದಿಲ್ಲ. ಮತ್ತು ಈ soul God ನ ಇಚ್ಚೆಯನುಸಾರ body ಯನ್ನು ಪಡೆದು ಈ ಜಗತ್ತಿನಲ್ಲಿ ಬದುಕಬೇಕು. ಈ ಜಗತ್ತನ್ನು ಈ soul ಹೊಂದಿರುವ ಮಾನವರಿಗಾಗಿ ಸೃಷ್ಟಿಸಲಾಗಿದೆ. ಅವುಗಳೆಲ್ಲದರ ಒಡೆತನವನ್ನು God ಮಾನವರಿಗೆ ನೀಡಿದ್ದಾನೆ. ಅವನ್ನು God ನ ಇಚ್ಚೆ ಮತ್ತು ನಿಯಮಗಳಂತೆ ಬಳಸಿಕೊಂಡು ಜೀವನದ ಉದ್ದೇಶವನ್ನು ಈಡೇರಿಸುವುದು ಅವರ ಕರ್ತವ್ಯ (ಪ್ರತಿಯೊಂದು soul ಗೂ unique ಆದ ಉದ್ದೇಶವನ್ನು God ನೀಡಿರುತ್ತಾನೆ ಅದು ಮಾನವರು ಬೆಳೆಯುತ್ತಾ ಇರುವ ಹಾಗೆ ಅವರ conscious ಗೆ ಗಾಡ್ ವಾಣಿ ಕೇಳಿಸುತ್ತಿರುತ್ತದೆ ಅದರ ಪ್ರಕಾರ ಅವರು ನಡೆದುಕೊಳ್ಳುತ್ತಿರ ಬೇಕು ಇದಕ್ಕೆ ಇತರರು ಯಾರೂ ಅಡ್ಡಿ ಬರಬಾರದು ಎನ್ನುವುದು ಕ್ರಿಶ್ಚಿಯನ್ ಲಿಬರ್ಟಿ ಅದರ ಸೆಕ್ಯುಲರೀಕೃತ ರೂಪವೇ ‘ಉದಾರವಾದ’ ಈ ಕಾನ್ಸಿಯಸ್ ನಂತೆ ನಡೆದು ಕೊಳ್ಳಲು ಅವರಿಗಿರುವ ಡಿವೈನ್ ಅಧಿಕಾರವೇ ಹಕ್ಕು/ಮಾನವಹಕ್ಕು ಎನ್ನುವುದು ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ನಂಬಿಕೆ).
            ಹೀಗಾಗಿ, ಜಂಗಮ ಎನ್ನುವುದು ಎಲ್ಲೆಲ್ಲಿ soul ಎನ್ನುವಂತೆ (ಮಾನವರೊಳಗಿರುವ ಚೈತನ್ಯ) ಬಳಕೆಯಾಗುತ್ತದೆ ಅಲ್ಲೆಲ್ಲಾ ಸಮಸ್ಯೆ ಇಲ್ಲದೆ ಬಳಸಿಬಿಡುತ್ತಾರೆ. ಆದರೆ ಇತರೇ ಸಂಧರ್ಭಗಳಲ್ಲಿ ಅವರು ಚೈತನ್ಯದ ಅರ್ಥದಲ್ಲಿ ಬಳಸಲು ಅವರ ಸೆಮೆಟಿಕ್ ಚೌಕಟ್ಟು ಅಡ್ಡಿಬರುತ್ತದೆ. ಏಕೆಂದರೆ ಇವರು ಮಾನವರೊಳಗಿರುವ ಚೈತನ್ಯ/ಜಂಗಮವನ್ನು soul ಎಂದು ಅರ್ಥೈಸಿಕೊಳ್ಳುತ್ತಾರೆ. ಆದರೆ ಅದನ್ನು ಉಳಿದ ಚರಾಚರಗಳಲ್ಲಿ ಅನ್ವಯಿಸುವುದು ಅವರಿಗೆ ಅಭಾಸವೆಂದೆನಿಸುತ್ತದೆ. ಹಾಗಾಗಿ ಅದಕ್ಕೆ ಸಮಾಜ ಮುಂತಾದ ವಿಭಿನ್ನ ಅರ್ಥಗಳನ್ನು ಕಲ್ಪಸುತ್ತಾರೆ. ಈ ನೆಲೆಯಲ್ಲಿ ಸಕಲ ಚರಾಚರಗಳಲ್ಲೂ ಚೈತನ್ಯಕಾರಕವಾದ ಜಂಗಮವಿದೆ ಎಂದರೆ ಇವರಿಗೆ ಅಪಥ್ಯ.
            ಮಾನ್ಯ ದರ್ಗಾ ಸರ್. soul ಎನ್ನುವುದು Individual ಮತ್ತು plural ಎಷ್ಟು ಮಾನವರೋ ಅಷ್ಟು soul ಗಳಿರುತ್ತವೆ. ಆದರೆ ಜಂಗಮವೊಂದೇ!!!! ಚೈತನ್ಯವೊಂದೆ!!! ಆತ್ಮವೊಂದೇ!!! ಸಕಲಚರಾಚರಗಳಲ್ಲಿರುವುದೂ ಒಂದೇ ಹಾಗಾಗಿ, ನಿನು-ನಾನು-ಅವನು-ಆ ಕುಲ-ಈಕುಲ ಮರಬಳ್ಳಿ ಪಕ್ಷಿ, ಬೆಟ್ಟಗುಡ್ಡ ಕಲ್ಲುಮಣ್ಣುಗಳಲ್ಲಿರುವ ಜಂಗಮ ಒಂದೇ ಇರುವಾಗ ಅವೆಲ್ಲದೊರಳಗೂ ಇದ್ದು ಈರೇಳು ಭುವಿಯ ಕರ್ತನಾಗಿ ಓರ್ವನೇ ನಡೆಸುತ್ತಿರುವಾಗ….. ಎಲ್ಲಾ ಭೇಧಗಳೂ ಮಾಯೆ…. ಇದು ಭೌತಿಕವಾದ್ದಲ್ಲ.. ಸಾಮಾಜಿಕವಾದುದ್ದಲ್ಲಾ ಅನುಭಾವಿಯಾದದ್ದು….. ಇದನ್ನು ಕಂಡುಕೊಳ್ಳುವನೇ ಶರಣ,ಜಂಗಮ ಜಂಗಮನಾದ ಮೇಳೆ ಜಗದ ಚರಚರಾದದಲ್ಲಿರುವುದೂ ತನ್ನೊಳಗಿರುವದೂ ಎಲ್ಲವೂ ಒಂದೇ ಎನ್ನುವ ಅರಿವು ಮೂಡಿದ ಮೇಲೆ ಭೌತಿಕೆ ಸಾಮಾಜಿಕ ಭ್ರಮೆಗಳ ಬಗ್ಗೆ ಇವರು ನಗುತ್ತಾರೆ, ವಿಡಂಭಿಸುತ್ತಾರೆ ಅವೇ ಈ ಎಲ್ಲಾ ವಚನಗಳಲ್ಲಿರುವ ವಿಚಾರಗಳು….
            ಹಾಗಾಗಿ ವಚನಕಾರರ ‘ಜಂಗಮ’ ಪದ ಬಳಕೆಯಲ್ಲಿ ವೈರುದ್ಯವಾಗಲೀ ಅಭಾಸಗಳಾಗಲೀ ಇಲ್ಲ ಸರ್. ತಮ್ಮ ಸೆಮೆಟಿಕ್ ಐಡಿಯಾಲಜಿಯ ಚೌಕಟ್ಟಿನೊಳಗೆ ಶರಣರ ಜ್ಞಾನವನ್ನು ಹಿಡಿದಿಡಲು ಪ್ರಯತ್ನಿಸುತ್ತಿರುವುದರಿಂದ ಆಗುತ್ತಿರುವ ಅಭಾಸ. ಅದಕ್ಕೆ ತಾವು ಪಶ್ಚಾತಾಪ ಪಡಿ ಶರಣರ ವಚನಗಳು ಅಭಾಸ,ವೈರುಧ್ಯವಾಗುತ್ತದೆ ಎನ್ನುವ ಅಪಾರ್ಥ ಕಲ್ಪಿಸಬೇಡಿ. ನಿಮ್ಮ ಸೆಮೆಟಿಕ್ ಐಡಿಯಾಲಜಿಯ ಚೌಕಟ್ಟಿನ ಬಂದನದಿಂದ ಶರಣರು ವಚನಕಾರರನ್ನು ಬಿಡಿಸಿಕೊಳ್ಳಬೇಕಿದೆ.

          • Ramjan Darga

            ನಿಮಗೇಕೆ ಸೆಮಿಟಿಕ್ ಹುಚ್ಚು ಹಿಡಿದಿದೆ. ಸ್ಥಾವರಕ್ಕೆ ಅಳಿವುಂಟು ಅಂದರೆ ಏನರ್ಥ?

          • jayateerth joshi

            Darga sir their ideology is semetic thats why they see the same in everywhere

          • ಸಹನಾ

            It has been already explained see above comment

          • ಸಹನಾ

            ಸೆಮೆಟಿಕ್ ಹುಚ್ಚು ಯಾರಿಗೆ ಹಿಡಿದಿದೆ ಎಂದು ವಾದಗಳನ್ನು ನೀಡಿ ತರ್ಕಬದ್ದವಾಗಿ ತೋರಿಸಿದ್ದೇನೆ ಮತ್ತು ಇನ್ನೂ ನಿಮ್ಮ ಲೇಖನದ ಪ್ರತಿಸಾಲೂ ಅದೇ ಇದೆ ಎಂದು ತೋರಿಸುತ್ತೇನೆ ಕೂಡ. ನಿರೀಕ್ಷಿಸಿ…..

          • Amaresh

            ” ಜಂಗಮಕ್ಕೆ ಎಂಟು ಅರ್ಥಗಳಿವೆ.”
            ಸರ್, ತಮಗೆ ಬೇಕಾದ ಹಾಗೆ ‘ಜಂಗಮ’ಕ್ಕೆ ಅರ್ಥವನ್ನು ಹೇರುತ್ತಾ ಹೋದರೆ, ಎಂಟೇನು ಸಾವಿರ ಅರ್ಥಗಳನ್ನು ಹುಡುಕಬಹುದು! ಇಲ್ಲಿ ತಾವು ‘ಜಂಗಮ’ಕ್ಕೆ ಯಾವ ಅರ್ಥ ಆರೋಪಿಸುತ್ತಿದ್ದೀರಿ ಅನ್ನುವುದು ಮುಖ್ಯವಲ್ಲ, ವಚನಕಾರರು ‘ಜಂಗಮ’ಕವನ್ನು ಯಾವ ಅರ್ಥದಲ್ಲಿ ಬಳಸಿದ್ದಾರೆ ಅನ್ನುವುದು ಮುಖ್ಯ. ಏಕೆಂದರೆ ಚರ್ಚೆಯ ಮೂಲ ವಿಷಯ ವಚನಗಳೇ ಹೊರತು ತಮ್ಮ ಅರ್ಥೈಸುವಿಕೆ ಅಲ್ಲ.
            “ಬಸವಣ್ಣನವರ ಹೇಳಿಕೆ ತದ್ವಿರುದ್ಧವಾಗಿದೆ ಎಂಬ ಭಾವ ಮೂಡುವುದಲ್ಲವೆ?”
            ಸರ್, ಇದು ತಮ್ಮ ಸಮಸ್ಯೆ, ವಚನಗಳ ಸಮಸ್ಯೆ ಅಲ್ಲ. ಏಕೆಂದರೆ ತದ್ವಿರುದ್ಧ ಅರ್ಥ ಬರಲು ‘ಜಂಗಮ’ಕ್ಕೆ ಆರೋಪಿಸುತ್ತಿರುವ ಅರ್ಥಗಳೇ ಕಾರಣ. ವಚನಕಾರರಿಗೆ ‘ಜಂಗಮ’ದ ವಿಷಯದಲ್ಲಿ ಅರ್ಥಗೊಂದಲ ಇರಲಿಲ್ಲ. ಅದು ಇರುವುದು ತಮಗೆ. ವಚನಕಾರರು ‘ಜಂಗಮ’ವನ್ನು ನಿರ್ದಿಷ್ಟ ಅರ್ಥದಲ್ಲೇ ಬಳಸಿದ್ದಾರೆ.

          • Ramjan Darga

            ನಾನೆಲ್ಲಿ ‘ಗೊಂದಲ’ ಎಂದು ಹೇಳಿರುವೆ? ಒಂದೇ ಶಬ್ದ ಆಯಾ ವಚನದ ಸಂದರ್ಭಕ್ಕೆ ತಕ್ಕಂತೆ ಅರ್ಥವನ್ನು ಸ್ಫರಿಸುತ್ತದೆ ಎಂದು ಹೇಳಿಲ್ಲವೆ?
            “ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ” ಎಂದು ಬಸವಣ್ಣನವರು ಒಂದು ವಚನದಲ್ಲಿ ಹೇಳಿದ್ದು ಸರಿ. “ಸ್ಥಾವರ ಜಂಗಮ ಒಂದೆ” ಎಂದು ಇನ್ನೊಂದು ವಚನದಲ್ಲಿ ಹೇಳಿದ್ದೂ ಸರಿ ಎಂದು ನಾನು ಹೇಳಿದ್ದೇನೆ.
            ಈಗ ನೀವು ಹೇಳಿ, ಬಸವಣ್ಣನವರು ಒಂದು ಕಡೆ ಸ್ಥಾವರಕ್ಕೆ ಅಳಿವಿದೆ ಎಂದೇಕೆ ಹೇಳಿದರು? ಇನ್ನೊಂದು ಕಡೆ ಸ್ಥಾವರಕ್ಕೆ ಅಳಿವಿಲ್ಲ ಎಂದು ಏಕೆ ಹೇಳಿದರು?

          • ಸಹನಾ

            ನಿಮ್ಮ ಉಲ್ಲೇಖದಲ್ಲಿ ಸ್ಥಾವರ ಜಂಗಮ ಒಂದೆ ಎಂದಿದೆಯೇ ವಿನಃ “ಸ್ಥಾವರಕ್ಕೆ ಅಳಿವಿಲ್ಲ” ಎಂದಿಲ್ಲವಲ್ಲ. ಜಂಗಮ ಶಬ್ದಕ್ಕೆ ವಿಭಿನ್ನ ಅರ್ಥಗಳನ್ನು ಕಲ್ಪಿಸದೆ ಹಾಗೂ ವೈರುದ್ಯವಿಲ್ಲದೆ ಇದನ್ನು ಅರ್ಥೈಸಬಹುದೆಂದು ನಾನು ತೋರಿಸಿರುವುದರಲ್ಲಿರುವ ತೊಡಕೇನು?
            ಈ ವಚನಗಳಲ್ಲಿ ಜಂಗಮ ಶಬ್ದಕ್ಕೆ ಬೇರೆ ಬೇರೆ ಅರ್ಥ ನೀಡದೇ ಒಂದೇ ಅರ್ಥ ಕಲ್ಪಿಸಿದರೆ ವೈರುದ್ಯವುಂಟಾಗಿ ಅಪಾರ್ಥವಾಗುತ್ತದೆ ಎಂದು (ಹಾಗೆ ಒಂದೇ ಅರ್ಥ ನೀಡಿಯೂ ವೈರುದ್ಯ ವಿಲ್ಲದೆ ವಿವರಿಸಲು ಸಾಧ್ಯವಿದ್ದರೂ) ಹೇಳಲಿಕ್ಕೆ ಕಾರಣ ವಚನಗಳಿಗೆ ನಿಮ್ಮ ಅನುಕೂಲಸಿಂಧು ಅರ್ಥ ಕಲ್ಪಿಸಲಿಕ್ಕೆ ಇದು ಬೇಕಿದಯೇ ವಿನಃ ನಿಜಕ್ಕೂ ಅಲ್ಲಿ ಯಾವ ವೈರುಧ್ಯವೂ ಇಲ್ಲ. ನಿಮ್ಮ ಐಡಿಯಾಲಜಿಯನ್ನು ವಚನಕಾರರಲ್ಲಿ ತುರುಕಲಿಕ್ಕೆ ಜಾಗ ಮಾಡ್ಕೋತ್ತಿದ್ದೀರಷ್ಟೇ. !!!!

          • ವಿಶ್ವಾರಾಧ್ಯ ಸತ್ಯಂಪೇಟೆ

            ಕೊನೆಯ ವಚನಕಾರ ಜೇವರ್ಗಿಯ ಷಣ್ಮುಖಶಿವಯೋಗಿಗಳ ಒಂದ ವಚನ ಹೀಗಿದೆ :
            ಜಂಗಮಕ್ಕೆ ಮಾತಾಪಿತರಿಲ್ಲ. ಜಂಗಮಕ್ಕೆ ಜಾತಿ ಬಂಧುಗಳಿಲ್ಲ
            ಜಂಗಮಕ್ಕೆ ನಾಮರೂಪಗಳಿಲ್ಲ. ಜಂಗಮಕ್ಕೆ ಸೀಮೆ ಸಂಬಂಧಗಳಿಲ್ಲ
            ಜಂಗಮಕ್ಕೆ ಕುಲಗೋತ್ರಗಳಿಲ್ಲ. ಜಂಗಮಕ್ಕೆ ಮಲಮಾಯೆಗಳಿಲ್ಲ ನೋಡಾ ಅಖಂಡೇಶ್ವರಾ

          • Amaresh

            ಹೌದು, ಆಧ್ಯಾತ್ಮಿಕ ಸಾಧನೆಯ ತುತ್ತ ತುದಿಯ ಅವಸ್ಥೆಯಲ್ಲಿ ಹೀಗೇ ಇರುತ್ತದೆ. ಇದನ್ನು ವಚನಕಾರರಲ್ಲ ಎಲ್ಲಾ ಆಧ್ಯಾತ್ಮಿಕ ಸಾಧಕರೂ ಹೇಳಿದ್ದಾರೆ. ಆದರೆ ವಚನಕಾರರಲ್ಲಿ ಯಾರೂ ಜಂಗಮ == ಸಮಾಜ ಅಂತ ನಮ್ಮ ದರ್ಗಾಜಿ ಅವರು misinterpret ಮಾಡಿರುವ ರೀತಿಯಲ್ಲಿ ಹೇಳಿಲ್ಲ.

          • jayateerth joshi

            Ms Sahana is misinterpreting the meaning of the Jangama.Jangama means dynamism. society is always changing. It means society is dynamic means jangama. What Darga sir said is absolutely right.

          • ಸಹನಾ

            “Jangama means dynamism. society is always changing. It means society is dynamic means jangama.”
            ಈ ವಿವರಣೆ ನಿಜವೇ ಆಗಿದ್ದ ಪಕ್ಷದಲ್ಲಿ “ಭಾರತೀಯ ಸಮಾಜ ನಿಂತನೀರಾಗಿದೆ. ಸಹಸ್ರಾರು ವರ್ಷಗಳಿಂದ ಶ್ರೇಣೀಕೃತ ಸಮಾಜವಾಗಿಯೇ ಮುಂದುವರಿಯುತ್ತಿದೆ, ಯಾವುದೇ ಬದಲಾವಣೆಗಳಾಗಿಲ್ಲ, ಆಗಲು ಪುರೋಹಿತಶಾಹಿಗಳು ಬಿಟ್ಟಿಲ್ಲ;ಬಿಡುವುದಿಲ್ಲ, ಬುದ್ದ ಬಸವ ಅಂಭೇಡ್ಕರ್ ರಂತಹವರ ಮಹಾನ್ ಮಹನೀಯರ ಪ್ರಯತ್ನದ ಹೊರತಾಗಿಯೂ…..” ಎನ್ನುವಂತಹ ದರ್ಗಾರಂತಹವರ ವಾದಗಳೆಲ್ಲಾ ಬಿದ್ದು ಹೋಗುತ್ತದಲ್ಲಾ ಸರ್!!!!????

          • ವಿಶ್ವಾರಾಧ್ಯ ಸತ್ಯಂಪೇಟೆ

            ಶ್ರೀ ಅಮರೇಶ ಅವರೆ,
            ನಿಮ್ಮಂತೆ ನಾನೂ ಮೊದ ಮೊದಲು ಅಂದುಕೊಳ್ಳುತ್ತಿದ್ದೆ. ವಚನ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿದರೆ ನಮ್ಮ ತಪ್ಪು ತಿಳುವಳಿಕೆ ಖಂಡಿತವಾಗಿಯೂ ಹೋಗುತ್ತದೆ. ನೂರಾರು ದೇವರುಗಳನ್ನು ನಿರಾಕರಣೆ ಮಾಡಿದ ವಚನ ಕಾರರು ಈ ಇಷ್ಟಲಿಂಗವನ್ನು ಮಾತ್ರ ಏಕೆ ಕೊಟ್ಟರು ? ಲಿಂಗ ನಮ್ಮ ಒಳಗಿನ ಅರಿವನ್ನು ಅರಿತುಕೊಳ್ಳಲು ನೀಡಿದ ಕುರುಹು ಮಾತ್ರ. ಆದರೆ ನಾವೆಲ್ಲ ಅರಿವನ್ನು ಮರೆತು ಕುರುಹನ್ನು ಪೂಜಿಸುವ ಹೆಡ್ಡರುಗಳಾಗಿದ್ದೇವೆ. ನಿತ್ಯವೂ ಲಿಂಗ ನಿರೀಕ್ಷಣೆಯ ಮೂಲಕ ನಮ್ಮ ಮನಸ್ಸನ್ನು ಒಂದು ಕಡೆ ನಿಲ್ಲಿಸುವೆವಾದರೆ ನಿಜವಾದ ಫಲವು ಖಂಡಿತವಾಗಿಯೂ ದಕ್ಕುತ್ತದೆ. ಇಷ್ಟಕ್ಕೂ ಲಿಂಗವನ್ನು ಧರಿಸುವುದು ಅಂದರೆ ಆತ ಜಾತ್ಯತೀತ ವ್ಯಕ್ತಿ ಎಂದು ಅರ್ಥ. ವರ್ಗ- ವರ್ಣಗಳನ್ನು ಮೀರಿದ ಸಕಲ ಜೀವಾತ್ಮರಿಗೂ ಲೇಸಬಯಸುವವ ಎಂದು ಅರ್ಥ.ಇನ್ನೂ ಹೇಳಬೇಕೆಂದರೆ ಬಸವ ಚಳುವಳಿಯ ಸಂಕೇತ ಲಿಂಗ. ಬಹುದೇವೋಪಾಸನೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರ ಮನೋಸ್ಥೈರ್ಯವನ್ನು ನೀಡಲು ಇಷ್ಟಲಿಂಗ ಬಹುಪ್ರಮುಖವಾದ ಪಾತ್ರ ವಹಿಸಿದೆ. ಇದಲ್ಲದೆ ಇದು ಜಗದಗಲ ಮುಗಿಲಗಲ, ಮಿಗೆಯಗಲ ನಿಮ್ಮಗಲ, ಪಾತಾಳದಿಂದ ಅತ್ತತ್ತ , ಬ್ರಹ್ಮಾಂಡದಿಂದ ಅತ್ತತ್ತ ಅಗಮ್ಯ ಅಗೋಚರವಾಗಿರುವ ಚುಳುಕಾಗಿರುವ ಚೈತನ್ಯ ಕುರುಹು ಮಾತ್ರ.

          • Ramjan Darga

            ಸಹನಾ ಅವರೆ ದಯವಿಟ್ಟು ಸರಿಯಾಗಿ ಓದಿ ನೋಡಿ. ಅಮರೇಶ್ ಅವರಿಗೆ ಕೇಳಿದ ಪ್ರಶ್ನೆಯನ್ನೇ ನಿಮಗೂ ಕೇಳುತ್ತಿರುವೆ.
            “ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ” ಎಂದು ಬಸವಣ್ಣನವರು ಒಂದು ವಚನದಲ್ಲಿ ಹೇಳಿದ್ದು ಸರಿ. “ಸ್ಥಾವರ ಜಂಗಮ ಒಂದೆ” ಎಂದು ಇನ್ನೊಂದು ವಚನದಲ್ಲಿ ಹೇಳಿದ್ದೂ ಸರಿ ಎಂದು ನಾನು ಹೇಳಿದ್ದೇನೆ.
            ಈಗ ನೀವು ಹೇಳಿ, ಬಸವಣ್ಣನವರು ಒಂದು ಕಡೆ ಸ್ಥಾವರಕ್ಕೆ ಅಳಿವಿದೆ ಎಂದೇಕೆ ಹೇಳಿದರು? ಇನ್ನೊಂದು ಕಡೆ ಸ್ಥಾವರಕ್ಕೆ ಅಳಿವಿಲ್ಲ ಎಂದು ಏಕೆ ಹೇಳಿದರು?

          • ಸಹನಾ

            “ಸ್ಥಾವರಕ್ಕೆ ಅಳಿವಿಲ್ಲ” endu yaava vacanadalli heliddare?
            “ಸ್ಥಾವರ ಜಂಗಮ ಒಂದೇ ಎಂದುದು ಕೂಡಲಸಂಗನ ವಚನ” endu ondu vacana helide endu aste nimma ullekha heluttade alva?

          • ಸಹನಾ

            aadare aa vacanavannu vibhinna artha needade vivarisabahudu endu torisiddenalla!!!

          • ಸಹನಾ

            ಶರಣರಲ್ಲೇ ಶಿವನನ್ನು /ಚೈತನ್ಯ ವನ್ನು/ ಜಂಗಮವನ್ನು ಕಾಣುತ್ತಾರೆ ವಚನಶರಣರು, ಹೌದಾ!! ಹಾಗೆಯೇ ಜಗತ್ತಿನ ಚರಾಚರ ದಲ್ಲೂ ಚೈತನ್ಯ/ಶಿವ/ಜಂಗಮವಿದೆ ಹೌದಾ!!!! ಆದ್ದರಿಂದ ಸ್ಥಾವರವೂ ಈ ಜಗತ್ತಿನಲ್ಲೇ ಇರುವುದರಿಂದ ಅದರಲ್ಲೂ ಚೈತನ್ಯ/ಶಿವ/ಜಂಗಮವಿರಲೇ ಬೇಕಲ್ಲವೇ??? ಹಾಗಾಗಿ “ಸ್ಥಾವರ ಜಂಗಮ ಒಂದೆ” (ಒಂದರಲ್ಲೇ ಇದೇ). ಹಾಗೆಯೇ ಸ್ಥಾವರ ಅಂದರೆ ಭೌತಿಕವಾದುದು ನಾಶವಾದರೂ ಅದರೊಳಗಿರುವ ಚೈತನ್ಯ/ಶಿವ/ಜಂಗಮಕ್ಕೆ ನಾಶವಿಲ್ಲ…
            ಇನ್ನೊಂದು ಉದಾ:
            ಶರಣರೇ (ದೇಹ=ಸ್ಥಾವರ+ಜೀವ=ಆತ್ಮ/ಚೈತನ್ಯ) ಜಂಗಮರು. ಹೀಗಾಗಿ “ಸ್ಥಾವರ ಮತ್ತುಜಂಗಮ ಒಂದೇ”
            ಶರಣರ ದೇಹ (ಸ್ಥಾವರ) ನಾಶವಾದರೂ ಅವರೊಳಗಿರುವ ಜೀವ/ಚೈತನ್ಯ (ಜಂಗಮ) ನಾಶವಾಗುವುದಿಲ್ಲ. ಹಾಗಾಗಿ, “ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ”
            ಹೀಗೆ ವಿವರಿಸಿದರೆ ತೊಡಕೇನು? ಏನು ವೈರುಧ್ಯ ವಾಗುತ್ತೆ ಇಲ್ಲಿ? ಜಂಗಮಕ್ಕೆ ನೂರೆಂಟು ಅರ್ಥ ಏಕೆ ಕಲ್ಪಿಸಬೇಕು?

          • Ramjan Darga

            ಸ್ಥಾವರ ಜಂಗಮ ಒಂದೇ ಅಂದರೆ ಏನರ್ಥ?
            ಜಂಗಮಕ್ಕೆ ಅಳಿವಿಲ್ಲ ಎಂದರೆ ಸ್ಥಾವರಕ್ಕೂ ಅಳಿವಿಲ್ಲ ಎಂದೇ ಅರ್ಥವಾಗುವುದಲ್ಲವೆ?
            ಸ್ಥಾವರಕ್ಕೆ ಅಳಿವಿದೆ ಎಂದು ನೀವು ಭಾವಿಸಿದರೆ ಜಂಗಮಕ್ಕೂ ಅಳಿವಿದೆ ಎಂದಂತಾಗುವುದಿಲ್ಲವೆ?
            ಸ್ಥಾವರಕ್ಕೆ ಅಳಿವಿಲ್ಲ ಎಂದು ಯಾವ ವಚನದಲ್ಲಿ ಹೇಳಿದ್ದಾರೆ ಎಂಬ ನಿಮ್ಮ ಪ್ರಶ್ನೆಯಲ್ಲಿ ಕೂದಲು ಸೀಳುವ ತಂತ್ರವಿದೆ. ಈ ತಂತ್ರಗಾರಿಕೆ ಬಿಡಿ. ಉತ್ತರ ಕೊಡಿ.
            “ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ” ಎಂದು ಬಸವಣ್ಣನವರು ಒಂದು ವಚನದಲ್ಲಿ ಹೇಳಿದ್ದು ಸರಿ. “ಸ್ಥಾವರ ಜಂಗಮ ಒಂದೆ” ಎಂದು ಇನ್ನೊಂದು ವಚನದಲ್ಲಿ ಹೇಳಿದ್ದೂ ಸರಿ ಎಂದು ನಾನು ಹೇಳಿದ್ದೇನೆ.
            ಈಗ ನೀವು ಹೇಳಿ, ಬಸವಣ್ಣನವರು ಒಂದು ಕಡೆ ಸ್ಥಾವರಕ್ಕೆ ಅಳಿವಿದೆ ಎಂದೇಕೆ ಹೇಳಿದರು? ಇನ್ನೊಂದು ಕಡೆ ಸ್ಥಾವರಕ್ಕೆ ಅಳಿವಿಲ್ಲ (ಸ್ಥಾವರ ಜಂಗಮ ಒಂದೆ) ಎಂದು ಏಕೆ ಹೇಳಿದರು?

          • ಸಹನಾ

            what is the problem in these examples? why these example do not explains your questions? show me the problems in these examples than repeating the same question? and real sharanas should now say that if this is not basava tatva and what else is?

          • jayateerth joshi

            Vachanas are not written for people like you to argue on web. . They were written for understanding the self, for spiritual experience and doing good to the society. If u do these things means u hv understood vachanas. Else if u go on arguing like this means u know only this and nothing else. Go and do some good work.

          • ಸಹನಾ

            Mr. Joshi Let it be a self experience for you. good luck

          • jayateerth joshi

            I too pray god to give good thinking. all the best ms. sahana

          • Ramjan Darga

            ನಾನು ಕೇಳಿದ ಮೇಲಿನ ಪ್ರಶ್ನಗೆ ನೀವಾರು ಉತ್ತರಿಸಿಲ್ಲ. ಏಕೆ ಸುಳ್ಳು ಹೇಳುವಿರಿ?
            ನಾನು ಮತ್ತೆ ಕೇಳುತ್ತೇನೆ.ಈಗ ನೀವು ಹೇಳಿ, ಬಸವಣ್ಣನವರು ಒಂದು ಕಡೆ ಸ್ಥಾವರಕ್ಕೆ ಅಳಿವಿದೆ ಎಂದೇಕೆ ಹೇಳಿದರು? ಇನ್ನೊಂದು ಕಡೆ ಸ್ಥಾವರಕ್ಕೆ ಅಳಿವಿಲ್ಲ ಎಂದು ಏಕೆ ಹೇಳಿದರು?

          • ಸಹನಾ

            “ಸ್ಥಾವರಕ್ಕೆ ಅಳಿವಿಲ್ಲ” ಎಂದು ಬಸವಣ್ಣನವರು ಹೇಳಿದ್ದಾರೆ ಎಂದು ಸುಳ್ಳು ಹೇಳುತ್ತಿರುವವರು ನೀವು. ನೀಮ್ಮ interpretation ಗಳನ್ನು ಬಸವಣ್ಣನವರ ಮೇಲೇಕೆ ಹೇರುತ್ತಿದ್ದೀರಿ. “ಸ್ಥಾವರಕ್ಕೆ ಅಳಿವಿಲ್ಲ” ಎಂದು ನೇರವಾಗಿ ಬಸವಣ್ಣನವರು ಹೇಳಿರುವ ವಚನ ತೋರಿಸಿ. ಮೊದಲಿನಿಂದಲೂ ನೀವು ನಿಮ್ಮ interpretations ಅನ್ನು ವಚನಗಳಲ್ಲಿ ತುರುಕುತ್ತಿದ್ದಿರಿ, ಇಲ್ಲಿ ಚೆನ್ನಾಗಿಯೇ ಸಾಭೀತಾಗುತ್ತಿದೆ.

          • ಸಹನಾ

            ನಿಮ್ಮ interpretation ಇಲ್ಲದೆ “ಸ್ಥಾವರಕ್ಕೆ ಅಳಿವಿಲ್ಲ” ಎಂದು ಬಸವಣ್ಣನವರು ನೇರವಾಗಿ ಹೇಳಿರುವ ವಚನವನ್ನು ತೋರಿಸಿ ದರ್ಗಾ ಸರ್…. ನಿಮ್ಮ ಕುತರ್ಕಗಳನ್ನು ಶರಣರ ನುಡಿಗಳಲ್ಲಿ ಸೇರಿಸಿ ಅಸಂಬದ್ದ ಮತ್ತು ವಿಕೃತಗೊಳಿಸಬೇಡಿ.

          • jayateerth joshi

            you are doing those things which u hv told in above comment

          • Ramjan Darga

            ಮತ್ತೇ ಅದೇ ಪ್ರಶ್ನೆ ಕೇಳುತ್ತಿದ್ದೇನೆ. ಏಕೆ ಉತ್ತರಿಸದೆ ನುಸುಳಿಕೊಳ್ಳುತ್ತಿದ್ದೀರಿ?
            “ಉಳ್ಳವರು ಶಿವಾಲಯವ ಮಾಡಿಹರು
            ನಾನೇನ ಮಾಡುವೆ ಬಡವನಯ್ಯಾ
            ಎನ್ನ ಕಾಲೇ ಕಂಬ, ದೇಹವೆ ದೇಗುಲ
            ಶಿರ ಹೊನ್ನಕಲಶವಯ್ಯಾ,
            ಕೂಡಲಸಂಗಮದೇವ ಕೇಳಯ್ಯಾ
            ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. (ಬಸವಣ್ಣನವರು)
            ….
            “ಸ್ಥಾವರ ಜಂಗಮ ಒಂದೇ’ ಎಂಬುದು ಕೂಡಲಸಂಗನ ವಚನ” (ಬಸವಣ್ಣನವರು)
            ಸ್ಥಾವರ ಜಂಗಮ ಒಂದೇ ಅಂದರೆ ಏನರ್ಥ?
            ಜಂಗಮಕ್ಕೆ ಅಳಿವಿಲ್ಲ ಎಂದರೆ ಸ್ಥಾವರಕ್ಕೂ ಅಳಿವಿಲ್ಲ ಎಂದೇ ಅರ್ಥವಾಗುವುದಲ್ಲವೆ?
            ಸ್ಥಾವರಕ್ಕೆ ಅಳಿವಿದೆ ಎಂದು ನೀವು ಭಾವಿಸಿದರೆ ಜಂಗಮಕ್ಕೂ ಅಳಿವಿದೆ ಎಂದಂತಾಗುವುದಿಲ್ಲವೆ?

          • ಸಹನಾ

            ಮತ್ತದೇ ಉತ್ತರ ಈ ಉಧಾಹರಣೆಯಲ್ಲಿರುವ ಸಮಸ್ಯೆ ಏನು??? ಹೇಳಿ ನಿಮ್ಮ ಪ್ರಶ್ನೆಗೆ ಇದು ಏಕೆ ಉತ್ತರವಾಗುವುದಿಲ್ಲ ಎನ್ನುವುದನ್ನೂ ತರ್ಕಬದ್ದವಾಗಿ ವಿವರಿಸಿ. ಸುಮ್ಮನೆ ಅದೇ ತೌಡನ್ನೇ ಕುಟ್ಟಬೇಡಿ:
            ಶರಣರಲ್ಲೇ ಶಿವನನ್ನು /ಚೈತನ್ಯ ವನ್ನು/ ಜಂಗಮವನ್ನು ಕಾಣುತ್ತಾರೆ ವಚನಶರಣರು, ಹೌದಾ!! ಹಾಗೆಯೇ ಜಗತ್ತಿನ ಚರಾಚರ ದಲ್ಲೂ ಚೈತನ್ಯ/ಶಿವ/ಜಂಗಮವಿದೆ ಹೌದಾ!!!! ಆದ್ದರಿಂದ ಸ್ಥಾವರವೂ ಈ ಜಗತ್ತಿನಲ್ಲೇ ಇರುವುದರಿಂದ ಅದರಲ್ಲೂ ಚೈತನ್ಯ/ಶಿವ/ಜಂಗಮವಿರಲೇ ಬೇಕಲ್ಲವೇ??? ಹಾಗಾಗಿ “ಸ್ಥಾವರ ಜಂಗಮ ಒಂದೆ” (ಒಂದರಲ್ಲೇ ಇದೇ). ಹಾಗೆಯೇ ಸ್ಥಾವರ ಅಂದರೆ ಭೌತಿಕವಾದುದು ನಾಶವಾದರೂ ಅದರೊಳಗಿರುವ ಚೈತನ್ಯ/ಶಿವ/ಜಂಗಮಕ್ಕೆ ನಾಶವಿಲ್ಲ…
            ಇನ್ನೊಂದು ಉದಾ:
            ಶರಣರೇ (ದೇಹ=ಸ್ಥಾವರ+ಜೀವ=ಆತ್ಮ/ಚೈತನ್ಯ) ಜಂಗಮರು. ಹೀಗಾಗಿ “ಸ್ಥಾವರ ಮತ್ತುಜಂಗಮ ಒಂದೇ”
            ಶರಣರ ದೇಹ (ಸ್ಥಾವರ) ನಾಶವಾದರೂ ಅವರೊಳಗಿರುವ ಜೀವ/ಚೈತನ್ಯ (ಜಂಗಮ) ನಾಶವಾಗುವುದಿಲ್ಲ. ಹಾಗಾಗಿ, “ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ”
            ಹೀಗೆ ವಿವರಿಸಿದರೆ ತೊಡಕೇನು? ಏನು ವೈರುಧ್ಯ ವಾಗುತ್ತೆ ಇಲ್ಲಿ? ಜಂಗಮಕ್ಕೆ ನೂರೆಂಟು ಅರ್ಥ ಏಕೆ ಕಲ್ಪಿಸಬೇಕು?
            (ನಾವು ನಮ್ಮ ಸಾಮಾನ್ಯ ತಿಳುವಳಿಕೆಯಲ್ಲಿ ಯಾವುದೆಲ್ಲಾ ಆಳಿಯುತ್ತದೆ ನಾಶವಾಗುತ್ತದೆ ಎಂದು ಭಾವಿಸುವೆವೋ ಆಧ್ಯಾತ್ಮಿಕ ಪರಿಭಾಷೆಯಲ್ಲಿ ಅವು ನಮ್ಮ ಭ್ರಮೆ ಅಷ್ಟೇ. ಏಕೆಂದರೆ, ಈ ಜಗತ್ತಿನಲ್ಲಿ ಯಾವುದೂ ಹುಟ್ಟುವುದೂ ಇಲ್ಲ ನಶಿಸುವುದೂ ಇಲ್ಲ ರೂಪಾಂತರವಾಗುತ್ತಿರುತ್ತದೆ. ಒಂದು ವಸ್ತುವನ್ನು ಸುಟ್ಟರೂ ಅದು ಇಂಗಾಲವಾಗಿ ಆವಿಯಾಗಿ ಪುನಃ ಇನ್ನೊಂದು ವಸ್ತುವಿನ ಉತ್ಪತ್ತಿಯಲ್ಲಿ ಲೀನವಾಗುತ್ತದೆ ಅಂದರೆ ಅದು ನಾಶವಾಗುವುದಿಲ್ಲ. ಇದನ್ನೇ ಭೌತವಿಜ್ಞನವೂ ಹೇಳುತ್ತದೆ. ಸ್ಥಾವರವೂ ಒಂದು ವಸ್ತುವೇ ಆದ್ದರಿಂದ ಅದನ್ನೆ ಕೆಡವಿದರೂ ಅದು ಈ ರೂಪಾಂತರ ಪ್ರಕ್ರಿಯೆಗೆ ಒಳಪಡುತ್ತದೆ. ನಾಶವಾಗಿ ಇಲ್ಲವಾಗುವುದಿಲ್ಲ. ಹೀಗೆ ಸ್ಥಾವರಕ್ಕೂ ಅಳಿವಿಲ್ಲ ಎನ್ನುವುದನ್ನು ವೈಜ್ಞಾನಿಕವಾಗಿಯೇ ತೋರಿಸಬಹುದು. ನಿಮಗೆ ವಚನಗಳಲ್ಲಿನ ಅನುಭಾವದ ವೈಜ್ಞಾನಿಕತೆ ಅರ್ಥವಾಗಬೇಕೆಂದರೆ ಭೌತವಿಜ್ಞಾನದ ಪ್ರಾಥಮಿಕ ತಿಳುವುಳಿಕೆ ಮತ್ತು ಅನುಭಾವದದ experience ಎರಡೂ ಇರಬೇಕು. ಹಾಗ ವಚನಗಳು ನಿಜವಾದ ವೈಜ್ಞಾನಿಕತೆ ನಿಮಗೆ ಅರಿವಾಗುತ್ತದೆ. ಅದನ್ನು ಬಿಟ್ಟು ಸೆಮೆಟಿಕ್ ಮೌಲ್ಯಗಳನ್ನೇ ವೈಜ್ಞಾನಿಕ, ವೈಚಾರಿಕ ಎಂದು ನಂಬಿಕೊಂಡು ವಚನಗಳಲ್ಲಿ ಉದಾರವಾವಿದೆ, ಮಾನವಹಕ್ಕು ಇದೆ, ಸ್ತ್ರೀವಾದವಿದೆ ಮತ್ತು ಅವೇ ವೈಚಾರಿಕತೆ ಎಂದು ನಂಬಿ ಅದನ್ನು ವಚನಗಳಲ್ಲಿ ಹೇರಿದರೆ ಅಭಾಸ ಮಾತ್ರವಲ್ಲ ನಗೆಪಾಟಲು ಕೂಡ)

      • Ramjan Darga

        ಅನ್ನಪೂರ್ಣ ಅವರೆ ನಾನು ವಿವರಿಸಿದ ಅಷ್ಟಾವರಣ, ಪಂಚಾಚಾರ ಮತ್ತು ಷಟ್‍ಸ್ಥಲಗಳು ಗೊಡ್ಡು ಆಚರಣೆಗಳೆ. ಮನುಸ್ಮೃತಿಯು ವೈಜ್ಞಾನಿಕ ಆಚರಣೆಯೆ?

        • Amaresh

          Annapoorna has left this discussion due to the quality of your responses to her questions. As usual, you have brought Manu Smriti into the discussion unnecessarily. You were asked a specific question – aren’t the practices preached by Channabasavanna to Siddaraama ‘goddu’? Why don’t u answer the question?

          • Ramjan Darga

            All the sharanas were having right to express their opinions. Deeksha is among Deekshaguru and the disciple only.. But Lingayat religion accepted Panchachars. I have already explained. you are not ready to look at my answers. Simply quentioning.

          • Amaresh

            ದರ್ಗಾ ಅವರೇ, beating around the bushes ತಂತ್ರಗಾರಿಕೆಯನ್ನು ಬಿಡಿ ಮಾರಾಯ್ರೆ! ಮೊದಲು ಕೇಳಿದ ಪ್ರಶ್ನೆಗೆ ನೇರ ಉತ್ತರ ಕೊಡಿ. ಚನ್ನಬಸವಣ್ಣನವರು ಸಿದ್ದರಾಮರಿಗೆ ಬೋಧಿಸಿದ ಆಚಾರಗಳು ವೈಜ್ಞಾನಿಕವೆ ಅಲ್ಲವೇ ಅಂತ ಹೇಳಿ. ಉದಾಹರಣೆಗೆ “೨೫. ಮಂತ್ರಸಹಿತ ಗೋಮಯವ ಹಿಡಿದು, ಮಂತ್ರಸಹಿತ ಪುಟವಿಕ್ಕಿ ಭಸ್ಮದ ರಾಶಿಯ ಮಡುವುದು” ಎಂಬ ಆಚಾರವನ್ನೇ ತೆಗೆದುಕೊಳ್ಳಿ. ಇದೊಂದು ಗೊಡ್ಡು ಆಚರಣೆ ಅಲ್ಲ ವೈಜ್ಞಾನಿಕ ಅಂತ ಏಕೆ ಭಾವಿಸಿದ್ದೀರಿ ಅಂತ ಹೇಳಿ ನೋಡೋಣ. “೨೦. ಹುಟ್ಟಿದ ಶಿಶುವಿಗೆ ಲಿಂಗಧಾರಣೆ ಮಾಡದೆ ತಾಯ ಮೊಲೆಹಾಲ ಜೇನುತುಪ್ಪ ಮುಟ್ಟಿಸದಿರುವುದು” ಎಂಬ ಆಚರಣೆಯ ಹಿಂದಿರುವ ವೈಜ್ಞಾನಿಕ ಪ್ರೇರಣೆ ಏನು ಅಂತ ಹೇಳಿ ನೋಡೋಣ. “೧೮. ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಡದಿರುವುದು” ಎಂಬ ಆಚರಣೆಯನ್ನು ತಮ್ಮ ವೈಜ್ಞಾನಿಕ ಮನಸ್ಸು ಹೇಗೆ ಒಪ್ಪುತ್ತದೆ ಅಂತ ಹೇಳಿ ನೋಡೋಣ.

          • Ramjan Darga

            ಖಂಡಿತವಾಗಿಯೂ ಅವುಗಳಲ್ಲಿ ಅನೇಕವು ಅವೈಜ್ಞಾನಕವಾಗಿವೆ. ಚನ್ನಬಸವಣ್ಣನವರು ಹೇಳಿದ ಸಂದರ್ಭದ ಕುರಿತು ನಾನು ವಿವರಿಸಿದ್ದೇನೆ ಹೊರತಾಗಿ ಅವು ವೈಜ್ಞಾನಿಕ ಮನೋಭಾವದಿಂದ ಕೂಡಿದವು ಎಂದು ಹೇಳಿರುವೆನೆ? ನನ್ನ ಲೇಖನದಲ್ಲಿ ಇಲ್ಲದ ಈ ವಿಚಾರವನ್ನು ನೀವೇಕೆ ಎಳೆದು ತಂದಿರಿ? ಲಿಂಗಾಯತ ಧರ್ಮದಲ್ಲಿ ಪಂಚಾಚಾರಗಳನ್ನು ಮಾತ್ರ ಸ್ವೀಕರಿಸಲಾಗಿದೆ.

        • Amaresh

          ಸ್ವಾಮಿ, ತಮಗೆ ಕೇಳಿದ ಪ್ರಶ್ನೆಯನ್ನು ಉತ್ತರಿಸುವ ಬದಲು ಸುಮ್ಮನೇಕೆ ಮನುಸ್ಮೃತಿಯ ಗುಮ್ಮವನ್ನು ತೋರಿಸುತ್ತಿದ್ದೀರಿ? ಮನುಸ್ಮೃತಿಯ ಆಚರಣೆಗಳನ್ನು ಅನ್ನಪೂರ್ಣ ಅವರು ವೈಜ್ಞಾನಿಕ ಅಂತ ಎಲ್ಲೂ ಹೇಳಿಲ್ಲ. ಮನುಸ್ಮೃತಿ ಬಗ್ಗೆ ವ್ಯಾಮೋಹ ಇರುವುದು ನಿಮ್ಮಗಳಿಗೆ ಹೊರತು ಅನ್ನಪೂರ್ಣ ಅವರಿಗಲ್ಲ. ಶರಣರ ಆಕಾರನೆಗಳು ವೈಜ್ಞಾನಿಕ ಅಂತ ಹೇಳಿದವರು ನೀವು. ಈಗ ಹೇಳಿ ಚನ್ನಬಸವಣ್ಣನವರು ಇಷ್ಟಲಿಂಗ ದೀಕ್ಷೆ ನೀಡುವ ಸಂದರ್ಭದಲ್ಲಿ ಸಿದ್ಧರಾಮರಿಗೆ ಬೋಧಿಸಿದ ೫೦ ಬಗೆಯ ಆಚಾರಗಳು ವೈಜಾನಿಕವೇ ಅಲ್ಲವೇ ಅಂತ. “ಹುಟ್ಟಿದ ಶಿಶುವಿಗೆ ಲಿಂಗಧಾರಣೆ ಮಡದೆ ತಾಯ ಮೊಲೆಹಾಲ ಜೇನುತುಪ್ಪ ಮುಟ್ಟಿಸದಿರುವುದು” ತರಹದ ಆಚರಣೆಗಳು ಅದು ಹೇಗೆ ವೈಜಾನಿಕ ಅಂತ ದಯವಿಟ್ಟು ಹೇಳಿ.

          • Ramjan Darga

            ನನ್ನ ‘ಅವಧಿ’ ಲೇಖನದಲ್ಲಿ ಇಲ್ಲದಿರುವುದನ್ನು ಎಳೆದು ತರುತ್ತಿದ್ದೀರಿ. ಶರಣರು ವಾಕ್ ಸ್ವಾತಂತ್ರ್ಯಪ್ರಿಯರು. ಅಂಬಿಗರ ಚೌಡಯ್ಯನವರು ‘ಶರಣ ಸತಿ ಲಿಂಗ ಪತಿ’ ಎಂಬುದನ್ನೇ ಒಪ್ಪಿಕೊಳ್ಳುವುದಿಲ್ಲ. ಶರಣ ಸಂಕುಲ ಒಪ್ಪಿಗೆ ನೀಡಿದ್ದು ಪಂಚಾಚಾರಗಳಿಗೆ ಮಾತ್ರ. ಶರಣ ಸಮೂಹ ಒಪ್ಪಿದ್ದರಲ್ಲಿ ನೀವು ತಿಳಿಸಿದಂಥ ವಿಚಾರಗಳಿವೆಯೆ?

          • Amaresh

            ಮಾನ್ಯರೇ, ವಚನಗಳ ಸಂದರ್ಭದಲ್ಲಿ ತಾವು ಇಷ್ಟ ಬಂದಾಗ ಅಗತ್ಯವಿರಲಿ ಇಲ್ಲದಿರಲಿ ಮನುಸ್ಮೃತಿಯ ಪ್ರಸ್ತಾಪವನ್ನು ಮಾಡಬಹುದು, ಆದರೆ ನಾನು ಶರಣರಲ್ಲೇ ಆದರ್ಶಪ್ರಾಯರಾದ ತಾವೇ ಬಹುವಾಗಿ ಮೆಚ್ಚಿಕೊಂಡಿರುವ ಚನ್ನಬಸವಣ್ಣನವರು ಬೋಧಿಸಿದ ಆಚಾರಗಳ ಪ್ರಸ್ತಾಪ ಮಾಡಕೂಡದು! ಇದು ಯಾವ ಸೀಮೆ ನ್ಯಾಯ ಸ್ವಾಮಿ?! ಚನ್ನಬಸವಣ್ಣನವರು ” ೧೮. ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಡದಿರುವುದು.” ಮೊದಲಾದ ಆಚಾರಗಳನ್ನೂ ಬೋಧಿಸಿಯೇ ಇಲ್ಲ ಅಂತ ಹೇಳುತ್ತಿದ್ದೀರಾ? ಅಥವಾ ಅವರ ಬೋಧನೆ ತಮ್ಮ ಐಡಿಯಾಲಜಿಗೆ ಫಿಟ್ ಆಗುತ್ತಿಲ್ಲವೇ? “ಶರಣ ಸಂಕುಲ ಒಪ್ಪಿಗೆ ನೀಡಿದ್ದು ಪಂಚಾಚಾರಗಳಿಗೆ ಮಾತ್ರ” ಅಂತ ಅನ್ನುವ ತಮ್ಮ ಶರಣ ಸಂಕುಲದಲ್ಲಿ ಚನ್ನಬಸವಣ್ಣ ಹಾಗೂ ಸಿದ್ದರಾಮರು ಇಲ್ಲವೇ?!!

          • Ramjan Darga

            ವಚನ ಚಳವಳಿಯಲ್ಲಿ ಅನೇಕ ವಿಧದ ವಿಚಾರಗಳು ಬಂದುಹೋಗಿವೆ. ಶರಣರು ಅವೆಲ್ಲವನ್ನೂ ದಾಖಲಿಸಿದ್ದಾರೆ. ಚನ್ನಬಸವಣ್ಣನವರು ಮತ್ತು ಅಂಬಿಗರಚೌಡಯ್ಯನವರು ಬಸವವಣ್ಣನವರ ವಿಚಾರಗಳನ್ನು ಒಪ್ಪದೆ ಇದ್ದುದು ಕೂಡ ದಾಖಲಾಗಿದೆ. ಮೋಳಗೆ ಮಾರಯ್ಯನವರ ವಿಚಾರವನ್ನು ಅವರ ಧರ್ಮಪತ್ನಿ ಒಪ್ಪದೆ ಇದ್ದುದು ದಾಖಲಾಗಿದೆ. ಆಯ್ದಕ್ಕಿ ಮಾರಯ್ಯವರಿಗೆ ಅವರ ಧರ್ಮಪತ್ನಿ ಪ್ರಶ್ನಿಸಿದ್ದೂ ದಾಖಲಾಗಿದೆ. ವಚನ ಚಳವಳಿಯ ಬಹು ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ ಈ ಅಭಿವ್ಯಕ್ತಿ ಸ್ವಾತಂತ್ರ್ಯ. ಆಚಾರಗಳಲ್ಲಿ ಕೊನೆಗೆ ಎಲ್ಲರೂ ಒಪ್ಪಿಕೊಂಡದ್ದು ಪಂಚಾಚಾರವನ್ನು.
            ನಿಮ್ಮ ವಾದ ಬರೀ ವಾದ ಮಾಡುವುದಕ್ಕೋಸ್ಕರ ಇದೆಯೆ? ನಾನು ವಿವರಿಸಿರುವುದನ್ನು ಕಡೆಗಣಿಸಿ ಹಾಡಿದ್ದೇ ಹಾಡುತ್ತಿದ್ದೀರಲ್ಲಾ. ಮೊದಲು ಹೇಳಿ ನೀವು ಯಾವ ತತ್ತ್ವದ ಆಧಾರದ ಮೇಲೆ ನನ್ನ ಕೂಡ ವಾದಿಸುತ್ತಿರುವಿರಿ? ಮನುಷ್ಯರಾದವರಿಗೆ ಕನಿಷ್ಠ ಪ್ರಾಮಾಣಿಕತೆ ಇರಬೇಕು. ನಾನು ಬಸವತತ್ತ್ವದ ಆಧಾರದ ಮೇಲೆ ನಿಮ್ಮ ಜೊತೆ ಚರ್ಚೆಗೆ ಇಳಿದಿರುವೆ. ನಾನು ಹೇಳಿದ್ದಕ್ಕೆ ವಚನಗಳ ಆಧಾರದ ಕೊಡುತ್ತಿರುವೆ. ನೀವು ನನಗೆ ಒಮ್ಮೆ ಸೂಡೊ ಮಾರ್ಕ್ಸವಾದಿ ಎಂದು ಮತ್ತೊಮ್ಮೆ ಮುಸ್ಲಿಂ ಎಂದು ಹೇಳುತ್ತೀರಿ. ಇದಕ್ಕೆ ನನಗೆ ಬೇಸರವಿಲ್ಲ. ಇದು ನಿಮ್ಮ ಕೊಳಕುತನವನ್ನು ತೋರಿಸುತ್ತದೆ. ನಾನಿಲ್ಲಿ ನಿಮ್ಮ ಕೂಡ ವಾದ ಮಾಡುತ್ತಿರುವುದು ಬಸವವಾದಿಯಾಗಿ. ನಿಮ್ಮ ಪೂರ್ತಿ ಹೆಸರೇನು? ನೀವು ಯಾವ ಧರ್ಮ ಮತ್ತು ತತ್ತ್ವದ ಆಧಾರದ ಮೇಲೆ ಚರ್ಚೆಗೆ ಇಳಿದಿರುವಿರಿ? ಬಸವತತ್ತ್ವದ ನನ್ನ ವಿಚಾರ ಸರಣಿಯನ್ನು ಒಪ್ಪಿಕೊಳ್ಳದ ನೀವು ಬಸವಣ್ಣನವರನ್ನು ಒಪ್ಪಿಕೊಳ್ಳುವ ಕ್ರಮವಾವುದು? ಈ ಮೂರು ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರಕೊಡುವ ತಾಕತ್ ಇಲ್ಲದಿದ್ದರೆ ನಾನು ನಿಮ್ಮ ಪ್ರಶ್ನೆಗಳನ್ನು ಕಡೆಗಣಿಸುತ್ತೇನೆ.

          • ಸಹನಾ

            why do need a ideological position to understand vacanas scientifically?? what makes intellectuals like Darga sir to prescribe such conditions in an academic intellectual debate? I wonder whether Darga sir is an intellectual or propagator of a religion?

          • Ramjan Darga

            ವಿಜ್ಞಾನ ಅಲ್ಲ ವೈಜ್ಞಾನಿಕ ಮನೋಭಾವ. ಶರಣರು ವೈಜ್ಞಾನಿಕ ಮನೋಭಾವದವರಾಗಿದ್ದರು. ಅಂತೆಯೆ ಅವರು ಮೋಸದ ವರ್ಣ ಮತ್ತು ಜಾತಿ ವ್ಯವಸ್ಥೆಯನ್ನು ಒಪ್ಪಲಿಲ್ಲ. ಬಸವಣ್ಣನವರು ‘ಕರ್ಣದಲಿ ಜನಿಸಿದವರುಂಟೆ ಜಗದೊಳು’ ಎಂದು ಪ್ರಶ್ನಿಸಿದ್ದಾರೆ. ವರ್ಣ ವ್ಯವಸ್ಥೆಯನ್ನು ಪ್ರತಿಪಾದಿಸುವ ಪುರಷಸೂಕ್ತಕ್ಕೆ ಬಸವಣ್ಣನವರು ಕೊಟ್ಟ ಉತ್ತರವಿದು.
            ಆರ್ಯರು ಏಷ್ಯಾ ಮೈನರ್ (ಇಂದಿನ ಟರ್ಕಿ) ಕಡೆಯಿಂದ ಬಂದವರು. ಟರ್ಕಿಯಿಂದ ಬಂದವರಿಗೆ ತುರುಕರು ಎನ್ನುತ್ತಾರೆ. ಇವರಿಗೆ ಏನನ್ನಬೇಕೋ ಗೊತ್ತಿಲ್ಲ. ಗೋಪಾಲರಾದ ಇವರು ಪರ್ಸಿಯಾದಲ್ಲಿ ಉಳಿದರು. ಪಾರ್ಸಿ ಭಾಷೆ ಮತ್ತು ಸಂಸ್ಕೃತ ಭಾಷೆಯ ಮೂಲ ಒಂದೇ ಆಗಿದೆ. (ಇವೆರಡೂ ಭಾಷೆಗಳು ಇಂಡೋ ಯುರೋಪಿಯನ್ ಲ್ಯಾಂಗ್ವೇಜ್ ಫ್ಯಾಮಿಲಿಗೆ ಸಂಬಂಧಿಸಿವೆ.) ಆ ಪ್ರದೇಶದಲ್ಲಿ ಬರುವ ಇಂದಿನ ಇರಾನ್ ಆರ್ಯನ್‍ಗೆ ಸಂಬಂಧಿಸಿದುದು. ಅದೇ ಪ್ರದೇಶದ ಇರಾಕ್ ಆರ್ಯಕ-ಕ್ಕೆ ಸಂಬಂಧಿಸಿದುದು. ಇರಾನ್‍ನಲ್ಲಿ ಒಂದು ಚಿಕ್ಕ ಬುಡಕಟ್ಟಿನ ಜನರ ಭಾಷೆ ಸಂಸ್ಕೃತವಾಗಿತ್ತೆಂದು ನಾನು 1975ರಲ್ಲಿ ಭಾಷಾವಿಜ್ಞಾನದ ವಿದ್ಯಾರ್ಥಿಯಾಗಿದ್ದಾಗ ಓದಿದ್ದೆ. ಆ ಬುಡಕಟ್ಟು ಇಂದು ಇದೆಯೊ ಇಲ್ಲವೊ ಗೊತ್ತಿಲ್ಲ.
            ಸರ್ ವಿಲಿಯಂ ಜೋನ್ಸ್ ಕಂಪ್ಯಾರಿಟಿವ್ ಲಿಂಗ್ವಿಸ್ಟಿಕ್ಸ್ ಜನಕ. ಆತನ ಪ್ರಕಾರ ಇಂಗ್ಲಿಷ್, ಗ್ರೀಕ್, ಜರ್ಮನ್, ಫ್ರೆಂಚ್ ಮುಂತಾದ ಭಾಷೆಗಳು ಕೂಡ ಇದೇ ಗುಂಪಿಗೆ ಸೇರಿದವು. ಈ ಗೋಪಾಲರು ಇರಾಕ್‍ನಲ್ಲಿ ಇದ್ದಾಗಲೇ ಋಗ್ವೇದ ಬರೆದಿರಬಹುದು. ಏಕೆಂದರೆ ಅದರ ಪುರತಾನ ಪ್ರತಿ ಅಲ್ಲಿಯೆ ಸಿಕ್ಕಿದೆ. ಈ ಗೋಪಾಲರು ಭಾರತದಲ್ಲಿ ಆರ್ಯಾವರ್ತವನ್ನು ರಚಿಸಿ ಇಲ್ಲಿಯೆ ತಳವೂರಿದರು. ಇವರೆಲ್ಲ ಸೆಮಿಟಿಕ್ ಧರ್ಮಗಳ ಪ್ರದೇಶಗಳನ್ನು ಹಾಯ್ದು ಬಂದಿಲ್ಲವೆ? ಸಂಸ್ಕೃತದ ಮಾತೃ, ಪಾರ್ಸಿಯ ಮದಾರ್, ಇಂಗ್ಲಿಷ್‍ನ ಮದರ್. ಪಿತೃ-ಪೆದಾರ್-ಫಾದರ್ ಹೇಗೆ ಇವೆಲ್ಲ ಒಂದೇ ಭಾಷಾ ಮೂಲದವು.
            ನೀವು ಹೇಳುವ ಸೆಮಿಟಿಕ್ ಅಂಶಗಳು ವೈದಿಕದಲ್ಲಿ ಸೇರಿಲ್ಲವೆ? ಏಕೋ ದೇವ, ನ ದ್ವಿತಿಯಃ ಎನ್ನುವುದು ಸೆಮಿಟಿಕ್‍ಗೆ ಸಂಬಂಧಿಸಿದ್ದೆ? ‘ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ’ ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದು ಸೆಮಿಟಿಕ್‍ಗೆ ಸಂಬಂಧಿಸಿದ್ದೆ? ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’, ‘ವಸುಧೈವ ಕುಟುಂಬಕಂ’, ‘ಯತ್ರ ವಿಶ್ವಂ ಭವತಿ ಏಕ ನೀಡಂ’ ಎಂಬ ಚಿಂತನೆಗಳು ಸೆಮಿಟಿಕ್‍ನಿಂದ ಬಂದವುಗಳೆ? ನೀವು ಏನನ್ನು ಸಾಧಿಸಲು ಹೊರಟಿರುವಿರಿ? ಅಮರೇಶ್ ಅವರಿಗೆ ಕೇಳಿದ್ದನ್ನೇ ನಿಮಗೂ ಕೇಳುವೆ. ನಿಮ್ಮ ಪೂರ್ತಿ ಹೆಸರೇನು? ನಿಮ್ಮ ನಿಜನಾಮ ತಿಳಿಸಲು ಏಕೆ ಹೆದರುವಿರಿ? ನೀವು ಯಾವ ಧರ್ಮ ಮತ್ತು ತತ್ತ್ವದ ನೆಲೆಯಲ್ಲಿ ನನ್ನ ಕೂಡ ಚರ್ಚೆಗೆ ಇಳಿದಿರುವಿರಿ? ನಾನು ವಿವರಿಸಿದ ಬಸವ ತತ್ತ್ವದ ಬಗ್ಗೆ ನಿಮಗೆ ವಿರೋಧವಿದೆ. ಬಸವತತ್ತ್ವದ ಬಗ್ಗೆ ನಿಮ್ಮ ನಿಖರ ಆಭಿಪ್ರಾಯವೇನು. ಈ ನನ್ನ ಪ್ರಶ್ನೆಗಳಿಗೆ ನೀವು ನಿಖರವಾದ ಉತ್ತರ ಕೊಡದಿದ್ದರೆ ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ.

          • ಸಹನಾ

            Dear Darga sir, no historian accept Aryan invasion theory as a scientific theory today. these are the William jones max muller and James mill who wrote these emetic stories as history. oriental historiography already went into dustbin please consult your good friend and a good professor too in history for post 1980s developments on Indian historiography. pls don’t bring those colonial stories as authentic history for understanding india’s past. actually your vacana interpretations problems arises from your belief on those colonial stories as truth. please read atleat few postcolonial writings for reconsidering your belief.

          • Amaresh

            Dargaji, Comparative linguistics has moved long way beyond William jones and other indologists. You are not even aware of it and yet you try to preach about comparative linguistics!
            This kind of loose pseudo intellectual argument connecting outdated concepts with unrelated issues will take you no where. By peddling AIT in the debate on Vachanakaras you have made your argument laughable at best.

          • ಸಹನಾ

            i request Darga sir to read HS SHIVAPRAKASH”s artcle pertcularly his ideas on indoligists in todays PRAJAVANI. Be updated when you are engaged in open debate.

          • jayateerth joshi

            Sir Everybody accepts Aryan invasion theory except these people. They know only two words colonialism and semetic. their world is only this much. If foreigners write anything it looks colonial to them. If any Indian writes it looks semetic to them. VERY SIMPLE

          • Amaresh

            “ಮನುಷ್ಯರಾದವರಿಗೆ ಕನಿಷ್ಠ ಪ್ರಾಮಾಣಿಕತೆ ಇರಬೇಕು”
            I agree. This applies to you too.
            “ಇದು ನಿಮ್ಮ ಕೊಳಕುತನವನ್ನು ತೋರಿಸುತ್ತದೆ”
            who called me balangochi depending on foreign money?
            “ನೀವು ಯಾವ ಧರ್ಮ ಮತ್ತು ತತ್ತ್ವದ ಆಧಾರದ ಮೇಲೆ ಚರ್ಚೆಗೆ ಇಳಿದಿರುವಿರಿ?”
            This question of yourself shows the Semitic nature of your thinking.
            “ನಿಮ್ಮ ಪೂರ್ತಿ ಹೆಸರೇನು”
            Amaresh Mahantesh Patil
            “ನೀವು ಬಸವಣ್ಣನವರನ್ನು ಒಪ್ಪಿಕೊಳ್ಳುವ ಕ್ರಮವಾವುದು?”
            Science.
            “ನಿಮ್ಮಿಂದ ಉತ್ತರಕೊಡುವ ತಾಕತ್ ಇಲ್ಲದಿದ್ದರೆ”
            Please stop using masochistic language in a debate on vachanas.

          • Ramjan Darga

            ನೀವು ಯಾವ ಧರ್ಮದ ಆಧಾರದ ಮೇಲೆ ನನ್ನ ಅರಿವಿನ ಬಸವಧರ್ಮವನ್ನು ವಿರೋಧಿಸುತ್ತೀರಿ? ನಾನು ಎಲ್ಲಿಯೂ ಬಳಸದ ಸೆಮಿಟಿಕ್ ಧರ್ಮಗಳ ಕಡೆಗೆ ನನ್ನನ್ನು ಏಕೆ ಎಳೆಯುತ್ತೀರಿ? ನಿಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ ನೀವು ಯಾವ ಧರ್ಮದ ನೆಲೆಗಟ್ಟಿನ ಮೇಲೆ ನಿಂತು ಮಾತನಾಡುತ್ತಿರುವಿರಿ ಎಂಬುದು ನನಗೆ ಮುಖ್ಯ (ನೀವು ಆ ಧರ್ಮದವರಾಗಿರಬಹುದು ಅಥವಾ ಆಗಿರಲಿಕ್ಕಿಲ್ಲ) ನಿಮ್ಮ ಇ ಮೇಲ್ ವಿಳಾಸ ಕಳಿಸಿ ಕಳಿಸಿ ನನ್ನ ನೂರೆಂಟು ಲೇಖನಗಳನ್ನು ನಿಮಗೆ ಕಳುಹಿಸಿಕೊಡುವೆ. ನೀವು ತಪ್ಪೆಂದು ಸಿದ್ಧಮಾಡಿ ತೋರಿಸಿದರೆ ಅವುಗಳನ್ನು ಮುಂದಿನ ಮರುಮುದ್ರಣದಲ್ಲಿ ಪ್ರಕಟಿಸುವೆ.

          • Amaresh

            ನಿಮ್ಮ ನೂರೆಂಟು ಲೇಖನಗಳಲ್ಲಿರುವ ಅಸಂಖ್ಯಾತ ತಪ್ಪುಗಳನ್ನು ಹೆಕ್ಕಿ ತೋರಿಸುವುದೇ ನನ್ನ ಕಾಯಕವಲ್ಲ! ಮೊದಲು ಸದರಿ ಲೇಖನಮಾಲೆಯಲ್ಲಿರುವ ತಪ್ಪುಗಳನ್ನು ಒಪ್ಪಿಕೊಳ್ಳಿ, ಆಮೇಲೆ ಮಿಕ್ಕ ಲೇಖನಗಳ ಬಗ್ಗೆ ಮಾತಾಡೋಣ.

          • ವಿಶ್ವಾರಾಧ್ಯ ಸತ್ಯಂಪೇಟೆ

            ಬಹುಶಃ ತಾವು ಇರುವ ಅನುಮಾನಗಳನ್ನು ಪರಿಹರಿಸಿಕೊಳ್ಳುವ ಮನಸ್ಸಿಲ್ಲದ್ದರಿಂದ ಬೇಕಂತಲೇ ಶ್ರೀ ದರ್ಗಾ ಅವರನ್ನು ಕೆಣಕುವಂತೆ ಪ್ರೇರೇಪಿಸಿ, ಸಿಟ್ಟಿಗೆಳುವಂತೆ ಮಾಡಿ, ಆ ವಿಚಾರಗಳನ್ನೇ ಹಿಡಿದು ಅವರನ್ನು ಹಣಿಯಬೇಕೆಂದು ಕೊಂಡಿರುವಂತಿದೆ ! ವಾಹ್ವ ! ಇದೂ ಕೂಡ ಒಂದು ತಂತ್ರವೆ ಆಗಿದೆ, ಎಂಬುದು ನನ್ನ ತಿಳುವಳಿಕೆ.

          • Amaresh

            tamma tiLuvaLike bagge tiLidukoLLuva shakti bagge nangantoo bhrame illa.

          • Ramjan Darga

            ನೀವು ಯಾವ ಧರ್ಮ ಮತ್ತು ಸಿದ್ಧಾಂತದ ಹಿನ್ನೆಲೆಯಲ್ಲಿ ನನ್ನ ಕೂಡ ವಾದ ಮಾಡುತ್ತಿರುವಿರಿ ಎಂದು ಕೇಳಿದ್ದು ನನ್ನ ಸೆಮಿಟಿಕ್ ನೇಚರ್ ತೋರಿಸುತ್ತಿದೆಯೆ? ನಿಮ್ಮ ಸೈದ್ಧಾಂತಿಕ ಹಿನ್ನೆಲೆಯನ್ನು ಹೇಳಲೂ ಹೆದರುತ್ತೀರಲ್ಲ!

          • ವಿಶ್ವಾರಾಧ್ಯ ಸತ್ಯಂಪೇಟೆ

            ನಿಜ ದರ್ಗಾ ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ವಚನಕಾರರು ಮುಕ್ತವಾದ ವಿಚಾರ ಸ್ವಾತಂತ್ರ್ಯವನ್ನು ಎಲ್ಲಾ ಶರಣರಿಗೂ ನೀಡಿದ್ದರು. ಆ ಚಳುವಳಿಯ ನಾಯಕನಾದ ಬಸವಣ್ಣನವರನ್ನು ಕೆಲವು ವಿಷಯಗಳಲ್ಲಿ ಚೆನ್ನಬಸವಣ್ಣನವರು ಕೂಡ ಒಪ್ಪಲಿಲ್ಲ.ಲಾಂಛನಕ್ಕೆ ಶರಣೆಂಬೆ ಎಂಬ ವಿಚಾರ ಬಸವಣ್ಣಂಗಾಯಿತ್ತು ‘ ಎನಗಲ್ಲ ವೆಂದು ಖಂಡಿತವಾಗಿ ಹೇಳಿದ್ದಾರೆ. ಅಮರೇಶ ಅವರೆ ತಾವು ಹಲವಾರು ಕಡೆ ಎತ್ತಿರುವ ಪ್ರಶ್ನೆಗಳನ್ನು ನೋಡಿದರೆ ತಾವು ವೈದಿಕ ವೈರಸ್ ಎಂದು ಭಾವಿಸಬೇಕಾಗುತ್ತದೆ. ತಿಳಿದುಕೊಳ್ಳಬೇಕೆಂಬ ಕುತೂಹಲಕ್ಕಿಂತಲೂ ತಮ್ಮಲ್ಲಿ ಮೊಸರಲ್ಲಿಕಲ್ಲು ಹುಡುಕುವ ಎದ್ದು ಕಾಣುತ್ತಿದೆ. ಬಹುಶಃ ಇಂಥ ಉದ್ಧಟತನದ ಪ್ರಶ್ನೆಗಳಿಗೆ ಉದಾಸೀನವೇ ಮದ್ದು ಎಂದು ಅಂದುಕೊಳ್ಳಬೇಕಾಗುತ್ತದೆ.

          • Amaresh

            ವಿಶ್ವಾರಾಧ್ಯರೆ, “ಅಮರೇಶ ಅವರೆ ತಾವು ಹಲವಾರು ಕಡೆ ಎತ್ತಿರುವ ಪ್ರಶ್ನೆಗಳನ್ನು ನೋಡಿದರೆ ತಾವು ವೈದಿಕ ವೈರಸ್ ಎಂದು ಭಾವಿಸಬೇಕಾಗುತ್ತದೆ” ಎಂಬ ತಮ್ಮ ಅಂಬೋಣವೇ ಸಾಕಲ್ಲವೇ ನಂಜು ಇರುವುದು ಯಾರ ಮನದಲ್ಲಿ ಅಂತ ಹೇಳಲು?

          • ವಿಶ್ವಾರಾಧ್ಯ ಸತ್ಯಂಪೇಟೆ

            ಅಮರೇಶ್ ರೆ,
            ನಂಜಲ್ಲ, ಎಚ್ಚರಿಕೆ. ಇತಿಹಾಸದ ಪಾಠಗಳು, ಶರಣರ ಸಂತರ ಬುದ್ಧ ಅಂಬೇಡ್ಕರರ ವಿಚಾರಗಳು ಹಾಗೂ ವಾಸ್ತವ ಸಂಗತಿಗಳನ್ನು ಆರೋಗ್ಯಕರವಾಗಿ ನೋಡಿದರೆ ವೈದಿಕ ವೈರಸಗಳ ಬಗ್ಗೆ ಎಚ್ಚರ ಇರಲೇಬೇಕಾಗುತ್ತದೆ. ಅದನ್ನು ತಾವು ಏನೆಂದು ತಿಳಿದುಕೊಂಡರೂ ನಾನೇನು ಮಾಡುವಂತ್ತಿಲ್ಲ.

          • Ramjan Darga

            ನೀವೆಕೆ ಸೆಮಿಟಿಕ್ ತರುತ್ತೀರಿ? ನಾನು ನನ್ನ ಲೇಖನದಲ್ಲಿ ಒಂದು ಸಲವಾದರೂ ಸೆಮಿಟಿಕ್ ಪದ ಬಳಸಿರುವೆನೆ? ನಿಮ್ಮ ಭ್ರಮೆಗಳನ್ನು ನನ್ನ ಮೇಲೆ ಏಕೆ ಹಾಕುತ್ತೀರಿ?

          • ಸಹನಾ

            it is a big joke then.. I am showing that your interpretations are based Semitic ideological framework which you are not aware of. it lies in your acceptance of colonial descriptions as truth. european experience of india is shaped by their christian semitic theology and you buy those framework to understand vacanas which is what I am proving here.

          • Ramjan Darga

            ಅಮರೇಶ್ ಅವರೇ ಮೂರ್ಖ ಬಾಲಂಗೋಚಿಗಳು ಮೊಸರಲ್ಲಿ ಕಲ್ಲು ಹುಡುಕಲು ಮಾಡುತ್ತಿರುವ ಪ್ರಯತ್ನ ನನಗೆ ನಗೆಯು ತರಿಸುತ್ತಿದೆ. ಧೈರ್ಯವಿದ್ದರೆ ನಿಮ್ಮ ಇ ಮೇಲ್ ಕಳಿಸಿ. ಗಾಬರಿಯಾಗಬೇಡಿ ಯಾವ ಲಿಂಗಾಯತನೂ ನಿಮಗೇನೂ ಮಾಡುವುದಿಲ್ಲ.

          • jayateerth joshi

            You dont know anything other than harping on semetic and christian theology.Whatever is posted it looks like that to u.It means ur ideology is deeply influenced by semetic ideology.

        • Ramjan Darga

          ಸಹನಾ ಅವರೇ ನೀಮಗೆ ಬೇರೆಯವರ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ತಾಳ್ಮೆಯೆ ಇಲ್ಲವಲ್ಲ. ಬಸವಣ್ಣನವರು
          “ಉಂಬ ಜಂಗಮ ಬಂದಡೆ ನಡೆಯೆಂಬರು
          ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ”
          ಮತ್ತು
          ಅರಸು ವಿಚಾರ ಸಿರಿಯು ಶೃಂಗಾರ ಸ್ಥಿರವಲ್ಲ, ಮಾನವಾ:
          ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ!
          ಒಬ್ಬ ಜಂಗಮದಭಿಮಾನದಿಂದ
          ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು!
          ಸಂದಿತ್ತು, ಕೂಡಲಸಂಗಮದೇವ ನಿಮ್ಮ ಕವಳಿಗೆಗೆ!
          ಎಂದು ಬರೆದಿದ್ದಾರೆ.
          ವಿವಿಧ ಕಡೆಗಳಲ್ಲಿ “ಜಂಗಮಲಿಂಗ” ಮತ್ತು “ಲಿಂಗಜಂಗಮ” ಪದಗಳ ಪ್ರಯೋಗ ಮಾಡಿದ್ದಾರೆ.
          ಹೀಗೆ ಇಲ್ಲಿ ತಿಳಿಸಿದ ನಾಲ್ಕು ಕಡೆಗಳಲ್ಲಿ ನೀವು ಹೇಳುವ ಒಂದೇ ಅರ್ಥ ಸಾಕಾಗುವುದೆ?

          • Amaresh

            “ನೀಮಗೆ ಬೇರೆಯವರ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ತಾಳ್ಮೆಯೆ ಇಲ್ಲವಲ್ಲ.” ತಮಗೆ ಇದೆಯೇ?

          • ಸಹನಾ

            ನಾನು ಹೇಳಿದ ಅದೇ ಅರ್ಥವನ್ನು ಈ ಎಲ್ಲಾ ವಚನಗಳಿಗೆ ಪ್ರಯೋಗ ಮಾಡಿ ಅರ್ಥೈಸಿದರೆ ಏನು ಪ್ರಮಾದವಾಗುವುದು? ಮತ್ತು ಯಾವ ಅಭಾಸವಾಗುವುದು? ಎಂದು ತರ್ಕಬದ್ದವಾಗಿ ನೀವು ತೋರಿಸಿ. ನಾನೂ ಈ ವಚನಗಳನ್ನೂ ಕೂಡ ಆ ಒಂದೇ ಅರ್ಥನೀಡಿ ಅಭಾಸ/ವೈರುಧ್ಯಗಳಿಲ್ಲದೆ ವಿವರಸಬಹದೆಂದು ತರ್ಕಬದ್ದವಾಗಿಯೇ ತೋರಿಸುತ್ತೇನೆ.

  9. ಉದಯಕುಮಾರ್ ಹಬ್ಬು

    ಲಿಂಗಾಯತರು ಹಿಂದುಗಳಲ್ಲ ಎನ್ನಲು ಯಾವ ಆಧಾರವಿದೆ? ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರೀಯವರು ಶ್ರೇಷ್ಠ ಲಿಂಗಾಯತರಗಿದ್ದರು. ಹಾಗೂ ವೇದವಿದ್ವಾಂಸರಾಗಿದ್ದರು. ಅವರಹೇಳಿಕೆ ಹೀಗಿದೆ:’ ಶ್ರೀ ಬಸವಣ್ಣನವರು ವೇದಾದ ಒಂದು ಭಾಗವಾದ ಕ್ರ್ಮಕಂದವನ್ನು ಖಂಡಿಸಿರುವರು. ಏ ಭಾಗದಲ್ಲಿ ಹಿಂಸೆ ಉಕ್ತವಾಗಿರುವುದರಿಂದ ಅಹಿಂಸಾಪಾಲಕರೂ, ಧರ್ಮ ಮತ್ತು ದಯಾಮೂರ್ತಿಗಳೂ ಆದ ಬಸವಣ್ಣನವರಿಗೆ ಹಿಂಸೆ ಸರಿ ಹೋಗದಿರುವುದು ಸಹಜವಾದುದು. ವೇದ ಎಷ್ಟೇ ಪುರಾತನ ಗ್ರಂಥವಾದರೂ ಆ ಭಾಗವನ್ನು ಮಾತ್ರ ಖಂಡಿಸಿರುವರು. ವೇದಗಳಲ್ಲಿನ ವರ್ಣಗಳು ಮೊದಲು ಗುಣ ವಾಚಕಗಳಾಗಿದ್ದು ಬರಬರುತ್ತಾ ಜಾತಿವಾಚಕಗಳಾಗಿ ಮೇಲೂ ಕೀಳು ಎಂಬ ಕೊಳಚೆಯನ್ನು ಹೆಚ್ಚಿಸತಕ್ಕವುಗಳಾಗಿರುವುದರಿಂದ ಜಾತಿವಾಚಕಗಳದ ವರ್ಣಗಳನ್ನು ವಿರೋಧಿಸಿದರು. ನಿಜವಾಗಿಯೂ ವೇದಗಳಲ್ಲಿ ಎಲ್ಲಿಯೂ ಜಾತಿಭೇಧವು ಕಾಣುವುದಿಲ್ಲ. ಈ ವೇದಗಳಲ್ಲಿ ಸ್ಥೂಲರಿತಿಯಿಂದ ಜ್ನಾನ ಕಾಂಡ, ಕರ್ಮಕಾಂಡ ಮತ್ತು ಉಪಾಸಣಾ ಕಾಂಡ ಗಳೆಂಬ ಮೂರು ಪ್ರಕಾರ ಇರುತ್ತವೆ. ಇವುಗಳಲ್ಲಿ ಕರ್ಮ ಕಾಂಡದೊಳಗೆ ಕೇವಲ ಯಜ್ನಯಾಗದಿಗಳನ್ನು ಹೇಳಿರುತ್ತವೆ. ಆ ಯಜ್ನದ ಅರ್ಥಗಳನ್ನು ಬರಬರುತ್ತಾ ಬೇರೆ ಬೇರೆ ರೀತಿಯಿಂದ ಮಾಡಿ ಪ್ಶುಗಳ ವಧೆಯನ್ನು ಮಾಡಲಿಕ್ಕೆ ಪ್ರಾರಂಭಿಸಿದರು. ಯ್ಜ್ನಗಳಲ್ಲಿ ಪಶುಗಳನ್ನು ಕೊಂದದ್ದಾದರೆ ದೋಷವಿಲ್ಲವೆಂದು “ಮಾಹಿಂಸ್ಯಾತ್ಸರ್ವಭೂತಾನಿ” ಎಂಬುವ ಸಾಮಾನ್ಯ ಶಾಸ್ತ್ರಕ್ಕೆ ಯ್ಜ್ನಗಳಲ್ಲಿ ಪಶುಗಳನ್ನು ಕೊಂಡರೆ ದೋಷವಿಲ್ಲ ಎಂಬುವ ವಿಶೇಷ ಶಾಸ್ತ್ರವನ್ನು ಮಾಡಿದರು. ಹಿಂಸೆಯನ್ನು ಹೇಳತಕ್ಕವು ವೇದಗಳಾದರೂ ಸರಿ ಅವು ತ್ಯಾಜ್ಯವಾದವುಗಳೆಂದು ಬಸವಣ್ಣನವರು ಅಂತಹ ವೇದಗಳ ವಿರುದ್ಧ ದಕ್ಷಿಣ ಹಿಂದೂಸ್ಥಾನದಲ್ಲಿ ದೊಡ್ಡ ಬಂಡಾಯವನ್ನೆಬ್ಬಿಸಿದರು. ವೇದಗಳಲ್ಲಿ ನಾಲ್ಕು ವರ್ಣಗಳನ್ನು ಹೇಳಿದ್ದರೂ ಅವು ಗುಣ ಕ್ರ್ಮಗಳಿಂದ ಇರತಕ್ಕವುಗಳೆಂದು ಸಿದ್ಧಪಡಿಸಲಾಗಿದೆ. ಅವುಗಳು ಕಾಲಕ್ರಮದಿಂದ ಜಾತಿಯ ವಾಚಕಗಳಾದವು. ಹೀಗೆ ಮೇಲೂ ಕೀಳುಗಳನ್ನು ಹೇಳತಕ್ಕ ವೇದಗಳನ್ನು ಬಸವಣ್ಣನವರು ನಿರ್ದಾಕ್ಷಿಣ್ಯವಾಗಿ ಅವುಗಳನ್ನು ಖಂಡಿಸಿದರು.
    ಇಲ್ಲಿ ವೇದಗಳ ಬಗ್ಗೆ ಬಸವಣ್ಣನವರ ವಚನಗಳನ್ನು ಮೂರು ರೀತಿಯಿಂದ ವಿಂಗಡಿಸಬಹುದಾಗಿದೆ. ಮೊದಲನೆಯಯ ವರ್ಗದ ವಚನಗಳಲ್ಲಿ ಬಸವಣ್ಣನವರು ದೇವರ ಸ್ವರೂಪವನ್ನು ಹೇಳುವಾಗ ಕೇವಲ ವೇದ ಪ್ರಮಾಣವನ್ನು ತೆಗೆದುಕೊಂಡಿರುತ್ತಾರೆ. ಎರಡನೆಯ ವರ್ಗದ ವಚನಗಳಲ್ಲಿ ಹಿಂಸಾವಿಷಯಕ ವೇದವನ್ನು ಸಂಪೂರ್ಣವಾಗಿ ಖಂಡಿಸಿರುತ್ತಾರೆ. ಮೂರನೆಯ ವರ್ಗದ ವಚನಗಳಲ್ಲಿ ವೇದಾದ ಹೆಸರನ್ನು ತೆಗೆದುಕೊಂಡು ವೇದಗಳಿಗೆ ಲಿಂಗದ ಸ್ವರೂಪವು ತಿಳಿದಿಲ್ಲವೆಂದು ಹೇಳುತ್ತಾ- “ಚಕಿತಮಭಿಧತ್ತೇ ಶ್ರುತಿರಪಿ” ಎಂಬುವ ಮಹಿಮ್ನದ ವಾಕ್ಯವನ್ನು ಎತ್ತಿ ಎತ್ತಿ ಹಿದೀದಿರುತ್ತಾರೆ.
    “ಬಸವಣ್ಣನವರು ವೇದಾದ ಹೆಸರನ್ನು ತೆಗೆದುಕೊಂಡಿರುವುದು ಜಾತಿಯ ವಾದದಲ್ಲಿ, ಗುರುಕರಣದಿಂದ ಷಡಧ್ವಶೋಧನಪೂರ್ವಕ ಲಿಂಗಧಾರಣವಾದ ಮೇಲೆ ಅವನಿಗೆ ಪೂರ್ವಜಾತಿಯು ಅಳಿದು ಹೋಗುವುದು. ಇಂತಹ ಶಿವಭಕ್ತರಲ್ಲಿ ಜಾತಿಭೇದವಿಲ್ಲವೆಂದು ಬಸವಣ್ಣನವರ ಅಭಿಪ್ರಾಯವಾಗಿರುತ್ತದೆ. ಶ್ರೀ ಬಸವಣ್ಣನವರು ವೇದಾಗಮೋಪನಿಷತ್ತುಗಳಲ್ಲಿ ಉತ್ಕೃಷ್ಟವಾದ ಕೆಲವು ವಿಷಯಗಳನ್ನು ಆಯ್ದುಕೊಂಡು ಸುಂದರವಾದ ಮತ್ತು ನಿರಂತರ ಜೀವಂತವಾಗಿರುವ ಸಮಾಜವನ್ನುದ್ಧರಿಸಿದರು. ಲೋಕದೊಳಗೆ ಲಿಂಗವಂತನೆ ಶ್ರೇಷ್ಠನು. ಲಿಂಗದೇವರ ಹೊರ್ತೂ ಅನ್ಯದೇವರೆಂಬುದು ಹುಸಿಯಾದ ಮಾತು ಎಂಬುವ ಸಿದ್ಧಾಂತಕ್ಕೆ ಬಂದರು. ಆದ್ದರಿಂದ ಆಗಮಗಳಲ್ಲಿಯೂ ಕೂಡ “ನ ವೀರಶೈವ ಮತ ಸದೃಶಮಸ್ತಿ ಜಗತ್ರಯೇ” ಎಂದು ಹೇಳಲಾಗಿದೆ.”
    ಕೆಲವರು ಬಸವಣ್ಣನವರು ವೇದವಿರುದ್ಧವಾದ ಒಂದು ಧರ್ಮವನ್ನೇ ಪ್ರಚಾರಗೊಳಿಸಿದರೆಂದು ಹೇಳುವುದುಂಟು. ಮೇಲಿನ ವಿವೇಚನೆಗಳಿಂದ ಬಸವಣ್ಣನವರು ವೇದವಿರುದ್ಧ್ಡವಾದ ಧರ್ಮಪ್ರಚಾರ ಮಾಡದೆ ಹಿಂಸೆಯೂ, ವರ್ಣಗಳೂ ಇಲ್ಲದ ಪವಿತ್ರಾಮವಾದ ಒಂದು ಮತವನ್ನು ಪ್ರಚಂಡ ಪ್ರಚಾರವಾಗುವಂತೆ ಮಾಡಿದರು. ಹಿಂಸೆಗೆ ಆಸ್ಪದ ಕೊಡದೆ ದಯೆಗೆ ಸ್ಥಾನವನ್ನು ಕೊಟ್ಟರು….” ಇವಿಷ್ಟಲ್ಲದೆ ಇನ್ನೂ ಅನೇಕ ವಿಚಾರಗಳನ್ನು ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರೀಯವರು ಪ್ರಸ್ತುತಪಡಿಸಿಸಿದ್ದಾರೆ. ವಿವರಗಳಿಗೆ ಡಾ|| ಬಸವರಾಜ ಮಲಶೆಟ್ಟಿ ಯವರ ಸಂಪಾದಿತ ಕೃತಿಯಾದ ವ್ಯಾಕರಣತೀರ್ಥ’ಗ್ರಂಥವನ್ನು ಅವಲೋಕಿಸಬಹುದು. ಇಲ್ಲ್ಕಿನ ಅಭಿಪ್ರಾಯಗಳು ನನ್ನವಲ್ಲ. ನಾನು ಓರ್ವ ಜಿಜ್ನಾಸುವಾಗಿ ಈ ಕುರಿತಾಗಿ ಸ್ಪಷ್ಟೀಕರಣ ಬಯಸುತ್ತೇನೆ.

    • Ramjan Darga

      ಚಂದ್ರಶೇಖರ ಶಾಸ್ತ್ರಿಗಳು ತಮ್ಮ ಕಾಲದ ಕಟ್ಟಳೆಯ ಹಿನ್ನೆಲೆಯಲ್ಲಿ ತಮ್ಮ ವಿಚಾರಗಳನ್ನು ಸರಿಯಾಗಿಯೇ ಮಂಡಿಸಿದ್ದಾರೆ. ವೇದದ ವಿಚಾರಗಳು ಚಾಲ್ತಿಯಲ್ಲಿ ಬಂದಾಗ ಯಾವರೀತಿಯ ಅನಾಹುತಗಳಾದವು ಎಂಬುದನ್ನು ಬಸವಣ್ಣನವರು ಗುರುತಿಸಿದ್ದನ್ನು ಶಾಸ್ತ್ರಿಗಳು ಎತ್ತಿಹಿಡಿದಿದ್ದಾರೆ. ಬಸವಣ್ಣನವರು ‘ವೇದಕ್ಕೆ ಒರೆಯ ಕಟ್ಟುವೆ’ ಎಂದು ಹೇಳಿದ್ದಾರೆ. ಒರೆಯ ಕಟ್ಟುವುದಕ್ಕೆ ಎರಡು ಅರ್ಥಗಳಿವೆ. ಖಡ್ಗವನ್ನು ಖಡ್ಗಕೋಶದಲ್ಲಿ ಇಡುವುದಕ್ಕೆ ಮತ್ತು ಖಡ್ಗವನ್ನು ಖಡ್ಗಕೋಶದಿಂದ ಹಿರಿದು ಎತ್ತಿಹಿಡಿದು ಯುದ್ದಕ್ಕೆ ಸನ್ನದ್ಧರಾಗುವುದಕ್ಕೆ ‘ಒರೆಯ ಕಟ್ಟುವುದು’ ಎಂದು ಹೇಳುತ್ತಾರೆ. ವೇದಗಳಿಂದ ವಿಮುಖರಾಗುವುದಕ್ಕೆ ಮತ್ತು ವೇದಗಳಿಂದ ಉಂಟಾದ ಕರ್ಮಠತನದ ವಿರುದ್ಧ ವೈಚಾರಿಕ ಯುದ್ಧ ಸಾರುವುದಕ್ಕೆ ಬಸವಣ್ಣನವರು ಈ ಪದ ಪ್ರಯೋಗ ಮಾಡಿದ್ದಾರೆ. ವೈದಿಕರಿಗೆ ವೇದಗಳಷ್ಟೇ ಮುಖ್ಯವಲ್ಲ. ಏಕೆಂದರೆ ಋಗ್ವೇದದ ಪುರುಷಸೂಕ್ತದ ಹಿನ್ನೆಲೆಯಲ್ಲಿ ನಾಲ್ಕು ವರ್ಣಗಳಿದ್ದವು. ಒಂದೇ ಮನೆಯಲ್ಲಿ ನಾಲ್ಕೂ ವರ್ಣದವರು ಇರುವಂಥ ಚಲನಶೀಲತೆಯೂ ಇತ್ತು. ಆದರೆ ವರ್ಣಗಳು ಸಹಸ್ರಾರು ಜಾತಿ ಉಪಜಾತಿಗಳಾಗಿ ಸೀಳಿ ಹೋದಾಗ ಮನುಸ್ಮೃತಿ ಬಹಳ ಪ್ರಸ್ತುತವಾಯಿತು. ಸ್ಥಗಿತಗೊಂಡ ವರ್ಣಾಶ್ರಮ ಪದ್ಧತಿಯನ್ನು ಉಳಿಸಿಕೊಳ್ಳುವುದೇ ‘ರಾಜಧರ್ಮ’ವಾಯಿತು. ಹೀಗಾಗಿ ಅವರು ಮನುಸ್ಮೃತಿಯ ಮೇಲೆ ಹೆಚ್ಚು ಅವಲಂಬಿತರಾದರು. ವೇದ, ಶಾಸ್ತ್ರ, ಸ್ಮೃತಿ ಮತ್ತು ಪುರಾಣಗಳು ಹೇಳುವ ವರ್ಣ, ಜಾತಿ, ಅಸ್ಪೃಶ್ಯತೆ, ಸ್ವರ್ಗ, ನರಕ, ಪುಣ್ಯ, ಪಾಪ, ಮೋಕ್ಷ, ಪುನರ್ಜನ್ಮ ಮತ್ತು ಇವೆಲ್ಲವುಗಳನ್ನು ಒಳಗೊಂಡ ಕರ್ಮಸಿದ್ಧಾಂತ ಲಿಂಗವಂತ ಧರ್ಮದಲ್ಲಿ ಇಲ್ಲ.’ವೇದಗಳಿಗೆ ಲಿಂಗಸ್ವರೂಪ ತಿಳಿದಿಲ್ಲ’ ಎಂಬುದು ಬಸವಣ್ಣವರ ವಾದವಾಗಿತ್ತು. ಇದನ್ನು ಚಂದ್ರಶೇಕರ ಶಾಸ್ತ್ರಿಗಳು ಸರಿಯಾಗಿಯೇ ಗುರುತಿಸಿದ್ದಾರೆ.

      • Ramjan Darga

        ಬಸವಣ್ಣನವರು ಜನಿವಾರದಿಂದ ಶಿವದಾರದ ಕಡೆಗೆ ಬಂದರು. ಬಹುದೇವೋಪಾಸನೆಯನ್ನು ಅಲ್ಲಗಳೆದು ಏಕದೇವೋಪಾಸನೆಯನ್ನು ಪ್ರತಿಪಾದಿಸಿದರು. ಸಾಕಾರ ದೇವಮೂರ್ತಿಗಳನ್ನು ಕಡೆಗಣಿಸಿ ನಿರಾಕಾರ ದೇವರ ಅರಿವು ಮೂಡಿಸಿದರು.ಹೆಂಡಿರು ಮಕ್ಕಳುಳ್ಳ ಶಿವನ ಸ್ಥಾನದಲ್ಲಿ ಸ್ವಯಂಭೂ ಮತ್ತು ಹೆಂಡಿರು ಮಕ್ಕಳಿಲ್ಲದ ಶಿವನ ಪರಿಕಲ್ಪನೆ ಮೂಡಿಸಿದರು. ಅಧ್ಯಾತ್ಮ ಬಿಟ್ಟು ಅನುಭಾವದ ಕಡೆಗೆ ಕರೆದೊಯ್ದರು. ಸ್ಥಾವರಲಿಂಗ ತಿರಸ್ಕರಿಸಿ ಇಷ್ಟಲಿಂಗ ಸೃಷ್ಟಿಸಿದರು. ದೇವಾಲಯ ಬಿಟ್ಟು ಅನುಭವ ಮಂಟಪ ಸ್ಥಾಪಿಸಿದರು. ಕರ್ಮಸಿದ್ಧಾಂತ ಅಲ್ಲಗಳೆದು ಕಾಯಕ ಸಿದ್ಧಾಂತವನ್ನು ಎತ್ತಿಹಿಡಿದರು. ಅಹಂ ಹೆಚ್ಚಿಸುವ ಸಾಧ್ಯತೆ ಇರುವ ದಾನ ಬಿಟ್ಟು ದಾಸೋಹಂ ಭಾವ ಮೂಡಿಸಿದರು. ಖಾಸಗಿ ಆಸ್ತಿಯನ್ನು ಕಡೆಗಣಿಸಿ ಸಮೂಹದ ಆಸ್ತಿಯಾದ ಶಿವನಿಧಿಯನ್ನು ಸ್ಥಾಪಿಸಿದರು. ದೇವರೇ ಧರ್ಮದ ಮೂಲ ಎಂಬಲ್ಲಿ ದಯವೇ ಧರ್ಮದ ಮೂಲ ಎಂಬುದನ್ನು ಎತ್ತಿಹಿಡಿದರು. ಜಾತಿ ಕುಲ ಗೋತ್ರಗಳುಳ್ಳ ಧರ್ಮವನ್ನು ತಿರಸ್ಕರಿಸಿ ಜಾತಿ ಕುಲ ಗೋತ್ರಗಳಿಲ್ಲದ ಲಿಂಗವಂತ ಧರ್ಮದ ಸ್ಥಾಪನೆ ಮಾಡಿದರು. ಮೂಢ ನಂಬಿಕೆಯ ಸಮಾಜದಿಂದ ಮಾನವ ನಂಬಿಕೆಯ ಸಮಾಜ ಸ್ಥಾಪಿಸಿದರು. ಈ ಕಾರಣಗಳಿಂದಾಗಿ ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವಾಗಿದೆ.

        • Amaresh

          ಜನಿವಾರ ಧರಿಸುವುದು ಗೊಡ್ಡು ಶಿವದಾರ ಧರಿಸುವುದು ವೈಜಾನಿಕ! ಇದನ್ನು ಇವರು ಹೇಳಿದರು ಇಪ್ಪತ್ತು ಸಾವಿರ ಜನ ಕೇಳಿ ಭೇಷ್ ಅಂದರು! ವ್ಹಾ!

          • Ramjan Darga

            ಜನಿವಾರ ಕೆಲವರಿಗಾಗಿ ಶಿವದಾರ ಎಲ್ಲರಿಗಾಗಿ. 20 ಸಾವಿರ ಜನ ಈ ಅಂತರವನ್ನು ಅರಿಯುವರೆಂಬ ಭರವಸೆ ನನಗಿದೆ.

          • Amaresh

            ಸ್ವಾಮಿ, ಶಿವದಾರವನ್ನು ತಾವು ಹಾಗೂ ತಮ್ಮನ್ನು ಪೋಷಿಸುತ್ತಿರುವ ಲಿಂಗಾಯತ ಮತ ಪ್ರಚಾರಕರು ಧರಿಸಿರಬಹುದು. ಆದರೆ ಈ ಪ್ರಪಂಚದ ಎಲ್ಲರೂ ಧರಿಸಿದ್ದಾರೆಯೇ?! ಎಲ್ಲರ ಮೇಲೆ ಏಕೆ ಬಲವಂತವಾಗಿ ಶಿವದಾರವನ್ನು ಹೇರುತ್ತಿದ್ದೀರಿ?!! ಇರಲಿ ಆ ವಿಷಯ ಆಮೇಲೆ ಕೈಗೆತ್ತಿ ಕೊಳ್ಳೋಣ. ಎಲ್ಲರೂ ಧರಿಸಬಹುದು ಎಂಬ ಕಾರಣಕ್ಕೆ ಆ ಆಚರಣೆ ವೈಜ್ಞಾನಿಕ ಆಗಿಬಿಡುತ್ತದೆಯೇ? ಅದು ಹೇಗೆ?

          • Ramjan Darga

            ಅಮರೇಶ್ ಅವರೆ ನನಗೆ ನನ್ನ ಕಾಯಕ ಪೋಷಿಸಿದೆ. ವಿದೇಶಿ ಹಣದ ಮೇಲೆ ಬದುಕುವ ಬಾಲಂಗೋಚಿ ನಾನಲ್ಲ.

      • Amaresh

        “..ಸ್ವರ್ಗ, ನರಕ, ಪುಣ್ಯ, ಪಾಪ, ಮೋಕ್ಷ, ಪುನರ್ಜನ್ಮ ಮತ್ತು ಇವೆಲ್ಲವುಗಳನ್ನು ಒಳಗೊಂಡ ಕರ್ಮಸಿದ್ಧಾಂತ ಲಿಂಗವಂತ ಧರ್ಮದಲ್ಲಿ ಇಲ್ಲ”
        ರಂಜಾನ್ ಅವರ ವಾದ ಸುಳ್ಳು ಅಂತ ಸ್ವತಹ ಅಲ್ಲಮರೆ ಹೇಳಿದ್ದಾರೆ:
        ಎಣ್ಣೆ ಬೇಱೆ, ಬತ್ತಿ ಬೇಱೆ
        ಎರಡೂ ಕೂಡಿ ಸೊಡರಾಯಿತ್ತು.
        ಪುಣ್ಯ ಬೇಱೆ, ಪಾಪ ಬೇಱೆ
        ಎರಡೂ ಕೂಡಿ ಒಡಲಾಯಿತ್ತು.

        ಕಳ್ಳಗಂಜಿ ಕಾಡ ಹೊಕ್ಕಡೆ
        ಹುಲಿ ತಿನ್ನದೆ ಮಾಬುದೇ ?
        ಹುಲಿಗಂಜಿ ಹುತ್ತವ ಹೊಕ್ಕಡೆ
        ಸರ್ಪ ತಿನ್ನದೆ ಮಾಬುದೇ ?
        ಕಾಲಕ್ಕಂಜಿ ಭಕ್ತನಾದಡೆ ಕರ್ಮ ತಿನ್ನದೆ ಮಾಬುದೇ ?

        • Ramjan Darga

          ನೀವು ತಿಳಿಸಿದ ಮೊದಲ ವಚನದಲ್ಲಿ ಅಲ್ಲಮಪ್ರಭುಗಳು ಪುಣ್ಯ, ಪಾಪ ಶಬ್ದಗಳನ್ನು ಕರ್ಮಸಿದ್ಧಾಂತ ಕೂಸುಗಳಾಗಿ ಬಳಸಿಲ್ಲ. ದೈನಂದಿನ ಬದುಕಿನಲ್ಲಿರುವ ಶಬ್ದಗಳಾಗಿರುವುದರಿಂದ ಸಹಜವಾಗಿ ಬಳಸಿದ್ದಾರೆ. ಜನಭಾಷೆಯನ್ನು ಬಿಟ್ಟು ಏನನ್ನೂ ಹೇಳಲಿಕ್ಕಾಗದು. ಅಂತೆಯೆ ಅಲ್ಲಮಪ್ರಭುಗಳು ‘ಪದವ ಕೊಡ ಬಹುದಲ್ಲದೆ ಪದಾರ್ಥವ ಕೊಡಬಹುದೆ?’ ಎಂದು ಕೇಳಿದ್ದಾರೆ. ಆ ಮೂಲಕ ಪದಗಳನ್ನು ಅರ್ಥ ಮಾಡಿಕೊಳ್ಳುವ ಕ್ರಮವನ್ನು ಸೂಚಿಸಿದ್ದಾರೆ. ವಚನಗಳನ್ನು ಅರ್ಥಮಾಡಿಕೊಳ್ಳಲು ವಚನಗನ್ನಡದ ಪರಿಜ್ಞಾನ ಅವಶ್ಯವಾಗಿದೆ. ವಚನಗಳಲ್ಲಿ ಬಳಕೆಯಾಗುವ ಶಬ್ದ ಮತ್ತು ಪದಗಳ ಅರ್ಥವಿಸ್ತಾರಕ್ಕೆ ವಿವಿಧ ಆಯಾಮಗಳಿವೆ. ಶಬ್ದಸೂತಕಗಳನ್ನೂ ಅರ್ಥೈಸಿಕೊಂಡು ವಚನಜ್ಞಾನ ಹೊಂದುವುದು ಅವಶ್ಯವಾಗಿದೆ.
          ಎರಡನೇ ವಚನದಲ್ಲಿ ಕಾಲಕ್ಕಂಜಿ ಭಕ್ತನಾಗುವುದೆಂದರೆ, ಶರಣರ ಸಿದ್ಧಾಂತವನ್ನು ಅರಿಯದೆ ತನ್ನ ಕಾಲಮಾನದಲ್ಲಿ ಬರಿ ಸುರಕ್ಷಿತವಾಗಿ ಬದುಕುವ ಉದ್ದೇಶವನ್ನೊಳಗೊಂಡ ವ್ಯಾವಹಾರಿಕ ಪ್ರಜ್ಞೆಯಿಂದ ಮಾತ್ರ ಭಕ್ತನಾಗುವುದು. ಹಾಗೆ ತೋರುಂಬ ಲಾಭಕ್ಕಾಗಿ ಭಕ್ತನಾಗುವುದರಿಂದ ಯಾವುದೇ ಪ್ರಯೋಜನವಿಲ್ಲ. (ಬಡ ಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ ಎಂದು ಬಸವಣ್ಣನವರು ಹೇಳಿದ್ದಾರೆ. ಜನಿವಾರ ಎಂಬ ನೇಣು ವರ್ಣಾಶ್ರಮಕ್ಕೂ ಸಂಕೇತವಾಗಿದ್ದು ಆ ಮೂಲಕ ಕರ್ಮಸಿದ್ಧಾಂತವನ್ನೂ ಒಳಗೊಂಡಿರುವುದರಿಂದ, ಆ ಬಡ ಹಾರುವನ ತಲೆಯಲ್ಲಿ ಕರ್ಮದ ಭ್ರಮೆ ಇದ್ದೇ ಇರುತ್ತದೆ.) ಆದ್ದರಿಂದ ಕಾಲಕ್ಕಂಜಿ ಭಕ್ತನಾಗುವವನ ತಲೆಯಲ್ಲಿ ಕರ್ಮದ ಭ್ರಮೆ ಇದ್ದೇ ಇರುತ್ತದೆ ಎಂಬುದು ಇದರ ಅರ್ಥ. ಇಂಥ ಭ್ರಮೆಯನ್ನು ಶೂದ್ರರ ತಲೆಯಲ್ಲೂ ತುಂಬಲಾಗಿದೆ.

          • Amaresh

            “ನೀವು ತಿಳಿಸಿದ ಮೊದಲ ವಚನದಲ್ಲಿ ಅಲ್ಲಮಪ್ರಭುಗಳು ಪುಣ್ಯ, ಪಾಪ ಶಬ್ದಗಳನ್ನು ಕರ್ಮಸಿದ್ಧಾಂತ ಕೂಸುಗಳಾಗಿ ಬಳಸಿಲ್ಲ. ದೈನಂದಿನ ಬದುಕಿನಲ್ಲಿರುವ ಶಬ್ದಗಳಾಗಿರುವುದರಿಂದ ಸಹಜವಾಗಿ ಬಳಸಿದ್”
            Ok, then you are saying that the terms ಪುಣ್ಯ, ಪಾಪ mean different in everyday life and ಕರ್ಮಸಿದ್ಧಾಂತ. So tell me what is the difference between the usage of the terms ಪುಣ್ಯ, ಪಾಪ used in everyday life and their usage in ಕರ್ಮಸಿದ್ಧಾಂತ?

          • Ramjan Darga

            ದೈನಂದಿನ ಬದುಕಿನ ತಪ್ಪು ಒಪ್ಪುಗಳಿಗೆ ಸಂಬಂಧಿಸಿ ಸರಳ ಮಾತು ಅದು. ಪಂಪ ಕೂಡ ಹಾಗೆಯೆ ಬಳಸಿದ್ದಾನೆ. ದೇಹದೊಳಗೆ ಜೀವವಿರುವವರೆಗೆ ಪುಣ್ಯ ಪಾಪಗಳು ಸಂಚರಿಸುತ್ತವೆ ಎಂದು. ಎಣ್ಣೆ ಬತ್ತಿಗೆ ಸಂವಾದಿಯಾಗಿ ಪುಣ್ಯ ಪಾಪಗಳನ್ನು ಬಳಸಲಾಗಿದೆ. ಪರೋಪಕಾರವೇ ಪುಣ್ಯ, ಪರಪೀಡನೆಯೆ ಪಾಪ ಎಂದು ಮಹಾಭಾರತ ಹೇಳುತ್ತದೆ. ಹೀಗೆ ಪ್ರಯೋಗಿಸುವ ಪುಣ್ಯ ಪಾಪ ಶಬ್ದಗಳಿಗೂ ಕರ್ಮಸಿದ್ಧಾಂತದ ಪುಣ್ಯ ಪಾಪಕ್ಕೂ ಇರುವ ಅಂತರ ಗೊತ್ತಾಯಿತೆ? ಕರ್ಮಸಿದ್ಧಾಂತದಲ್ಲಿ ಪುಣ್ಯ ಪಾಪಗಳು ಸಂಚಿತ, ಪ್ರಾರಬ್ಧ ಮತ್ತು ಆಗಾಮಿ ಕರ್ಮಗಳ ಚೌಕಟ್ಟಿನಲ್ಲಿ ಬರುತ್ತವೆ. ವಾದ ಮಾಡುವುದೇ ನಿಮ್ಮ ಗುರಿಯಾಗಿದೆ. ನನಗೆ ಬೇಸರವಿಲ್ಲ. ಏಕೆಂದರೆ ನಿಮ್ಮ ಪ್ರಶ್ನೆಗಳಿಂದ ಬೇರೆಯವರಿಗಾದರೂ ಪ್ರಯೋಜನವಾಗುತ್ತಿದೆ ಎಂಬ ಸಮಾಧಾನವಿದೆ.
            ‘ನಾನಾವಾವ ಕರ್ಮಂಗಳ ಮಾಡಿದಡೆಯೂ ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನುಒ ಬಲ್ಲೆನು’ ಎನ್ನುವಲ್ಲಿ ಕರ್ಮ ಶಬ್ದ ಕರ್ಮಸಿದ್ಧಾಂತಕ್ಕೆ ಸಂಬಂಧಿಸಿದುದಲ್ಲ. ‘ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ ಕರ್ಮ ಹರಿಯದೊಡಾ ಪೂಜೆಯದೇಕೊ’ ಎಂದು ಹೇಳುವಲ್ಲಿನ ಕರ್ಮವು ಕರ್ಮ ಸಿದ್ಧಾಂತಕ್ಕೆ ಸಂಬಂಧಿಸಿದೆ. ಹೀಗೆ ಶಬ್ದಗಳನ್ನು ಅವು ಬಳಿಸಿದ ಸಂದರ್ಭಗಳ ಹಿನ್ನೆಲೆಯಲ್ಲೂ ಅರ್ಥಗಳನ್ನು ಧ್ವನಿಸುತ್ತವೆ.

          • Amaresh

            ಸರ್, ಈ ಹಿಂದೆ ನೀವು ಜನಸಾಮಾನ್ಯರ ತಲೆಯಲ್ಲಿ ಕರ್ಮ ಸಿದ್ಧಾಂತ ತುಂಬಿಕೊಂಡಿತ್ತು ಅಂತ ಹೇಳಿದ್ರಿ. ಈಗ “ಪುಣ್ಯ, ಪಾಪ ಶಬ್ದಗಳನ್ನು ಕರ್ಮಸಿದ್ಧಾಂತ ಕೂಸುಗಳಾಗಿ ಬಳಸಿಲ್ಲ. ದೈನಂದಿನ ಬದುಕಿನಲ್ಲಿರುವ ಶಬ್ದಗಳಾಗಿರುವುದರಿಂದ ಸಹಜವಾಗಿ ಬಳಸಿದ್ದಾರೆ. ಜನಭಾಷೆಯನ್ನು ಬಿಟ್ಟು ಏನನ್ನೂ ಹೇಳಲಿಕ್ಕಾಗದು” ಅಂತ ಹೇಳಿದ್ದೀರಿ. ಅಂದರೆ ಜನಸಾಮಾನ್ಯರ ತಲೆಯಲ್ಲಿ ತುಂಬಿರುವುದು ಕರ್ಮ ಸಿದ್ಧಾಂತವೇ ಆಗಿದ್ದರೂ ದೈನಂದಿನ ಬದುಕಿನಲ್ಲಿರುವ ಶಬ್ದಗಳಾಗಿರುವ ಪುಣ್ಯ ಪಾಪಗಳು ಕರ್ಮಸಿದ್ಧಾಂತ ಕೂಸುಗಲ್ಲ ಅಂತ ಆಯ್ತು. ಇದು ಯಂಗೆ ಸಾಧ್ಯ ವಸಿ ಯೋಳಿ ಸಾರ್!

        • ವಿಶ್ವಾರಾಧ್ಯ ಸತ್ಯಂಪೇಟೆ

          ಅಮರೇಶ ಅವರೆ ನಮಸ್ಕಾರಗಳು,
          ರಂಜಾನ್ ದರ್ಗಾ ಅವರು ಹೇಳಿರುವ ವಿವರಿಸಿರುವ ಮಾತುಗಳ್ಯಾವು ಸುಳ್ಳಲ್ಲ. ತಾವು ವಚನ ಸಾಹಿತ್ಯದ ಅಭ್ಯಾಸಿಯಾದಾಗ ಮಾತ್ರವೇ ಶರಣರ ವ್ಯಕ್ತಿತ್ವ ಸಂಪೂರ್ಣ ಪರಿಚಯಕ್ಕೆ ಬರುತ್ತದೆ. ಇಲ್ಲವಾದರೆ ಕಬ್ಬಿನ ಗದ್ದೆ ಹೊಕ್ಕು ಬರೀ ರವದಿಯನ್ನು ತಿಂದುಬಂದ ಕುರಿಯಂತಾಗುತ್ತದೆ ಅಷ್ಟೆ !ಯಾವ ಶರಣರು ಪುಣ್ಯ ಪಾಪ ಸ್ವರ್ಗ ನರಕ ಮೋಕ್ಷಗಳ ಬೆನ್ನುಹತ್ತಿ ಹೋದವರಲ್ಲ. ಆಚಾರವೇ ಸ್ವರ್ಗ , ಅನಾಚಾರವೇ ನರಕ ವೆಂದು ಹೇಳಿದವರು. ಕೈಲಾಸವನ್ನಂತೂ ಅವರು ಅದೊಂದು ಹಾಳು ಬೆಟ್ಟ ಎಂದು ಜರಿದರು. ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು ಎಂದು ಕುಟುಕಿದರು. ಇಲ್ಲದ ಸ್ವರ್ಗ ನರಕಗಳನ್ನು ಸೃಷ್ಠಸಿ ನಮ್ಮೆಲ್ಲರ ಮತಿಯನ್ನು ತಿಥಿ ಮಾಡಿಸಿಟ್ಟ ಅವಿವೇಕಿಗಳ ಮಾತುಗಳೇ ಅಮರೇಶರಂಥ ಅಕ್ಷರ ಬಲ್ಲವರು ಒಪ್ಪುತ್ತಿದ್ದಾರಲ್ಲ ! ಅಥವಾ ಅವರ ಪರವಾಗಿ ಮಾತನಾಡುತ್ತಿದ್ದಾರಲ್ಲ ಎಂದು ವ್ಯಥೆಯಾಗುತ್ತಿದೆ.

          • Amaresh

            ಸರಿ, ನೀವು ಹೇಳಿದ್ದನ್ನು ಕೇಳಿಯಾಯಿತು. ಇನ್ನೇನಾದರೂ ಬಿಟ್ಟಿ ಉಪದೇಶ ಕೊಡುವುದಿದೆಯೇ?

          • jayateerth joshi

            Mr.Amaresh stop using foul language.

          • ವಿಶ್ವಾರಾಧ್ಯ ಸತ್ಯಂಪೇಟೆ

            ಅಂಗವಿಡಿದು ಅರಿವ ಅರಿವು ಅರಿವಲ್ಲದೆ
            ಗುರುವಿಡಿದು ಅರಿವ ಅರಿವು ಅರಿವಲ್ಲ
            ಎಂಬ ಅಲ್ಲಮನ ಮತ್ತೊಂದು ವಚನ ತಮ್ಮ ಗಮನಕ್ಕೆತರಬಯಸತ್ತೇನೆ. ಇದನ್ನೂ ಕೂಡ ತಾವು ಯಾವ ಉಪದೇಶವೆಂದು ತಿಳಿಯುತ್ತೀರೋ !

  10. nagshetty

    sharanu sharanrthi, Dear all the visitors of the Avadhi i feel some people are in the illusion that if they raise meaningless/baseless wrong doubt again and again they became popular.
    Dear Udaykumar Habbu what evidence you have to prove Lingayat religion is part of Hindu?
    DEar Annapurna dont try to illusion of take Lingayat into your stride. it is already an indiependent religion. it none of your business. mere your opinion doesnt mean as a dog cant do anything to the traveler upon elephant.
    Dear Annapurna if you want to know the fact how Brahmins destroyed the past of India, how they destroying the present. send your mail Id i’ll provide you a research article.
    i realized your wicked mindset.
    but still i am optimistic.

    • ವಿಜಯ್

      [DEar Annapurna dont try to illusion of take Lingayat into your stride” “mere your opinion doesnt mean as a dog cant do anything to the traveler upon elephant.” ]
      ಕಂಪ್ಯೂಟರಗಳು ಕೆಲವೊಂದು ಸಲ ತಪ್ಪು ತಪ್ಪು ಟೈಪ್ ಮಾಡಿಬಿಡ್ತಾವೆ.. ತಮ್ಮ ಎದುರಿಗೆ ಕುಳಿತಿರೊರ ಸ್ಥಾನಮಾನ ಮರೆತು!.. ಯಾರಾದ್ರೂ ಓದಿದ್ರೆ ಪಾಪ ಇವ್ರು ಉದ್ದೇಶಪೂರ್ವಕವಾಗಿ ಇಂಗ್ಲಿಷ್ ನ ಮರ್ಡರ ಮಾಡಿಬಿಟ್ಟಾರೆ ಅಂತ ತಪ್ಪು ತಿಳ್ಕೊತಾರೆ..ಛೆ.
      [send your mail Id i’ll provide you a research article.]
      ನಂಗೂ ಶ್ರೀಯುತರ ಹತ್ತಿರ ರಿಕ್ವೆಸ್ಟ ಮಾಡಿಕೊಂಡು ರಿಸರ್ಚ ಪೇಪರ ಓದಬೇಕು ಅನಿಸ್ತು..ಆದರೆ ನಾಗಶೆಟ್ಟಿಯವರೆ ಬರ್ದಿದ್ದಿದ್ರೆ..ಅದೂ ಇಂಗ್ಲಿಷಿನಲ್ಲಿ ಬರೆದಿದ್ದರೆ ಅಂತ ಹೆದರಿಕೆಯಾಗಿ ಸುಮ್ಮನಾದೆ.

      • Annapoorna

        LoL

    • Amaresh

      Nagashetty, I have seen many self-proclaimed experts like you on Indian history. All your kind knows is to pontificate and make baseless claims on India’s past and present.. When asked to substantiate your claims with facts and evidence, all you do is attack with foul language. Nothing new here in your attack on Annapurna. Does your foul language and crooked thinking make a Sharana proud? Go read the 50 acharas that Channabasavanna preached to Sharanas and follow at least a few them.

    • sharadhi

      Nagshetty, could you please describe this in detail? -” a dog cant do anything to the traveler upon elephant.”. Thisis definitely one of the first of its kind of doctrine-driven statement! 😉

      • ವಿಜಯ್

        ಮೂಲ ಇಲ್ಲಿದೆ..ನಾಗಶೆಟ್ಟಿಯವರ ಉದಾಹರಣೆಯ ನಾಯಿ ಅಹಿಂಸಾ ಸ್ವಭಾವದ್ದು..ಆದ್ದರಿಂದ ‘cant do ‘ …ಕಚ್ಚಲ್ಲ,.:)
        ಆರು ಮುನಿದು ನಮ್ಮನೇನ ಮಾಡುವರು ?
        ಊರು ಮುನಿದು ನಮ್ಮನೆಂತು ಮಾಡುವರು ?
        ನಮ್ಮ ಕುನ್ನಿಗೆ ಕೂಸ ಕೊಡಬೇಡ!
        ನಮ್ಮ ಸೊಣಗಂಗೆ ತಣಿಗೆಯಲ್ಲಿಕ್ಕಬೇಡ!
        ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೆ ?
        ನಮಗೆ ನಮ್ಮ ಕೂಡಲಸಂಗನುಳ್ಳನ್ನಕ ?

  11. nagshetty

    i feel Konde manchanna race is still exists

  12. sharadhi

    I have read Ranjan Darga’s writings on this topic and also some extremely valuable comments and questions by Annapurna, and Vijay. Most of the Ranjan Darga’s conclusions based on Basavanna’s vachanas are baseless and merely serve as a political carrier wave other than shedding light on the truth. Further, thndere’s no humility in his claims either. Therefore, it sounded more like an election proclaim campaign. In my view, vachana’s are a ‘mixed bag’ mostly coined from ancient Vedas and further reformed to adopt a more human approach. Further, the series of articles by Darga sound as though they are written MERELY to criticize a sect of people, and it’s unfortunate that Avadhi is feeding this attempt. I thank Avadhi for posting my views (if it does).

    • ಸಹನಾ

      ಶರಧಿಯವರಿಗೆ ಧನ್ಯವಾದಗಳು. ಬಹುಮುಖ್ಯವಾದ ವಿಚಾರದ ಕಡೆಗೆ ಎಲ್ಲರ ಗಮನ ಸೆಳೆದಿರಿ.
      ಲಿಂಗಾಯತ ಅಥವಾ ಬಸವಣ್ಣನವರ ಸಂಪ್ರದಾಯಗಳ ಸಮುದಾಯಗಳೆಂದು ಗುರುತಿಸಿಕೊಳ್ಳುವ ಸಾದರು, ಗಾಣಿಗರು, ಪಂಚಮ(ಸಾಲಿಗ)ರು, ನೊಣಬರು, ಕೂಡುಒಕ್ಕಲಿಗರು, ಬಣಕಾರರು, ಬಣಜಿಗರು, ಆದಿಬಣಜಗರು ಮುಂತಾದ ಹಲವು ಜಾತಿಗಳವರು ಇದ್ದಾರೆ. ಇವರು ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇ 17ರಿಂದ 20 ರಷ್ಟಿದ್ದಾರೆಂದು ವರಧಿಗಳು ಅಂದಾಜಿಸುತ್ತವೆ. ಅಂದರೆ ಹೆಚ್ಚು-ಕಡಿಮೆ ಸುಮಾರು 1.5 ಕೋಟಿಯಷ್ಟು ಈ ಸಮುದಾಯದವರಿದ್ದಾರೆ. ಇವರೆಲ್ಲಾ ಒಂದಲ್ಲಾ ಒಂದು ಜಾತಿಗೆ ಸೇರಿದವರೇ ಆಗಿದ್ದಾರೆ. ಇದುವರೆಗೂ ಬಸವಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದ ಶ್ರೇಯ ಇವರಿಗೆ ಮತ್ತು ಇವರ ಮಠಗಳಿಗೆ ಸಲ್ಲಲೇಬೇಕು. ಹೀಗಿರುವಾಗ ರಂಜಾನ್ ದರ್ಗಾ ಮತ್ತು ಇತರೇ ಆಧುನಿಕ ವಚನನಿರೂಪಕರುಗಳು ಇವರ ಮುಂದೆ ಒಂದು ದೊಡ್ಡ ಸವಾಲನ್ನೇ ಮುಂದಿಡುತ್ತಿದ್ದಾರೆ. ಅದೆಂದರೆ ಜಾತಿ-ಮತ ಭೇದಗಳನ್ನು ಮೀರಿ ಜಾತಿ ಇಲ್ಲದ ಸಮಾಜದ ಪ್ರತಿಪಾದನೆಗೂ ಈ ಸಮುದಾಯಗಳು ಬದುಕುತ್ತಿರುವು ರೀತಿಗೂ ಭಿನ್ನವಾಗಿದೆ ಮಾತ್ರವಲ್ಲ ವ್ಯತಿರಿಕ್ತವಾಗಿದೆ. ನಮ್ಮಲ್ಲಿರುವ ಎಲ್ಲಾ ಸಮುದಾಯಗಳೂ ತಮ್ಮ ಸಾಮುದಾಯಿಕ ಜೀವನವನ್ನು ವಿಭಿನ್ನ ಆಚರಣೆಗಳಿಂದ ಕಟ್ಟಿಕೊಂಡಿವೆ. ಲಿಂಗಾಯತ ಸಂಪ್ರದಾಯದೊಳಗೆ ಗುರುತಿಸಿಕೊಂಡಿರುವ ಈ ಜಾತಿಗಳು ಅದಕ್ಕೆ ಹೊರತೇನಲ್ಲ. ದರ್ಗಾರವರು ಯಾವೆಲ್ಲಾ ರೀತಿಯ ಕಂದಾಚಾರಗಳೆಂದು ಧೂಷಿಸುತ್ತಾರೋ ಆ ಎಲ್ಲಾ ರೀತಿಯ ಆಚರಣೆಗಳೂ ಈ ಎಲ್ಲಾ ಸಮುದಾಯದೊಳಗೆ ಇವೆ. ಹೀಗಿರುವಾಗ ವಚನಗಳನ್ನು (ತಮ್ಮದೇ ರೀತಿಯಲ್ಲಿ) ನಿರೂಪಿಸುವ ಮೂಲಕ ರಂಜಾನ್ ದರ್ಗಾರವರು ಏನನ್ನು ಪ್ರತಿಪಾದಿಸುತ್ತಿದ್ದಾರೆ? ಈ ಎಲ್ಲಾ ಲಿಂಗಾಯುತ ಸಮುದಾಯಗಳು ನಿಜಕ್ಕೂ (ಬಸವಣ್ಣ ಮತ್ತು ಇತರರ ವಚನಕಾರರ ಆಶಯದಂತೆ)ಬಸವಾನುಯಾಯಿಗಳಲ್ಲವೆಂದೇ? ಇಲ್ಲವೇ, ಇವರು ಈ ಎಲ್ಲಾ ವಿಭಿನ್ನ ಜಾತಿಗುಂಪುಗಳನ್ನು ನಾಶಮಾಡಿಕೊಳ್ಳಬೇಕೆಂದೇ? ಅಂದರೆ ಈಗ ಈ ಸಮುದಾಯಗಳೆಲ್ಲವೂ ಹೇಗೆ ಬದುಕುತ್ತಿವೆಯೋ ಅವುಗಳನ್ನು ನಿರಾಕರಿಸುತ್ತಿರುವುದಂತೂ ಇಲ್ಲಿ ಸ್ಪಷ್ಟವಾಗುತ್ತದೆ. ಆ ಮೂಲಕ ಇವರ ಪ್ರತಿಪಾದನೆ ಬಹಳ ಸ್ಪಷ್ಟ ಬಸವತತ್ವವನ್ನು ಅರ್ಥವೇ ಮಾಡಿಕೊಳ್ಳದೆ(ಯೂ) ಇವರೆಲ್ಲರೂ ಲಿಂಗಾಯತ ಸಮುದಾಯಗಳೆಂದು ಗುರುತಿಸಿಕೊಂಡಿದ್ದಾರೆ, ಇದು ತಪ್ಪು ಎಂದಾಗುತ್ತದೆ. ಆ ಮೂಲಕ ಅಷ್ಟೂ ಸಮುದಾಯ ಮತ್ತು ಅದರಲ್ಲಿರುವ ಕೋಟ್ಯಾಂತರ ಜನರ ಬಗ್ಗೆ ಯಾವ ನಿಲುವಿಗೆ ಕಾರಣರಾಗುತ್ತಿದ್ದಾರೆ ಎನ್ನುವುದು ಇಲ್ಲಿ ಮುಖ್ಯ. (ಮೂಲತಃ ಬಸವಾನುಯಾಯಿಗಳು ಮಾತ್ರವೇ ಆಗಿದ್ದ ಇವರು ಕಾಲಾನಂತರ ಬ್ರಾಹ್ಮಣ ಪುರೋಹಿತಶಾಹಿಗಳ ಕುತಂತ್ರದಿಂದಾಗಿ ಒಡೆದು ಹಲವು ಜಾತಿಗಳಾಗಿಬಿಟ್ಟರು ಎನ್ನುವವಾದವನ್ನು ಈ ಆಧುನಿಕ ನಿರೂಪಕರು ಹೇಳುತ್ತಾರೆ. ಈ ರೀತಿಯ ವಿವರಣೆ ನಿಜವೆಂದು ಒಪ್ಪಿಕೊಂಡರೆ, ಬ್ರಾಹ್ಮಣ ಪುರೋಹಿತ ಶಾಹಿಗಳು ಕುತಂತ್ರಿಗಳೆಂದು ಮಾತ್ರವೇ ಆಗುವುದಿಲ್ಲ! ಜೊತೆಗೆ ಅವರನ್ನು ಹೇಳಿದ್ದೆಲ್ಲಾ ನಂಬಿ ಮಾಡುತ್ತಾ ಹೋದ ಈ ಸಮುದಾಯಗಳ ಜನರ ನೈತಿಕತೆ, ಬುದ್ದಿವಂತಿಕೆ-ಜ್ಞಾನ, ಸ್ಥೈರ್ಯ ಎಲ್ಲವೂ ತಾರ್ಕಿಕವಾಗಿ ಪ್ರಶ್ನೆಗಳಿಗೆ ಒಳಪಡುತ್ತವೆ. ಹೀಗೆ(ಬಸವಣ್ಣನವರ ತತ್ವಗಳ ಹೆಸರಿನಲ್ಲಿ) ತಮ್ಮ ಐಡಿಯಾಲಜಿಯ ಬಸವತತ್ವಗಳನ್ನು ಉಪದೇಶಿಸಿ ನಮ್ಮ ಕಣ್ಮುಂದೆ ಬದುಕಿರುವ ಸಮುದಾಯಗಳನ್ನು ಕುಬ್ಜರನ್ನಾಗಿಸಿ ಅವರಿಗೆ ನಿಜ(ತಮ್ಮ ಐಡಿಯಾಲಜಿಯ ಬಸವತತ್ವ)ಜ್ಞಾನವನ್ನು ಬೋದಿಸಿ ಇವರು ಏನನ್ನು ಸಾಧಿಸಲು ಹೊರಟಿದ್ದಾರೆ? ಈ ಸಮುದಾಯಗಳು ಇವನ್ನು ಒಪ್ಪಿ ತಮ್ಮ ಸಾಮುದಾಯಿಕ ಬದಕನ್ನು ತಿರಸ್ಕರಿಸುತ್ತಾವೆಯೇ? ಇಲ್ಲವೇ ಇಲ್ಲ. ಹಾಗೆ ಮಾಡುವ ಸೂಚನೆಗಳು ಈ ಸಮುದಾಯಗಳಿಂದ ಬರುತ್ತಿವೆಯೇ (ಈ ರೀತಿಯ ವಚನಗಳ ನಿರೂಪಣೆಯನ್ನು ಕೇಳಿದ ಮೇಲಾದರೂ) ಇಲ್ಲವೇ ಇಲ್ಲ. ಅದರ ಉದ್ದೇಶವಾದರೂ ಈ ನಿರೂಪಕರಿಗೆ ಇದೆಯೇ? ಅದೂ ಇಲ್ಲ. ಅಂದ ಮೇಲೆ ಯಾರೋದಂಡೆತ್ತಿ ಬಂದರೆಂದು (ಯಾರೆಂದು ಇವರಿನ್ನೂ ಹೇಳಿಲ್ಲ) ಊಹಿಸಿಕೊಂಡ ದರ್ಗಾರವರ ಈ ರೀತಿಯ ನಿರೂಪಣೆಗೆ ಅರ್ಥವಾದರೂ ಏನು?
      ಶರಧಿಯವರು ಗಮನಸೆಳೆಯುವ ಹಾಗೆ ಇದು ಸಾಮಾಜಿಕವಾದುದಲ್ಲ. ರಾಜಕೀಯವಾದದು. ಲಿಂಗಾಯತರು ವೈಧಿಕ ವಿರೋಧಿ ಎಂದು ನಿರೂಪಿಸಿದರೆ ವೈಧಿಕತೆಯನ್ನು ಬೆಂಬಲಿಸುವುದೆಂದು ಒಂದು ಕಡೆಯ ರಾಜಕೀಯ ಸಂಘಟಣೆಗನ್ನು ಗುರುತಿಸಿ ಅದಕ್ಕೆ ವಿರುದ್ದವಾಗಿರುವ ರಾಜಕೀಯ ಸಂಘಟನೆಯ ಕಡೆಗೆ ಲಿಂಗಾಯ ಸಮುದಾಯದವರನ್ನು ಧೃವೀಕರಿಸುವ ಪ್ರಯತ್ನವಾಗಿ ಇದು ಕಾಣುತ್ತದೆ. ಹಾಗಾಗಿ ಇದು ಪಕ್ಕಾ ರಾಜಕೀಯ ನಡೆಯೇ ಆಗಿದೆ. ಸಾಮಾಜಿಕ ವಾಸ್ತವದ ನಿರೂಪಣೆಗಳು ವೈಜ್ಞಾನಿಕ ಚೌಕಟ್ಟುಗಳ ಹೊರತಾಗಿರುವ “ರಾಜಕೀಯ ಐಡಿಯಾಲಜಿ”ಗಳ ತಿರುಚುವಿಕೆಗೆ ಬಲಿಯಾಗಬೇಕೆ? ಹೀಗೆ ನಿರೂಪಿಸುವವರಿಗೆ (ಈ ನಿರೂಪಣೆಗಳಿಂದ) ಲಾಬಮಾಡಿಕೊಳ್ಳುವ ರಾಜಕೀಯ ಸಂಘಟನೆಗಳು ಕಿರೀಟ ಬಿರುದು ಬಾವಲಿಗಳನ್ನು ಕೊಡಬಹುದು. ಆದರೆ ಈ ನಿರೂಪಣೆಗಳಿಂದ ಹುಟ್ಟುವ ಸಾಮುದಾಯಿಕ ದ್ವೇಷ ಮತ್ತು ತಪ್ಪು-ತಪ್ಪು ಜ್ಞಾನದ ಬೆಳವಣಿಗೆಗೆ ಯಾರು ಹೊಣೆ?
      (“ಜಾತಿವ್ಯವಸ್ಥೆಯು” ವೈಧಿಕ ಚೌಕಟ್ಟು ಆಗಿದ್ದಲ್ಲಿ ಲಿಂಗಾಯುತ ಸಮುದಾಯಗಳೊಳಗಿರುವ ಜಾತಿಗಳು ಯಾವ ಚೌಕಟ್ಟಿನಲ್ಲಿವೆ ಎನ್ನುವ ಬೇರೆಯದೇ ಆದ ಪ್ರಶ್ನೆ ಏಳುತ್ತದೆ. ಈ ಚರ್ಚೆಗೆ ರಾಜಕೀಯ ಲಾಬವಲ್ಲದ ವೈಜ್ಞಾನಿಕ ಜ್ಞಾನದ ಕಳ-ಕಳಿಯೇ ಇದ್ದಲ್ಲಿ ಆ ಪ್ರಶ್ನೆಯನ್ನು ನಂತರ ಧೀರ್ಘವಾಗಿ ಇಲ್ಲಿಯೇ ಚರ್ಚಿಸುವೆ.)

    • Ramjan Darga

      ನಿಜ ಕಲ್ಯಾಣದ ಪ್ರಧಾನಿಯಾಗಿದ್ದ ಬಸವಣ್ಣನವರನ್ನು ನಾನು ರಾಜನೀತಿಜ್ಞರಾಗೇ ನೋಡುವುದು. ಅವರ ರಾಜನೀತಿಯಲ್ಲಿ ವರ್ಗಭೇದವಿಲ್ಲ, ವರ್ಣಭೇದವಿಲ್ಲ, ಜಾತಿಭೇದವಿಲ್ಲ, ಲಿಂಗಭೇದವಿಲ್ಲ, ಅಸ್ಪೃಶ್ಯತೆ ಇಲ್ಲ. ವಚನಗಳನ್ನು ಎಲ್ಲರೂ ಬರೆಯಬಹುದು; ಅವು ವೇದಗಳಂತೆ ಅಪೌರುಷೇಯವಲ್ಲ. ಎಲ್ಲರೂ ವಚನಗಳನ್ನು ಓದಬಹುದು ಮತ್ತು ಕೇಳಬಹುದು. ಅವರ ಕಿವಿಯಲ್ಲಿ ಕಾದ ಸೀಸನ್ನು ಯಾರೂ ಹಾಕುವುದಿಲ್ಲ.ಅಲ್ಲ ಪಂಕ್ತಿ, ಪರ ಪಂಕ್ತಿ ಇಲ್ಲ. ಮಡೆಸ್ನಾನ ಇಲ್ಲ. ಪಂಚಸೂತಕಗಳಿಲ್ಲ. ಬಸವಣ್ನನವರ ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮತ್ತು ತತ್ತ್ವಶಾಸ್ತ್ರಗಳು ಸರ್ವರಿಗೂ ಸಮಾನವಾಗಿವೆ. ಬಸವ ಸಮಾಜದಲ್ಲಿ ಶಂಭೂಕನ ವಧೆ ಆಗುವುದಿಲ್ಲ. ಏಕಲವ್ಯನ ಹೆಬ್ಬೆರಳು ಗುರು ಕಾಣಿಕೆಯಾಗುವುದಿಲ್ಲ, ಗರ್ಭಿಣಿ ಹೆಂಡತಿಯನ್ನು ಕಾಡಿಗೆ ಅಟ್ಟುವುದಿಲ್ಲ, ಹೆಂಡತಿಯನ್ನು ಸಂಪತ್ತಾಗಿಸಿ ಪಗಡೆಯಾಟದಲ್ಲಿ ಕಳೆದುಕೊಳ್ಳುವುದಿಲ್ಲ. ಅಲ್ಲಿ ಯಾರ ಕಾಯಕ ಯಾವುದೆಂದು ಯಾರೂ ಕೇಳುವುದಿಲ್ಲ. ಏಕೆಂದರೆ ಅಲ್ಲಿ ವರ್ಣಾಶ್ರಮ ವ್ಯವಸ್ಥೆ ಇಲ್ಲ. ತೆತ್ತೀಸಕೋಟಿ ದೇವತೆಗಳೂ ಇಲ್ಲ.

      • ವಿಜಯ್

        @ರಂಜಾನ ದರ್ಗಾ
        [ನಿಜ ಕಲ್ಯಾಣದ ಪ್ರಧಾನಿಯಾಗಿದ್ದ ಬಸವಣ್ಣನವರನ್ನು ನಾನು ರಾಜನೀತಿಜ್ಞರಾಗೇ ನೋಡುವುದು.]
        ಇಲ್ಲಿ ಮೇಲಿನ ಕಮೆಂಟುಗಳಲ್ಲಿ ಹೇಳಿದ್ದು ನಿಮ್ಮ ರಾಜಕೀಯವನ್ನು..ಬಸವಣ್ಣನವರದ್ದಲ್ಲ.
        [ಅಲ್ಲ ಪಂಕ್ತಿ, ಪರ ಪಂಕ್ತಿ ಇಲ್ಲ. ಮಡೆಸ್ನಾನ ಇಲ್ಲ. ಪಂಚಸೂತಕಗಳಿಲ್ಲ]
        ಇಷ್ಟೆಲ್ಲ ಪ್ರಗತಿಪರರಿದ್ದ್ರೂ ಚೆನ್ನಬಸವಣ್ಣನರು ಸಿದ್ದರಾಮರಿಗೆ ೫೦ ಆಚಾರಗಳನ್ನು ಭೋಧಿಸುತ್ತಾರೆ!
        [ಅವರ ಕಿವಿಯಲ್ಲಿ ಕಾದ ಸೀಸನ್ನು ಯಾರೂ ಹಾಕುವುದಿಲ್ಲ]
        ಎಷ್ಟು ಜನರ ಕಿವಿಯಲ್ಲಿ ಸೀಸ ಹಾಕಿದರು? ಒಂದೆರಡು ಉದಾಹರಣೆ ಸಿಗಬಹುದೆ?
        [ಬಸವ ಸಮಾಜದಲ್ಲಿ ಶಂಭೂಕನ ವಧೆ ಆಗುವುದಿಲ್ಲ. ಏಕಲವ್ಯನ ಹೆಬ್ಬೆರಳು ಗುರು ಕಾಣಿಕೆಯಾಗುವುದಿಲ್ಲ, ಗರ್ಭಿಣಿ ಹೆಂಡತಿಯನ್ನು ಕಾಡಿಗೆ ಅಟ್ಟುವುದಿಲ್ಲ, ಹೆಂಡತಿಯನ್ನು ಸಂಪತ್ತಾಗಿಸಿ ಪಗಡೆಯಾಟದಲ್ಲಿ ಕಳೆದುಕೊಳ್ಳುವುದಿಲ್ಲ. ಅಲ್ಲಿ ಯಾರ ಕಾಯಕ ಯಾವುದೆಂದು ಯಾರೂ ಕೇಳುವುದಿಲ್ಲ. ಏಕೆಂದರೆ ಅಲ್ಲಿ ವರ್ಣಾಶ್ರಮ ವ್ಯವಸ್ಥೆ ಇಲ್ಲ. ತೆತ್ತೀಸಕೋಟಿ ದೇವತೆಗಳೂ ಇಲ್ಲ.]
        ಸರಿ..ಈ ಬಸವ ಸಮಾಜ ಎಲ್ಲಿದೆ ಈಗ? ಬಸವಣ್ಣನವರ ಜೊತೆಯೇ ಹೊರಟು ಹೋಯಿತೆ? ನೀವು ಬಸವ ಸಮಾಜಕ್ಕೆ ಸೇರಿದವರೆ?..ಜಯಪ್ರಕಾಶ ಬಂಜಗೆರೆಯವರ ‘ಆನುದೇವಾ ಹೊರಗಣನವನು’ ಪುಸ್ತಕದಲ್ಲಿ ಬಸವಣ್ಣ ಮಾದಿಗ ಕುಲದಲ್ಲಿ ಹುಟ್ಟಿರಬಹುದೆ ಎಂಬ ತರ್ಕಕ್ಕೆ ಬಂದ ಪ್ರತಿಭಟನೆ ನೋಡಿದರೆ ಬಸವಣ್ಣನವರ ಕನಸಿನ (?) ನೀವು ಮೇಲೆ ಹೇಳಿದ/ಲೇಖನದಲ್ಲಿ ಪ್ರತಿಪಾದಿಸಿದ ರೀತಿಯ ಬಸವ ಸಮಾಜ ಇನ್ನೂ ಇರುವುದು ಶಂಕಾಸ್ಪದವಾಗಿದೆ.

        • ಸಹನಾ

          “[ನಿಜ ಕಲ್ಯಾಣದ ಪ್ರಧಾನಿಯಾಗಿದ್ದ ಬಸವಣ್ಣನವರನ್ನು ನಾನು ರಾಜನೀತಿಜ್ಞರಾಗೇ ನೋಡುವುದು.]
          ಇಲ್ಲಿ ಮೇಲಿನ ಕಮೆಂಟುಗಳಲ್ಲಿ ಹೇಳಿದ್ದು ನಿಮ್ಮ ರಾಜಕೀಯವನ್ನು..ಬಸವಣ್ಣನವರದ್ದಲ್ಲ.”
          ವಿಜಯ್ ಅವರೇ, ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ ಇವರದ್ದು ಎಂತಹ ರಾಜಕೀಯ ತಂತ್ರವೆಂದು ತಿಳಿಯಲು!!!!! ತಮ್ಮ ವಾದಗಳ ಮೇಲಿನ ಟೀಕೆಗಳೆಲ್ಲವನ್ನೂ ಬಸವಣ್ಣನವರು ಮತ್ತು ವಚನಕಾರರ ಮೇಲಿನ ಟೀಕೆಗಳೆಂಬಂತೆ ತಿರುಚಿಬಿಡುತ್ತಿದ್ದಾರೆ. ಇವರ ನಿರೂಪಣೆಗಳಲ್ಲಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿದರೂ ಅವುಗಳನ್ನು ವಚನಕಾರರ ಮೇಲಿನ ಟೀಕೆಗಳೆಂಬಂತೆ ಬಿಂಬಿಸಿ ನಂತರ ವಚನಕಾರರ ಪರವಾಗಿ ತಾನು ಮಾತನಾಡುತ್ತಿರುವಂತೆ ಸೋಗುಹಾಕುತ್ತಿದ್ದಾರೆ.
          ಮಾನ್ಯ ದರ್ಗಾರವರೇ, ಇಲ್ಲಿ ಪ್ರಶ್ನೆಗಳನ್ನು ಎತ್ತಿರುವವರೆಲ್ಲರೂ ತಮ್ಮ ನಿರೂಪಣೆಯ ಬಗ್ಗೆ ತಕರಾರು ಎತ್ತುತ್ತಿದ್ದಾರೆ. ದಯವಿಟ್ಟು ತಮ್ಮ ಈ ರಾಜಕೀಯ ತಂತ್ರವನ್ನು ನಿಲ್ಲಿಸಿ ಅವುಗಳನ್ನು ತಮ್ಮ ನಿರೂಪಣೆಯ ಕುರಿತ ಪ್ರಶ್ನೆಗಳೆಂದು ಪರಿಗಣಿಸಿ ಅದೇ ನೆಲೆಯಿಂದಲೇ ಉತ್ತರಿಸಬೇಕೆಂದು ವಿನಂತಿ.

          • ವಿಜಯ್

            ಹೌದು ಸಹನಾ.. ರಂಜಾನ ದರ್ಗಾರವರು ಏನು ಹೇಳಲು ಬಯಸುತ್ತಿದ್ದಾರೆಂದು ಸ್ಫಷ್ಟವಾದರೆ ಚೆನ್ನಾಗಿರುತ್ತದೆ. ತಾವೂ ಗೊಂದಲಗೊಂಡು, ನಮ್ಮನ್ನೂ ಗೊಂದಲಗೊಳಿಸಿ ..ನಾವು ಕೇಳಿದ ಪ್ರಶ್ನೆಗಳನ್ನೇ ಕೇಳಿ..ಅವರು ನಾನು ಹೇಳದ್ದನ್ನು ನೀವು ಹೇಳುತ್ತಿದ್ದೀರಿ ಎಂದು..ನಾವು ಇಲ್ಲಿದೆ ನೋಡಿ ನೀವು ಬರೆದಿದ್ದು ಎಂದು ತೋರಿಸಿ..ಈ ಎಲ್ಲ ಗೊಂದಲಗಳು ಮುಗಿದು, ಕೊನೆಗೆ ಯಾರು ದಂಡೆತ್ತಿ ಬಂದರು, ಇವರೇನು ಉತ್ತರಿಸಿದರು ಎಂಬುದೇ ಸ್ಪಷ್ಟಗೊಳ್ಳದೇ ಹೋಗುತ್ತಿದೆ. ಇವರ ಲೇಖನದ ಉದ್ದೇಶ ‘ಮನುವಾದಿ, ಪುರೋಹಿತ ಶಾಹಿ, ಮನುಧರ್ಮ ಸಿಂಹಾಸನದ ಪ್ರತಿಪಾದಕರು, ವೈದಿಕಶಾಹಿಗಳು’ ಎಂಬೆಲ್ಲ ಬಿರುದುಗಳನ್ನು ಮುಫತ್ತಾಗಿ ತೆಗೆದುಕೊಂಡ ಬ್ರಾಹ್ಮಣರನ್ನು ತೆಗಳುವುದಾಗಿದ್ದರೆ..ಅದರಲ್ಲಿ ಅವರು ಜಯ ಸಾಧಿಸಿದ್ದಾರೆ. ಆದರೆ ಅವರ ತದ್ವಿರುದ್ಧ ಪ್ರತಿಕ್ರಿಯೆಗಳು ಅವರ ಜಯದ ಅರ್ಧ ಕ್ರೆಡಿಟ್ಟನ್ನು ಕಸಿದುಕೊಂಡಿವೆ!.
            ಕೆಳಗೆ ಉದಯಕುಮಾರ ಹಬ್ಬುರವರು ಶ್ರೀ ಚಂದ್ರಶೇಖರ ಶಾಸ್ತ್ರೀಯವರನ್ನು ಉಲ್ಲೇಖಿಸಿ ಬರೆದ ಪ್ರತಿಕ್ರಿಯೆಗೆ..”ಚಂದ್ರಶೇಖರ ಶಾಸ್ತ್ರಿಗಳು ತಮ್ಮ ಕಾಲದ ಕಟ್ಟಳೆಯ ಹಿನ್ನೆಲೆಯಲ್ಲಿ ತಮ್ಮ ವಿಚಾರಗಳನ್ನು ಸರಿಯಾಗಿಯೇ ಮಂಡಿಸಿದ್ದಾರೆ” ಎನ್ನುವ ರಂಜಾನ ದರ್ಗಾರವರು, ಹಬ್ಬುರವರು ತಮ್ಮ ಪ್ರತಿಕ್ರಿಯೆಯ ಪ್ರಾರಂಭದಲ್ಲಿ ಬರೆದ “ಲಿಂಗಾಯತರು ಹಿಂದುಗಳಲ್ಲ ಎನ್ನಲು ಯಾವ ಆಧಾರವಿದೆ? ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರೀಯವರು ಶ್ರೇಷ್ಠ ಲಿಂಗಾಯತರಗಿದ್ದರು ಹಾಗೂ ವೇದವಿದ್ವಾಂಸರಾಗಿದ್ದರು..” ಎಂಬ ಪ್ರಶ್ನೆಯನ್ನೇ ಮರೆತು ಬಿಟ್ಟಿದ್ದಾರೆ.

          • Ramjan Darga

            ನನ್ನ ಗೊಂದಲಗಳನ್ನಾದರೂ ಎತ್ತಿ ತೋರಿಸಿ ಎಂದು ತಮ್ಮಲ್ಲಿ ಪದೆ ಪದೆ ವಿನಂತಿಸಿಕೊಳ್ಳುತ್ತಿರುವೆ. ನನ್ನ ಸೌಜನ್ಯ ತುಂಬಿದ ಮಿತ್ರ ಉದಯಕುಮಾರ ಹಬ್ಬು ಅವರು ತುಂಬ ಗಂಭೀರವಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ ದಯವಿಟ್ಟು ಗಮನಿಸಿ.

          • Ramjan Darga

            ನನ್ನ ವಿಚಾರಗಳನ್ನು ಬೆಂಬಲಿಸಿ ‘ಒಂದೇ ಬಳ್ಳಿಯ ಹೂಗಳಂತೆ ಇರುವ ನಿಮಗೆಲ್ಲ’ ಪ್ರಶ್ನೆ ಕೇಳುತ್ತಿರುವವರನ್ನು ನೀವೇಕೆ ಮರೆಯುತ್ತೀರಿ?

        • Ramjan Darga

          ನಾನು ಹೇಳುವ ಬಸವ ಸಮಾಜ ಈಗ ಇಲ್ಲ. ಇದೆ ಎಂದು ಎಲ್ಲಿಯೂ ವಾದಿಸಿಲ್ಲ. 12ನೇ ಶತಮಾನದಲ್ಲಿ ಇಂಥದೊಂದು ಜಾತಿಭೇದ, ವರ್ಗಭೇದ, ವರ್ಣಭೇದ ಮತ್ತು ಲಿಂಗಭೇದದಿಂದ ಮುಕ್ತವಾದ ಶರಣ ಸಂಕುಲವನ್ನು ಬಸವಣ್ಣನವರ ನಾಯಕತ್ವದಲ್ಲಿ ಕಾಯಕಜೀವಿಗಳು ಸಾಧಿಸಿ ತೋರಿಸಿದ್ದು ಇಡೀ ವಿಶ್ವದಲ್ಲೇ ಅಪ್ರತಿಮವಾಗಿತ್ತು. ಆದರೆ ಅವರ ನರಮೇಧ ಮಾಡಿ ಒಂದು ಸುಂದರ ಸಮಾಜವನ್ನು ಯಾರು ಹಾಳುಗೆಡವಿದರೊ ಅವರ ಹಿಂಬಾಲಕರಾಗಿ ಬಹುಪಾಲ ಲಿಂಗಾಯತರು ಬದುಕುತ್ತಿದ್ದಾರೆ. ಬಹುಪಾಲು ಲಿಂಗಾಯತರ ನಾಲಗೆ ಮೇಲೆ ಬಸವಣ್ಣ ಇದ್ದರೂ ತಲೆಯಲ್ಲಿ ಮನು ಮನೆ ಮಾಡಿಕೊಂಡಿದ್ದಾನೆ ಎಂಬುದನ್ನು ಅನೇಕ ಸಂವೇದನಾಶೀಲ ಲಿಂಗಾಯತರಿಗಿ ಮನವರಿಕೆಯಾಗಿದೆ.

          • ಸಹನಾ

            ಬಸವಣ್ಣನವರ ಮತ್ತು ಇತರರ ವಚನಗಳನ್ನು ಅವರ ಸಂಪ್ರದಾಯ ಮಾರ್ಗವನ್ನು ಇದುವರೆಗೂ ಉಳಿಸಿಕೊಂಡು ಬಂದಿರುವ ಸಮುದಾಯದ ಬಗ್ಗೆ ಇವರಿಗಿರುವ ಗೌರವ ಇದು!!! ಶರಣರ ವಚನಗಳಲ್ಲಿ ಸೆಮೆಟಿಕ್ ಐಡಿಯಾಲಜಿಯನ್ನು ತುರುಕಿ ಅದರಂತೆ ಈ ಸಮುದಾಯಗಳು ಬದುಕುತ್ತಿಲ್ಲವೆಂದು ‘ಬಹುಪಾಲು’ ಶರಣ ಸಂಪ್ರದಾಯಿಗಳನ್ನು ಹೀಗೆ ಹೇಳುವುದು ಸರಿಯೇ? ಇಲ್ಲಿ ಅಸಹನೆ ಯಾರದ್ದು?

          • Somalinga Kharge

            ಬಸವಣ್ಣನವರು ನೇತೃತ್ವ ವಹಿಸಿದ್ದ ಕಾಯಕ ಜೀವಿಗಳ ನರಮೇಧ ನಡೆಯಿತು ಅಂತಾರಲ್ಲ ದರ್ಗಾ ಅವರು, ಇದು ಸತ್ಯವೇ? ಲಿಂಗಾಯತ ಚರಿತ್ರೆ ಪ್ರಕಾರ ಬಸವಣ್ಣನವರು ಸ್ವಯಂ ಲಿಂಗೈಕ್ಯರಾದರು. ನರಮೇಧ ನಡೆಯಿತು ಅನ್ನುವುದಕ್ಕೆ ಯಾವ ಆಧಾರಗಳಿವೆ?

          • Ramjan Darga

            ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡರೆ ಉತ್ತಮ. ಕಲ್ಯಾಣ ಹತ್ಯಾಕಾಂಡದ ಸಂದರ್ಭದಲ್ಲಿ ಬಸವಣ್ಣನವರು ಕೂಡಲಸಂಗಮದಲ್ಲಿದ್ದರು ಎಂದು ಬರೆದಿರುವೆನಲ್ಲ. ಆ ಹತ್ಯಾಕಾಂಡದ ಸಂದರ್ಭದಲ್ಲಿ ಸಹಸ್ರ ಸಹಸ್ರ ಶರಣರು ಕಲ್ಯಾಣದಲ್ಲಿ ಇರಲಿಲ್ಲವೆ? ಲೇಖನದಲ್ಲಿ ನೀಲಮ್ಮನ ಸ್ವರವಚನವನ ಇದೆಯಲ್ಲ. ಇದಕ್ಕಿಂತಲೂ ದೊಡ್ಡ ಆಧಾರ ಬೇಕೆ? ಇನ್ನೂ ಬೇಕಿದ್ದರೆ ಸಮಗ್ರ ವಚನಗಳನ್ನು ಓದಿ.

    • Ramjan Darga

      ಶರಧಿಯವರೆ ನನ್ನ ಲೇಖನದಲ್ಲಿನ ವಿಚಾರಗಳಿಗೆ ನೇರವಾಗಿ ಪ್ರತಿಕ್ರಿಯಿಸಿ ಪ್ರಶ್ನೆಗಳನ್ನು ಕೇಳಿದರೆ ಉತ್ತರಿಸಲು ಖಷಿ ಎನಿಸುತ್ತದೆ. ಸುತ್ತಿ ಬಳಿಸಿ ನಿಮ್ಮ ಅಸಹನೆಯನ್ನು ಪ್ರದರ್ಶಿಸುವುದು ಸರಿಯಲ್ಲ.

    • jayateerth joshi

      I too hv read Darga’s articles and found extremely enlightening and informative. I have found striking resemblance between the thoughts of vachanakaras and Darga s thoughts. Thank you sir for writing such useful articles.
      But these people without understanding vachanas and ur article simply creating hullabullo in the name of discussion. I pity their ignorance.

  13. veeresh joshi

    in the above discussion strange things are going on. ramjan darga is being treated as an Individual belong to the Muslim religion. he is not concerned withe the Lingayat. as far as concerned with ramjan he is intellectual not restricted to Muslim.
    how strange sharadhi has moved one step farward by blame Basava has copied facts from veda shastra and it doesn’t has any base
    I have read Ranjan Darga’s writings on this topic and also some extremely valuable comments and questions by Annapurna, and Vijay. Most of the Ranjan Darga’s conclusions based on Basavanna’s vachanas are baseless and merely serve as a political carrier wave other than shedding light on the truth. Further, thndere’s no humility in his claims either. Therefore, it sounded more like an election proclaim campaign. In my view, vachana’s are a ‘mixed bag’ mostly coined from ancient Vedas and further reformed to adopt a more human approach. Further, the series of articles by Darga sound as though they are written MERELY to criticize a sect of people, and it’s unfortunate that Avadhi is feeding this attempt. I thank Avadhi for posting my views (if it does).
    i again get excited by the warning to the avadhi to publish the article of Ramjan Darga is critisizing brahmin community?
    how the things are happening. Vachana literature is copied material. Ramjan darga is misinterpreting, avadhi did mistake by providing opportunity. these personalities may prove that basava divided the society

  14. nagshetty

    sharanu sharanarthi dear vijay, i will not you my thesis, it is not of use for people like you.

    • Annapoorna

      “Basaveshwara Discouraged Casteism”, Nagshetty Shetkar Director, Center for Promoting Huhuman Values, Path way to God a quarterly Journal 01/2008.

    • ವಿಜಯ್

      ನಾಗಶೆಟ್ಟಿ ಸರ್..ಇದು ನಿಜವಾಗಿಯೂ ಲಿಂಗತಾರತಮ್ಯದ ಉದಾಹರಣೆ. ಶರಣರು ಒಪ್ಪಲ್ಲ ಇದನ್ನು:(

  15. Shrikant Swamy

    First I want to salute the Mr Ramjan Darga for their excellent SCRIPT and clarification to who comments dislike script.The script like butter taken from curd of Vachan Sahitya.This is the theme of Kalyan Kranti of society was never happened in World.Sir I accept your every line of script what Basava thinks abot society.
    We should understand what is Religion before comment.Religion preach and teach the life style to people that also called civilization. There are so many Religions existing in World,in that Lingayat is a modern Religion.This preach and teaches life style to common people. Lord Basava and Sharanas establish this Religion for EQUALITY in society that may be Gender differences and Cast differences. Creator God created the everything in Universe including Human being. The God given some special things to Human beings that’s are Brain,Mind and Soul,so Humans have important role in Universe. Basavadi Sharanas accepted one God who is Creator,they opposed black belief of Veda-Upanishattu-Puranas specially the Manu shastras Chatur varna CHRONOLOGICAL SYSTEM of society which divided the society. The vachana sahitya is great Philosophy of World.
    The intellectuals like Madam Annapoorna-Sharodhi,Mr Vijay,Mr Veeresh Joshi,Mr Amaresh,Mr Umesh and Mr Shetkar,I pray you all first study the Vachana Sahitya,Veda,Upanishattu and Manu Shastra than you comment to Mr Ramjan Darga.The people who have SADDIST mind will oppose this script,who likes the Chronological system of society and they only oppose the Basavadi Sharanas Vachan Sahitya.One thing you all keep in mind Lingayata is not section of the Hindu Religion established by Basavanna against the inequality and black belief of Hindu Religion.He only expressed unsatisfactory about Veda,Upanishattu and Manus Shastra Chaturvarna,even he was unsatisfied about Buddha and Jains Tatvaa also.
    As my knowledge the Basavanna is only Brahmana established the New Religion that’s LINGAYATA,you all should proud of it, this scientifical and modern Religion given to World from Indian that to Kannadiga.You also should respect the Mr Ramjan Darga borned Muslim studied Sharana Sahitya given good literature to the society.One thing if Basava has not given Lungayata Religion to working and socially depressed people than this section also converted to the either Islam or Christian.

    • Annapoorna

      ಲಿಂಗಾಯತ ಮತ ಪ್ರಚಾರಕ್ಕೆ ಈ ವೇದಿಕೆಯನ್ನು ತಾವೂ ದರ್ಗಾ ಅವರು ಬಳಸಿಕೊಳ್ಳುವುದನ್ನು ದಯವಿಟ್ಟು ನಿಲ್ಲಿಸಿ.

      • Ramjan Darga

        ನಾವು ಮತಪ್ರಚಾರಕರಲ್ಲ. ಸತ್ಯದ ಪ್ರತಿಪಾದಕರು. ಲಿಂಗಾಯತ ಸ್ವತಂತ್ರ ಧರ್ಮ ಹೊರತಾಗಿ ಮಾಧ್ವ ಮತದಂಥ ಮತ ಅಲ್ಲ.

        • Amaresh

          ಸಾರ್, ಮಧ್ವ ಮತದ ಬಗ್ಗೆ ತಮಗಿರುವ ದ್ವೇಷ ಅಸಹನೆ ನೋಡಿದರೆ ಬಸವಾದಿ ಪ್ರಮಥರು ಮೂರ್ಚೆ ಹೋಗುವುದು ಗ್ಯಾರಂಟಿ!

          • Ramjan Darga

            ಬಸವಾದಿ ಪ್ರಮಥರು ಮೂರ್ಛೆ ಹೋಗಲಿಲ್ಲ, ‘ನಿತ್ಯ ನಾರಕಿ’ಗಳನ್ನು ಕಟ್ಟಿಕೊಂಡು ಹೋರಾಡಿದರು.

          • Amaresh

            You have no idea what nitya naaraki means just like you have no idea of what Kayaka is. These are technical terms in the corresponding Adhyatmic traditions. They are not some toys that u can play with. Show me one Vachana where the Vachanakaras have either referred to Nitya Naraki or expressed concerns about its usage in Madhwa traditions. Instead you are using both Vachanakaras and Madhwa to peddle your ideology. Seriously, you need some education badly, but the Madrasa schooling has permanently scarred your ability to learn. That’s why you misinterpret everything from Vedas to Vachanas to Marxism to suit your ideology.

          • Ramjan Darga

            What you are writing is symbol of your frustration.

          • Amaresh

            ಸಾರ್, ಇದೆಲ್ಲ ಏಕೆ? ನಾನು ನಿಮ್ಮನ್ನು ಕೇಳಿದ್ದೇನು? Show me one Vachana where the Vachanakaras have either referred to Nitya Naraki or expressed concerns about its usage in Madhwa traditions. ಅಷ್ಟು ಮಾಡಿ. ಆಮೇಲೆ ಮಾತು ಮುಂದುವರೆಸೋಣ.

          • Ramjan Darga

            Tell me what is meaning of Nityanaaraki according to your understanding of Madhva Philosophy? You are spreading the hate culture while using ‘Madrasa schooling has permanently scarred your ability to learn.’ If you are having capacity, explain what is Kayaka?. Otherwise look at my answer.

          • Amaresh

            ಸ್ವಾಮಿ, ನಿತ್ಯನಾರಕಿ ಎಂಬ ಪಾರಿಭಾಷಿಕ ಪದದ ಅರ್ಥ ತಿಳಿದುಕೊಳ್ಳಬೇಕಾದರೆ ಅದಕ್ಕೆ ಸಾಕಷ್ಟು ಶಿಕ್ಷಣ ಹಾಗೂ ಮತಿ ಬೇಕಾಗುತ್ತದೆ. ವಿಜ್ಞಾನದಲ್ಲಿ theory of special relativity ಇದೆಯಲ್ಲ, ಅದನ್ನು ತಿಳಿದುಕೊಳ್ಳಲು “ಅದು ವೈಜ್ಞಾನಿಕ ಇದು ವೈದಿಕ ಅದು ಜನ್ವಾರ ಇದು ಉಡದಾರ” ಎಂಬ ಮಟ್ಟದ (ತಮ್ಮಲ್ಲಿ ಕಂಡುಬರುತ್ತಿರುವ) ಸಿದ್ಧತೆ ಸಾಲದು. ಭೌತಶಾಸ್ತ್ರದಲ್ಲಿ ಸಾಕಷ್ಟು ಸಿದ್ಧತೆ ತಿಳುವಳಿಕೆ ಇರಬೇಕು. ಹಾಗೆ ಮಧ್ವರ ಅಧ್ಯಾತ್ಮಿಕ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲೂ ಪರಿಶ್ರಮ ಪಡಬೇಕು, ಶಿಕ್ಷಣ ಪಡೆಯಬೇಕು. ಇದೆಲ್ಲ ಇಲ್ಲದೆ “Tell me what is meaning of Nityanaaraki according to your understanding of Madhva Philosophy?” ಎಂಬ ಬೀದಿಜಗಳ ಮಟ್ಟದ ಪ್ರಶ್ನೆಯಿಂದ ಯಾವ ಪ್ರಯೋಜನವೂ ಇಲ್ಲ.
            ದ್ವೇಷಕ್ಕೂ ಸಂಸ್ಕೃತಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಬಹುಶಃ ಸೆಮೆಟಿಕ್ ಮತಗಳ ಹಿನ್ನೆಲೆಯವರಿಗೆ ಇದು ಗೊತ್ತಿಲ್ಲ ಅನ್ಸುತ್ತೆ,
            ಅದಕ್ಕೆ “hate culture” ಅಂತ ಹೇಳುತ್ತಿದ್ದೀರಿ. ಆದರೆ ಭಾರತೀಯ ಸಂಸ್ಕೃತಿಯ ಹಿನ್ನೆಲೆ ಉಳ್ಳ ಎಲ್ಲರಿಗೂ (ತಮ್ಮ ಶರಣರನ್ನೂ ಸೇರಿಸಿದಂತೆ ಎಲ್ಲರಿಗೂ) “hate culture” ಎಂಬ ಪದಪ್ರಯೋಗವೇ ಒಂದು ಆಭಾಸ.
            ಮದ್ರಸಾಗಳಲ್ಲಿ ಕೊಡುವ ಶಿಕ್ಷಣ ಎಂತದ್ದು ಅಂತ ಇಡೀ ಪ್ರಪಂಚಕ್ಕೆ ಗೊತ್ತು. ಅವೈಚಾರಿಕತೆಯ ಬೀಜವನ್ನು ಶಿಕ್ಷಣದ ಹೆಸರಿನಲ್ಲಿ ಪಾಪದ ಮಕ್ಕಳ ಮನಸ್ಸಿನಲ್ಲಿ ಬಿತ್ತಲಾಗುತ್ತದೆ. ವಿಜ್ಞಾನ ಹೇಳುವುದು ಒಂದಾದರೆ ಮದ್ರಸಾಗಳಲ್ಲಿ ಹೇಳಿ ಕೊಡುವುದು ಇನ್ನೊಂದು! ಆದುದರಿಂದಲೇ ತಮ್ಮ ವಾದ ಅವೈಚಾರಿಕತೆಯಿಂದ ತುಂಬಿ ಹರಿಯುತ್ತಿದೆ.

          • Ramjan Darga

            ನಾನು ಮದ್ರಸಾದಲ್ಲಿ ಕಲಿತಿಲ್ಲ. ನೀವು ಕಲಿತಿದ್ದೀರಾ? ವಚನಗಳ ಬಗ್ಗೆ ಚರ್ಚಿಸುವುದನ್ನು ಬಿಟ್ಟು ಅಲ್ಲಿಗೇಕೆ ಓಡಿಹೋಗುತ್ತೀರಿ? ಚರ್ಚೆಯನ್ನು ಸರಿಯಾದ ದಾರಿಯಲ್ಲಿ ಮುಂದುವರಿಸಿ.

          • Amaresh

            ನಿತ್ಯನಾರಕಿ ಎಂಬ ಪಾರಿಭಾಷಿಕ ಪದದ ಅರ್ಥ ತಿಳಿದುಕೊಳ್ಳಬೇಕಾದರೆ ಅದಕ್ಕೆ ಸಾಕಷ್ಟು ಶಿಕ್ಷಣ ಹಾಗೂ ಮತಿ ಬೇಕಾಗುತ್ತದೆ. ವಿಜ್ಞಾನದಲ್ಲಿ theory of special relativity ಇದೆಯಲ್ಲ, ಅದನ್ನು ತಿಳಿದುಕೊಳ್ಳಲು “ಅದು ವೈಜ್ಞಾನಿಕ ಇದು ವೈದಿಕ ಅದು ಜನ್ವಾರ ಇದು ಉಡದಾರ” ಎಂಬ ಮಟ್ಟದ (ತಮ್ಮಲ್ಲಿ ಕಂಡುಬರುತ್ತಿರುವ) ಸಿದ್ಧತೆ ಸಾಲದು. ಭೌತಶಾಸ್ತ್ರದಲ್ಲಿ ಸಾಕಷ್ಟು ಸಿದ್ಧತೆ ತಿಳುವಳಿಕೆ ಇರಬೇಕು. ಹಾಗೆ ಮಧ್ವರ ಅಧ್ಯಾತ್ಮಿಕ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲೂ ಪರಿಶ್ರಮ ಪಡಬೇಕು, ಶಿಕ್ಷಣ ಪಡೆಯಬೇಕು. ಇದೆಲ್ಲ ಇಲ್ಲದೆ “Tell me what is meaning of Nityanaaraki according to your understanding of Madhva Philosophy?” ಎಂಬ ಬೀದಿಜಗಳ ಮಟ್ಟದ ಪ್ರಶ್ನೆಯಿಂದ ಯಾವ ಪ್ರಯೋಜನವೂ ಇಲ್ಲ.

          • ವಿಶ್ವಾರಾಧ್ಯ ಸತ್ಯಂಪೇಟೆ

            ದರ್ಗಾ ಅವರೆ,
            ಎಂದಾದರೂ ಇವರು ಎದುರಾ ಎದುರು ನಿಂತು ಮಾತಾಡಿದ್ದಾರೆಯೆ ? ಚರ್ಚೆಯನ್ನು ಹಾದಿ ತಪ್ಪಿಸಿ ಸುಖಾ ಸುಮ್ಮನೆ ಕಾಲ ಹರಣ ಮಾಡುವುದೇ ಇವರ ಕೆಲಸ. ಇವರೆಲ್ಲ ವೈದಿಕ ವೈರಸ್ ಗಳು.

          • jayateerth joshi

            To understand vachanas also u need to be aware of Physics Chemistry Biology. otherwise Ignorant people like you will argue like this.

          • jayateerth joshi

            Your argument also shows that u r also trained in Vedic Madrasa

          • jayateerth joshi

            you dont have any idea and simply exhibiting your ignorance to all. Neither u hve read vachanas nor understood any vachana. Because they are not written for people like you to write hollow arguments.

          • jayateerth joshi

            Ur intolerance towards vachana literature gets the same response

      • ವಿಶ್ವಾರಾಧ್ಯ ಸತ್ಯಂಪೇಟೆ

        ಲಿಂಗಾಯತ ಎಂಬುದು ಮತವಲ್ಲ. ಅದೊಂದು ಜೀವನ ಧರ್ಮ. ಬಹುಶಃ ಇಂದಿನ ಲಿಂಗಾಯತರು ಹಾಗೂ ಮಠಾಧೀಶರನ್ನು ನೋಡಿ ನಿಮಗೆ ಹೀಗೆ ಅನ್ನಿಸಿದೆ. ಬಸವಾದಿ ಶರಣರ ವಚನಗಳನ್ನು ಸರಿಯಾಗಿ ಅಭ್ಯಸಿಸಿದರೆ ತಾವು ( ಅನ್ನಪೂರ್ಣ) ಹೀಗೆ ಹೇಳಲು ಸಾಧ್ಯವಿಲ್ಲ.

  16. nagshetty

    sharanu sharanarthi dear sharadi, let me explain the situatiuon this the instance took from vachana ” Aaneanerihohanage swana kacchaballade” procession of the person (Preferable king/eminent)is running on the at the market/streets where a dog use to bark at him. nothing can be done by it

  17. Dr B. A.DESAI

    As there is big discussion is going on vachanas, all the vachana are not merely documents written by some intelligent scholars, it is work of concrete discussion among all sharanas and it is like parliament, it can,t be denied by some idiots who want propagate their own version of dharma, Eg see one example you have gone through papers that cricketer shrishant has been done babana tulabhara by priest to save him from all misdeeds he has done. this is lastes eg to show that everything can be done and can be saved from jail, take eg of reddy who is in jail since 2 years even after giving 40 crore jewels, see here vachana philosophy stands 100% correct, imagine what was at condition at 12 th century, i am blaming particular any body purohitashais are there in all cast, those are well learned are misusing uneducated in field of religion, see govt spent 5 crores for puja for rain, whether rain will come? this all misleading whole india in name of religion, vachana philosophy sharans have studied all these idiotic things and they given clear cut message to people, nobody can’t deny the truths, now they are becoming poison for some people.

    • Amaresh

      Go study vachanas once again. There are hundreds of practices prescribed in vachanas that are goddu by any definition of the term goddu.

  18. veeresh joshi

    i feel discussion at avadhi are going in wrong way. i came to the note the the following
    1. avadhi is being blamed to publishing wrong article of ramjan darga.
    2. Guru basava copied and pasted the lines from Veda shastra.
    3. it is crime to substantiate basava denied/counter acted against caste
    4. nagshetty has asked a question what proof you have that Lingayat religion is part of Hindu cluture is being not answered by any.
    5. substantiating the truth of Lingayat religion stands against evil tyrannical clutches of hindu culture is crime.
    fo above conclusion all the participants of the discussion are getting credit except nagshetty and srikant swamy
    how strange

    • Amaresh

      How strange that some moronic modern disciples of Vachanakaras like Nagshetty and Veeresh are distorting the very purpose of Vachanas! They can’t understand a line of vachana and yet they give posture of the ultimate authority on vachana! How strange!

      • jayateerth joshi

        This is even stranger that cunning people like u who dont want to show their face in public but keep hatching conspiracies

  19. sandeep parma

    Sharanu sharanarthi
    hatts off to darga sir we r with u sir . in 12th century kondiminchanna work is simply opposing the guru basavannas work like that only in 21st century opposing your ( becous they want to be famous )work . go ahead sir guru basavanna blessing and all sharanas with you sir .

  20. veeresh joshi

    sharanu sharanrthi dear Amaresh i appreciate your interest
    as your comment “How strange that some moronic modern disciples of Vachanakaras like Nagshetty and Veeresh are distorting the very purpose of Vachanas! They can’t understand a line of vachana and yet they give posture of the ultimate authority on vachana! How strange!”
    in your views Lingayat is part of Hindu. based on which evidence you came to the conclusion. i asked in previous discussion. no one of your group are capable to give direct answer to the simple question but pose clever to mislead
    if you can read kannada go to 2035 Basava mantapa 20th main,second block, west of chord road, Rajajinagar, bengaluru and pusrchage the book “Vedakke Vareya kattuve” you find thew collection of vachans contending authority of veda shastra, purana etc over Vachana litreauter and lingayat religion

  21. Satyanarayana BR

    ಮಂಚಣ್ಣನ ಹೆಸರನ್ನು ಒಂದೆರಡು ಪ್ರತಿಕ್ರಿಯೆಯಲ್ಲಿ ಗಮನಿಸಿದೆ. ಕೊಂಡೆ ಎಂಬುದಕ್ಕೆ ಚಾಡಿಕೋರ ಎಂಬ ಅರ್ಥವಿದೆ. ಮೇಲ್ನೋಟಕ್ಕೆ ಚಾಡಿಕೋರನಂತೆ ಕಂಡರೂ ಗುಪ್ತಶಿವಭಕ್ತನಾಗಿದ್ದ ಮಂಚಣ್ಣ ಮತ್ತು ಆತನ ಪತ್ನಿಯ ಕತೆ ಬೇರೆಯೇ ಇದೆ.
    ಕಲಚೂರಿ ಬಿಜ್ಜಳನಲ್ಲಿ ದಾಮೋದರ ಎಂಬ ಭಂಡಾರದ ಕರಣಿಕನೊಬ್ಬನಿದ್ದು. ಮಹಾವೈಷ್ಣವನಾದ ಈತನ ಹೆಂಡತಿ ಮಾಯಾವತಿ. ಮದುವೆಯಾಗಿ ಹಲವಾರು ವರ್ಷಗಳು ಕಳೆದರೂ ಮಕ್ಕಳಾಗದೇ ಇದ್ದಾಗ, ಮಾಯಾವತಿ ಗಂಡನಿಗೆ ತಿಳಿಯದಂತೆ ಶಿವಾಲಯಕ್ಕೆ ಹೋಗಿ ಸಂತಾನಕ್ಕಾಗಿ ಪ್ರಾರ್ಥಿಸುತ್ತಾಳೆ. ಶಿವನ ವರಪ್ರಸಾದಿಂದ ಹುಟ್ಟಿದವನೇ ಮಂಚಣ್ಣ. ದಾಮೋದರನ ಇಚ್ಛೆಯಂತೆ ವೈಷ್ಣವ ಧರ್ಮಾನುಸಾರ ಜಾತಕಾದಿ ಕರ್ಮಗಳು, ಉಪನಯನವೂ ನಡೆಯುತ್ತದೆ. ವಿದ್ಯಾಭ್ಯಾಸವೂ ನಡೆಯುತ್ತದೆ. ಅಸಾಧ್ಯ ಬುದ್ಧಿವಂತನಾದ ಮಂಚಣ್ಣನ ಕುಶಾಗ್ರಮತಿಯನ್ನು ಬಾಲ್ಯದಲ್ಲೇ ಗುರುತಿಸಿದ ಬಿಜ್ಜಳ ಅವನಿಗೆ ತನ್ನ ಪತ್ರವ್ಯವಹಾರವನ್ನು ನೋಡಿಕೊಳ್ಳುವ ನಿಯೋಗಿಗಳ ಕೆಲಸವನ್ನು ವಹಿಸುತ್ತಾನೆ. ವೈಷ್ನವ ಸಂಪ್ರದಾಯದಲ್ಲಿ ಬೆಳದು ವೇದಾಂತ ಪಂಡಿತನಾಗಿದ್ದರೂ ಪರಿಸರದ ಪ್ರಭಾವದಿಂದ ಶಿವಭಕ್ತನಾಗುತ್ತಾನೆ. ಆದರೆ ಬಹಿಃರ್ಮುಖದಲ್ಲಿ ಬಸವಣ್ಣನ ವಿರೋಧಿಯಂತೆ, ಶೈವವಿರೋಧಿಯಂತೆ ಕೆಲಸ ಮಾಡುತ್ತಿದ್ದರೂ ಗುಪ್ತವಾಗಿ ಇಷ್ಟಲಿಂಗವನ್ನು ಧರಿಸಿ ಶಿವಭಕ್ತನಾಗಿ, ಪರೋಕ್ಷವಾಗಿ ಬಸವಣ್ಣನ ಕಾಯಕಕ್ಕೆ ನೆರವಾಗುತ್ತಿರತ್ತಾನೆ. ಆದ್ದರಿಂದ ಕೆಲವು ಶರಣರು ಮಂಚಣ್ಣನನ್ನು ಗುಮಾನಿಯಿಂದ ನೋಡಿದ್ದೂ ಅಲ್ಲದೆ ಚಾಡಿಕೋರನೆಂದು ಕರೆದು, ‘ಕೊಂಡೆಮಂಚಣ್ಣ’ ಎಂಬ ಹೆಸರನ್ನೂ ಇಟ್ಟುಬಿಟ್ಟಿದ್ದರು.
    ಮಂಚಣ್ಣ ಮತ್ತು ಆತನ ಹೆಂಡತಿ ಲಕ್ಷ್ಮಮ್ಮ ಇಬ್ಬರೂ ಮಹಾನ್ ಶಿವಭಕ್ತರಾಗಿದ್ದರು. ಒಂದು ದಿನ ಗುಪ್ತವಾಗಿ ಶಿವಪೂಜೆಯಲ್ಲಿ ಮೈಮರೆತಿದ್ದಾಗ, ಇವರು ಹಾಕಿದ್ದ ದೂಪದ ಹೊಗೆ ಹೆಚ್ಚಾಗಿ ಅದು ಮನೆಯಿಂದ ಹೊರಗೆ ಗೋಚರಿಸುತ್ತಿತ್ತು. ಅನುಮಾನ ಬಂದ ವೈಷ್ಣವನೊಬ್ಬ ಕಿಟಕಿಯಿಂದ ಇಣುಕಿ ನೋಡಿ, ಮಂಚಣ್ಣ ಗುಪ್ತ ಶಿವಭಕ್ತನೆಂದು ಹೊರಜಗತ್ತಿಗೆ ತಿಳಿಸುತ್ತಾನೆ. ಅವನ ವೈಷ್ಣವ ಸಮಾಜ ಅವನನ್ನು ಬಹಿಷ್ಕರಿಸುತ್ತದೆ. ಆದರೆ ಬಸವಣ್ಣ ಆ ದಂಪತಿಗಳ ಕೈಹಿಡಿದು ಉದ್ಧರಿಸುತ್ತಾನೆ. ನಂತರದ ದಿನಗಳಲ್ಲಿ ಮಂಚಣ್ಣ ದಂಪತಿಗಳಿಬ್ಬರೂ ಮಹಾಮನೆಯ ಕೆಲಸಗಳಲ್ಲಿ ಭಾಗವಹಿಸುತ್ತಾ ತಮ್ಮ ಕೊನೆಗಾಲವನ್ನು ಕಲ್ಯಾಣದಲ್ಲಿಯೇ ಕಳೆಯುತ್ತಾರೆ.
    ‘ನಾರಾಯಣಪ್ರಿಯ ರಾಮನಾಥ’ ಎಂಬುದು ಮಂಚಣ್ಣನ ಅಂಕಿತನಾಮ. ವಿಷ್ಣುಭಕ್ತನಾಗಿದ್ದ ಆತ ಶಿವಭಕ್ತನಾಗಿ ಬದಲಾಗುವುದರ ಸನ್ನಿವೇಶದ ಅವನ ಮನಸ್ಥಿತಿಯನ್ನು ಬಿಂಬಿಸುವಂತಹ ಹಲವಾರು ವಚನಗಳು ರಚನೆಯಾಗಿವೆ.
    ’ಆನು ನಾಮದ ದಾಸನಲ್ಲದೆ ದಾಸೋಹದ ದಾಸನಲ್ಲಯ್ಯ,
    ಆನು ಹರಿಭಕ್ತನಲ್ಲದೆ ಶಿವಭಕ್ತನಲ್ಲಯ್ಯ,
    ಎನೆಗೆ ಶಿವಭಕ್ತಿ ನೆಲೆಗೊಳ್ಳದಯ್ಯ’
    ಎಂದು ಒಂದು ವಚನದಲ್ಲಿ ಹಾಡಿದರೆ, ಇನ್ನೊಂದರಲ್ಲಿ
    ’ಎನ್ನ ನಿಮ್ಮ ಭಕ್ತಿಯ
    ದಾಸೊಹದ ದಾಸನ ಮಾಡಯ್ಯ
    ನಾರಾಯಣ ಪ್ರಿಯ ರಾಮನಾಥ’,
    ’ಬಿಳಿಯ ನಾಮವನಿಕ್ಕಿದ ದಾಸಿಕೆ ಹುಸಿಯಾಯಿತು,
    ದಾಸೋಹ ಎಂಬುದನರಿಯದೆ
    ಎನ್ನ ವೇಷ ಹುಸಿಯಾಯಿತು ನಾರಾಯಣಪ್ರಿಯ ರಾಮನಾಥ’
    ಎಂದು ಕೆಲವು ವಚನಗಳಲ್ಲಿ ಹಾಡಿದ್ದಾನೆ.
    ಮಂಚಣ್ಣನ ಹೆಂಡತಿಯಾದ ಲಕ್ಷ್ಮಮ್ಮನ ಒಂದೇ ಒಂದು ವಚನ ಸಿಕ್ಕಿದ್ದು ಅದು ಅಜಗೇಸ್ವರಲಿಂಗ ಎಂಬ ಅಂಕಿತವನ್ನು ಹೊತ್ತಿದೆ.
    ಆಯುಷ್ಯ ತೀರಲು ಮರಣ;
    ವ್ರತ ತಪ್ಪಲು ಶರೀರ ಕಡೆ;
    ಮೇಲುವ್ರತವೆಂಬ ತೂತರ ಮೆಚ್ಚ ನಮ್ಮ ಅಜಗೇಸ್ವರಲಿಂಗ’
    ಎಂಬಲ್ಲಿ ಅವಳ ವ್ರತನಿಷ್ಟೆ ವ್ಯಕ್ತವಾಗಿದೆ.
    ಆದ್ದರಿಂದ ಸಹೃದಯರು, ಕೊಂಡೆಮಂಚಣ್ಣ ಅಥವಾ ಗುಪ್ತಮಂಚಣ್ಣಗಳ ಹೆಸರನ್ನು ತಪ್ಪು ಅರ್ಥದಲ್ಲಿ ಬಳಸಬಾರದು.

  22. Shrikant Swamy

    Mr Veeresh Joshi,thanks you mentioned my name,what you thinking you want again Chaturvarana Chronological system of society this only divided the society and collapse the Hindu religion,how you agree Basava used sentences of Vedas,yes he studied everything including Veda,Upanishattu,Bhagavada Geeta,Manushastra,Buddhism and Jainism. So used sentences for example,but you Sharodha directly blaming Basava,you are not having ability to Basava,due to like you people only conversation is going in India attracting towards Christian,Islam and Buddhism,all mankind created by Creator is equal,you thinking Brahmanas are from head,Khshtria from Shoulder,Vaishas are from Stomach and Shudras from Legs,no value to Dalits. Yours mentality continues like so no one interest to stay in Hindu religion.Stop your GODDU philosophy,now world in MODERN thinking you are in Ancient period.

    • ವಿಜಯ್

      ಶ್ರೀಕಂಠ ಸ್ವಾಮಿಯವರಿಂದ ಬ್ರಿಟೀಶರ ವಿರುದ್ದ ಉಗ್ರ ಪ್ರತಿಕಾರ! ನೂರಾರು ವರುಷ ಮಾಡಿದ ದಬ್ಬಾಳಿಕೆಗೆ ತಕ್ಕ ಶಾಸ್ತಿ! ಅಂದ ಹಾಗೆ ಈ Sharodha ಯಾರು?

      • Annapoorna

        ದರ್ಗಾ ಅವರ ಶಿಷ್ಯ ಬಳಗ ಇಲ್ಲಿ ಬಂದು ಸಿಕ್ಕಾಪಟ್ಟೆ ರಂಜನೆ ಕೊಡುತ್ತಿದೆ! ಆದರೆ ಕೇಳಿದ ಒಂದೂ ಪ್ರಶ್ನೆಗೂ ಇದುವರೆಗೆ ದರ್ಗಾ ಅವರಿಂದಾಗಲಿ ಅವರ ಶಿಷ್ಯ ಪಡ್ಡೆಗಳಿಂದಾಗಲಿ ಉತ್ತರ ಸಿಗಲಿಲ್ಲ. ಇವರಿಗೆ ಚರ್ಚೆ ಮಾಡುವ ಉದ್ದೇಶವೇ ಇರಲಿಲ್ಲ ಅಂತ ಕಾಣುತ್ತದೆ.

        • jayateerth joshi

          Your website created to simply pass the time without any sincere thoughts. Because you members have any other better work to do.

      • Amaresh

        LoL.

        • Prabhanjan Bhagwat

          Mr.Amaresh i have been reading this discussion on the web. I am working abroad. I have been enlightened by Mr.Darga’s articles. Though he is a muslim he has really imbibed the essence of Basava philosophy and vachana literature.
          Though i am a brahmin i admire Basava and a follower of him. By observing your argument what i felt is you still need to study vachanas with good intentions. You seem to be arguing for argument sake and you are proclaiming yourself as if you only have understood vachanas

  23. Amaresh

    ಮಾನ್ಯ ರಂಜಾನ್ ದರ್ಗಾ ಅವರು ‘ರುದ್ರ’ ಎಂದರೆ ಶಿವ ಎಂಬ ಅರ್ಥದಲ್ಲಿ ವಚನಕಾರರು ಬಳಸೇ ಇಲ್ಲ ಅಂತೆಲ್ಲ ಇಲ್ಲಿ ವಾದ ಮಾಡಿದ್ದರು. ಅವರ ವಾದ ಪೊಳ್ಳು ಎಂಬುದಕ್ಕೆ ಇಲ್ಲಿದೆ ನೋಡಿ ಅಣ್ಣ ಬಸವಣ್ಣನವರ ಒಂದು ವಚನ:
    ಬ್ರಹ್ಮಪದವಿಯನೊಲ್ಲೆ |
    ವಿಷ್ಣುಪದವಿಯನೊಲ್ಲೆ |
    ರುದ್ರಪದವಿಯನೊಲ್ಲೆ |
    ನಾನು ಮತ್ತಾವ ಪದವಿಯನೊಲ್ಲೆನಯ್ಯ |
    ಕೂಡಲಸಂಗಮದೇವ
    ನಿಮ್ಮ ಸದ್ಭಕ್ತರ ಪಾದವನರಿದಿಪ್ಪ
    ಮಹಾಪದವಿಯನೆ ಕರಿಶಿಸಯ್ಯ |
    ಈ ವಚನದಲ್ಲಿ ರುದ್ರಪದವಿ ಅಂದರೆ ಏನು, ‘ರುದ್ರ’ ಅಂದರೆ ಏನು ಅಂತ ಅವಧಿಯ ಓದುಗರಿಗೆ ರಂಜಾನ್ ದರ್ಗಾ ಹೇಳಬೇಕೇ?!!

    • Amaresh

      ಅಲ್ಲಮ ಪ್ರಭುಗಳ ಈ ಕೆಳಗಿನ ಒಂದು ವಚನ ಕೂಡ ರಂಜಾನ್ ದರ್ಗಾ ‘ರುದ್ರ’ ವಿಚಾರದಲ್ಲಿ ಅವರ ವಾದದ ಪೊಳ್ಳುತನವನ್ನು ಬಯಲು ಮಾಡುತ್ತಿದೆ:
      ಗಗನದ ಮೇಲೊಂದಭಿನವ ಗಿಳಿ ಹುಟ್ಟಿ
      ಸಯಸಂಭ್ರಮದಲ್ಲಿ ಮನೆಯ ಮಾಡಿತ್ತು !
      ಒಂದು ದಿನ ಗಿಳಿ ಇಪ್ಪತೈದು ಗಿಳಿಯಾಯಿತ್ತು !
      ಬ್ರಹ್ಮನಾ ಗಿಳಿಗೆ ಹಂಜರವಾದ
      ವಿಷ್ಣುವಾ ಗಿಳಿಗೆ ಕೊಱೆಕೂಳಾದ
      ರುದ್ರನಾ ಗಿಳಿಗೆ ತಾ ಕೋಲಾದ !
      ಇಂತೀ ಮೂವರ ಮುಂದಣ ಕಂದನ ನುಂಗಿ
      ದೃಷ್ಟನಾಮ ನಷ್ಟವಾಯಿತ್ತು-ಇದೆಂತೋ ಗುಹೇಶ್ವರ ?!

      • Amaresh

        Over to Akka Mahadevi:
        ಚತುರ್ಮುಖಬ್ರಹ್ಮ ಹೊಡೆದಾಳುತೈದಾನೆಯಮ್ಮ ವಿಷ್ಣು ವಿಧಿಪಾಶದಿಂ ಬಿಗಿಯೆ
        ರುದ್ರನ ಹೊಡೆ ನಿಚ್ಚ ಹೊಯ್ಯುತಿದೆಯಮ್ಮ.

        ಇಚ್ಛಾಶಕ್ತಿಯೆಂದು ರುದ್ರಂಗೆ ಪಟ್ಟವ ಕಟ್ಟಿದೆನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
        ಜ್ಞಾನಶಕ್ತಿಯೆಂದು ವಿಷ್ಣುವಿಂಗೆ ಕೈಗೂಡಿಸಿದನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
        ಕ್ರಿಯಾಶಕ್ತಿಯೆಂದು ಬ್ರಹ್ಮಂಗೆ ಧಾರೆಯನೆರೆದನಮ್ಮ.

        Now sarvajna:
        ಉತ್ಪತ್ತಿಗೆ ಬೊಮ್ಮಗಡ ಸ್ಥಿತಿಗೆ ವಿಷ್ಣುಗಡ
        ಹತವ ಗೈವುದಕ್ಕೆ ರುದ್ರಗಡ, ಇವರುಗಳ
        ಸ್ಥಿತಿಯನರಿಯೆಂದ ಸರ್ವಜ್ಞ

        • Ramjan Darga

          ಎಷ್ಟು ಸಲ ಹೇಳಲಿ? ಇವೆಲ್ಲ ವಚನಗಳ ಕಾವ್ಯ ಗುಣಗಳು. ಶರಣರು ಏಕದೇವೋಪಾಸಕು ಎಂಬುದು ಇಡೀ ಲೋಕ್ಕಕ್ಕೇ ಗೊತ್ತಿದೆ. ಅಲ್ಲದೆ ಅವೈದಿಕರು ಎಂಬುದೂ ಗೊತ್ತಿದೆ.

        • ವಿಶ್ವಾರಾಧ್ಯ ಸತ್ಯಂಪೇಟೆ

          ಜನಸಾಮಾನ್ಯರು ಅರಿಯುವ ಭಾಷೆಯಲ್ಲಿ ಮಾತನಾಡಬೇಕೆಂಬುದು ಶರಣ ನಿಲುವು. ವಿಷ್ಣು-ಶಿವ-ರುದ್ರರುಗಳು ಬಸವಾದಿ ಶರಣರ ನಂಬುವ ದೇವರುಗಳಲ್ಲ. ಇವುಗಳು ಅವರಿಗೆ ಬೇಕಾಗಿಯೂ ಇಲ್ಲ. ಆದರೆ ಇವುಗಳನ್ನು ಉಪಯೋಗಿಸದೆ ಜನತೆಗೆ ತಿಳಿಸಲು ಸಾಧ್ಯವಿಲ್ಲವೆಂಬುದರಿಂದ ಅವುಗಳನ್ನು ಬಳಿಸಿದ್ದಾರೆ.

      • Ramjan Darga

        ಶರಣರ ಶಿವನೇ ಬೇರೆ ಎಂಬದು ಎಷ್ಟು ಸಲ ಸಾಧಾರಗಳೊಂದಿಗೆ ತಿಳಿಸಿದರೂ ಮೊಂಡುವಾದಕ್ಕೆ ಕೊನೆ ಇಲ್ಲವೆ?
        ವೇದಂಗಳ ಹಿಂದೆ ಹರಿಯದಿರು
        ಶಾಸ್ತ್ರಂಗಳ ಹಿಂದೆ ಸುಳಿಯದಿರು, ಸುಳಿಯದಿರು
        ಪುರಾಣಂಗಳ ಹಿಂದೆ ಬಳಲದಿರು ಬಳಲದಿರು
        ಆಗಮಂಗಳ ಹಿಂದೆ ತೊಳಲದಿರು ತೊಳಲದಿರು
        ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು
        ಶಬ್ದಜಾಲಂಗಳಿಗೆ ಬಳಲದಿರು ಬಳಲದಿರು. (ಆದಯ್ಯ)
        ಏಕೆಂದರೆ ಏಕೆಂದರೆ ಏಕೆಂದರೆ ಅಮರೇಶ್ ಅವರೆ:
        ವೇದಂಗಳೆಲ್ಲ ಬ್ರಹ್ಮನೆಂಜಲು
        ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು
        ಆಗಮಂಗಳೆಲ್ಲ ರುದ್ರನೆಂಜಲು [ನೆನಪಿಡಿ ಆಗಮಂಗಳೆಲ್ಲ ರುದ್ರನೆಂಜಲು]
        ಪುರಾಣಂಗಳೆಲ್ಲ ವಿಷ್ಣುವಿನೆಂಜಲು
        ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು
        ಇಂತಿವೆಲ್ಲವ ಹೇಳುವವರು ಕೇಳುವವರು
        ಪುಣ್ಯ ಪಾಪಂಗಳೆಂಜಲೆಂದಾತ ಅಂಬಿಗ ಚೌಡಯ್ಯ. (ಅಂಬಿಗರ ಚೌಡಯ್ಯ)
        ಇಂಥ ವೇದಾಗಮಗಳಿಗೆ ಬಸವಣ್ಣನವರು ಏನು ಮಾಡಿದರು ನೋಡಿ:
        ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ
        ತರ್ಕದ ಬೆನ್ನಬಾರನೆತ್ತುವೆ.
        ಆಗಮದ ಮೂಗ ಕೊಯಿವೆ ನೋಡಯ್ಯ
        ಮಹಾದಾನಿ ಕೂಡಲಸಂಗಮದೇವಾ
        ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ. (ಬಸವಣ್ಣನವರು)
        ರುದ್ರ ದೇವರೆಂದು ಆರಾಧಿಸಿ
        ಶಿಲೆಯೊಳಗೆ ಹೋರಟೆಗೊಂಡು ಕೆಟ್ಟರಲ್ಲಾ ಭಕ್ತ ಜನಂಗಳು.
        ……..
        ಗಂಗೆವಾಳಕಸಮಾರುದ್ರರೊಳಗಾದ ಬಂಧನವಿರಹಿತ
        ಲೀಲೆಗೆ ಹೊರಗಾದ ಸ್ವಯಂಭೂವಯ್ಯಾ ಎನ್ನ ದೇವ. (ಮೋಳಿಗೆ ಮಾರಯ್ಯ)
        ರುದ್ರ ದೈವವಾದಡೆ ಕಪಾಲವ ಹೊತ್ತು ತಿರುಗಲೇಕೆ?
        ವಿಷ್ಣು ದೈವವಾದಡೆ ದಶಾವತಾರಕ್ಕೊಳಗಾಗಲೇಕೆ?
        ಬ್ರಹ್ಮ ದೈವವಾದಡೆ ಶಿರವ ಹೋಗಾಡಲೇಕೆ?
        ಇಂತೀ ಮೂರು ಅಳಿವಿಂಗೊಳಗು. (ಗುಪ್ತಭಕ್ತಿಯ ಮಂಚಣ್ಣ)
        ವಿಷ್ಣು ದೈವವಾದಡೆ ಪಾಂಡವರ ಬಂಡಿಯ ಬೋವನಾದ;
        ಬ್ರಹ್ಮ ದೈವವೆಂದಡೆ ಆ ಬೋವಂಗೆ ಕಂದನಾದ.
        ………
        ರುದ್ರ ದೈವವೆಂದಡೆ ಅರ್ಧ ನಾರಿಗೆ ಸಿಕ್ಕಿದ.
        ಇಂತೀ ಸಮಯ ಕುಲಕ್ಕೆ ಹೊರಗಾಗಿ, ಶಕ್ತಿಸಮಯ
        ನಿರಸನನಾಗಿ ನಿಂದುದು
        ಸದಾಶಿವಮೂರ್ತಿ ಲಿಂಗಮೊಂದಲ್ಲದಿಲ್ಲಾ ಎಂದೆ. (ಅರಿವಿನ ಮಾರಿತಂದೆ)
        ಮಾಯೆಯ ಬಸುರಲ್ಲಿ ಬಂದಾತ ಮಹೇಶ;
        ದೇವಕಿಯ ಬಸುರಲ್ಲಿ ಬಂದಾತ ವಿಷ್ಣು;
        ಹೂವಿನ ಬಸುರಲ್ಲಿ ಬಂದಾತ ಬ್ರಹ್ಮ;
        ಮರುತದೇವಿಯ ಬಸುರಲ್ಲಿ ಬಂದಾತ ಅರುಹ;
        ಇವರು ದೇವರೆಂದು ನಂಬಿ ಪೂಜಿಸಿದಡೆ ಭವ ಅಳಿಯದು;
        ಮುಕ್ತಿಯಾಗದೆಂದಾತನಂಬಿಗ ಚೌಡಯ್ಯ. (ಅಂಬಿಗರ ಚೌಡಯ್ಯ)
        ತ್ರಿಪುರವನುರುಹಿದ ತ್ರೀನೇತ್ರನಲ್ಲ;
        ಅಂಧಕಾಸುರನ ಮೆಟ್ಟಿ ನಾಟ್ಯವನಾಡಿದಾತನಲ್ಲ;
        ಖಂಡ ಕಪಾಲಿಯಲ್ಲ, ಮುಂಡಧಾರಿ ತಾನಲ್ಲ;
        ಭೂ ಮಂಡಳದೊಳಗೆ ಬಂದು ಸುಳಿವಾತನಲ್ಲ;
        ಈಶ್ವರನಲ್ಲ, ಮಹೇಶ್ವರನಲ್ಲ,
        ಗುಹೇಶ್ವರನೆಂಬ ಲಿಂಗ ಅಪಾರಮಹಿಮನು! (ಅಲ್ಲಮಪ್ರಭುಗಳು)
        ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೇಶ್ವರನು;
        ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು;
        ಪೃಥ್ವಿಯೆ ಪೀಠ, ಆಕಾಶವೇ ಲಿಂಗ- ಅಂತಹನೊಬ್ಬ ಗಣೇಶ್ವರನು;
        ಸಿರಿಯಾಳನ ಮಗನ ಬೇಡಿದಾತನೊಬ್ಬ ಗಣೇಶ್ವರನು;
        ಕಾಮದಹನವ ಮಾಡಿದಾತನೊಬ್ಬ ಗಣೇಶ್ವರನು;
        ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕಿ ಆಡುವಲ್ಲಿ
        ನೀಲಕಂಠನೆಂಬಾತನೊಬ್ಬ ಗಣೇಶ್ವರನು.
        ಇವರೆಲ್ಲರು ನಮ್ಮ ಗುಹೇಶ್ವರ ಲಿಂಗದಲ್ಲಿ ಅಡಗಿಪ್ಪರು. (ಅಲ್ಲಮಪ್ರಭುಗಳು)

  24. sandeep parma

    darga sir , amaresh avara comment nodata iddare sutti balasi ene no matadta iddare . so ignore the comments

    • ಸಹನಾ

      uttara gottilladaga innenu maadakkaagiutte ?

      • jayateerth joshi

        Nimmanthavarige uttara koduvadakkintha summaniruvade vasi

    • Amaresh

      ಸಾರ್ ಸಂದೀಪ್, ನಾನು ಸುತ್ತಿ ಬಳಸಿ ಏನನ್ನೂ ಹೇಳುತ್ತಿಲ್ಲ. ನೇರವಾಗಿಯೇ ಹೇಳಿದ್ದೇನೆ. ಈಗ ಮತ್ತೊಮ್ಮೆ ಹೇಳುತ್ತೇನೆ ಕೇಳಿ: ರಂಜಾನ್ ದರ್ಗಾ ಅವರು ತಮ್ಮ ಐಡಿಯಾಲಾಜಿಗೆ ವಚನಗಳನ್ನೂ ವಚನಕಾರರನ್ನೂ ಫಿಟ್ ಮಾಡಿದ್ದಾರೆ. ಅದು ಬಲವಂತದ ಫಿಟ್ ಆಗಿರುವುದರಿಂದ ಅವರ ವಾದದಲ್ಲಿ ಹೊಡೆದು ಕಾಣುವ ತಪ್ಪುಗಳು, ವೈರುಧ್ಯಗಳು, ಆಭಾಸಗಳು ಇವೆ. ಇವೆಲ್ಲವನ್ನೂ ಅವಧಿಯ ಅನೇಕ ಓದುಗರು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಆದರೆ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ವಿನಯ ಹಾಗೂ intellectual honesty ದರ್ಗಾ ಅವರಲ್ಲಿ ಕಾಣುತ್ತಿಲ್ಲ. ಅವರು ಮನುಗುಮ್ಮ ಮೊದಲಾದ ಅವೇ ಹಳೆಯ ಪ್ರಗತಿಪರರ ಟಾಕ್ಟಿಕ್ಸ್ ಬಳಸಿ ಬಾಯಿ ಮುಚ್ಚಿಸುವ ಕೆಸರು ಎರಚುವ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲ ಬ್ರಾಹ್ಮಣ ನಿಂದನೆಗೆ ವಚನಗಳನ್ನು ಬಳಸಿಕೊಂಡಿದ್ದಾರೆ. ಇದನ್ನೆಲ್ಲಾ ನೋಡಿದಾಗ ಪ್ರಗತಿಪರ ಎಂದು ಪೋಸು ಕೊಡುವ ಜನರಿಗೆ ವಚನಗಳ ಬಗ್ಗೆ ಗೊತ್ತಿರುವುದು ಎಷ್ಟು ಹಾಗೂ ಶರಣ ಆಧ್ಯಾತ್ಮಿಕ ಸಂಪ್ರದಾಯದ ಬಗ್ಗೆ ಅವರಿಗಿರುವ ಶ್ರದ್ಧೆ ಎಷ್ಟು ಅಂತ ಅನುಮಾನ ಬರುತ್ತದೆ. ಪ್ರಗತಿಪರರು ಭಾವಿಸಿರುವ ಹಾಗೆ ಅವಧಿಯ ಓದುಗರು ಮೂರ್ಖರೇನಲ್ಲ. ಓದುಗರನ್ನು ಏಮಾರಿಸಿಬಹುದು ಅಂತ ಪ್ರಗತಿಪರರು ತಿಳಿದಿದ್ದರೆ ಅವರೇ ಮೂರ್ಖರಾಗುತ್ತಾರೆ!

      • Ramjan Darga

        ಅಮರೇಶ್ ಅವರೆ ನಾನು ಅನೇಕ ಬಾರಿ ಹೇಳಿದ್ದೇನೆ, ನನ್ನ ಲೇಖನದ ಸಾಲುಗಳನ್ನು ಉದ್ದರಿಸಿ ಪ್ರಶ್ನಿಸಿ ಎಂದು. ನೀವು ಏನನ್ನು ಸಾಧಿಸಬಯಸಿದ್ದೀರಿ?

  25. Amaresh

    ಸರ್, ನಿಮ್ಮ ಕಾಯಕದ ಹಿಂದಿನ ಶಕ್ತಿಗಳು ಯಾವುವು ಅಂತ ನನಗೂ ಗೊತ್ತಿದೆ. ಅದರ ಚರ್ಚೆ ಇಲ್ಲಿ ಬೇಕೇ?

  26. Amaresh

    ಸರ್, ವಸ್ತುನಿಷ್ಟ ಚರ್ಚೆ ತಮ್ಮಿಂದ ಸಾಧ್ಯವಿಲ್ಲ ಅಂತ ಹೇಳಿಬಿಡಿ, ಚರ್ಚೆ ನಿಲ್ಲಿಸುವ. ಅದು ಬಿಟ್ಟು ಸುಳ್ಳು ಆಪಾದನೆ ಮಾಡುವುದು ಸರಿಯೇ?

  27. veeresh joshi

    dear darga sir my sincere advise to you is there no use of your talent and knowledge in this artificially created group of person/persons(i think single person is posting in various names. their aim is already fixed one no use of wasting time and energy here by arguing with wrong person.
    please make a book of your articles. if anybody wish discuss it may be done in a open stage.

    • KrutiK

      ರಮಜಾನ್ ದರ್ಗಾ ಅವರು, ಓದುಗರ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸಲು ಪ್ರಯತ್ನಿಸುತ್ತಿದ್ದರೆ, ಇಲ್ಲಿ ಕೆಲವು ಜನ ಹಿಂಬಾಲಕರು, ದರ್ಗಾರಿಗೆ ಏನೋ ಉಪಕಾರ ಮಾಡುತ್ತಿರುವಂತೆ, ಅವರನ್ನು ಸುಮ್ಮನಿರಿಸಲು ಪ್ರಯತ್ನಿಸುತ್ತಿರುವುದೇಕೋ? ವಚನ ಸಾಹಿತ್ಯದ ಅಭಿಮಾನಿಯಾಗಿರುವ ನನಗೆ ಈ ಚರ್ಚೆಯಿಂದ ಅನೇಕ ಹೊಸ ವಿಷಯಗಳು ತಿಳಿದುಬಂದಿವೆ. ಅಷ್ಟರಮಟ್ಟಿಗೆ ಈ ಚರ್ಚೆ ಸಾರ್ಥಕವೇ ಸರಿ.
      ಅನ್ನಪೂರ್ಣ, ಸಹನಾ, Amaresh ಇವರೆಲ್ಲಾ ಯಾರಾದರೇನು? ಒಟ್ಟಿನಲ್ಲಿ, ತುಂಬಾ ತಿಳಿದವರು, ಓದಿಕೊಂಡವರು ಅನ್ನಿಸುತ್ತದೆ. ದಯವಿಟ್ಟು ಈ ಉಳಿದ ಜನರು, ತಮ್ಮಲ್ಲಿ ಹಂಚಿಕೊಳ್ಳುವಂತಹ ವಿಷಯ ಇದ್ದರೆ ಇಲ್ಲಿ ತಿಳಿಸಲಿ. ಇಲ್ಲ ಸುಮ್ಮನಿರಲೆಂದು ನಮ್ರ ವಿನಂತಿ. (A Reader from abroad)

      • jayateerth joshi

        Your ignorance and honesty is praiseworthy Mr. Krutik. But i am also reader from ABROAD. What these people in the fake id are doing is false dispositions. They dont hv any better work to do.

    • jayateerth joshi

      your group is also artificially created to put forth hollow arguments without sincere and genuine interst. The members in your group are also fake IDs. Else give their complete details

  28. Amaresh

    ವಸ್ತುನಿಷ್ಟ ಚರ್ಚೆ ತಮ್ಮಿಂದ ಸಾಧ್ಯವಿಲ್ಲ ಅಂತ ಹೇಳಿಬಿಡಿ, ಚರ್ಚೆ ನಿಲ್ಲಿಸುವ. No point in beating around the bush. That will please only your fanboys. A completely flawed argument can’t be salvaged by accusing the questioners of foreign money.

  29. Shrikant Swamy

    Mr Amaresh,Mr Umesh,Mr Joshi n Mss Annaporna,I caution you mind your writing,you not opposing Mr Darga you opposing Basava Tatva and mockerying Lingayata Religion sentiments if you continue like so we Basava followers and Lingayata held agitation against you and Register the case against provoking for violence and disturbing the peace of society,WHAT ABILITY YOU HAVING WRITING AGAINST BASAVADI SHARANAS YOU FELLOW ONLY DISTROYING INDIAN CULTURE.you all not original Indians you are Aryans came from German and belongs Hittler Jeans. Basava written Vachanas against BRAHAMANAS blind belief and discrimination of cast and gender,You Mss Annaporana being a woman how you opposing Basava Tatva who is given rights woman,Brahmanism is not respected woman than only Basava started struggle,Annaporana you are woman or Giant who openly opposing Basava.Mr Darga is Literature he is explaining the what Basava written,Vachanas not like poem or story or script,these are promised by vachanakar what they said they followed and written,this not like you people mythological Birds story or self cooked story,the Avadhi is not a common site we all following it,DONT DARE TO COMMENTS ON LINGAYATA OR BASAVANNA OR SHARANAS,otherwise we teach lesson.

    • ಸಹನಾ

      Mr. Shrikant Swamy your beloved Ranjan Darga sir says in his comment (see below): “ಬಹುಪಾಲು ಲಿಂಗಾಯತರ ನಾಲಗೆ ಮೇಲೆ ಬಸವಣ್ಣ ಇದ್ದರೂ ತಲೆಯಲ್ಲಿ ಮನು ಮನೆ ಮಾಡಿಕೊಂಡಿದ್ದಾನೆ” Do you agree with him? Read the debate carefully. No body opposing ‘BASAVA TATVA” but Ranjan Darga himself doing it by misinterpreting Vacanas with his Semitic Ideology. If you want to rescue the BASAVA TATVA better you understand Mr. Darga sir’s Distortions and Manipulations of VACANAs to suit his semetic ideology. Other wise, its pity, you cannot do it. So, let us do it. (your above comments on critics of MR Darga already shows how you are already poisoned by this Semitic Ideology. Basava tatva never appreciate such intolerance and violence against jnanamanthana. Remember how sharanas involved in deeper discussion in the ‘Anubhavamantapa’ about ‘Shiva saayujya’

    • Amaresh

      Dear Shrikant Swamy, I have neither opposed nor endorsing Basava tatva. I’ve not made a single comment against it or in favor of it. I have only exposed the flaws in Ranjan Darga’s argumentation and protested against peddling Semitic ideology in the name of Basava tatva. If you have followed the debate carefully, you should be cautioning not me but Ranjan Darga for intentional distortion of Basava tatva. He has made outrageous statements against Lingayats (for instance, most Lingayats are manuvadis), Brahmins and many spiritual traditions of India. Not only him, you have also made outrageous statements (by attributing hitler’s genes to me). But I won’t threaten to take either Darga or you to court, because I believe in samvaada. I try to make sense to you both by engaging in a discussion with you. So stop threatening to teach me a lesson. It is you who needs some education in decency and civil behavior.

  30. Shrikant Swamy

    Mr Amaresh and Manus Group,don’t fire in between Mr Darga n Lingayata you fellows doing same things from centuries,what Mr Darga written that some Lingayata not following Basava tatva they following Vaidika that TRUE,homa-Havana,yaga-yagnya not in Lingayata but some people like Mr Yediyurappa Ex C.M following Vaidika and practices the yaga- yagnya,Homa-Havana. So Mr Darga showing us right paths n practices of Basava tatva,you fellow attacking him by group,Mr Umesh n Mr Joshi expressed all comments are Mr Dargas only creating falls ID,how you attacking Mr Darga is well reputed person worked for media more than four decades how he creat fake ID,this is my original ID come on comment me. What ability you having critise Basava Tatva n Lingayata religion,all world accepted this is a modern Religion and Independent Religion not a part of Hindu Religion. Mind your don’t dare to comments on Basavadi Sharanas and Lingayata Religion. I request you all follow the Basavadi Sharanas preaching,Vachanas and teaching you get the peace in life. Thanks

    • Amaresh

      Hello Mr. Shrikant Swamy, this is a place for healthy debate on the motives of Vachanas. This is not a place for threatening people like what you have been doing. Please refrain from posting junk messages if you can’t speak in a civilized language.

  31. Shrikant Swamy

    Dear Amaresh,I not suppose to learn from you civilize manner,I am follower of Basava tatva,civil engineer,my father was freedom fighter,reputed social worker,and state vice president of Janata Dal secular youth cell. First mind your business how you attacking on Basava Tatva,he given modern religion to world by democratically,none of the religion formed like this Democratically,there are 770 members of all casts including woman in Basavas Anubhava mantap,they all given suggestions to form religion through VACHANAS,they first placed vachanas in Anubhava mantap all members discussed and endorsed than that passed,so you all study open mindedly BASAVADI SHARANAS VACHANA SAHITYA learn how to lead life style,that gives valuable thinking which we not have. Please use Avadhi for good things,RSS given good site for discussion,actually I am not having good views about RSS being my father was belong to RSS,he learn Bomb making in time of freedom fight from this group,when they attached with political party BJP my also came out so I also fade up. Now a days become social to upheld the Indian culture respecting all religion and all cast people. You fellow misusing this site why you teasing only Basava tatva and Lingayata religion not Muslim or Christian.They are openly forcefully converting Tribal Hindus to christian,are you having knowledge about it?are you fellow opposed it.Mr Darga being a Muslim studied Veda,Upanishattu,Manushastra,Geeta and Vachana shastra,and fully attached with Basava Tatva and writing the books about Sharanas,you must appreciate him. You proud it Basava is Indian Nationalist loved our culture,loved our language KANNADA,some custom he followed those are from Indian society like Vibhuti,rudraksha,Panchi,prasada,padoudaka and etc,you proud about him he given MODERN THINKING AND MODERN RELIGION to us,if all respect to his thinking no conversation will happen in India.Sorry I regret if you feel bad,but I not tolerate comments on Basava,again I request you respect the Basava Tatva and Lingayata religion,follow his teachings get peace in life,because this is part of Indian society.

    • Amaresh

      ಮಾನ್ಯ ಶ್ರೀಕಂಠ ಸ್ವಾಮಿಗಳೇ, ತಾವು ಸಿವಿಲ್ ಇಂಜಿನಿಯರ್ ಆದರೇನು ಜನತಾದಳ ಪಕ್ಷದ ಯುವ ಪಡೆಯ ಉಪಾಧ್ಯಕ್ಷರಾದರೇನು? ಇಲ್ಲಿ ನಡೆಯುತ್ತಿರುವ ಚರ್ಚೆಗೆ ತಮ್ಮ ಕೊಡುಗೆ ಏನು ಎಂಬುದಷ್ಟೇ ಮುಖ್ಯ. ಇಲ್ಲಿ ಪ್ರಾಜ್ಞರಾದ ಓದುಗರು ಏನನ್ನು ಹೇಳಿದ್ದಾರೆ, ಏತಕ್ಕೆ ರಂಜಾನ್ ದರ್ಗಾ ಅವರ ವಾದವನ್ನು ವಿರೋಧಿಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವ ಕನಿಷ್ಠ ಸೌಜನ್ಯ ಕೂಡ ತೋರಿಸದ ತಾವು ಬಸವ ತತ್ವದ ಮಾಲೀಕರು ಎಂಬ ರೀತಿಯಲ್ಲಿ ವರ್ತಿಸುತ್ತಿರುವುದು ಖೇದನೀಯ ಹಾಗೂ ಖಂಡನೀಯ. ತಮ್ಮ ಬೆದರಿಕೆಯ ಕಮೆಂಟುಗಳನ್ನು ಬಸವ ತತ್ವ ಖಂಡಿತ ಸಹಿಸುವುದಿಲ್ಲ. ಇಷ್ಟಾಗಿಯೂ ತಾವು ನನಗೇಕೆ ಬೆದರಿಕೆ ಹಾಕುತ್ತಿದ್ದೀರಿ? ನಾನೆಲ್ಲಿ ಬಸವ ತತ್ವವನ್ನು ತಿರಸ್ಕರಿಸಿದೆ?! ತಮ್ಮ ಹಾಗೆ ನಾನು ಯಾರಿಗೆ ಬೆದರಿಕೆ ಹಾಕಿದ್ದೇನೆ?! ಬೆದರಿಕೆ ಹಾಕುವ ಗೂಂಡ ಪ್ರವೃತ್ತಿ ಬಿಸಾಡಿ ವೈಚಾರಿಕವಾಗಿ ಚರ್ಚೆ ಮಾಡಲು ಬನ್ನಿ.

    • ಕೊನಿಕಾ

      ಶ್ರೀಕಂಠ ಸ್ವಾಮಿಗಳು ಕನ್ನಡದಲ್ಲೇ ತಮ್ಮ ಎಲ್ಲಾ ಅಭಿಪ್ರಾಯಗಳನ್ನು ಅಭಿವ್ಯಕ್ತಿಸಿದರೆ ಚೆನ್ನು. ಬಸವಣ್ಣನವರೇ ಸಂಸ್ಕೃತದ ಹಂಗು ಬೇಡ ಅಂತ ಆಡು ಭಾಷೆ ಕನ್ನಡದಲ್ಲಿ ವಚನಾಮೃತವನ್ನು ಸುರಿಸಿದರು. ಅವರ ಅನುಯಾಯಿಗಳಾದ ಶ್ರೀಕಂಠ ಸ್ವಾಮಿಗಳಿಗೇಕೆ ಆಂಗ್ಲ ಭಾಷೆಯ ಹಂಗು?

      • Prabhanjan Bhagwat

        Basavanna was against Sanskrit. But he never said not to use English. You show the vachana where he has said not to use English and prove it logically. There is no logic in ur argument

  32. Amaresh

    ದರ್ಗಾ ಸರ್, ತಮ್ಮ ಅಭಿಮಾನಿಗಳಲ್ಲಿ ಒಬ್ಬರಾದ ನಮ್ಮ ಶ್ರೀಕಂಠ ಸ್ವಾಮಿಗಳು “why you teasing only Basava tatva and Lingayata religion not Muslim or Christian. They are openly forcefully converting Tribal Hindus to christian,are you having knowledge about it?are you fellow opposed it.” ಅಂತ ಕೇಳಿದ್ದಾರೆ. ಕ್ರೈಸ್ತರು ನಮ್ಮ ದೇಶದ ಬುಡಕಟ್ಟು ಜನರನ್ನು ಬಲವಂತದಿಂದ ಕ್ರಿಶ್ಚಿಯನ್ ಮತಕ್ಕೆ ಸೇರಿಸುತ್ತಿದ್ದರೆಂದೂ ಅದನ್ನು ವಿರೋಧಿಸಬೇಕೆಂದೂ ಹೇಳಿದ್ದಾರೆ. ಶ್ರೀಕಂಠ ಸ್ವಾಮಿಗಳ ಈ ಧೋರಣೆ ತಮ್ಮದೂ ಆಗಿದೆಯ? ತಾವು ಅವರು ಹೇಳಿದ್ದನ್ನು ಸಮರ್ಥಿಸುತ್ತೀರ?

    • Amaresh

      Dargaji has remained silent on this issue too implicitly supporting Shrikant Swamy’s approach towards conversions.

  33. ವಿಶ್ವಾರಾಧ್ಯ ಸತ್ಯಂಪೇಟೆ

    ಅವಧಿಯ ಬಳಗಕ್ಕೆ
    ಹೃತ್ಪೂರ್ವಕ ನಮಸ್ಕಾರಗಳು,
    ಶ್ರೀ ರಂಜಾನ್ ದರ್ಗಾ ಅವರ ಲೇಖನ ಸರಣಿಯನ್ನು ಪ್ರಕಟಿಸಿ ತುಂಬಾ ಉಪಕಾರವನ್ನು ಮಾಡಿದ್ದೀರಿ. ಇದಕ್ಕೆ ನಿಮಗೆ ನಾನು ಮೊದಲು ಋಣಿಯಾಗಿದ್ದೇನೆ. ಬಸವ ಚಳುವಳಿಗೆ ತೀರಾ ಹತ್ತಿರವಾದ ಆಶಯಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಂಡಿರುವ ರಂಜಾನ್ ದರ್ಗಾ ಅವರನ್ನೂ ತಮ್ಮ ಅವಧಿಯ ಮೂಲಕ ನಾನು ಅಭಿನಂದಿಸಲು ಹರ್ಷಿಸುತ್ತೇನೆ. ಬಸವಾದಿ ಶರಣರು ಬರುವುದಕ್ಕಿಂತ ಪೂರ್ವದಲ್ಲಿ ನಮ್ಮ ಸಮಾಜ ಎಷ್ಟೊಂದು ಗಬ್ಬೆದ್ದು ನಾರುತ್ತಿತ್ತು. ಆ ನಾರುವಿಕೆಗೆ ಕಾರಣಗಳು ಏನು ? ಯಾರು ? ಎಂಬುದನ್ನು ಬಸವಾದಿ ಶರಣರು ಅದನ್ನು ಅತ್ಯಂತ ಖಚಿತವಾಗಿಯೇ ಹೇಳಿದ್ದಾರೆ. ಅವರು ಬರುವುದಕ್ಕಿಂತ ಪೂರ್ವದಲ್ಲಿ ಜಾತಿಯ ವ್ಯವಸ್ಥೆ ತಾಂಡವ ನೃತ್ಯ ಮಾಡುತ್ತಿತ್ತು. ಮೇಲು-ಕೀಳುಗಳಿದ್ವವು. ಬಡವ- ಬಲ್ಲಿದ ಎಂಬ ತರತಮವಾದ ಭೇದಗಳು ಸಾಕಷ್ಟಿದ್ದವು. ಇದೆಲ್ಲಕ್ಕಿಂತ ಮುಖ್ಯವಾಗಿ ದುಡಿದು ಉಣ್ಣುವವ ಈ ಕುತಂತ್ರಿಗಳ ಕಣ್ಣಲ್ಲಿ ಶೂದ್ರನಾಗಿದ್ದ. ಮೈಮುರಿದು ದುಡಿಯದೆ ಕುಂತಲ್ಲಿಯೇ ಕುಂತು ಮೈಬಾಯಿಸಿಕೊಂಡು ರಾಜನನ್ನು ಅಕ್ಷರಶಃ ಪೋತರಾಜನಂತೆ ಆಡಿಸುತ್ತಿದ್ದ ಆಸ್ಥಾನ ಪಂಡಿತೋತ್ತಮರು ದೊಡ್ಡವರಾಗಿ, ಮೇಲ್ಜಾತಿಯವರಾಗಿ ಕಾಣಿಸುತ್ತಿದ್ದರು. ಅವರು ಕರುಣಿಸಿದರೆ ಮಾತ್ರ ಅಥವಾ ಅವರ ಸೇವೆ ಮಾಡಿದರೆ ಮಾತ್ರ ಸ್ವರ್ಗಕ್ಕೆ ಕಳಿಸುವ ಬಂಡಲ ಮಾತುಗಳಿಂದ ಜನತೆಯನ್ನು ದಿಶಾಬೂಲ್ ಗೊಳಿಸಿದ್ದರು. ಇಂಥವರ ಬುಡಕ್ಕೆ ಬಸವಣ್ಣನವರು ಇಟ್ಟು ಸ್ಪೋಟಿಸಿದ ಬಾಂಬ್ ಗೆ ಕಳ್ಳರ ಕೂಟವೆಲ್ಲ ಛಿದ್ರವಿಚಿದ್ರವಾಗಿ ಸಿಡಿದು ಹೋಯಿತು. ಈ ಅಂಶಗಳನ್ನು ಜನಸಾಮಾನ್ಯರೆಲ್ಲ ಅರಿಯುವಂತೆ ತಿಳಿಸಿದ ರಂಜಾನ್ ದರ್ಗಾ ಅವರಿಗೆ ಕೃತಜ್ಞತೆಯಿಂದ ನೆನೆಯುತ್ತೇನೆ. ಇನ್ನು ಕೆಲವರು ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂದು ಅವರ ವಿಚಾರಗಳಲ್ಲಿ ತಪ್ಪುಗಳನ್ನು ಹುಡುಕಲು ಹೋಗಿ ತಾವು ಯಾವುದರಿಂದ ನಿರ್ಮಾಣಗೊಂಡವರು ಎಂದು ತೋರಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲವೆನಿಸುತ್ತದೆ. ಹಾಗಂತ ಚರ್ಚೆಯನ್ನು ಮಾಡಲೇ ಬಾರದು ಎಂದು ನಾನು ಹೇಳುವುದಿಲ್ಲ. ಆದರೆ ಕೆಲವರು ನೀವು ಎಷ್ಟೇ ವಾಸ್ತವಿಕ ಸಂಗತಿಗಳನ್ನು ತಿಳಿಸಲು ಯತ್ನಿಸಿದರೂ ಅವರು ಮಾತ್ರ ವಿತಂಡವಾದಿಗಳಾಗಿರುತ್ತಾರೆ. ಇವರಿಗೆ ಹೇಗೆ ತಿಳಿಹೇಳುವುದು ? ಆದ್ದರಿಂದಲೇ ಇರಬೇಕು ಸ್ವತಃ ಬಸವಣ್ಣನವರು ಕೆಲವರ ಕಂಡರೆ ಅಂಜುವೆ. ಕೆಲರ ಕಂಡರೆ ಓಸರಿಸುವೆ. ಕೆಲರ ಕಂಡರೆ ನೆಲನ ಬಿಟ್ಟೊಡುವೆ. ಓಡಿದೆನೆಂಬ ಭಂಗ ಬಂದಡೆ ಬರಲಿ ಎಂದು ಹೇಳಿದ್ದಾರೆ. 0 ವಿಶ್ವಾರಾಧ್ಯ ಸತ್ಯಂಪೇಟೆ ಅಧ್ಯಕ್ಷರು ಬಸವ ಮಾರ್ಗ ಪತ್ರಿಷ್ಠಾನ ಸತ್ಯಂಪೇಟೆ ಶಹಾಪುರ – ಯಾದಗಿರಿ (ಜಿಲ್ಲೆ ) 9480161315

    • Amaresh

      ಈ ವಿಶ್ವಾರಾಧ್ಯ ಸತ್ಯಂಪೇಟೆ ಅವರು ಅಗ್ನಿ ಅಂಕುರ ಎಂಬ ಬ್ಲಾಗು ಬರೆಯುತ್ತಾರೆ. ಅಲ್ಲಿ ಒಂದು ಬರಹದಲ್ಲಿ (ನೋಡಿ: http://agniankur.blogspot.in/2011/07/blog-post.html) “ಮಠಾಧೀಶರೆಲ್ಲ ಆತ್ಮವಂಚನೆಯ ಬಾಳು ಬದುಕುತ್ತಿದ್ದಾರೆ. ಹುಸಿ ಬ್ರಹ್ಮಚರ್ಯಕ್ಕೆ ಜೋತುಬಿದ್ದ ಲಿಂಗಾಯತ ಮಠಾಧೀಶರುಗಳೆಲ್ಲ ತಮ್ಮ ಮಠಗಳಲ್ಲಿ ಅನಧಿಕೃತವಾಗಿ ಹೆಂಡತಿಯರನ್ನು ಮಕ್ಕಳನ್ನು ಹೊಂದಿದ್ದಾರೆ” ಅಂತ ಹೇಳಿದ್ದರು . ಮಾನ್ಯ ರಂಜಾನ್ ದರ್ಗಾ ಅವರು ವಿಶ್ವಾರಾಧ್ಯ ಸತ್ಯಂಪೇಟೆ ಅವರ ಈ ಅಭಿಪ್ರಾಯದ ಬಗ್ಗೆ ಏನನ್ನುತ್ತಾರೆ?

      • Amaresh

        Dargaji’s silence on Vishwaradhya’s sweeping statement on Lingayat swamijis raises doubt that he supports that view. So Dargaji should come open on this issue and clarify. Does he agree with Vishwaradhya or not?

        • Ramjan Darga

          ಅಮರೇಶ್, ಅವಧಿಯಲ್ಲಿ ನಾನು ಬರೆದದ್ದು ಓದಿಲ್ಲವೆ? ಬಸವಧರ್ಮದಲ್ಲಿ ಗುಡಿಗಳಿಲ್ಲ, ಮೂರ್ತಿಗಳಿಲ್ಲ, ಮಠಗಳಿಲ್ಲ ಮತ್ತು ಕಾವಿ ಬಟ್ಟೆಯ ಸ್ವಾಮಿಗಳಿಲ್ಲ. ಇಲ್ಲಿ ಯಾರ ಪಾದಕ್ಕೂ ಅಡ್ಡಬೀಳಬೇಕಿಲ್ಲ, ಯಾರ ಪಾದದ ನೀರನ್ನೂ ಕುಡಿಯಬೇಕಿಲ್ಲ. ಲಿಂಗಕ್ಕೆ ಮಜ್ಜನಕ್ಕೆರೆದುದು ಪಾದೋದಕ. ಇದು ದುಡಿಯುವವರ ಧರ್ಮ. ಇಲ್ಲಿ ದೇವರಿಗೂ ಕಾಯಕವಿದೆ. ಅದುವೆ ಜಗನ್ನಿಯಾಮೆಕನ ಕಾಯಕ.

        • Gopalakrishna Pandit

          Mr. Amaresh Whether Darga sir supports him or not what is it for you. First u stop doing cunning tricks like these.

      • ವಿಶ್ವಾರಾಧ್ಯ ಸತ್ಯಂಪೇಟೆ

        ಅಮರೇಶ ಅವರಿಗೆ,
        ನಾನು ಈ ಹಿಂದೆ ಅಗ್ನಿ ಅಂಕುರ ಎಂಬ ಬ್ಲಾಗ್ ನಲ್ಲಿ ಬರೆದದ್ದನ್ನು ನಾನು ಇಂದಿಗೂ ಒಪ್ಪಿಕೊಳ್ಳುತ್ತೇನೆ. ಮಠಾಧೀಶರನ್ನು ಹಾಗೂ ಇಂದಿನ ಕರ್ಮಠ ಲಿಂಗಾಯತರನ್ನು ನೋಡಿ ಬಸವಾದಿ ಶರಣರನ್ನು ಅಳೆಯಲು ಹೋಗಬೇಡಿ. ಇಂದಿನ ಬಹುತೇಕ ಲಿಂಗಾಯತರು ಟೆನೆಂಟಿಗೆ ಬಂದವರು ಮಾತ್ರ.

  34. Shivshanker Cheral

    *ಬಸವಣ್ಣ ಸವಸ 1/714
    ಅಣ್ಣ, ತಮ್ಮ, ಹೆತ್ತಯ್ಯ ಗೋತ್ರದವರಾದಡೆನು?
    ಲಿಂಗಸಾಹಿತ್ಯರಲ್ಲದವರ ಎನ್ನವರೆನ್ನೆನಯ್ಯಾ,
    ನಂಟುಭಕ್ತಿ ನಾಯಕ ನರಕ,
    ಕೂಡಲಸಂಗಮದೇವ
    *ಬಸವಣ್ಣ ಸವಸ 1/718
    ಆವ ಕುಲವಾದಡೇನು? ಶಿವಲಿಂಗವಿದ್ದವನೆ ಕುಲಜನು,
    ಕುಲವನರಸುವರೆ ಶರಣರಲ್ಲಿ, ಜಾತಿಸಂಕರನಾದ ಬಳಿಕ?
    ಶಿವಧರ್ಮಕುಲೇಜಾತಃ ಪುನರ್ಜನ್ಮ ವಿವರ್ಜಜಿತಃ !
    ಉಮಾ ಮಾತಾ ಪಿತಾ ರುದ್ರ ಐಶ್ವರಂ ಕುಮೇವಚ !! ಎಂದುದಾಗಿ,
    ಒಕ್ಕುದಕೊಂಬೆನವರಲ್ಲಿ. ಕೂಸ ಕೊಡುವೆ,
    ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣನು
    *ಬಸವಣ್ಣ ಸವಸ1/349
    ಅಪ್ಪನು ನಮ್ಮ ಮಾದಾರ ಚೆನ್ನಯ್ಯ,
    ಬೊಪ್ಪನು ನಮ್ಮ ಡೊಹರ ಕಕ್ಕಯ್ಯ,
    ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,
    ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
    ಎನ್ನನೇತಕ್ಕರಿಯಿರಿ,ಕೂಡಲಸಂಗಯ್ಯ?
    *ಬಸವಣ್ಣ ಸವಸ1/888
    ಸೆಟ್ಟಿಯೆಂಬೆನೆ ಸಿರಿಯಾಳನ?
    ಮಡಿವಾಳನೆಂಬೆನೆ ಮಾಚಯ್ಯನ?
    ಡೋಹರನೆಂಬೆನೆ ಕಕ್ಕಯ್ಯನ?
    ಮಾದಾರನೆಂಬೆನೆ ಚೆನ್ನಯ್ಯನ?
    ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ.
    *ಬಸವಣ್ಣ ಸವಸ1/595
    ಜಾತಿವಿಡಿದು ಸೂತಕವನರಸುವೆ
    ಜ್ಯೋತಿವಿಡಿದು ಕತ್ತಲೆಯನರಸುವೆ!
    ಇದೇಕೊ ಮರುಳುಮಾನವಾ? ಜಾತಿಯಲ್ಲಿ ಅಧಿಕನೆಂಬೆ!
    ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ?
    ‘ಭಕ್ತನೆ ಶಿಖಾಮಣಿ’ ಎಂದುದು ವಚನ,
    ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು,
    ಕೆಡಬೇಡ ಮಾನವಾ.
    *ಬಸವಣ್ಣ ಸವಸ1/62
    ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯಾ
    ಇವ ನಮ್ಮವ, ಇವ ನಮ್ಮವ, ಇವ ನಮ್ಮವೆಂದೆನಿಸಯ್ಯಾ
    ಕೂಡಲಸಂಗಮದೇವ
    ನಿಮ್ಮ ಮನೆಯ ಮಗನೆಂದೊನಸಯ್ಯಾ
    *ಬಸವಣ್ಣ ಸವಸ1/770
    ಹೊಲೆಯುಂಟೆ ಲಿಂಗವಿದ್ದಡೆಯಲ್ಲಿ?
    ಕುಲವುಂಟೆ ಜಂಗಮವಿದ್ದಡೆಯಲ್ಲಿ?
    ಎಂಜಲುಂಟೆ ಪ್ರಸಾದವಿದ್ದಡೆಯಲ್ಲಿ?
    ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ.
    ನಿಷ್ಕಳಂಕ ನಿಜೈಕ್ಯ ತ್ರಿವಿಧನಿರ್ಣಯ,
    ಕೂಡಲಸಂಗಮದೇವಾ, ನಿಮ್ಮ ಶರಣರಿಗಿಲ್ಲದಿಲ್ಲ.
    ಕಾಸಿ ಕಮ್ಮಾರನಾದ, ಬಿಸಿ ಮಡಿವಾಳನಾದ
    ಹಾಸನಿಕ್ಕಿ ಸಾಲಿಗನಾದ ವೇದವಣೊದಿ ಹಾರವನಾದ
    ಕರ್ಣನಲ್ಲಿ ಜನಿಸಿದವರುಂಟೆ ಜಗದೋಳಗೆ?
    ಇದು ಕಾರಣ ಕೂಡಲಸಂಗಮದೆವಾ
    ಲಿಂಗಸ್ಥಲವನರಿದವನೇ ಕುಲಜನು!!
    *ಬಸವಣ್ಣ ಸವಸ1/888
    ಸೆಟ್ಟಿಯೆಂಬೆನೆ ಸಿರಿಯಾಳನ?
    ಮಡಿವಾಳನೆಂಬೆನೆ ಮಾಚಯ್ಯನ?
    ಡೋಹರನೆಂಬೆನೆ ಕಕ್ಕಯ್ಯನ?
    ಮಾದಾರನೆಂಬೆನೆ ಚೆನ್ನಯ್ಯನ?
    ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ.
    *ಬಸವಣ್ಣ ಸವಸ1/595
    ಜಾತಿವಿಡಿದು ಸೂತಕವನರಸುವೆ
    ಜ್ಯೋತಿವಿಡಿದು ಕತ್ತಲೆಯನರಸುವೆ!
    ಇದೇಕೊ ಮರುಳುಮಾನವಾ? ಜಾತಿಯಲ್ಲಿ ಅಧಿಕನೆಂಬೆ!
    ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ?
    ‘ಭಕ್ತನೆ ಶಿಖಾಮಣಿ’ ಎಂದುದು ವಚನ,
    ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು,
    ಕೆಡಬೇಡ ಮಾನವಾ.
    ಜ್ಙಾನದ ಬಲದಿಂದ ಅಜ್ಙಾನದ ಕೇಡು ನೋಡಯ್ಯ
    ಜ್ಯೋತೀಯ ಬಲದಿಂದ ತಮಂಧದ ಕೇಡು ನೋಡಯ್ಯಾ
    ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ
    ನಮ್ಮ ಕೂಡಲ ಸಂಗನ ಶರಣರ ಅನುಭಾವದಿಂದ ಭವದ ಕೇಡು ನೋಡಯ್ಯಾ

    • Ramjan Darga

      ಶಿವಶಂಕರ ಅವರೆ, ನೀವು ನಿದ್ರಿಸುವವರನ್ನು ಎಬ್ಬಿಸಬಹುದು. ಕಳ್ಳನಿದ್ರೆ ಮಾಡುವವರನ್ನು ಎಬ್ಬಿಸಲು ಸಾಧ್ಯವೆ? ಕೋಣನ ಮುಂದೆ ಕಿನ್ನರಿ ಬಾರಿಸಿ ಪ್ರಯೋಜನವಿಲ್ಲ. ಜಾಣಗಿವುಡರು ಈ ಸಮಾಜವನ್ನು ಶತಶತಮಾನಗಳಿಂದ ಅಜ್ಞಾನದಲ್ಲಿಟ್ಟು ಅದರ ಲಾಭ ಪಡೆಯುತ್ತಲೇ ಬಂದಿದ್ದಾರೆ. ಇವರನ್ನು ಬಿಟ್ಟು ವಿರಕ್ತ ಮಠಾಧೀಶರನ್ನು ಎಚ್ಚರಿಸಲು ಪ್ರಯತ್ನಿಸಿ.
      ಬಸವಣ್ಣನವರು ಈ ಅನ್ಯಾಯದ ವಿರುದ್ಧ ಸಿಡಿದೆದ್ದರು. ಹೋರಾಡಿದರು. ಸಹಸ್ರ ಸಹಸ್ರ ಶರಣರು ಎಲ್ಲ ರೀತಿಯ ತ್ಯಾಗ ಮಾಡಿ ಬಸವ ತತ್ತ್ವವನ್ನು ಎತ್ತಿ ಹಿಡಿದರು. ಬಹುಪಾಲು ವಿರಕ್ತ ಮಠಾಧೀಶರಿಗೆ ಇದರ ಅರಿವಿದೆಯೆ? ಈ ಮಠಾಧೀಶರಿಗೆ ಇಳಕಲ್ ಅಪ್ಪಗಳಂಥ ಸ್ವಾಮೀಜಿಗಳ ಕಳಕಳಿ ಅರ್ಥವಾಗುವುದೆ? ಉದಾಸೀನ ಮಾಡಿದರೆ ಮುಂದಿನ 50 ವರ್ಷಗಳಲ್ಲಿ ಕಾಯಕಜೀವಿಗಳ ಧರ್ಮವಾದ ಬಸವಧರ್ಮ ನಮಗರಿವಿಲ್ಲದಂತೆಯೆ ಮನುಧರ್ಮದಲ್ಲಿ ಕರಗಿ ಹೋಗುವುದು. ಪರಿಸ್ಥಿತಿ ಹೀಗೇ ಮುಂದುವರಿದರೆ ಈಗಿನ ಲಿಂಗವಂತರ ಮಕ್ಕಳು 50 ವರ್ಷದವರಾದಾಗ, ಅವರ ಮೊಮ್ಮಕ್ಕಳ ಕೊರಳಲ್ಲಿ ಜಾತಿವ್ಯವಸ್ಥೆಗೆ ವಿರುದ್ಧವಾದ ಇಷ್ಟಲಿಂಗವಿರಲು ಸಾಧ್ಯವೆ? ಬುಹುಪಾಲು ವಿರಕ್ತ ಸ್ವಾಮಿಗಳು ಈ ಕಡೆ ಗಮನ ಹರಿಸಿದ್ದಾರೆಯೆ? ಸಮಗ್ರಕ್ರಾಂತಿಗೆ ಕರೆ ನೀಡುವ ಇಷ್ಟಲಿಂಗವು ಅನುಭವದ ಮೂಲಕ ಅನುಭಾವವನ್ನು ಪಡೆಯುವ ಸಾಧನವಾಗಿದೆ. ಅರಿವಿನ ಕುರುಹು ಆಗಿ ಬಸವಧರ್ಮ ಲಾಂಛನವೂ ಆಗಿದೆ.
      ಜಗತ್ತಿನ ಯಾವುದೇ ವ್ಯಕ್ತಿ ಅನೈತಿಕ ಸಂಬಂಧದಿಂದ ಜನಿಸಿದವನಿರಬಹುದು. ಕರಿಯನಿರಬಹುದು, ಬಿಳಿಯನಿರಬಹುದು, ಸ್ವದೇಶಿ ಇರಬಹುದು, ವಿದೇಶಿ ಇರಬಹುದು, ಎಂಥ ಪಾಪ ಕರ್ಮಿಯೇ ಇರಬಹುದು! ಒಮ್ಮೆ ಶರಣೆಂದು ಬಸವತತ್ತ್ವವನ್ನು ಒಪ್ಪಿದರೆ ಆತ ಇಷ್ಟಲಿಂಗ ದೀಕ್ಷೆಗೆ ಯೋಗ್ಯನಾಗುವನು. ಇದುವೆ ಬಸವಗುರು ಕಾರುಣ್ಯ. ಆತನು ತಿದ್ದಿಕೊಳ್ಳುವ ಅವಕಾಶವನ್ನು ಕೂಡ ಬಸವಣ್ಣನವರು ಕೊಟ್ಟಿದ್ದಾರೆ.
      ‘ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ,
      ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು
      ಅವರ ಲಿಂಗನೆಂಬೆ, ಸಂಗನೆಂಬೆ
      ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು.’
      ……….
      ‘ಎಲವೋ, ಎಲವೋ ಪಾಪಕರ್ಮವ ಮಾಡಿದವನೇ,
      ಎಲವೋ ಎಲವೂ ಬ್ರಹ್ಮಹತ್ಯವ ಮಾಡಿದವನೇ
      ಒಮ್ಮೆ ಶರಣೆನ್ನೆಲವೂ,
      ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವವು.’
      ……….
      ‘…..
      ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ
      ಕರ್ಮ ಹರಿಯದೊಡಾ ಪೂಜೆಯದೇಕೋ’
      ………..
      ಎರೆದಡೆ ನನೆಯದು, ಮರೆದಡೆ ಬಾಡದು
      ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ;
      ಕೂಡಲಸಂಗಮದೇವಾ ಜಂಗಮಕ್ಕೆರೆದಡೆ ಸ್ಥಾವರ ನನೆಯಿತ್ತು.’
      ಇಂಥ ವಚನಗಳ ಮೂಲಕ ಬಸವಣ್ಣನವರು ಮನುಷ್ಯನನ್ನು ಪಾಪ ಪ್ರಜ್ಞೆಯಿಂದ ಮುಕ್ತಗೊಳಿಸಿದರು. ಆತ ಬದಲಾವಣೆ ಹೊಂದಲು ಅವಕಾಶ ಕಲ್ಪಿಸಿದರು. ಆತನಿಗೆ ಒಳಲೋಕದ ಅರಿವು ಮೂಡಿಸಿದರು ಮತ್ತು ಹೊರಲೋಕದ ಪ್ರಜ್ಞೆ ಮೂಡಿಸಿದರು. ಜಂಗಮ ಎಂಬ ಸಮಾಜಸೇವೆಯೆ ನಿಜವಾದ ಪೂಜೆ ಎಂಬುದನ್ನು ತೋರಿಸಿಕೊಟ್ಟರು. ‘ಇನ್ನು ಜಂಗಮ (ಸಮಾಜ)ವೇ ಲಿಂಗವೆಂದು ನಂಬಿದೆ’ ಎಂದು ಘೋಷಿಸಿದರು.
      ವಿರಕ್ತ ಸ್ವಾಮಿಗಳು ಯುದ್ಧೋಪಾದಿಯಲ್ಲಿ ಬಸವಣ್ಣನವರ ಆಶಯಗಳನ್ನು ಲಿಂಗಾಯತರಿಗೆ ಮನವರಿಕೆ ಮಾಡಿಕೊಡುವಲ್ಲಿ ತಲ್ಲೀನರಾಗಬೇಕು.
      ಬೇರೆ ಧರ್ಮದವರು ಅವರ ಧರ್ಮದ ಪ್ರಕಾರ ಬದುಕಲಿ. ಆದರೆ ಬಸವಧರ್ಮದವರು ತಮ್ಮ ಧರ್ಮದ ಮಹತ್ವವನ್ನು ಅರಿತು ಆಚರಿಸುವುದು ಅವಶ್ಯವಾಗಿದೆ. ವರ್ಣವ್ಯವಸ್ಥೆಯಲ್ಲಿ ನಂಬಿಕೆ ಇಡುವುದು ಬ್ರಾಹ್ಮಣರ ಧರ್ಮಪಾಲನೆಯಾಗಿರಬಹುದು. ಅವರು ತಮ್ಮ ಧರ್ಮದ ಪ್ರಕಾರವೇ ಬದುಕುತ್ತಿದ್ದಾರೆ ಎಂದೇ ಭಾವಿಸೋಣ. ಅವರ ಬದುಕು ಅವರಿಗಿರಲಿ. ಆದರೆ ವಿರಕ್ತಮಠಗಳ ಬಹುಪಾಲು ಸ್ವಾಮಿಗಳು ತಮ್ಮ ಧರ್ಮ ಪಾಲನೆ ಮಾಡುವಂಥ ವಾತಾವರಣವನ್ನು ಲಿಂಗಾಯತ ಸಮಾಜದಲ್ಲಿ ಸೃಷ್ಟಿಸುವುದನ್ನು ಬಿಟ್ಟು ಐಹಿಕ ಅಭ್ಯುದಯದಲ್ಲೇ ತಲ್ಲೀನರಾದರೆ ಹೇಗೆ? ಸಹಜವಾಗಿಯೆ ಬುಲೆಟ್ ಪ್ರೋಫ್ ಕಾರ್ ಸ್ವಾಮಿ, ಬೆಂಜ್ ಕಾರ್ ಸ್ವಾಮಿ, ಎನೊವಾ ಕಾರ್ ಸ್ವಾಮಿ, ಅಂಬಾಸಡರ್ ಕಾರ್ ಸ್ವಾಮಿ ಮತ್ತು ಬಡ ಸ್ವಾಮಿಯಾಗಿದ್ದರೆ ಮಾರುತಿ 800 ಕಾರ್ ಸ್ವಾಮಿ ಎಂದು ಜನ ಹೇಳುವಂಥ ಪರಿಸ್ಥಿತಿ ಉಂಟಾಗುತ್ತಿದೆ ಎಂಬುದರ ಕಡೆಗೆ ಅವರು ಗಮನ ಹರಿಸುವುದು ಅವಶ್ಯವಾಗಿದೆ.
      ನಾಡಿನ ವಿರಕ್ತ ಮಠಗಳ ಸ್ವಾಮಿಗಳು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ “ಲಿಂಗಾಯತ ನಮ್ಮ ಸ್ವತಂತ್ರ ಧರ್ಮ, ಬಸವಣ್ಣ ನಮ್ಮ ಧರ್ಮಗುರು, ವಚನಗಳೇ ನಮ್ಮ ಧರ್ಮಗ್ರಂಥ, ಕನ್ನಡ ನಮ್ಮ ಧರ್ಮಭಾಷೆ ಮತ್ತು ಸಕಲ ಜೀವಾತ್ಮರಿಗೆ ಲೇಸನೇ ಬಯಸುವುದು ನಮ್ಮ ಧರ್ಮದ ಆಶಯ” ಎಂಬುದನ್ನು ಜಗತ್ತಿಗೆ ಸಾರಿ ಹೇಳಬೇಕಿದೆ. ವಿಶ್ವವನ್ನು ಎಲ್ಲ ಅನಿಷ್ಟಗಳಿಂದ ಪಾರು ಮಾಡುವ ಬಸವಧರ್ಮವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಲಿಂಗಾಯತನ ಮತ್ತು ಬಸವ ತತ್ತ್ವನಿಷ್ಠನ ಆದ್ಯ ಕರ್ತವ್ಯವಾಗಿದೆ.

      • Amaresh

        “ವರ್ಣವ್ಯವಸ್ಥೆಯಲ್ಲಿ ನಂಬಿಕೆ ಇಡುವುದು ಬ್ರಾಹ್ಮಣರ ಧರ್ಮಪಾಲನೆಯಾಗಿರಬಹುದು. ಅವರು ತಮ್ಮ ಧರ್ಮದ ಪ್ರಕಾರವೇ ಬದುಕುತ್ತಿದ್ದಾರೆ ಎಂದೇ ಭಾವಿಸೋಣ. ಅವರ ಬದುಕು ಅವರಿಗಿರಲಿ” idappa ati buddhivantike andare! eshtu jaanatanadinda brahmana nindane maadiddaare!

      • Amaresh

        You were saying that Vachanakaras had nothing to do with rudra. What is this line saying then?
        ಉಮಾ ಮಾತಾ ಪಿತಾ ರುದ್ರ ಐಶ್ವರಂ ಕುಮೇವಚ

        • Ramjan Darga

          ತಂದೆ ಇಲ್ಲದ, ತಾಯಿಯಿಲ್ಲದ
          ಹೆಸರಿಲ್ಲದ ಕುಲವಿಲ್ಲದ
          ಹುಟ್ಟಿಲ್ಲದ, ಹೊಂದಿಲ್ಲದ
          ಅಯೋನಿ ಸಂಭವ ನೀನಾದ ಕಾರಣ
          ನಿನ್ನ ನಾನು ನಿಃಕಲ ಲಿಂಗವೆಂದೆನಯ್ಯಾ
          ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ. (ತೋಂಟದ ಸಿದ್ಧಲಿಂಗ ಶಿವಯೋಗಿಗಳು)

          • Ramjan Darga

            ಅಮೃತವತಿ ಸೋಮಶಂಭುವಿಂಗೆ ಹುಟ್ಟಿದಾತ ಇಂದ್ರ;
            ಸತ್ಯ ಋಷಿ ಜ್ಯೇಷ್ಠಾದೇವಿಗೆ ಹುಟ್ಟಿದಾಗ ಬ್ರಹ್ಮ
            ವಸುದೇವ ದೇವಕಿಗೆ ಹುಟ್ಟಿದಾತ ವಿಷ್ಣು
            ನಾಭಿರಾಜ ಮರುತಾದೇವಿಗೆ ಹುಟ್ಟಿದಾತ ಅರುಹ
            ಇವರೆಲ್ಲರೂ ಯೋನಿಜರೆಂಬುದ ತ್ರೈಜಗ ಬಲ್ಲುದು
            ಉತ್ಪತ್ತಿ ಸ್ಥಿತಿ ಪ್ರಳಯಕ್ಕೆ ಹೊರಗಾದ ಕೂಡಲಸಂಗಮದೇವಂಗೆ
            ಮಾತಾಪಿತರುಳ್ಳಡೆ ಹೇಳಿರೋ. (ಬಸವಣ್ಣನವರು)

  35. Amaresh

    Dargaji, we were discussing Gandabherunda and then you disappeared from that discussion. Why? By jumping one thing to another what are you achieving?
    Amaresh says:
    July 16, 2013 at 9:23 pm
    This is about the gandabherunda vachana.it doesn’t admit Ranjan Darga’s interpretation. The vachana is drawing the attention of the reader to the fact that linga and jangama share the same body like the two heads of gandabherunda. It is saying that linga shouldn’t be favored over jangama. They share the same body and if one is disregarded, the other is also affected like poison fed into one mouth of gandabherunda. This is made explicit by the lines “ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ”. So the questions to ask here are:
    1. In what context is the Vachanakara making the above point?
    2. What does he mean when he says linga and jangama share the same body?
    Ranjan Darga is interpreting jangama as social life and linga as spiritual life (adhyatmic) to force fit social dimension to the vachana. Unfortunately for him, his attempt falls flat because it fails to see the context in which the Vachanakara makes the point on linga and jangama.
    ಸಹನಾ says:
    July 16, 2013 at 10:24 pm
    “ಜಂಗಮನು ಇವಕ್ಕೆ ಅತೀತನಾಗಿ ಇರುವನು. ಹಸಿವು ನೀರಡಿಕೆ ಪ್ರಾಣನ ಧರ್ಮಗಳು ; ಜ್ಞಾನ ಅಜ್ಞಾನಗಳು ಇನ್ನೂ ಸಾಧಕಾವಸ್ಥೆ ಯಲ್ಲಿರುವವನ ಲಕ್ಷಣಗಳು ನಿಜಜ್ಞಾನಿಯೂ ಸಿದ್ಧಪುರುಷನೂ ಆದ ಜಂಗಮನಿಗೆ ದೇಹ, ಪ್ರಾಣ, ಮನೋಧರ್ಮಗಳು ಕಾಡವು.
    ಆ ಭಕ್ತನು ಆಚಾರ ಸಂಪನ್ನನಾಗಿ ಅರವು-ಅನುಭಾವಗಳಿಂದ ಜಂಗಮ ಆಗುವನು”
    http://www.lingayatsite.com/LingayatBasics/Jangama.htm
    ಈ ಮೇಲಿನ ವಿವರಣೆಗಳನ್ನು ನೋಡಿದರೂ ವಚನಗಳಲ್ಲಿನ ‘ಜಂಗಮ’ ಪದ ಪ್ರಯೋಗವು ಆತ್ಮಸ್ವರೂಪಿ ಚೈತನ್ಯ ಎನ್ನುವ ಅರ್ಥ ಬರುತ್ತದೆ . ಹೀಗಾಗಿ ಜಂಗಮ=ಸಮಾಜ ಎಂಬರ್ಥದ ಸಮೀಕರಣವೇ ತಪ್ಪು. ಜಂಗಮ ಅಂದರೆ society ಅಲ್ಲ.
    ಇಲ್ಲಿರುವ ವಚನದಲ್ಲಿನ ಗಂಡಭೇರುಂಡ ಉಧಾಹರಣೆಯನ್ನು ಸೆಮಿಟಿಕ್ ರಿಲಿಜನ್ ಗಳಲ್ಲಿರುವ godly divine spiritual world and temporal human society ಎನ್ನುವ ಚೌಕಟ್ಟಿನಲ್ಲಿ ವಿವರಿಸುತ್ತಿದ್ದಾರೆ. ಯೂರೋಪಿನ ಇತಿಹಾಸ ಗೊತ್ತಿರುವ ದರ್ಗಾರವರಿಗೆ ಚರ್ಚ್ vs ಸ್ಟೇಟ್ ವಿವಾದ ಮತ್ತು ಅದರಲ್ಲಿನ ಸೈಂಟ್ ಆಗಸ್ಟೈನ್ ಹಾಗೂ ಥಾಮಸ್ ಅಕ್ವಿನಾಸ್ ರ ವಾದಗಳು ಗೊತ್ತಿರಬೇಕೆಂದು ಭಾವಿಸುವೆ. ಈ ಸೆಮೆಟಿಕ್ ಚೌಕಟ್ಟನ್ನು ಇಷ್ಟು ಸಡಿಲವಾಗಿ ಅವರು ವಚನಕಾರರ ಸಂಧರ್ಬದಲ್ಲಿ ಬಸುತ್ತಿರುವುದು ಆಶ್ಚರ್ಯವಾಗುತ್ತಿದೆ.

  36. Amaresh

    ಸರ್, ಈ ಹಿಂದೆ ನೀವು ಜನಸಾಮಾನ್ಯರ ತಲೆಯಲ್ಲಿ ಕರ್ಮ ಸಿದ್ಧಾಂತ ತುಂಬಿಕೊಂಡಿತ್ತು ಅಂತ ಹೇಳಿದ್ರಿ. ಈಗ “ಪುಣ್ಯ, ಪಾಪ ಶಬ್ದಗಳನ್ನು ಕರ್ಮಸಿದ್ಧಾಂತ ಕೂಸುಗಳಾಗಿ ಬಳಸಿಲ್ಲ. ದೈನಂದಿನ ಬದುಕಿನಲ್ಲಿರುವ ಶಬ್ದಗಳಾಗಿರುವುದರಿಂದ ಸಹಜವಾಗಿ ಬಳಸಿದ್ದಾರೆ. ಜನಭಾಷೆಯನ್ನು ಬಿಟ್ಟು ಏನನ್ನೂ ಹೇಳಲಿಕ್ಕಾಗದು” ಅಂತ ಹೇಳಿದ್ದೀರಿ. ಅಂದರೆ ಜನಸಾಮಾನ್ಯರ ತಲೆಯಲ್ಲಿ ತುಂಬಿರುವುದು ಕರ್ಮ ಸಿದ್ಧಾಂತವೇ ಆಗಿದ್ದರೂ ದೈನಂದಿನ ಬದುಕಿನಲ್ಲಿರುವ ಶಬ್ದಗಳಾಗಿರುವ ಪುಣ್ಯ ಪಾಪಗಳು ಕರ್ಮಸಿದ್ಧಾಂತ ಕೂಸುಗಲ್ಲ ಅಂತ ಆಯ್ತು. ಇದು ಯಂಗೆ ಸಾಧ್ಯ ವಸಿ ಯೋಳಿ ಸಾರ್!

  37. ಕಟ್ಟಿಮನಿ

    ಸರಿ ರಂಜಾನ್ ಸಾಬ್, ಬಸವಣ್ಣನವರ ಈ ಕೆಳಗಿನ ವಚನದಲ್ಲಿ “ಗಿರಿಜಾಮನೋವಲ್ಲಭ ಪರಮ ಕಾರುಣಿಕ | ನಮ್ಮ ಕೂಡಲಸಂಗಮದೇವ.” ಎಂಬ ಸಾಲುಗಳ ಅರ್ಥ ಏನು ಅಂತ ಹೇಳಿ. ಇಲ್ಲಿ ಗಿರಿಜಾ ಅಂದರೆ ಯಾರು? ಗಿರಿಜಾಮನೋವಲ್ಲಭ ಯಾರು? ಕೂಡಲಸಂಗಮದೇವರನ್ನು ಏಕೆ ಬಸವಣ್ಣನವರು ಗಿರಿಜಾಮನೋವಲ್ಲಭ ಅಂತ ಕರೆದಿದ್ದಾರೆ?
    ಋಣ ತಪ್ಪಿದ ಹೆಂಡಿರಲ್ಲಿ,
    ಗುಣ ತಪ್ಪಿದ ನಂಟರಲ್ಲಿ,
    ಜೀವವಿಲ್ಲದ ದೇಹದಲ್ಲಿ ಫಲವೇನೋ ?
    ಆಳ್ದನೊಲ್ಲದಾಳಿನಲ್ಲಿ,
    ಸಿರಿತೊಲಗಿದರಸಿನಲ್ಲಿ
    ವರವಿಲ್ಲದ ದೈವದಲ್ಲಿ ಫಲವೇನೋ ?
    ಕಳಿದ ಹೂವಿನಲ್ಲಿ ಕಂಪನು,
    ಉಳಿದ ಸೊಳೆಯಲ್ಲಿ ಪೆಂಪನು,
    ಕೊಳೆಚೆನೀರಿನಲ್ಲಿ ಗುಣ್ಪನರಸುವಿರಿ!
    ಮರುಳೆ, ವರಗುರು ವಿಶ್ವಕ್ಕೆಲ್ಲ
    ಗಿರಿಜಾಮನೋವಲ್ಲಭ ಪರಮ ಕಾರುಣಿಕ
    ನಮ್ಮ ಕೂಡಲಸಂಗಮದೇವ.

    • Anonymous

      ನನ್ನ ಲೇಖನವನ್ನು ಸರಿಯಾಗಿ ಓದಿರಿ. ವಚನಗಳು ಶಬ್ದಾರ್ಥವನ್ನು ಮಾತ್ರ ಹೊಂದಿಲ್ಲ. ಅವು ಲಕ್ಷಣಾರ್ಥ ಮತ್ತು ಧ್ವನ್ಯರ್ಥವನ್ನೂ ಒಳಗೊಂಡಿವೆ. ಧರ್ಮದ ಅಂಶಗಳನ್ನು ಮಾತ್ರ ಒಳಗೊಂಡಿಲ್ಲ. ಪುರಾಣ, ಸಾಹಿತ್ಯ ಮತ್ತು ಸಾರ್ವತ್ರಿಕ ಸತ್ಯದ ಅಂಶಗಳನ್ನೂ ಒಳಗೊಂಡಿವೆ. ಆ ಮೂಲಕ ನವ ಸಮಾಜ ನಿರ್ಮಾಣದ ಕಡೆಗೆ ಶರಣರು ಹೆಚ್ಚಿನ ಗಮನ ಹರಿಸಿದ್ದರು.
      ‘ಪಾರ್ವತಿ ಪರಶಿವನ ಸತಿಯೆಂಬ
      ಶಿವದ್ರೋಹಿಗಳು ನೀವು ಕೇಳಿರೆ’ ಎಂದು ಚನ್ನಬಸವಣ್ಣನವರು ಕೇಳಿದ್ದಾರೆ ಕಟ್ಟಿಮನಿ ರಾಯರೆ.
      ಅದೇ ರೀತಿ ‘ಹರಶಕ್ತಿಗಳಲ್ಲಿ ಹುಟ್ಟಿದ ಬೆನಕ ಭೈರವ ಷಣ್ಮುಖರ
      ಮಹಾಹರನ ಮಕ್ಕಳೆಂಬ ಪಾತಕಿ ನೀ ಕೇಳೋ’ ಎಂದು ಬಸವಣ್ಣನವರು ಹೇಳಿದ್ದಾರೆ.

  38. ಕಟ್ಟಿಮನಿ

    ದರ್ಗಾ ಸಾಬ್, ಪಾಪ ಪುಣ್ಯ ನರಕ ಸ್ವರ್ಗ ಎಲ್ಲ ಕರ್ಮಸಿದ್ಧಾಂತದ ಕೂಸುಗಳು. ಇವುಗಳಿಗೆ ಬಸವಣ್ಣ ಆದಿಯಾಗಿ ಶರನರೆಲ್ಲರೂ ನಿರಾಕರಿಸಿದರು ಅಂತ ಅಭಿಪ್ರಾಯ ಪಟ್ಟಿದ್ದೀರಿ. ಈ ಕೆಳಗಿನ ಬಸವಣ್ಣನವರ ವಚನದಲ್ಲಿ “ಒಂದಾಸೆಗೆ ಸಾಸಿರ ವರುಷ | ನರಕದಲದ್ದುವ ಕೂಡಲಸಂಗಮದೇವ” ಎಂಬ ಸಾಲುಗಳ ಅರ್ಥ ಏನು ಅಂತ ಹೇಳಿ.
    ನೋಡಲಾಗದು, ನುಡಿಸಲಾಗದು ಪರಸ್ತ್ರೀಯರ;
    ಬೇಡ ಕಾಣಿರೋ!
    ತಗರ ಬೆನ್ನಲಿ ಹರಿವ ಸೊಣಗನಂತೆ;
    ಬೇಡ ಕಾಣಿರೋ!
    ಒಂದಾಸೆಗೆ ಸಾಸಿರ ವರುಷ
    ನರಕದಲದ್ದುವ ಕೂಡಲಸಂಗಮದೇವ.

    • ಕಟ್ಟಿಮನಿ

      ತೀಕ್ಷ್ಣವಾದ ಪ್ರಶ್ನೆಗಳೆಲ್ಲಿ ಅಂತ ಕೇಳಿದ ದರ್ಗಾ ಈಗೆಲ್ಲಿ ಹೋದರು?

      • Anonymous

        ‘Brahmans have created a hell in India worse than the one created by Christians in medieval Europe.’ ಎಂದು ಕಾರ್ಲ್ ಮಾರ್ಕ್ಸ್ ಅವರು ಹೇಳಿದ್ದಾರೆ. ಇದರರ್ಥ ನಾಸ್ತಿಕವಾದಿಯಾದ ಅವರು ನರಕವನ್ನು ನಂಬಿದ್ದರು ಎಂದು ವಾದಿಸುವಿರಾ ಕಟ್ಟಿಮನಿ ರಾಯರೆ?
        Try to understand the idiom of a language.

      • Anonymous

        Look; I answered all questions. But you people are not answering my important questions. You people look at all my answers. They will end up with questions. Try to answer.

        • ಕಟ್ಟಿಮನಿ

          ಪ್ರಿಯ ದರ್ಗಾ ಅವ್ರೆ,
          ಅಂಬಿಗರ ಚೌಡಯ್ಯ ಎಂಬ ಅನುಭಾವಿ ಸಂತನ ಒಂದು ವಚನ ನಮ್ಮ ಪ್ರಗತಿಪರರಿಗೆ ಬಹಳ ಪ್ರಿಯವಾದದ್ದು. ಚೌಡಯ್ಯ ಈ ವಚನದಲ್ಲಿ ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವನ್ನು ಎಂಜಲು ಎಂದು ನಿರಾಕರಿಸಿದ್ದಾನೆ ಎಂದು ವೈದಿಕ ಸಂಪ್ರದಾಯಗಳ ಟೀಕೆ ಮಾಡುವಾಗೆಲ್ಲ ಹೇಳುತ್ತಿರುತ್ತಾರೆ. ಅವಧಿಯಲ್ಲಿ ನಮ್ಮ ರಂಜಾನ್ ದರ್ಗಾ ಅವರೂ ಕೂಡ ವೈದಿಕ ಸಂಪ್ರದಾಯಗಳನ್ನು ಟೀಕಿಸಲು ಈ ವಚನವನ್ನು ಬಳಸಿಕೊಂಡಿದ್ದಾರೆ. ಅನುಭಾವಿ ಸಂತನ ವಚನವನ್ನು ಮತ್ತೊಮ್ಮೆ ನೋಡೋಣ:
          ವೇದಂಗಳೆಲ್ಲ ಬ್ರಹ್ಮನೆಂಜಲು
          ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು
          ಆಗಮಂಗಳೆಲ್ಲ ರುದ್ರನೆಂಜಲು
          ಪುರಾಣಂಗಳೆಲ್ಲ ವಿಷ್ಣುವಿನೆಂಜಲು
          ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು
          ಇಂತಿವೆಲ್ಲವ ಹೇಳುವವರು ಕೇಳುವವರು
          ಪುಣ್ಯ ಪಾಪಂಗಳೆಂಜಲೆಂದಾತ ಅಂಬಿಗ ಚೌಡಯ್ಯ.
          ಪ್ರಗತಿಪರರ ಅಸ್ತ್ರವಾಗಿ ಬಿಟ್ಟಿರುವ ಈ ವಚನ ಬೇರೇನೋ ಹೇಳುತ್ತಿದೆ ಅಂತ ಬಹಳ ದಿನಗಳಿಂದ ಅನ್ನಿಸುತ್ತಿತ್ತು. ಏಕೆಂದರೆ ಕೊನೆಯ ಎರಡು ಸಾಲುಗಳು ವೇದ ಶಾಸ್ತ್ರ ಆಗಮ ಪುರಾಣ ಇತ್ಯಾದಿಗಳನ್ನು ನಿಂದಿಸುವವರೇ ಪಾಪ ಪುಣ್ಯಗಳ ಎಂಜಲು ಅಂತ ಹೇಳುತ್ತಿವೆಯಲ್ಲ! ಅನುಮಾನ ಪರಿಹಾರ ಮಾಡಿಕೊಳ್ಳಲು ಸಂತನ ಹಾಗೆ ವಿಜ್ಞಾನ ಹಾಗೂ ಆಧ್ಯಾತ್ಮ ವಿಚಾರಗಳ ಬಗ್ಗೆ ನಿಸ್ಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಹಿರಿಯ ಜೀವಿ ಒಬ್ಬರ ಮೊರೆ ಹೊಕ್ಕೆ. ಅವರ ಬಳಿ ಅಂಬಿಗರ ಚೌಡಯ್ಯನ ವಚನದ ಅರ್ಥ ವಿವರಿಸಿ ಹೇಳಲು ಕೋರಿದೆ. ಅವರು ನನ್ನ ಕೋರಿಕೆಯನ್ನು ಸ್ವೀಕರಿಸಿ ಈ ಕೆಳಗಿನ ಟಿಪ್ಪಣಿಯನ್ನು ಕಳುಹಿಸಿಕೊಟ್ಟರು.
          “ಅಂಬಿಗ ಚೌಡಯ್ಯನವರ ವಚನದ ಅರ್ಥ ಇದು: ಪರಿಪಕ್ವವಿಲ್ಲದ ಮನಸ್ಸಿನವರು ಘನಸತ್ಯದ ಬಗ್ಗೆ ದುಡುಕಿ ಮಾಡುವ ವಿಮರ್ಶೆ ಬೌದ್ಧಿಕ ದೊಂಬರಾಟ (ವೇದಗಳು ಬ್ರಹ್ಮನ ಎಂಜಲು ಇತ್ಯಾದಿಯಾಗಿ ಮಾಡುವ ವಿಮರ್ಶೆ ಬೌದ್ಧಿಕ ದೊಂಬರಾಟ). ಬ್ರಹ್ಮನ ಮುಖದಿಂದ ಬಂದ ಕಾರಣ ವೇದ ಎಂಜಲಾಗಿದೆ ಎಂದು ವೇದವನ್ನು ನಿರಾಕರಿಸಲಾಗದು. ಶಾಸ್ತ್ರ ಸರಸ್ವತಿಯ ಬಾಯಿಂದ ಬಂದಾಕ್ಷಣ ಎಂಜಲಾಗುವುದಿಲ್ಲ. ಆಗಮ ಶಿವನ ಬಾಯಿಂದ ಬಂದರೆ ಮೈಲಿಗೆಯಲ್ಲ. ಪುರಾಣ ವಿಷ್ಣುವಿನ ಬಾಯಿಂದ ಬಂದರೂ ಅಡ್ಡಿ ಇಲ್ಲ. ಓಂಕಾರ ಪ್ರಕೃತಿಯ ಸೃಷ್ಟಿಸ್ಥಿತಿಲಯದ ಸಂಕೇತ ಆದರೂ ಪೂಜ್ಯವೆ . ಪುರುಷ ಸಾಕ್ಷಾತ್ಕಾರ ಆದವರಿಗೆ ಪ್ರಕೃತಿಯ ಹಂಗೆ ಬೇಡ ಎನ್ನುವುದು ಕೇವಲ ಬೌದ್ಧಿಕ ದುರಹಂಕಾರ. ಪ್ರಕೃತಿಯೂ ಪುರುಷನ ವ್ಯಕ್ತರೂಪವೆ ಆದ ಕಾರಣ ಇವೆಲ್ಲವೂ ಎಂಜಲೆನ್ನುವುದಾದರೆ ಆತ್ಮಕ್ಕೆ ಅಂಟಿದ ಪಾಪ ಪುಣ್ಯಗಳೆರಡೂ ಆತ್ಮತತ್ತ್ವ ಹೇಳಿದವನ ಬಾಯಿಯ ಎಂಜಲಾದೀತು.
          ಸಾರಾಂಶ : ಪುರುಷ ಪ್ರಧಾನ, ನಶ್ವರ ಪ್ರಕೃತಿ ಎಂಬುದು ಒಪ್ಪತಕ್ಕ ಮಾತಲ್ಲ. ಮೂಡಿದ ವಿಚಾರವೆಲ್ಲಾ ಮಾತಾಗುವಾಗ ಎಂಜಲಾಗುವುದು ಸಹಜ. ಹಾಗೆಯೇ ಅಮೂರ್ತ ಪುರುಷ ಮೂರ್ತ ಪ್ರಕೃತಿಯನ್ನು ಸೃಷ್ಟಿಸಿದಾಗಲೂ ಅದು ಎಂಜಲೇ ಆದರೂ ಅದಕ್ಕೆ ಪುರುಷನನ್ನು ನೆನಪಿಸುವ ಶಕ್ತಿ ಇದೆ. ಸಾಧನೆ ಎನ್ನುವುದು ಬೌದ್ಧಿಕ ಕಸರತ್ತಲ್ಲ ಪ್ರಕೃತಿಯ ಮೂಲಕವೆ ಪ್ರಕೃತಿಗೆ ಸೋಕದೆ ಸಾಗುವ ಕ್ರಿಯೆ ಕೂಡಾ. ಜ್ಞಾನ ಕ್ರಿಯೆ ಭಾವಗಳ ಐಕ್ಯ ಇಲ್ಲದೆ ಸಾಕ್ಷಾತ್ಕಾರ ಇಲ್ಲ.”
          ನೋಡಿ ವಚನದ ಅರ್ಥ ಮೇಲಿನಂತೆ ಇದೆ, ಅದನ್ನು ರಂಜಾನ್ ದರ್ಗಾ ಮೊದಲಾದ ಸ್ವಘೋಷಿತ ಅನುಭಾವಿಗಳು ಹೇಗೆಲ್ಲ misinterpret ಮಾಡಿದ್ದಾರೆ ಅಂತ! ಇಷ್ಟೇ ಸಾಕಲ್ಲವೇ ಇವರುಗಳ ಅಜೆಂಡಾ ಏನು ಎಂದು ತಿಳಿದುಕೊಳ್ಳಲು!

          • Anonymous

            ನಾನು ಸ್ವಘೋಷಿತ ಅನುಭಾವಿಯೆ? ನಿಮ್ಮ ಅಸಹ್ಯಕರ ಮಾತು ನನಗೆ ಹೇಸಿಕೆ ಹುಟ್ಟಿಸುತ್ತಿದೆ ರಾಯರೆ. ಆದರೂ ಉತ್ತರಿಸುತ್ತಿರುವೆ.
            ನಿಮಗೆ ಈ ವಚನದ ಅರ್ಥವನ್ನು ಬಿಡಿಸಿ ಹೇಳಿದ ಆ ಹಿರಿಯರ ಬೌದ್ಧಿಕ ಕಸರತ್ತು ಅಭಿನಂದನಾರ್ಹ. ಆದರೆ ದುಃಖದ ವಿಚಾರವೆಂದರೆ ಅವರು ಅರ್ಥೈಸಿದ ಕ್ರಮ ಆ ವಚನದ ಆಶಯಕ್ಕೆ ವಿರುದ್ಧವಾಗಿದೆ.
            ವೇದಂಗಳೆಲ್ಲ ಬ್ರಹ್ಮನೆಂಜಲು
            ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು
            ಆಗಮಂಗಳೆಲ್ಲ ರುದ್ರನೆಂಜಲು
            ಪುರಾಣಂಗಳೆಲ್ಲ ವಿಷ್ಣುವಿನೆಂಜಲು
            ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು
            ಇಂತಿವೆಲ್ಲವ ಹೇಳುವವರು ಕೇಳುವವರು
            ಪುಣ್ಯ ಪಾಪಂಗಳೆಂಜಲೆಂದಾತ ಅಂಬಿಗ ಚೌಡಯ್ಯ.
            ಇಲ್ಲಿ ವೇದ, ಶಾಸ್ತ್ರ, ಆಗಮ, ಪುರಾಣ ಮುಂತಾದವು ಯಾರಾರ ಎಂಜಲುಗಳೆಂದು ಅಂಬಿಗರ ಚೌಡಯ್ಯನವರೇ ಸ್ಪಷ್ಟಪಡಿಸಿದ್ದಾರೆ. ಆದರೂ ವೇದ, ಶಾಸ್ತ್ರ, ಆಗಮ, ಪುರಾಣಗಳ ಬಗ್ಗೆ ಹೇಳುವವರು ಮತ್ತು ಕೇಳುವವರು ಪುಣ್ಯ ಪಾಪಗಳೆಂಬ ಭ್ರಮಗೆ ಸಿಲುಕಿ ಅವುಗಳ ಎಂಜಲಾಗುವರು ಎಂಬುದು ನಿಜಶರಣ ಅಂಬಿಗರ ಚೌಡಯ್ಯನವರು ಅಂಬೋಣವಾಗಿದೆ.
            ಆ ಹಿರಿಯರು ಅರ್ಥೈಸಿದ ರೀತಿಯಲ್ಲಿ ಅಂಬಿಗರ ಚೌಡಯ್ಯನವರು ಬರೆದಿದ್ದರೆ ಈ ಕೆಳಗೆ ಕಾಣಿಸಿದ ವಚನವನ್ನೇಕೆ ಬರೆಯುತ್ತಿದ್ದರು?
            “ನಾದದ ಬಲದಿಂದ ವೇದಂಗಳಾದುವಲ್ಲದೆ
            ವೇದ ಸ್ವಯಂಭೂವಲ್ಲ ನಿಲ್ಲು, ನಿಲ್ಲು.
            ಮಾತಿನ ಬಲದಿಂದ ಶಾಸ್ತ್ರಂಗಳಾದುವಲ್ಲದೆ
            ಶಾಸ್ತ್ರ ಸ್ವಯಂಭುವಲ್ಲ ನಿಲ್ಲು ನಿಲ್ಲು.
            ಪಾಷಾಣದ ಬಲದಿಂದ ಸಮಯಂಗಳಾದುವಲ್ಲದೆ
            ಸಮಯ ಸ್ವಯಂಭುವಲ್ಲ ನಿಲ್ಲು, ನಿಲ್ಲು.
            ಇಂತೀ ಮಾತಿನ ಬಣವೆಯ ಮುಂದಿಟ್ಟುಕೊಂಡು
            ಆತನ ಕಂಡಿಹೆನೆಂದಡೆ, ಆತನತ್ಸತಿಷ್ಠದ್ವಶಾಂಗುಲ
            ಆತನೆಂತು ಸಿಲುಕುವನೆಂದಾತ ಅಂಬಿಗ ಚೌಡಯ್ಯ! (ಅಂಬಿಗರ ಚೌಡಯ್ಯ)
            ಅಂಬಿಗರ ಚೌಡಯ್ಯನವರ ವಚನಗಳಿಗೆ ಪೂರಕವಾಗಿರುವ ವಚನಗಳಲ್ಲಿ ಕೆಲವು:
            “ಪುಣ್ಯ ಪಾಪವೆಂಬ ಉಭಯಕರ್ಮವನಾರು ಬಲ್ಲರಯ್ಯಾ?
            ಇವನಾರುಂಬರು?
            ಕಾಯ ತಾನುಂಬಡೆ ಕಾಯ ತಾ ಮಣ್ಣು,
            ಜೀವ ತಾನುಂಬಡೆ ಜೀವ ತಾ ಬಯಲು,
            ಈ ಉಭಯ ನಿರ್ಣಯವ ಕೂಡಲಸಂಗಮದೇವಾ
            ನಿಮ್ಮ ಶರಣ ಬಲ್ಲ. (ಬಸವಣ್ಣನವರು)
            “ವೇದ ವೇಧಿಸಲರಿಯದೆ ಕೆಟ್ಟವು
            ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು
            ಪುರಾಣ ಪೂರೈಸಲರಿಯದೆ ಕೆಟ್ಟವು
            ಹಿರಿಯರು ತಮ್ಮ ತಾವು ಅರಿಯದೆ ಕೆಟ್ಟರು
            ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು
            ನಿಮ್ಮನೆತ್ತ ಬಲ್ಲರೋ ಗುಹೇಶ್ವರಾ? (ಅಲ್ಲಮಪ್ರಭುದೇವರು)
            “ವೇದಗಳೆಂಬವು ಬ್ರಹ್ಮನ ಬೂಟಾಟ
            ಶಾಸ್ತ್ರಗಳೆಂಬವು ಸರಸ್ವತಿಯ ಗೊಡ್ಡಾಟ
            ಆಗಮಗಳೆಂಬವು ಋಷಿಯ ಮರುಳಾಟ
            ಪುರಾಣಗಳೆಂಬವು ಪೂರ್ವದವರ ಒದ್ದಾಟ
            ಇಂತು- ಇವನ್ನು ಅರಿದವರ ನೇತಿಗಳೆದು
            ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು. (ಅಲ್ಲಮ ಪ್ರಭುದೇವರು)

          • ಕಟ್ಟಿಮನಿ

            ಪ್ರಿಯ ದರ್ಗಾ ಸಾಬ್, “ಇಲ್ಲಿ ವೇದ, ಶಾಸ್ತ್ರ, ಆಗಮ, ಪುರಾಣ ಮುಂತಾದವು ಯಾರಾರ ಎಂಜಲುಗಳೆಂದು ಅಂಬಿಗರ ಚೌಡಯ್ಯನವರೇ ಸ್ಪಷ್ಟಪಡಿಸಿದ್ದಾರೆ. ಆದರೂ ವೇದ, ಶಾಸ್ತ್ರ, ಆಗಮ, ಪುರಾಣಗಳ ಬಗ್ಗೆ ಹೇಳುವವರು ಮತ್ತು ಕೇಳುವವರು ಪುಣ್ಯ ಪಾಪಗಳೆಂಬ ಭ್ರಮಗೆ ಸಿಲುಕಿ ಅವುಗಳ ಎಂಜಲಾಗುವರು ಎಂಬುದು ನಿಜಶರಣ ಅಂಬಿಗರ ಚೌಡಯ್ಯನವರು ಅಂಬೋಣವಾಗಿದೆ” ಅಂತ ಬರೆದಿದ್ದೀರಿ. ಹೇಳಿದನ್ನೇ ಹೇಳುವ ಕಿಸುಬಾಯಿ ದಾಸ ಆಗಿಬಿಟ್ಟಿದೀರಿ ಅಂತ ಅನುಮಾನ ನನಗೆ. ಏಕೆಂದರೆ ಈ ಹಿಂದೆಯೇ ನಾನು ಕೊನೆಯ ಎರಡು ಸಾಲುಗಳು ಅಂಬಿಗರ ಚೌಡಯ್ಯನವರ ವಚನದಲ್ಲಿ ಬಹಳ ಮುಖ್ಯ, ಅದನ್ನು ಗಮನಿಸದಿದ್ದರೆ ಆ ವಚನದ ಅರ್ಥಕ್ಕೆ ಅಪಚಾರವಾಗುತ್ತದ ಎಂದಿದ್ದೆ. “ಇಂತಿವೆಲ್ಲವ ಹೇಳುವವರು ಕೇಳುವವರು | ಪುಣ್ಯ ಪಾಪಂಗಳೆಂಜಲೆಂದಾತ ಅಂಬಿಗ ಚೌಡಯ್ಯ” ಎಂಬ ಸಾಲುಗಳು ಏನನ್ನು ಹೇಳುತ್ತಿವೆ? ತಾವು ಹೇಳಿರುವುದನ್ನು ಖಂಡಿತ ಹೇಳುತ್ತಿಲ್ಲ! “ಇಂತಿವೆಲ್ಲವ” ಅಂದರೆ “ವೇದ ಶಾಸ್ತ್ರ ಆಗಮ ಪುರಾಣಾದಿಗಳನ್ನೂ ಎಂಜಲು ಎಂಬ ವಾದವನ್ನು” ಎಂದರ್ಥ. “ಇಂತಿವೆಲ್ಲವ ಹೇಳುವವರು ಕೇಳುವವರು” ಅಂದರೆ “ವೇದ ಶಾಸ್ತ್ರ ಆಗಮ ಪುರಾಣಾದಿಗಳನ್ನು ಎಂಜಲು ಎಂಬ ವಾದವನ್ನು ಮಾಡುವವರೂ ಅದನ್ನು ಕೇಳುವವರೂ” ಎಂದರ್ಥ. ಆದುದರಿಂದ “ಇಂತಿವೆಲ್ಲವ ಹೇಳುವವರು ಕೇಳುವವರು | ಪುಣ್ಯ ಪಾಪಂಗಳೆಂಜಲೆಂದಾತ ಅಂಬಿಗ ಚೌಡಯ್ಯ” ಎಂಬ ಸಾಲುಗಳು “ವೇದ ಶಾಸ್ತ್ರ ಆಗಮ ಪುರಾಣಾದಿಗಳನ್ನು ಎಂಜಲು ಎಂಬ ವಾದವನ್ನು ಮಾಡುವವರೂ ಅದನ್ನು ಕೇಳುವವರೂ ಪಾಪ ಪುಣ್ಯಗಳ ಎಂಜಲು” ಎಂದರ್ಥ. ಅಂದರೆ ವೇದ ಶಾಸ್ತ್ರ ಆಗಮ ಪುರಾಣಾದಿಗಳನ್ನು ಎಂಜಲು ಎಂಬ ವಾದವೇ ಬೌದ್ಧಿಕ ಕಸರತ್ತು. ಇಷ್ಟೂ ಅರ್ಥವಾಗದೆ ಮೊಂಡು ವಾದ ಮಾಡಿದರೆ ಏನನ್ನುವುದು?

          • Anonymous

            It is very difficult since you do not know the basics of Vachana literature and the movement. It is nonsense to argue with you Mr. Kisbaayi Dasa.

      • Amaresh

        Mr. Kattimani since many days i had been interacting with Shri Ramjan Darga and he has enlightened me and clarified all my doubts. I am fully convinced by his illuminating thoughts. You seem start your argument out of sheer ignorance and you are exhibiting your foolishness. He has explained so much in his below arguments. Pl read them first and understand. Then you argue.

        • Annapurna

          Mr. Amaresh what u said is exactly right. I am also fully convinced by the thoughtprovoking articles of Darga sir. I have asked many doubts and he has clarified everhthing.

    • Anonymous

      Try to understand the idioms of Vachana Kannada.

  39. Shrikant Swamy

    MrAmaresh,Mr Jayteerth Joshi,I request you stop the discussion,when you not respect the Basava Tatva than what is use,Amaresh says”I have neither opposed or endorsing Basava Tatva”,”I ve not made a single comment against it or infavor of it”,Mr Amaresh than why you are time passing here,you getting entertainment countering the Mr Ramjan Darga,why you draining brain,this Avadhi provided good blog for healthy discussion understanding each other views,you just mocking the writing of Darga n Basava Tatva,I request the Avadhi remove this person misutilising the Avadhi,this type people harm the society.Mr Vishwaradhya pointed about some Mathadipatis,yes they are belongs to VEERSHAVA not a LINGAYAT MATHADIPATIS.Veershaiva is part Hindu religion they follow the some Vaidika custom,Lingayata is independent religion formed by LORD BASAVA. Mr Jayateerth Joshi you says that Darga fake IDs,I also writing in favour of Basava Tatva I already given my id,you fellow created fake ids n group to attack Mr Darga. So I REQUEST MR RAMJAN DARGA SIR DONT ANSWER TO THESE FAKE IDS QUESTIONS,NOW SIR STOP IT THEY ALREADY EXPRESSED THAT NOT HAVING RESPECT ABOUT BASAVA TATVA,bye you Ancient Brahamans,understand modern ideology be modern THINKER.

  40. Shrikant Swamy

    Congratulations to Mr Ramjan Darga sir,Mr Amaresh and Mss Annapoorna madam expressed that they are fully convinced by your all Answers of their QUESTIONS,this shows that Mr Darga is totally perfect n studied the Basavadi Sharanas Tatva,I SALUTE YOU AND YOUR KNOWLEDGE.This very great achievement to convince intellectuals like Mr Amaresh and Mss Annapoorna madam ,this is their greatness that both are declared that TOTALLY CONVINCED.Thanks to both long discussion held on AVADHI rising so many questions and patiently reply of Mr Darga sir excellent,this good opportunity to Avadhi readers. Thanks to AVADHI for providing this types of fruitful discussion. Thanks to all participants giving good knowledge,most thanks to Mr Amaresh and Mss Annapoorna madam,sorry for if hurts in discussion. THANKS AVADHI AND MR RAMJAN DARGA SIR.

  41. ಸುರೇಶ‍್ ಕುಮಾರ್

    “ತಾವು ಉತ್ತರಿಸಲಾಗದ ಪ್ರಶ್ನೆಗಳನ್ನು ಕೇಳಿ ಅವರ ವಾದಗಳಲ್ಲಿರುವ ಪೊಳ‍್ಳುಗಳನ್ನು ಎತ್ತಿ ತೋರಿಸಿದವರ ಹೆಸರುಗಳಲ್ಲೇ ನಕಲಿ ಕಮೆಂಟುಗಳನ್ನು ಹಾಕಿ ದರ್ಗಾರವ ವಾದಗಳನ್ನು ಪ್ರತಿವಾದಿಗಳೆಲ್ಲರೂ ಒಪ್ಪಿಕೊಂಡಿರುವಂತೆ ಮಾಡುವ ಹುನ್ನಾರ ಮಾಡಿದ್ದಾರೆ. ಅವಧಿಯ ಸಂಪಾಧಕರೂ ಅವರ ಜೊತೆಗೆ ಕೈಜೋಡಿಸಿದ್ದಾರೆ. ಏಕೆಂದರೆ ಈ ನಕಲಿಗಳ ಕುರಿತ ನನ್ನ ಆಕ್ಷೇಪವನ್ನು ಅವರು ಪ್ರಕಟಿಸುವ ಸೌಜನ್ಯವನ್ನೇ ತೋರಿಲ್ಲ. ಅವಧಿಯು ನಕಲಿ ಹೆಸರುಗಳಲ್ಲಿ ಪ್ರತಿವಾದಿಗಳನ್ನು ಮಂಡಿಯೂರಿಸಿ ಈ ರೀತಿಯ ವಾಮಮಾರ್ಗದಲ್ಲಿ ದರ್ಗಾರ ಪೊಳ್ಳು ವಾದಗಳನ್ನು ಎತ್ತಿಹಿಡಿಯುವ ಕೆಲಸಮಾಡಿದ್ದು ಅತ್ಯಂತ ಶೋಚನೀಯ” ಎಂದು ಸಹನಾರವರು ಮತ್ತೊಂದು ಬ್ಲಾಗ್ ನಲ್ಲಿ ಬರೆದಿದ್ದಾರೆ. ಬಹುದೊಡ್ಡ ವಿದ್ವಾಂಸವಲಯವನ್ನು ಹೊಂದಿರುವ ಅವಧಿಯಲ್ಲಿ ಹೀಗೆ ನಡೆದಿರಲಾರದು ಎಂದು ಭಾವಿಸುವೆ. ಒಂದೊಮ್ಮೆ ಇದು ನಿಜವೇ ಆಗಿದ್ದ ಪಕ್ಷದಲ್ಲಿ ಸಂಪಾದಕ ಮಂಡಳಿಯವರು ಈ ಕೂಡಲೇ ಈ ಬಗ್ಗೆ ಗಮನ ಹರಿಸಬೇಕೆಂದು ವಿನಂತಿ. ಇದುವರೆಗೂ ಈ ತಾಣವು ಅತ್ಯಂತ ವಿಶ್ವಾಸಾರ್ಹ ವೇಧಿಕೆಯಾಗಿದೆ. ಅಮರೇಶ್ ಅನ್ನಪೂರ್ಣ ಮತ್ತು ಇತರರ ದರ್ಗಾರಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದವರ ಹೆಸರಿನಲ್ಲಿ ಕೊನೆಯದಾಗಿ ಪ್ರಕಟವಾಗಿರುವ ಕಮೆಂಟುಗಳನ್ನು ನೋಡಿದರೆ ಸಹನಾರವರ ಆಕ್ಷೇಪದಲ್ಲಿ ಹುರುಳಿರುವಂತೆ ತೋರುತ್ತದೆ. ದಯವಿಟ್ಟು ಈ ರೀತಿಯ ಪ್ರಮಾದಗಳನ್ನು ತಡೆಯುವುದು ಆರೋಗ್ಯಕರ ಚರ್ಚೆಗೆ ಒಳ್ಳೆಯದು. ಮಾತ್ರವಲ್ಲ ಈ ರೀತಿಯ ಬೆಳವಣಿಗೆಗಳಿಂದ ದರ್ಗಾರವರ ವಿದ್ವತ್ತು ಮತ್ತು ವ್ಯಕ್ತಿತ್ವಕ್ಕೂ ಚ್ಯುತಿಬಾರದಂತೆ ತಡೆಯಬೇಕಿದೆ.

  42. Kaleel Seraje

    Nice article and healthy discussion …

  43. Karabasayya G Hiremath

    ಬೇಡಜಂಗಮದ ಬಗ್ಗೆ ಮಾಹಿತಿ ‌ತಿಳಿಸಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading